ಯಾರು ಈ ದೀವರು?

ಯಾರು ಈ ದೀವರು? (ಕರ್ನಾಟಕ ದೀವರು)
ದೀವರು ಅರಣ್ಯ ಸಂಪತ್ತನ್ನು ಸಂಗ್ರಹಿಸುತ್ತಿದ್ದುದರಿಂದ ಅರಣ್ಯಭಂಡಾರರೆಂದು ಕರೆಯಲಾಗಿದೆ.
ಅಶ್ವಾರೋಹಿಗಳಾಗಿದ್ದು ಬಿಲ್ಲುವಿದ್ಯೆಯಲ್ಲೂ ಪರಿಣತಿ ಹೊಂದಿದ ಬಿಲ್ಲುಪಡ್ಡೆಕಾರರಾಗಿದ್ದುಯೋಧಪಡೆಯನ್ನು ಕಟ್ಟಿಕೊಂಡ ಸಾಮಂತರಾಗಿದ್ದವರು. ಕ್ರಿ .ಶ.1129 ರಲ್ಲಿಯೇ ಹೊಯ್ಸಳರ ಅಧೀನ ಅಧಿಕಾರಿ ದೀವರ ಚಿಂಣನ ಬಮ್ಮಣನುಚಂದ್ರಗುತ್ತಿಯನ್ನಾಳುತ್ತಿದ್ದುದು ಮೂಡಿಗೆರೆಯ ಹಂತೂರು, ಕುರುವ ಹಾಗೂ ಸೊರಬ ಶಾಸನಗಳಿಂದ ತಿಳಿದು ಬರುತ್ತದೆ.
ಹೊಸಗುಂದದರಸರಲ್ಲಿ ವೀರಕೋಟಿನಾಯಕ, ಕೆಳದಿ ಅರಸರ ಕಾಲದಲ್ಲಿ ದಂಡನಾಯಕನಾದ ಕಾಸರಗೋಡು ತಿಮ್ಮಣ್ಣನಾಯಕ, ಹೆಮ್ಮೆ ವೀರಭದ್ರಣ್ಣ ಮೊದಲಾದ ದಂಡನಾಯಕರನ್ನು ಕಾಣುತ್ತೇವೆ. ದೀವರು ಸೈನಿಕ ಪಡೆಯನ್ನು ಕಟ್ಟಿಕೊಂಡ ಪಡೆವಳರಾಗಿದ್ದು ಬಿಲ್ಲ ಮೂನೂರ್ವರು, ನಾನೂರ್ವರು ಎನ್ನಿಸಿ ಕೊಂಡವರು.
ಕ್ರಿ.ಶ 1500ರ ಸುಮಾರಿಗೆ ವಿಜಯನಗರದರಸರು ಹಾಗು ಕೆಳದಿ ಅರಸರು ಇವರನ್ನು ಹಳೆಪೈಕದವರು ಅಂದರೆ ಆದಿಕಾಲದ ಪಾಯದಳ, ಕಾಲ್ದಳ, ಅನಾದಿಕಾಲದ ಯೋಧರೆಂದೇ ಗುರುತಿಸಿ ಕೊಂಡವರು. ದೀವರ ಸ್ಮಾರಕಗಳಲ್ಲಿ ವೀರನು ಅಶ್ವಾರೋಹಿಯೂ, ಬಿಲ್ಲುಧಾರಿಯೂ ಆಗಿರುವುದನ್ನು ಕಾಣುತ್ತೇವೆ.
ಮೈಸೂರಿನ ಹೈದರಾಲಿಯು 1763ರಲ್ಲಿ ಬಿದನೂರನ್ನು ವಶಪಡಿಸಿಕೊಳ್ಳುವವರೆಗೆಸಾಮಾಜಿಕವಾಗಿ, ಆರ್ಥಿಕವಾಗಿ ವಿವಿಧ ಹಂತದಲ್ಲಿ ಅಧಿಕಾರವನ್ನು ಹೊಂದಿ ದೀವರು ಸಬಲರಾಗಿದ್ದವರು.
