Old is gold – ನಾಗರಹಾವು

ಸುರೇಶ್ ಕಂಜರ್ಪಣೆಯವರು ಬರೆಯುತ್ತಾರೆ….

ಕನ್ನಡಿಯಲ್ಲಿ ಕಾಣುವ ಸಂಗಾತಿ ಓದುಗನಿಗೆ

ನಾಗರ ಹಾವು ಸಿನೆಮಾದ ಕೊನೆಯ ದೃಶ್ಯದಲ್ಲಿ ಅಶಾಂತ ರಾಮಾಚಾರಿಯನ್ನು ಬೆನ್ನು ಹತ್ತಿ ಅವನನ್ನು ಅತೀವ ಪ್ರೀತಿಸುವ ವೃದ್ಧ ಚಾಮಯ್ಯ ಮೇಷ್ಟ್ರು ಬರುತ್ತಾರೆ. ವಾಗ್ವಾದದ ಬಳಿಕ ಅಚಾನಕವಾಗಿ ರಾಮಾಚಾರಿ ಚಾಮಯ್ಯ ಮೇಷ್ಟ್ರನ್ನ ತಳ್ಳುತ್ತಾನೆ. ಮೇಷ್ಟ್ರು ಉರುಳಿ ಸಾಯುತ್ತಾರೆ. ದಿಗ್ಭ್ರಮೆಗೊಂಡ ರಾಮಾಚಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ತನ್ನ ಪ್ರಿಯತಮೆ ಜೊತೆಗೆ.
ಸಿನೆಮಾದಲ್ಲಿ ಕಾಣುವ ದುರಂತ ಎಲ್ಲರಲ್ಲೂ ಮೆಚ್ಚುಗೆ ಮೂಡಿಸಿದೆ ; ಇಂದಿಗೂ ಆ ಸಿನೆಮಾ ಕಾಡುತ್ತಲೇ ಇದೆ. ಅದನ್ನು ಕೊಂಚ ಪಕ್ಕಕ್ಕಿಟ್ಟು ,
ನನ್ನನ್ನು ಕಾಡಿದ್ದು ಈ ರೂಪಕ. ಯೌವ್ವನದ ಎಲ್ಲಾ ಭರವಸೆ, ಶಕ್ತಿ, ಚೈತನ್ಯಗಳೊಂದಿಗೆ ತೀವ್ರ ಗೊಂದಲ, ಹತಾಶೆ, ತನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಸಿಟ್ಟಿನ ರಾಮಾಚಾರಿಗೆ ಎದುರಾಗಿ ಅವನ ಮೇಲೆ ಭರವಸೆ ಇಟ್ಟ, ಆದರೆ ವಿವೇಕವಿದ್ದೂ ಹಾದಿ ತೋರಲಾಗದ ಪಾಪಪ್ರಜ್ಞೆಯ ಚಾಮಯ್ಯ ಮೇಷ್ಟ್ರು.
ಇವೆರಡೂ ನಮ್ಮ ಕಾಲದ ರೂಪಕವಾಗಿ ನನನ್ನನ್ನು ಕಾಡುತ್ತಿದೆ. ಈ ರೂಪಕವನ್ನು ಬೀಸು ಗೆರೆಯ ಸ್ಕೆಚ್ ತರಹ ನೋಡಬೇಕೆಂದು ಬಿನ್ನಹ.
ನಮ್ಮ ಕಾಲದ ಯುವ ಶಕ್ತಿಗೆ ದೊಡ್ಡದೇನೂ ಕಾಣಿಸುತ್ತಿಲ್ಲ, ತನ್ನಷ್ಟಕ್ಕೇ ತಾನು ತನ್ನ ಕೈಯಳತೆಗೆ ದಕ್ಕಬಹುದಾದ ಆಸೆಗಳನ್ನು ಪಡೆಯಲು ಗಾಳಿ ಗುದ್ದಾಟ ಮಾಡುತ್ತಾ ಕೂತಿದೆ. ಬರಿಗೈಯಲ್ಲಿ ಚಿಟ್ಟೆ ಹಿಡಿವ ಪರದಾಟ ಇದು.
ಒಂದು ಉದ್ಯೋಗ- ಅದೂ ಗ್ರಾಮಗಳ ಉಸಿರುಗಟ್ಟಿಸುವ ಬಡತನ, ಕೀಳರಿಮೆಯಿಂದ ತಪ್ಪಿಸಿಕೊಳ್ಳುವ ಹುಲ್ಲುಕಡ್ಡಿ. ಇಂಥಾದ್ದೇ ಎಂಬ ಸ್ಪಷ್ಠತೆಯೂ ಇಲ್ಲ; ಅದರಲ್ಲೇನಾದರೂ ದೊಡ್ಡ ಸಾಧನೆ ಮಾಡಬೇಕೆಂಬ ಇರಾದೆಯೂ ಇಲ್ಲ. ಇಂಥಾ ಒಂದು ಇಚ್ಛೆ ಹುಟ್ಟಲೂ ಒಂದು ವಾತಾವರಣ ಬೇಕು.
ಇದು ಹುಡುಗರ ಪಾಡಾಯಿತು.
ಹುಡುಗಿಯರಿಗೋ ಹಳ್ಳಿಯ ಉಸಿರುಗಟ್ಟಿಸುವ ಸಾಮಾಜಿಕ ಕಟ್ಟುಪಾಡುಗಳ ಸಿಸಿಕ್ಯಾಮರಾಗಳಿಂದ ಪಾರಾಗುವ ದೊಡ್ಡ ಬಿಡುಗಡೆಯ ದಾರಿ. ತಾಲೂಕು ಮಟ್ಟದ ಪುಟ್ಟ ಅಂಗಡಿಯಲ್ಲಾದರೂ ಒಂದು ಜಾಬ್. ಸಂಜೆ ವೇಳೆಗೆ ಪಾನಿಪುರಿಯೋ, ಐಸ್ ಕ್ರೀಮೋ ತಿಂದು ತನ್ನನ್ನು ಮೆಚ್ಚುವ ಹುಡುಗ ಸಿಕ್ಕಿದರೆ ಅವನೊಂದಿಗೆ ಹರೆಯದ ವೃಥಾ ಮಾತಿನ ಕಾಲಕ್ಷೇಪ ಮಾಡಿ ಊರಿನ ಬಸ್ ಹತ್ತುವ ಬಗೆ ಅದು.


