vp visit @ siddapur ಉಪ ರಾಷ್ಟ್ರಪತಿಗಳ ಭೇಟಿಗೆ ಸಿದ್ಧ (ವಾದ) ಪುರ

ಇತ್ತೀಚಿನ ವರ್ಷಗಳಲ್ಲಿ ಸಿದ್ಧಾಪುರದ ನೆಲಕ್ಕೆ ಮೊಟ್ಟಮೊದಲ ಬಾರಿಯೆಂಬಂತೆ ಭಾರತದ ಉಪರಾಷ್ಟ್ರಪತಿಗಳ ಆಗಮನವಾಗುತ್ತಿದೆ. ಉಪರಾಷ್ಟ್ರಪತಿಗಳ ಕಛೇರಿಯ ವಿಶೇಶ ಅಧಿಕಾರಿ ರಾಜೇಶ್‌ ನಾಯ್ಕರ ತಾಯಿ ಲಕ್ಷ್ಮಿ ನಾರಾಯಣ ನಾಯ್ಕ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ತಮ್ಮ ಅಧೀನ ಅಧಿಕಾರಿ ರಾಜೇಶ್‌ ನಾಯ್ಕ ಭೇಟಿಯಾಗಿ ಅವರ ಕುಟುಂಬವರ್ಗಕ್ಕೆ ಸಾಂತ್ವನ ಹೇಳಲು ಬರುತ್ತಿರುವ ಗೌರವಾನ್ವಿತ ಭಾರತದ ಉಪರಾಷ್ಟ್ರಪತಿಗಳು ಸಿದ್ಧಾಪುರದಲ್ಲಿ ಅರ್ಧಗಂಟೆಗಳ ಸಮಯ ಕಳೆಯಲಿದ್ದಾರೆ.

ಸಿದ್ದಾಪುರದ ಹಿರಿಯ ವಕೀಲ ಎನ್.ಡಿ. ನಾಯ್ಕರ ಇಂದಿರಾನಗರದ ಮನೆಗೆ ಭೇಟಿ ನೀಡಲಿರುವ ಜಗದೀಪ ಧನಕರ ಸ್ವಾಗತಕ್ಕೆ ಜಿಲ್ಲಾಡಳಿತ ಎಲ್ಲಾ ತಯಾರಿ ನಡೆಸಿದೆ. ಕೋಲಶಿರ್ಸಿ ಗ್ರಾ.ಪಂ. ನ ತಾಲೂಕಾ ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್‌ ಮೂಲಕ ಬಂದಿಳಿಯಲಿರುವ ಉಪರಾಷ್ಟ್ರಪತಿಗಳು ತಾಲೂಕಾ ಕ್ರೀಡಾಂಗಣದಿಂದ ಸಿದ್ಧಾಪುರ ರಸ್ತೆಯ ಮೂಲಕ ಇಂದಿರಾನಗರಕ್ಕೆ ಬಂದು ಅಲ್ಲಿ ವೃಕ್ಷಾರೋಪಣದ ಜೊತೆಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಉಪರಾಷ್ಟ್ರಪತಿಗಳ ಅಪರೂಪದ ಭೇಟಿಗೆ ಪೂರ್ವಸಿದ್ಧತೆ ನಡೆಸಿರುವ ತಾಲೂಕಾ ಆಡಳಿತಕ್ಕೆ ರಾಜೇಶ್‌ ನಾಯ್ಕರ ಕುಟುಂಬ ಸಂಪೂರ್ಣ ಸಹಕಾರ ನೀಡಿದೆ. ನೀತಿಸಂಹಿತೆ, ಪ್ರೋಟೋಕಾಲ್‌, ಜೆಡ್‌ ಭದ್ರತೆಗಳ ಹಿನ್ನೆಲೆಯಲ್ಲಿ ಸೋಮುವಾರ ಬೆಳಿಗ್ಗೆ೧೧ ರಿಂದ ೧ ಗಂಟೆಯ ವರೆಗೆ ಶಿರಸಿ ರಸ್ತೆ, ಸಿದ್ಧಾಪುರದ ಕೆಲವು ಭಾಗಗಳಲ್ಲಿ ಕೆಲವು ನಿರ್ಬಂಧಗಳು ಜಾರಿಯಲ್ಲಿರಲಿವೆ. ಬೆಳಿಗ್ಗೆ ಶಿರಸಿಯಿಂದ ವಾಯುಮಾರ್ಗದಲ್ಲಿ ಸಿದ್ಧಾಪುರಕ್ಕೆ ಬರಲಿರುವ ಉಪರಾಷ್ಟ್ರಪತಿಗಳು ಮಧ್ಯಾನ್ಹದ ವರೆಗೆ ಸಿದ್ಧಾಪುರದಲ್ಲಿದ್ದು ನಂತರ ಮರಳಲಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *