


ಜಜ್.

ಹಾಗಾದರೆ… ಒಬ್ಬ ವ್ಯಕ್ತಿ ಒಂದೇ ರಾತ್ರಿ ಐದು ಕೊಲೆ ಮಾಡಿದ್ದಾನೆ ಎಂದು ನಾನೂ ನಂಬಬೇಕೆ?
ವಕೀಲ- ಮೈ ಲಾರ್ಡ್… ಅವನೇ ಒಪ್ಪಿಕೊಂಡಿದ್ದಾನೆ…. ಕೊಲೆಯ ಉದ್ಧೇಶ ಕೇವಲ ಬಂಗಾರ ಕಳ್ಳತನವಲ್ಲ ಸ್ವಂತ ಮಾವನ ಮಗಳನ್ನು ದಾರೆ ಎರೆದು ಕೊಡಲಿಲ್ಲ ಎನ್ನುವ ಸಿಟ್ಟು.. ಅಷ್ಟಕ್ಕೂ ಕದ್ದ ಬಂಗಾರ ಮಾರಿದ ಅಂಗಡಿಯಲ್ಲಿ ಈತ ದಾಖಲೆ ಕೊಟ್ಟಿಲ್ಲ…. ಅಜ್ಜನ ಮನೆ ಅಂದರೆ ತಾಯಿಯ ತವರಲ್ಲಿ ನೆಂಟನಾಗಿ ಹೋಗಿ ಸೇಡು ತೀರಿಸಿಕೊಂಡು … ಲಾಭ ಮಾಡುವ ಉದ್ದೇಶದ ಕೃತ್ಯ ಎಂದು ಸುಧೀರ್ಘ ದಾಖಲೆ ಕೊಟ್ಟಿದ್ದೀನಿ….


ಜಜ್ …. ಇರಬಹುದ್ರಿ ಪೊಲೀಸ್ ತನಿಖೆಯಲ್ಲಿ ಐದು ಜನ ಕೊಲೆಯಾದ ಪ್ರಕರಣದ ದೊರೆತ ಎಂಜಲು ಬಾ ಳೆಗಳು ಏಳು ಎಂದಿದೆ.