“ಯಾಕೆ ಹೊಸ ತಲೆಮಾರಿನ ದಿಕ್ಕೆಟ್ಟ ಯುವಕರು ಚಳವಳಿಗಳಿಗೆ ಬರುತ್ತಿಲ್ಲ?” ಎಂದು ಯಾರೋ ಕೇಳಿದ್ದರು. ಚಳವಳಿ? ಮೂಲತಃ ಉಪ್ಪಿನ ಗೊಂಬೆ ಸಮುದ್ರಕ್ಕೆ ಹೋದಂತೆ ಅವರಿಗೆ ನಗರಗಳ ಅನಾಮಿಕತೆಯಲ್ಲಿ ಕಳೆದು ಹೊಗಬೇಕಿದೆ. ಸ್ಮಾರ್ಟ್ ಫೋನಿನಂಥಾ ಆಟಿಕೆಗಳು ಸಿಕ್ಕಿದ ಮೇಲೆ ಅದೇ ಒಂದು ಮಿಥ್ಯಾ ಜಗತ್ತನ್ನು ಸೃಷ್ಟಿಸಿದೆ. ಅದರೊಳಗೇ ಸುಖಿಸುತ್ತಾ , ದುಃಖಿಸುತ್ತಾ ನಾಳೆಗಳ ಬಗ್ಗೆ ಸತತ ಆತಂಕ ಮತ್ತು ಆಸೆಗಳ ಜಂಟಿ ಹೆಣಿಗೆಯಲ್ಲಿ ದಿನ ದೂಡುವುದಷ್ಟೇ.
ಸರಕಾರದ ಆರೋಗ್ಯ ಮಿಷನ್, ಜೀವನೋಪಾಯ ಮಿಶನ್ನಿನಂಥಾದ್ದರಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುವವರನ್ನುನೊಡಬೇಕು. ಖಾಯಂ ಆಗುವ ಭರವಸೆ ಇಲ್ಲ, ಬಿಡುವ ಧೈರ್ಯವೂ ಇಲ್ಲ. ಇದು ಉದ್ಯೋಗದ ದಾರುಣ ಸ್ಥಿತಿ.
ಇನ್ನೊಂದೆಡೆ ಕೊಂಚ ತುರುಸಿನ ಹುಡುಗರು ತಮ್ಮ ಐಡೆಂಟಿಟಿಯ ಭಾಗವಾಗಿ ಹಿಂದುತ್ವದ ಭಜರಂಗಿ ಕಾಲಾಳುಗಳಾಗಿದ್ದಾರೆ. ಉಳಿದ ಪಕ್ಷ ಸಂಘಟನೆಗಳಲ್ಲೂ ಇದ್ದಾರೆ. ಆದರೆ ಅವರ ಸಂಖ್ಯೆ ಕಡಿಮೆ. ಮೆಲ್ಲಗೆ ತಲೆ ಸವರಿ ಮಾತಾಡಿಸಿದರೆ ಮೊದಲು ನಮಗೇ ಕಿರುಚಿ ಭಾಷಣ ಮಾಡುವ ಈ ಹುಡುಗರು ನಿಧಾನಕ್ಕೆ ಅಭದ್ರತೆಯ ಹತಾಶೆಯಲ್ಲಿ ಮಾತಾಡುತ್ತಾರೆ.


“ ಯಾರೂ ಏನೂ ಮಾಡಲ್ಲ ಸಾರ್..!” ಅಂತ ಶತ್ರುವನ್ನು ಗುರುತಿಸಲಾಗದ ವ್ಯಗ್ರತೆಯಲ್ಲಿ ಗುರುಗಾಡುತ್ತಾರೆ.
ಇವರಿಗೆ ಅರಿವು, ಮಾರ್ಗದರ್ಶನ, ವಿವೇಕದ ಮಾತು ಯಾರು ಹೇಳಬೇಕು?
ರಾಮಾಚಾರಿಯ ವ್ಯಗ್ರ ಸಿಟ್ಟಿಗೆ ಕಾರಣವಾದ ವ್ಯವಸ್ಥೆಯನ್ನು ಪ್ರಶ್ನಿಸಲು ಅವನಿಗೂ ಗೊತ್ತಾಗಲಿಲ್ಲ. ತನ್ನ ಬದುಕಿನ ಆಸೆ ನೆರವೇರಲು ಬಿಟ್ಟಿಲ್ಲ ಎಂಬ ಕಣ್ಣೆದುರಿನ ವಿವರ ಇಟ್ಟುಕೊಂಡ ವ್ಯರ್ಥ ಬಂಡಾಯ ಅದು. ಇತ್ತ ಚಾಮಯ್ಯ ಮೇಷ್ಟ್ರಿಗೆ ಅವನ ಬಗ್ಗೆ ಅಪಾರ ಪ್ರೀತಿ, ಆದರೆ ಅವರೂ ಅವನ ಜೊತೆ ಕೈಜೋಡಿಸುವುದಿಲ್ಲ. ಸಾಂಪ್ರದಾಯಿಕ ಶಕ್ತಿಗಳ ವೈವಿಧ್ಯಮಯ ಬ್ಲಾಕ್ ಮೈಲಿಗೆ ಅವರೂ ಶರಣಾಗುತ್ತಾರೆ. ರಾಮಾಚಾರಿಯ ಮೇಲೆ ಈ ಶಕ್ತಿಗಳು ನೇರ ಎಗರಿ ಬೀಳುವುದಿಲ್ಲ. ಅವನನ್ನು ಪ್ರೀತಿಯಲ್ಲಿ ಬಗ್ಗಿಸುವ ಚಾಮಯ್ಯ ಮೇಷ್ಟ್ರನ್ನು ಬಳಸುತ್ತದೆ.
ಎಂಥಾ ಸ್ಥಿತಿ ಇದು. ಒಂದು ತಲೆಮಾರಿಗೆ ಮೇಷ್ಟ್ರು ಹೊಸ ಅರಿವು ಬಂಡಾಯದ ಹಾದಿ ತೋರಿಸುವ ತೋರುಬೆರಳಾದ ರೂಪಕಗಳಿವೆ. ಆದರೆ ಈ ಮೇಷ್ಟ್ರು ಅದೂ ಅಲ್ಲ.
ನಮ್ಮ ಕಾಲದ ರೂಪಕ ಇದು. ಕುಮಾರವ್ಯಾಸ ಹೇಳುವ “ಯಥಾರ್ಥ ಭಾಷಣ ಭೀತ ಚೇತನ”ರಾಗಿ ನಮ್ಮ ಹಿರಿಯರು ಕೂತಿದ್ದಾರೆ. ಆಳುªವವರ ಮೀಸೆ, ಏರುವ ಹುಬ್ಬು ಅವರನ್ನು ಭೀತರನ್ನಾಗಿಸಿದೆ. ಮಾತೆಂಬುದು ಈ ಆಳುವವನ ಅಭೀಪ್ಸೆಗೆ ತಕ್ಕಂಥಾ ರೂಪ ಪಡೆಯುತ್ತದೆ. ಪಳಗಿಸಿ ಒಪ್ಪಿಸುವುದಷ್ಟೇ ಅವರ ಪಾತ್ರ.
ಆದರೆ ಇಂಥಾ ಭೀತ ಚೇತನರೊಳಗೊಂದು ವಿವೇಕವೂ ಇದೆ. ಅದಕ್ಕೆ ಕಾಲಗತಿಯ ಭೀಭತ್ಸಕಾರಿ ಚೇಷ್ಟೆಗಳನ್ನು ಪಿಸುಮಾತಿನಲ್ಲಾದರೂ ವಿವರಿಸುವ ಆಸೆ ಕಮರಿದಂತಿದೆ. ಅತ್ತ ದಿಕ್ಕೆಟ್ಟ ಅರಾಜಕ ಮನಃ ಸ್ಥಿತಿಯ ಯುವ ಶಕ್ತಿಗೂ ಈ ವಿವೇಕದ ಮಾತನ್ನು ಆಲಿಸಬೇಕೆಂಬ ಇರಾದೆಯೂ ಇಲ್ಲ. ಹೀಗೆ ಗುಪ್ತವಾಗಿ ಸಂವಾದಿಸುವುದೂ ಒಂದು ರಾಜಕೀಯ ತಂತ್ರ. ಭಾಷಣವಲ್ಲ; ಪಿಸು ಮಾತಿನ ವರಸೆ.
ಆಳುವ ದುಷ್ಟರಿಗೆ ಇದಕ್ಕಿಂತ ಸೌಭಾಗ್ಯದ ಕಾಲ ಬೇರೆ ಇಲ್ಲ. ಬೋನಿಗೆ ಬಿದ್ದ ಹುಲಿಗೂ ಬೋನು ಹೇಗೆ ಇಟ್ಟರು ಎಂಬ ಕಲ್ಪನೆಯೂ ಇರುವುದಿಲ್ಲ. ಅಸಹಾಯಕ ರೋಷ ಮಾತ್ರಾ. ಉದ್ಯೋಗದ ಭರವಸೆ ಇಲ್ಲ. ರಮ್ಯ ಕನಸಿನ ಪುಟ್ಟ ಖಾಸಗಿ ಬದುಕಿನ ಭರವಸೆಯೂ ಇಲ್ಲ. ಹೊರ ದಾರಿ ತೋರಿ ನಿಜ ಶತ್ರುವನ್ನು ಅನಾವರಣಗೊಳಿಸಿ ತೋರಬಲ್ಲ ಶಕ್ತಿ ಇರುವ ಹಿರಿಯರಿಗೆ ಧೈರ್ಯವೇ ಇಲ್ಲ.


