ಆರಿದ್ರಮಳೆ ಹಬ್ಬದಲ್ಲಿ ಕುಮಾರರಾಮನನ್ನು ಭಜಿಸುವುದೇಕೆ ಗೊತ್ತೆ…?

ಕೊಪ್ಪಳ, ಬಳ್ಳಾರಿ ಭಾಗದ ಹೈದರಾಬಾದ್ ಕರ್ನಾಟಕದಲ್ಲಿ ಪೂಜಿಸುವ ಗಂಡುಗಲಿ ಕುಮಾರರಾಮನನ್ನು ಮಲೆನಾಡಿನ ಬಹುತೇಕ ಕಡೆ ಆರಿದ್ರಮಳೆ ಹಬ್ಬದಲ್ಲಿ ಪೂಜಿಸುವ ವಿಚಾರ ಹೆಚ್ಚು ಪ್ರಚಾರವಾಗಿಲ್ಲ. ಆದರೆ ದೀವರನ್ನು ಸೇರಿ ಮಲೆನಾಡಿನ ಹಿಂದುಳಿದ ವರ್ಗಗಳು ಬೇಡರ ದೊರೆ ಕುಮಾರರಾಮನನ್ನು ವರ್ಷಕ್ಕೊಂದಾವರ್ತಿ ಪ್ರತಿವರ್ಷ ಆರಿದ್ರಮಳೆ ಹಬ್ಬದಲ್ಲಿ ಆರಾಧಿಸುತ್ತಾರೆ. ಗಾಮ, ರಾಮ ಎನ್ನಲಾಗುವ ದೇವಸ್ಥಾನಗಳು, ಮರದ ಮುಖಗಳನ್ನು ಪೂಜಿಸುವ ಹಿಂದೆ ಒಂದು ಮಹತ್ವದ ಇತಿಹಾಸ, ಚರಿತ್ರೆಗಳಿರುವುದು ಶಾಸನಗಳು ಮತ್ತು ಐತಿಹಾಸಿಕ ದಾಖಲೆಗಳಲ್ಲಿ ಸಿದ್ಧವಾಗುತ್ತದೆ.

ಹೊಸನಗರದ ಒಂದು ಶಾಸನ ಸೇರಿ ಹಲವು ಶಾಸನಗಳಲ್ಲಿ ಉಲ್ಲೇಖವಾಗಿರುವ ಗಂಡುಗಲಿ ಕುಮಾರರಾಮ ವಿಜಯನಗರದ ಅರಸರ ಮೂಲ ಪುರುಷ ಎನ್ನಲಾಗುತ್ತದೆ.ಕಂಪಿಲ ಮತ್ತು ಹರಿಹರ ದೇವಿಯ ಮಗನಾದ ವೀರ ಕುಮಾರರಾಮ ಸುರದ್ರೂಪಿಯೂ ಶೂರನೂ ಆಗಿ ದೆಹಲಿಯ ದೊರೆ ಮಹಮ್ಮದ್ ಬಿನ್ ತುಘಲಕ್ ನ ಸೇನೆಯನ್ನು ಎರಡು ಬಾರಿ ಹಿಮ್ಮೆಟ್ಟಿಸಿದ್ದ ಎನ್ನುವ ಐತಿಹಾಸಿಕ ದಾಖಲೆಗಳಲ್ಲಿ ಕುಮಾರರಾಮನನ್ನು ಸ್ಮರಿಸಲಾಗಿದೆ.

ಗಂಡುಗಲಿ ಕುಮಾರರಾಮ ವೀರನೂ, ಧೀರನೂ ಆಗಿದ್ದು ಮಹಿಳೆಯರಿಗೆ ವಿಶೇಶ ಗೌರವಕೊಡುತಿದ್ದ ಹಿನ್ನೆಲೆಯಲ್ಲಿ ಐತಿಹಾಸಿಕ ದಾಖಲೆ, ಹಳೆಗನ್ನಡ ಕಾವ್ಯಗಳಲ್ಲಿ ಕೂಡಾ ಕುಮಾರರಾಮನ ಧೀರತನವನ್ನು ಚಿತ್ರಿಸಲಾಗಿದೆ.

ಈ ಕುಮಾರರಾಮ ಯೋಧರಾಗಿದ್ದ ಮಲೆನಾಡಿನ ದೀವರ ಆರಾಧ್ಯಪುರುಷನಾಗುವ ಹಿಂದೆ ದೀವರ ವಿಜಯನಗರದ ಕಾಲದ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ಬುಡಕಟ್ಟುಗಳಾದ ದೀವರು ರಾಜರ ಕೆಳಗೆ ಯೋಧರಾಗಿ, ಹಲವು ಸಾಂಮ್ರಾಜ್ಯಗಳಲ್ಲಿ ದೊರೆಗಳಾಗಿದ್ದು ಈ ನಾಡನ್ನು ಆಳಿದವರು, ರಕ್ಷಿಸಿದವರು.

ಅವರು ಮಳೆಗಾಲದ ಯುದ್ಧ ವಿರಾಮದ ಕಾಲದಲ್ಲಿ ತಮ್ಮ ಹುಟ್ಟೂರಿಗೆ ಬಂದು ಕೃಷಿಕೆಲಸ ಮನೋರಂಜನೆಗಳಲ್ಲಿ ತೊಡಗಿಕೊಳ್ಳುತಿದ್ದ ಆಚರಣೆಯಾಗಿ ಮಲೆನಾಡಿನಲ್ಲಿ ಈ ಆರಿದ್ರಮಳೆ ಹಬ್ಬದ ಗಾಮನ ಪೂಜೆ, ಬಿಂಗಿಗಳೆಲ್ಲಾ ಈಗಲೂ ನಡೆಯುತ್ತವೆ. ಗಾಮನ ಮೂರ್ತಿ ಹೊತ್ತ ವ್ಯಕ್ತಿಯನ್ನು ಸ್ತ್ರೀಯರು ಪಾದತೊಳೆದು ಪೂಜಿಸುವುದು ಈ ಬುಡಕಟ್ಟುಜನ ವೀರನೂ, ಧೀರನೂ ಆದ ಮಹಿಳೆಯರನ್ನು ಗೌರವಿಸುತಿದ್ದ ಕುಮಾರರಾಮನನ್ನು ಗೌರವಿಸುವ ಧ್ಯೋತಕ. ಪುರಾಣ, ಸಾಹಿತ್ಯ, ಚರಿತ್ರೆ ಎಲ್ಲಾ ಕಡೆ ತನ್ನ ಶೂರತನ, ತ್ಯಾಗ, ಪೌರುಷದಿಂದ ಅಜರಾಮರನಾದ ಕುಮಾರ ರಾಮ ದೀವರ ಕೊಪ್ಪಗಳಲ್ಲಿ ದೇವರಾಗಿ ಪೂಜಿಸುತ್ತಿರುವ ಹಿಂದೆ ಅಧ್ಯಯನಮಾಡಬೇಕಾದ ಚಾರಿತ್ರಿಕ ಸತ್ಯವಿದೆ. ಮಲೆನಾಡಿನ ಬಹುತೇಕ ಕಡೆ ಪೂಜಿಸಲ್ಪಡುವ ರಾಮ, ಗಾಮ ರಾಮಾಯಣದ ರಾಮನಲ್ಲದೆ ವೀರ-ಶೂರ, ಧೀರ ಬುಡಕಟ್ಟು ಕುಮಾರ ರಾಮನೆಂಬುದು ನಿರ್ವಿವಾದ. ಇದೇ ಕುಮಾರರಾಮನ ಗುಡಿಯೊಂದು ಹೊನ್ನಾವರ ತಾಲೂಕಿನ ನವಿಲಗೋಣಿನಲ್ಲಿ ಇರುವ ಮಾಹಿತಿ ಇದೆ. ಈ ದೇವಸ್ಥಾನದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಸುಗ್ಗಿ ಹಬ್ಬವೆಂದು ಆಚರಿಸುವ ರೂಢಿಯೂ ಸಂಪ್ರದಾಯವಾಗಿದೆ. ಈ ಬಗ್ಗೆ ಸಂಶೋಧನೆಗಳಾಗಿ ಆರಿದ್ರಮಳೆ ಹಬ್ಬ ಅಲ್ಲಿಯ ಬಿಂಗಿ ಈ ಆಚರಣೆಗಳೊಂದಿಗೆ ಗಾಮನ ಆರಾಧನೆ ಇವುಗಳ ಹಿಂದೆ ಪ್ರಬಲವಾದ ಬುಡಕಟ್ಟು ಆಚರಣೆ, ರೂಢಿಗಳಿರುವುದು ಕರಾವಳಿ, ಮಲೆನಾಡಿನ ದೀವರು ಅರಣ್ಯವಾಸಿ ಬುಡಕಟ್ಟುಗಳು ಎಂಬುದಕ್ಕೆ ಸಾಕ್ಷಗಳನ್ನೊದಗಿಸುತ್ತದೆ ಕೂಡಾ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *