Hrs poem -ನಿರೀಕ್ಷೆ

ಗೋಡೆಗಳೇ ಇಲ್ಲದ ದೇವರೊಬ್ಬ ಉದಯಿಸಲಿ
ತುಂಬು ಹುಣ್ಣಿಮೆಯ ತಂಪು ಚಂದಿರನಂತೆ
ಕಂಡ ಕಣ್ಣಲಿ ಕನಸಿನ ಹೂಟೆಯ ಮೀಟಲಿ
ಗುಡಿಸಿಲಿನ ಅಂಗಳದ ಅಂಬುಮಲ್ಲಿಗೆಗೂ
ಅರಮನೆಯ ಕಳಸಕ್ಕೂ ಒಂದೇ ಬೆಳಕ ಚೆಲ್ಲಲಿ

ದೇವಾ! ನೀನು ಸೆರೆಮನೆಯ ಕೈದಿಗಳ ಕಣ್ಣಲ್ಲಿಳಿದು
ಕಣ್ಣೀರ ಕರೆ, ಕದಡಿದ ಮನಸ್ಸುಗಳು ತಿಳಿಗೊಳ್ಳಲಿ
ಅನಾಥ ಮಕ್ಕಳ ಕೈಯಲ್ಲಾಡುವ ಆಟಿಕೆಯಾಗು
ಅವು ನಿನಗೆ ಕೀಲಿಕೊಟ್ಟು ಕಿಲಕಿಲನೆ ಕುಣಿಯಲಿ
ಬಿಗಿದ ಮನದಿ ಕಚಗುಳಿಯಿಟ್ಟು ಮನಬಿಚ್ಚಿ ನಗಲಿ

ಏಸುವಿನ ಕರುಣೆಯನ್ನೂ ನೋವನ್ನೂ ರಕ್ತವನ್ನೂ
ಪೈಗಂಬರರ ಸಾಧುಸಂತರ ದರ್ವೇಶಿಗಳ
ಹಳೆಯ ಬೇರುಗಳಲ್ಲುಳಿದ ಅವಮಾನಗಳನ್ನು ನುಂಗಿ ಕಾಮನಬಿಲ್ಲಿನ ಬಣ್ಣದ ಹೂವಂತೆ ಮಾತು ಹಗುರಾಗಲಿ
ಅವು
ಬುದ್ಧನ ಮೌನದ ಮುಗುಳು ನಗೆಯನ್ನು ಮರೆಯದೆ ಪೋಣಿಸಿಕೊಳ್ಳಲಿ

ಕುವೆಂಪು ಟಾಲಸ್ಟಾಯರ ರವೀಂದ್ರರ ಧ್ಯಾನದಲ್ಲಿ
ಶೇಕ್ಷಪೀಯರನ ರಾಜರ ರಕ್ತದಾಹವನಿಂಗಿಸು
ಗೊಮ್ಮಟನ ನಿರ್ವಾಣದಲ್ಲಿ ದಾಯಾದಿಯ ದಿಕ್ಕರಿಸು
ಗಾಂಧಿಯ ನಡಿಗೆಯಲಿ ಬಡವನುದ್ಧರಿಸು
ದಿನವಿಡೀ ಹೊಲಮನೆಯಲ್ಲಿ ಗೇದು ದಣಿದು
ಮಲಗಿದ ರೈತನಿಗೆ ನಡುಹಗಲಲ್ಲಿ ಮರದ ನೆರಳಾಗು….,

ನಂಬಿದ ದೇವರ ನೆಟ್ಟು ಬೆಳೆಸಿದ ದೇವನವನು
ನಿನ್ನ ನೆರಳಲ್ಲಿ ಸೊಂಪು ನಿದ್ದೆ ಆವರಿಸಲಿ
ಹಸಿದ ಹೊಟ್ಟೆಯನ್ನರಿತು ಬೆಳೆಸಾಗಲಿ
ಬೆಳಸು ಬಾಡದಂತೆ ಮಳೆರಾಯನಿಗೆ
ಕನಸಾಗಲಿ
ದುಡಿವ ಜೀವಗಳ ತುಂಬಿದ ಹೊಟ್ಟೆ ನೆಮ್ಮದಿಯ
ಕರೆದು ನಿದ್ರೆ ಕಣ್ತುಂಬಿಕೊಳ್ಳಲಿ

ಹೆಚ್. ಆರ್. ಸುಜಾತಾ
೧೮.೫.೧೯

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *