ಅನ್ಯ ಧರ್ಮೀಯರೊಂದಿಗಿನ ವ್ಯಾಪಾರ-ವ್ಯವಹಾರದಿಂದ ಅಪಾಯ

ಅನ್ಯ ಧರ್ಮೀಯರೊಂದಿಗೆ ಅಡಿಕೆ ಸೇರಿದಂತೆ ಇತರ ವ್ಯಾಪಾರ, ವ್ಯವಹಾರ ಮಾಡುವುದರಿಂದ ಹಿಂದೂ ಧರ್ಮೀಯರಿಗೇ ಅಪಾಯ ಎಂದು ಎಚ್ಚರಿಸಿರುವ ಚೈತ್ರಾ ಕುಂದಾಪುರ ಇತರರಿಂದ ವ್ಯಾಪಾರ, ವ್ಯವಹಾರ ಮಾಡುವ ಜನರು ಲವ್‌ ಜಿಹಾದ್‌ ಮೂಲಕ ಮತ್ತು ದನ ಕಡಿಯುವ ಮೂಲಕ ನಮಗೇ ಕಂಟಕರಾಗುತ್ತಾರೆ ಎಂದು ಮುಸ್ಲಿಂರನ್ನು ಪರೋಕ್ಷವಾಗಿ ದೂಷಿಸಿದ್ದಾರೆ. ಯುಗಾದಿ ಉತ್ಸವ ನಿಮಿತ್ತ ಸಿದ್ಧಾಪುರ ನೆಹರೂ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಚೈತ್ರ ಹಿಂದೂ ಧರ್ಮದ ಆಚರಣೆಗಳನ್ನು ಮೌಢ್ಯ ಎನ್ನುವ ಸೋಗಲಾಡಿಗಳಿಂದ ದೂರವಿರಿ ಎಂದಿದ್ದಾರೆ.