


ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರ ಮತ್ತು ಅಭಿವೃದ್ಧಿಯ ಕಾರಣಕ್ಕೆ ವಿಶ್ವಾಸದಿಂದ ಇದ್ದೇವೆ ಎನ್ನುವ ಮೂಲಕ ಕಾಗೇರಿ- ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ ರಾಜಕಾರಣ ಮಾಡುತಿದ್ದಾರೆ ಎನ್ನುವವರ ಹುಬ್ಬೇರುವಂತೆ ಮಾಡಿದ್ದಾರೆ.


ಸಿದ್ದಾಪುರದ ವರ್ತಕರ ಸಂಘದ ಅಡಕೆ ಭವನ ಉದ್ಘಾಟಿಸಿ ಮಾತನಾಡಿದ ಭೀಮಣ್ಣ ನಾಯ್ಕ ಸಮಾಜ ಹೊಂದಾಣಿಕೆ-ಸಮನ್ವಯ ಬಯಸುತ್ತದೆ. ಅಡಕೆ ವರ್ತಕರು ತಮ್ಮ ಹೊಂದಾಣಿಕೆ ಸಮನ್ವಯದಿಂದ ದೊಡ್ಡ ಸಾಧನೆ ಮಾಡಿದ್ದಾರೆ. ಅಭಿವೃದ್ಧಿ- ಸಮಾಜದ ಹಿತ ಬಂದಾಗ ನಾವು ಕೂಡಾ ಪಕ್ಷ- ಹುದ್ದೆ ಮರೆತು, ನಾವು ಶಾಸಕರು, ಅವರು ಸಂಸದರು, ನಮ್ಮ ಪಕ್ಷಬೇರೆ, ಅವರ ಪರಿವಾರ ಬೇರೆ ಎನ್ನುವಂತಿಲ್ಲ ಅಭಿವೃದ್ಧಿಗಾಗಿ ನಮ್ಮಲ್ಲೂ ಹೊಂದಾಣಿಕೆ ಅಗತ್ಯ ಎಂದು ವಿವರಿಸಿದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________





