25 ವರ್ಷದಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನದ ಆರೋಪಿ ಸೆರೆ

1995 ರಲ್ಲಿ ಕೊಲೆಯತ್ನದ ಆರೋಪದ ಮೇಲೆ ಜಾಮೀನುರಹಿತ ವಾರಂಟ್ ಜಾರಿಯಾಗಿದ್ದ ವ್ಯಕ್ತಿ ಯೊಬ್ಬನನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ. ನಜೀರ್ ಅಹಮದ್ ಮಹಮದ್ ಹುಸೇನ್ ಎನ್ನುವ ಭಟ್ಕಳ ಮದಿನಾ ಕಾಲೋನಿ ನಿವಾಸಿ 1995 ರಲ್ಲಿ ಕೊಲೆಯತ್ನದ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ, ಜಾಮೀನುರಹಿತ ವಾರಂಟ್ ಜಾರಿಯಾಗಿದ್ದ ಈ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿರುವ ಮುರುಡೇಶ್ವರ ಪೊಲೀಸರ ಸಾಹಸಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.