ಶೈಕ್ಷಣಿಕವಾಗಿಯೂ ಪ್ರಗತಿಯಲ್ಲಿದ್ದವರು. ಹೈದರಾಲಿಯು ಬಿದನೂರು ಸೈನ್ಯವನ್ನು ತನ್ನ ಸೈನ್ಯದೊಡನೆ ವಿಲೀನಗೊಳಿಸಿಕೊಳ್ಳಲಿಲ್ಲ. ಇದರಿಂದ ಬಿದನೂರು ಸೈನಿಕರು ನಿರುದ್ಯೋಗಿಗಳಾಗಿ, ನಂತರ ಇನ್ನೂರು ವರ್ಷಗಳಲ್ಲಿ ವಸಾಹತುಶಾಹಿ ಆಡಳಿತದಲ್ಲಿನ ವರ್ಣವ್ಯವಸ್ಥೆಯಲ್ಲಿ ಶೋಷಿಸಲ್ಪಟ್ಟವರು.
ಭಾರತದ ಸ್ವಾತಂತ್ರ್ಯಾನಂತರ ಎಪ್ಪತ್ತರ ದಶಕದಲ್ಲಿ ಸಮಾಜವಾದ ದ ಸಿದ್ಧಾಂತದ ಮೇಲೆ ಶಿವಮೊಗ್ಗ ಜಿಲ್ಲೆಯಲ್ಲಿ ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಹಾಗು ಬಿ. ಸ್ವಾಮಿರಾವ್ ಇವರುಗಳು ಹಿಂದುಳಿದವರ ನೇತಾರರಾಗಿ ಕರ್ನಾಟಕ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದು ಎಲ್ಲ ಶೋಷಿತ ವರ್ಗದ ಅಭಿವೃದ್ಧಿಯ ಹರಿಕಾರರಾದರು.
ಡಾ ಅ.ಸುಂದರರು ಘನವಾದ ಮುನ್ನುಡಿಯನ್ನು ನೀಡಿರುತ್ತಾರೆ. ಡಾ ಪಿ.ಎನ್.ನರಸಿಂಹಮೂರ್ತಿಯವರು ಕೃತಿಯ ಪ್ರೌಢಿಮೆಯನ್ನು ಕುರಿತು ಪ್ರಸ್ಥಾಪಿಸಿದ್ದಾರೆ. ಡಾ ಶ್ರೀ ಕಂಠಕೂಡಿಗೆಯವರು ಕೃತಿಯನ್ನು ಕುರಿತು ಕೆಲವು ಮಾತುಗಳಾನ್ನಾಡಿದ್ದಾರೆ. ಇವರಿಗೆ ನನ್ನ ನಲ್ಮೆಯ ನಮಸ್ಕಾರಗಳು.
ಡಾ ಜಗದೀಶ್ ಅಗಸಿಬಾಗಿಲು ಬೆನ್ನುಡಿಯನ್ನು ನೀಡಿದ್ದು, ಈ ಗ್ರಂಥರಚನೆಗೆ ಪ್ರೇರಣೆ ಹಾಗೂ ಸಲಹೆ, ಸಹಾಕಾರವನ್ನಿತ್ತವರು ಮಂಗಳೂರಿನ ವಿ.ಗ. ನಾಯಕರು ತಮ್ಮ ಸಹಕಾರವನ್ನು ನೀಡಿದ್ದಲ್ಲದೆ ಕೇರಳ ಪ್ರಾಂತ್ಯದಲ್ಲಿರುವ ಬಿದನೂರಿನಿಂದ ಯೋಧರಾಗಿ ಹೋದ, ಹಳೆಪೈಕದವರನ್ನು ಪರಿಚಯಿಸಿ ಕೊಟ್ಟವರು.