ಆರು ಜನರು ಉಂಡು ಏಳು ಬಾಳೆ ಎಲೆಗಳಿದ್ದರೆ…. ಅವರ ಚಾರ್ಜ್ ಶೀಟ್ ನಂಬಬಹುದು… ಏಳು ಬಾಳೆ ಎಲೆ… ಸತ್ತವರು ಐದು ಜನ…. ಏಳನೇ ಬಾಳೆ ಎಲೆ ಉಂಡವನು ಯಾರು? ಇನ್ನೊಬ್ಬ ಇರಬೇಕಲ್ಲ….
ಈತ ಮನೆಯಿಂದಹೊರಬಂದದ್ದು ಮುಂಜಾನೆ ಐದೂವರೆ ಎನ್ನುತೀರಿ… ಇದರ ಮೊದಲು ಮತ್ತೊಬ್ಬ ಓಡಿ ಹೋಗಿರಬಹುದಲ್ಲ….. ಅವನೇ ಕೊಲೆಗಾರ ಎಂದು ನೀವ್ಯಾಕೆ ತರ್ಕಿಸುವುದಿಲ್ಲ……
-೨-
https://www.facebook.com/share/p/1LKnphFHfg
ಜಜ್ – ಅಜ್ಜ ನ ಮನೆಯ ಸಂಬಂಧ, ಬಂಗಾರದ ಆಸೆಗೆ ಸೇಡಿಗೆ ಬಿದ್ದು ಒಂದೇ ರಾತ್ರಿ ಐದು ಜನರನ್ನು ಕೊಂದ ಎನ್ನುವ ವ್ಯಕ್ತಿ ಐದೂ ಜನರನ್ನು ಬೇರೆ ಬೇರೆ ಕಡೆ ಹತ್ಯೆ ಮಾಡುವ ಮುನ್ನ ಅವನ ಮನಸ್ಥಿತಿ ಹೇಗಿತ್ತು ಎನಿ previous ರೆಕಾರ್ಡ್…
ವಕೀಲ-
ನೋ ಮೈ ಲಾರ್ಡ್…. ಹಿಂದೆ ಈತ ಅಪರಾಧ ಮಾಡಿರುವ ದಾಖಲೆ ಇಲ್ಲ.. ಮಾನಸಿಕ ಸ್ಥಿಮಿತ ಇಲ್ಲದವನು ಅಲ್ಲ…
ಜಜ್ – ಸರಿ …ತನಿಖಾಧಿಕಾರಿ ಕರೆಯಿರಿ…… ನೀವೇನಾ? ಹೆಸರೇನು?
io- ಹೌದು… ಸಾಲಿಯಾನ್
ಜಜ್… ಅಲ್ರೀ ಕಾಮನ್ ಸೆನ್ಸ್ ಬೇಡ ಏನ್ರಿ…. ಭೀಕರ ಕೊಲೆ ಇಪ್ಪತ್ತು ನಾಲ್ಕು ಗಂಟೆ ಒಳಗೆ ಕೊಲೆಗೆ ಬಳಸಿದ ಅಸ್ತ್ರ ಸಿಕ್ಕಿಲ್ಲ ಅಂತೀರಿ… ಅಲ್ಲೆಲ್ಲಾ ಕೃಷಿಕರೇ ಇರೋದು… ಯಾರದೋ ಪಿಕಾಸು ಎತ್ತು ಕೊಂಡು ಬಂದು ಇದೇ ವಿಪನ್ ಅಂತೀರಾ? ಇದೇ ಪಿಕಾಸಿ ಕೊಲೆಗೆ ಬಳಸಿದ್ದು ಅಂತಾ ನೀವು ಹ್ಯಾಗೆ ಹೇಳ್ತೀರಾ…?
io+ ಫ್ಲೋರೆನ್ಸಿಕ್ ರಿಪೋರ್ಟ್ ಇದೆ…
ಜಜ್ – ಇಂಥಾ ರಿಪೋರ್ಟ್ ಇಟ್ಕೊಂಡು ಇದೇ ವಿಪನ್ ಅಂತೀರಾ ಹೆಣ್ ಕೊಡಲಿಲ್ಲ, ಬಂಗಾರದ ಆಸೆ ಅಂಥಾ ಕತೆ ಕಟ್ ತೀರಾ… ಒಂದಕ್ಕೊಂಡು ಸಾಮ್ಯತೆ ಇಲ್ವಲ್ರಿ…
ಇರಲಿ…fir ನಲ್ಲಿ ಆರು ಬಾಳೆ ಎಲೆ ಅಂತಿದೆ.. ಚಾರ್ಚ್ ಶೀಟನಲ್ಲಿ ಏಳು ಎಲೆ ಅಂತಿದೆ… ಇಡೀ ತನಿಖೆ ಯಲ್ಲಿ ವಿಳಂಬ ಕಾಣ್ತಿದೆ… ಇದಕ್ಕಿಂತ ಹೆಚ್ಚು ವಾಸ್ತವದ ವರದಿ ಬೇಕಲ್ರಿ…
೦-೩-…
ಜಜ್ – ಇದೇ ಕೊನೆ ವಿಚಾರಣೆ…io ಹೇಳಿಕೆ ಇದೆ, ಪ್ರತ್ಯಕ್ಷ ಸಾಕ್ಷಿ ಇಲ್ಲ… ಸಾಕ್ಷಿಗಳು ಬಂದಿದ್ದು ಕಂಡಿಲ್ಲ ಮಾತು ಕತೆ ನಡೀತಾ ಇತ್ತು… ಒಂದೇ ಕುಟುಂಬದ ನಾಲ್ವರೊಂದಿಗೆ ಸಂಭಾವನೆಗೆ ಬಂದ ಭಟ್ಟರಿದ್ದರು ಅವರು ಬಂದದ್ದು ಕಂಡವರಿಲ್ಲ ಮನೆಯಲ್ಲಿ ಚಪ್ಪಲಿ ರಾಶಿ… ಕೊಲೆ ಮಾಡಿ ಹೆಂಚು ತೆಗೆದು ಪರಾರಿಯಾದವನು ಚಪ್ಪಲಿ ಧರಿಸಿಕೊಂಡು ಓಡುತ್ತಾನೋ? ತನಿಖೆ,fir ಗಳಲ್ಲಿ ಸಂಭಾವನೆಗೆ ಬಂದ ಭಟ್ಟರ ಜೊತೆ ಮತ್ತೊಬ್ಬರಿದ್ದರೆ… ದಾಖಲೆ ಇಲ್ಲ…
ಸಂಬಂಧಿ – ಶಾಸ್ತ್ರ – ಸಂಭಾವನೆ ಎಲ್ಲರೂ ಪರಿಚಿತರೇ ಜೊತೆಗೆ ಕೂತು ಊಟ ಮಾಡಿದವರೇ… ಇಂಥ ಹಿತೈಷಿ ಒಂದೇ ರಾತ್ರಿ ತನ್ನ ಸಂಬಂಧಿ ಪರಿಚಿತರನ್ನು ತಲೆಗೆ ಕುಕ್ಕಿ ಸಾಯಿಸಬಹುದೆ? ನಾವು ಮನೋಶಾಸ್ತ್ರಜ್ಞರ ಅಭಿಪ್ರಾಯ ಪಡೆಯಬೇಕು… ಈ ವಿಚಾರಣೆ ಹಂತದ ನಾಲ್ಕು ವರ್ಷಗಳಲ್ಲಿ ಎರಡು ವರ್ಷ ಜೈಲು ವಾಸ ಮುಗಿದಿದೆ… ಸತ್ತವರಲ್ಲಿ ಒಬ್ಬ ಯುವತಿ ಬಿಟ್ಟರೆ… ಉಳಿದವರು ೫೦- ೬೦ ವರ್ಷ ದಾಟಿದವರು… ಆರೋಪಿ ಇಪ್ಪತ್ತೈದರ ಹುಡುಗ…. ಜೈಲು – ಕೋರ್ಟು ಸಹವಾಸದಲ್ಲಿ ಈತ ಬದಲಾದರೆ ಇವನ ಜೀವನ ಸಾಗಿಸುವ ಅವಕಾಶವಿದೆ…

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________

