ಶನಿವಾರ ಶಿರಸಿಯಲ್ಲಿ ಗುರುವಂದನೆ….ಸನ್ಮಾನ

ಶಿರಸಿ, ಇಲ್ಲಿಯ ಅಂಬಾಗಿರಿ ದೈವಜ್ಞ ಕಲ್ಯಾಣ ಮಂಟಪದಲ್ಲಿ ಗುರುವಂದನೆ ಮತ್ತು ಸನ್ಮಾನ ನಡೆಯಲಿದ್ದು ಜಿಲ್ಲೆಯ ಹಿಂದುಳಿದ ವರ್ಗಗಳ ಸಮಾಜದ ಎಲ್ಲರಿಗೂ ಸಂಘಟಕರು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ ಧರ್ಮಸ್ಥಳ ಶಿರಸಿ ವಿಭಾಗ ಮತ್ತು ಶಿರಸಿ ತಾಲೂಕಾ ನಾಮಧಾರಿ ಸಮಾಜ ಅಭಿವೃದ್ಧಿ ಸಂಘಗಳು ಸಂಯುಕ್ತವಾಗಿ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಸೇರಿದಂತೆ ೬ ಜನ ಪ್ರಮುಖರಿಗೆ ಸಾರ್ವಜನಿಕ ಸನ್ಮಾನ ದೊಂದಿಗೆ ಅಭಿನಂದನೆ ನಡೆಯಲಿದೆ.