ಕೆಳದಿ ದೇವಪ್ಪನವರು ಕ್ಷೇತ್ರಕಾರ್ಯದಲ್ಲಿ ನಮ್ಮೊಡನಿದ್ದು ಸಹಾಕಾರವಿತ್ತವರು ಸ್ನೇಹಿತರಾದ ಎಂ .ಎನ್.ಸುಂದರರಾಜ್ರವರಿಗೂ ,ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಸ್ನೇಹಿತರಿಗೂ ಹಾಗೂ ತಾಂತ್ರಿಕ ವೃಂದದವರಿಗೂ ಧನ್ಯವಾದಗಳು.
ಮಲೆನಾಡು ಎಂಬುದೇ ನಿಸರ್ಗದ ತವರು. ಪ್ರಕ್ರತಿಯ ಆರಾಧಕರಿಗೆ ಸುಂದರ ತಾಣ. ನೋಡುಗರ ಭಾವಕ್ಕೆ ತಕ್ಕಂತೆ ಹಸಿರುಸ್ವರ್ಣದ ತೇರು, ಸುಂದರ ದೃಶ್ಯಕಾವ್ಯವನ್ನು ಕಣ್ಣಮುಂದೆ ಕಟ್ಟಿನಿಲ್ಲಿಸಿ, ಮನಸ್ಸಿಗೂ ದೇಹಕ್ಕೂ ಚೇತೋಹಾರಿ ಆನಂದವನ್ನು ನೀಡುತ್ತದೆ. ಕರ್ನಾಟಕದ ದಕ್ಷಿಣದ ತುದಿಯಿಂದ ಮಹಾರಾಷ್ಟ್ರದ ಅಂಚಿನವರೆಗೆ ಉತ್ತುಂಗವಾಗಿ 1300 ಕಿ.ಮೀ. ದೂರ ಹಬ್ಬಿದ ಸಹ್ಯಗಿರಿಸಾಲು, ಮತ್ತದರ ಪೂರ್ವದ ಬಳುಸಾದ ತಪ್ಪಲಿನಲ್ಲಿ ಹಬ್ಬಿರುವ ಗಿರಿವೃಂದಗಳು. ಕರ್ನಾಟಕದ ಅತಿ ಹೆಚ್ಚು ವರ್ಷಧಾರೆಯು ಸುರಿವ, ನಿತ್ಯ ಹರದ್ವರ್ಣದ ದಟ್ಟಾರಣ್ಯದಿಂದ ಕೂಡಿದ ಅಪರೂಪದ ಜೀವಜಾಲ ಹೊಂದಿದ ವಿಶಿಷ್ಟ ಕಾನನ ಪ್ರದೇಶ. ನಾನಾ ಕೀಟ,ಪಕ್ಷಿ, ಪ್ರಾಣಿ, ಸಸ್ಯಸಂಕುಲದ ಅಚ್ಚರಿಯ ಪ್ರಭೇದಗಳೊಂದಿಗೆ ಪ್ರಪಂಚದ ಅಪರೂಪದ ಜೈವಿಕ ಉದ್ಯಾನವೆನಿಸಿದೆ.
ಶರಾವತಿ, ತುಂಗ,ಭದ್ರಾ, ವರದ, ಕುಮದ್ವತಿ, ಚಕ್ರಾ, ವರಾಹಿ ಮೊದಲಾದ ಪವಿತ್ರ ಜೀವನದಿಗಳ ಉಗಮ ಸ್ಥಾನವೂ ಆಗಿದೆ. ಹಾಗೆಯೇ ಈ ಮಲೆನಾಡಿನ ಆಯುಧೋಪಜೀವಿಗಳಾದ ದೀವರ ಜನಾಂಗವನ್ನೂ ತನ್ನ ಒಡಲಲ್ಲಿ ತುಂಬಿಕೊಂಡಿದೆ. ಆದಿ ಕವಿ ಪಂಪನು ಈ ಮಲೆನಾಡನ್ನು ಹೀಗೆ ವರ್ಣಿಸಿದ್ದಾನೆ: “ದೇವನಂದನದ ವಿಹಾರ
ಪ್ರಸಾದಿತವೆಂಬಂತೆ ಗಿರಿಶೃಂಗಗಳು ಕಾಂಚನಕುಂಬ ಕಳಶ ಶೋಭಿತನಾಗಿ, ಹಸಿರರತ್ನ ತೋರಣದಲ್ಲಿ ಸಿಂಗರಿಸಿದ ಕಲ್ಪವೃಕ್ಷಗಳು.
