ಸಿ.ಆಯ್.ಡಿ. ಅಧೀಕ್ಷಕ ರಾಘವೇಂದ್ರ ಹೆಗಡೆಯವರಿಗೆ ಸನ್ಮಾನ

ಬೆಂಗಳೂರಿನ ಸಿ.ಆಯ್.ಡಿ. ಅಧೀಕ್ಷಕ ರಾಘವೇಂದ್ರ ಹೆಗಡೆಯವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಗೌರವ ಸಂದ ಹಿನ್ನೆಲೆಯಲ್ಲಿ ಸಿದ್ಧಾಪುರದ ಅವರ ಸಂಬಂಧಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು. ಹುಲಿಮನೆ ಕುಟುಂಬ ಸಿದ್ಧಾಪುರದ ಪ್ರತಿಷ್ಠಿತ ಕುಟುಂಬವಾಗಿದ್ದು ಈ ಕುಟುಂಬಕ್ಕೆ ರಾಷ್ಟ್ರಪತಿಗಳಿಂದ ದೊರೆದ ರಾಷ್ಟ್ರಮಟ್ಟದ ಈ ಗೌರವ ಎರಡನೆಯದು ರಾಘವೇಂದ್ರ ಹೆಗಡೆಯವರು ಶ್ಲಾಘನೀಯ ಸೇವೆ ನೀಡುವ ಮೂಲಕ ಅವರ ಕುಟುಂಬ ತಾಲೂಕು, ಜಿಲ್ಲೆಗಳಿಗೆ ಗೌರವ ತಂದಿದ್ದಾರೆ ಎಂದು ಪ್ರಶಂಸಿಸಲಾಯಿತು.