ಬನವಾಸಿ ವ್ಯಾಪಾರಿಯ ಚಿನ್ನದ ಚೀಲವನ್ನು ವಾರಸುದಾರರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದ ಸಿದ್ದಾಪುರದ ತರಕಾರಿ ವ್ಯಾಪಾರಿ!

ಸಿದ್ಧಾಪುರ, ನಗರದಲ್ಲಿ ಕಳೆದುಹೋಗಿದ್ದ ಎರಡು ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ಚೀಲವೊಂದನ್ನು ಪೊಲೀಸರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಇಲ್ಲಿಯ ತರಕಾರಿ ವ್ಯಾಪಾರಿಗೆ ಸಾರ್ವಜನಿಕ ಪ್ರಶಂಸೆ ದೊರೆತಿದೆ. ಬನವಾಸಿ ಮೂಲದ ವ್ಯಾಪಾರಿ ವಿದ್ಯಾಧರ್‌ ಕೊಚೇರಿ ಈಗ ಇಲ್ಲಿಯ ಹಾಳದಕಟ್ಟಾ ನಿವಾಸಿಯಾಗಿದ್ದು ಸಿದ್ಧಾಪುರ ಸಂತೆ ಮಾರುಕಟ್ಟೆಯಲ್ಲಿ ತಮ್ಮ ಆಭರಣಗಳ ಚೀಲ ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಹುಡುಕುತಿದ್ದಾಗ ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ಅವರಗುಪ್ಪಾದ ಗಣಪತಿ ಬಾಳಾ ನಾಯ್ಕ ತಮಗೆ ದೊರೆತ ಈ ಆಭರಣಗಳ … Continue reading ಬನವಾಸಿ ವ್ಯಾಪಾರಿಯ ಚಿನ್ನದ ಚೀಲವನ್ನು ವಾರಸುದಾರರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದ ಸಿದ್ದಾಪುರದ ತರಕಾರಿ ವ್ಯಾಪಾರಿ!