ಚಿತ್ರ ವಿಚಿತ್ರ ಪರಿಪರಿಯ ವೃಕ್ಷ ಸಂಕುಲಗಳಿಂದ ತುಂಬಿ ತುಳುಕುವ ಚೇತೋಹಾರಿ ವನದೇಶಗಳು. ಸುಂದರ ಮನಸ್ಸಿಗೂ ಕಣ್ಣಿಗೂ ಆನಂದಮಯ ಸೊಗಸು. ಕಿರುಮಲೆ, ಹಿರಿಮಲೆ, ಏರುಮಲೆಯ ಹಬ್ಬಿದ ಹಸಿರ ಸ್ವರ್ಣದ ತೇರು. ಈ ಮಲೆನಾಡೆ ಇಹುದು ‘ವಿಶ್ವಂಬರಮಾಗಿ’’ ಎಂದಿದ್ದಾನೆ.
ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತಾಟವಿ ಸೊರ್ಕಿದಾನೆಯಂ ಬೆಳೆವುದು ದೇವ ಮಾತೃಕಮೆನಿಪ್ಪ ಪೊಲಂ ನವ ಗಂಧಶಾಳಿಯಂ ಬೆಳೆವುದು ರಮ್ಯ ನಂದರ ವನಾಳಿ ವಿಯೋಗಿ ಜನಕ್ಕೆ ಬೇಟಮಂ ಬೆಳೆವುದು ನಾಡ ಕಾಡ ಬೆಳಸಿಂಬೆಳಸಾ ವಿಷಯಾಂತರಾಳದೊಳ್
ಇಂತಹ ಮಲೆನಾಡನ್ನೇ ತಮ್ಮ ವಾಸಸ್ಥಾನವನ್ನಾಗಿ ಆಯ್ದುಕೊಂಡ ಕೃಷಿ ಹಾಗೂ ಕ್ಷಾತ್ರವೃತ್ತಿಯ ಪರಂಪರೆಯ ದೀವರ ಜನಾಂಗವಿದೆ. ಈ ದೀವರ ಜನಾಂಗದ ಹೆಸರಿನಲ್ಲಿ ದೊರೆಯುವ ಅಧಿಕ ಸಂಖ್ಯೆಯ ವೀರಗಲ್ಲು ಹಾಗೂ ಮಹಾಸತಿಕಲ್ಲು ಸ್ಮಾರಕಗಳು ದೀವರರು ‘ಧೀರರು’ ಎಂಬುದನ್ನು ಅಭಿವ್ಯಕ್ತಗೊಳಿಸುತ್ತವೆ.
ಈ ಸ್ಮಾರಕಗಳಲ್ಲಿ ದೀವರ ಶೌರ್ಯ ಸಾಹಸಗಳು ಅಮೋಘವಾಗಿ ಪಲ್ಲವಿಸಿವೆ. ಈ ವೀರಗಲ್ಲುಗಳಲ್ಲಿ ಯೋಧನು ಅಶ್ವಾರೂಢನಾಗಿರುವುದನ್ನು ಕಾಣುತ್ತೇವೆ. ಅವರನ್ನು ಐತಿಹಾಸಿಕ ಅಧ್ಯಯನ ಮಾಡುವುದು ಈ ಕೃತಿಯ ಉದ್ದೇಶ.
(ಕರ್ನಾಟಕ ದೀವರು ಪುಸ್ತಕದಿಂದ, ಲೇಖಕರು-ಮಧುಗಣಪತಿರಾವ್ ಮಡೆನೂರು)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *