ಸಹಕಾರಿಧುರೀಣ ಶಂಕರಗೌಡ ಪಾಟೀಲ್ tms ಭೇಟಿ
ಸಿದ್ದಾಪುರ , ಹಿರಿಯ ಸಹಕಾರಿಧುರೀಣ ಶಂಕರಗೌಡ ಪಾಟೀಲ್ ಬೈಲಹೊಂಗಲ ಸ್ಥಳೀಯ ಟಿ.ಎಂ.ಎಸ್ಸಿದ್ದಾಪುರಕ್ಕೆ ಭೇಟಿ ನೀಡಿ ,ಸಂಘದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.ಟಿ.ಎಂಎಸ್ಕಾರ್ಯಚಟುವಟಿಕೆಕುರಿತು ಪ್ರಶಂಸೆ ವ್ಯಕ್ತಪಡಿಸಿದರು.ಟಿ.ಎಂ.ಎಸ್ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅವರು ಮಾತನಾಡಿ ಶಂಕರಗೌಡ ಪಾಟೀಲ್ ಸಹಕಾರ ಮಾರಾಟ ಮಹಾಮಂಡಳ , ಕೆ.ಎಂ.ಎಫ್ , ಎಸ್.ಎಲ್.ಡಿ.ಬ್ಯಾಂಕ್ಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಸಹಕಾರಕ್ಷೇತ್ರಕ್ಕೆತಮ್ಮದೇಆದಕೊಡುಗೆ ನೀಡುತ್ತಿದ್ದಾರೆಎಂದು ಹೇಳಿ ಸಂಘದ ಪರವಾಗಿ ಸನ್ಮಾನಿಸಿದರು.ಅವರಜೊತೆ ಬೈಲಹೊಂಗಲ ಎ.ಪಿ.ಎಂ.ಸಿ ಮಾಜಿ ನಿರ್ದೇಶಕರಾದ ಶಿವಜಾತಗೌಡ ಪಾಟೀಲ್ ಹಾಗೂ ಟಿ.ಎಂ.ಎಸ್ ವ್ಯವಸ್ಥಾಪಕ ಸತೀಶ್ ಹೆಗಡೆ ಹೆಗ್ಗಾರಕೈ ಉಪಸ್ಥಿತರಿದ್ದರು.
Copy and paste this URL into your WordPress site to embed
Copy and paste this code into your site to embed