ಎ.ಕೆ.ಆರ್. ಹೇಳಿದ “ಮಾತೇ ಜ್ಯೊತಿರ್ಲಿಂಗ ಬೃಹನ್ನಳೆಗೆ..” ಮತ್ತೆ ಮತ್ತೆ ಕಾಡುತ್ತದೆ. ಕುಮಾರ ವ್ಯಾಸ ಹೇಳದೇ ಬಿಟ್ಟ ಮಾತು ಅದು.
ನಮ್ಮ ಕಾಲದ ಈ ಡಬಲ್ ಕ್ರೈಸಿಸ್ ಇದು. ಯೇಟ್ಸ್ ಇದನ್ನು ದಾರುಣ ವಿಷಾದದಲ್ಲಿ ಹೇಳುತ್ತಾನೆ.
The best lack all conviction, while the worst
Are full of passionate intensity.

ಈ ಮಾತೆಲ್ಲಾ ಯಾರಿಗೆ ಹೇಳುತ್ತಿರುವುದು. ಕರ್ತವ್ಯ ಲೋಪದ ಹೊಣೆಗಾರರು ಯಾರು? ಕನ್ನಡಿ ಎದುರಿನ ಮಾತುಗಳಿವು.
ಬೋದಿಲೇರ್ ಹೇಳಿದ- “ನಿನಗೆ ಗೊತ್ತು ಓದುಗ, ಈ ರಾಕ್ಷಸ ಯಾರು ಅಂತ. ನೀನೇ, ಆಷಾಡಭೂತಿ ಓದುಗ, ನನ್ನ ಸಂಗಾತಿ, ನನ್ನ ಸಹೋದರ”
You know him, Reader, that refined monster,
You! Hypocrite reader — my fellow, — my brother!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *