ಪೋಲಿಗುರು ಖುಶ್ವಂತರ ಹೆಲ್ತ್ ಟಿಪ್ಸ್ ತಿಳಿಯಿರಿ,ನೂರ್ಕಾಲ ಬಾಳಿ

ಖುಷ್ವಂತರ ಆರೋಗ್ಯ ಸೂತ್ರಗಳು
ನಮ್ಮ ನಡುವಿದ್ದ ಶತಾಯುಷಿ
ಸಾಹಸಪ್ರವೃತ್ತಿಯ ಬರಹಗಾರ, ಗಂಡದೆಯ ಪತ್ರಕರ್ತ ದೇಶಕಂಡ ಬಹುಮುಖಿ ವ್ಯಕ್ತಿತ್ವ ಖುಷ್ವಂತ್ ಸಿಂಗ್ ತಮ್ಮ 99ರ ವರಯಸ್ಸಿನಲ್ಲಿ ಉತ್ತಮ ಆರೋಗ್ಯ, ಆರೋಗ್ಯಕರ ಮನಸ್ಥಿತಿಯ ಮನುಷ್ಯ ಅನುಕರಿಸಬಹುದಾದ ಆರೋಗ್ಯ (ಕರ) ಸಲಹೆಗಳನ್ನು ನೀಡಿದ್ದರು. ಅವು ನಿಮಗಾಗಿ ನಿಮ್ಮ ಆರೋಗ್ಯ, ಆಯುಷ್ಯ ನಿರಂತರವಾಗಿ ಹೆಚ್ಚುತ್ತಿರಲಿ.


ಒಬ್ಬನ ಜೀವಿತಾವಧಿಯನ್ನು ನಿರ್ಧರಿಸುವಲ್ಲಿ, ವಂಶವಾಹಿನಿಗಳದು ಬಹುದೊಡ್ಡ ಪಾತ್ರವಿದೆಯೆಂದು ನಾನು ನಂಬಿದ್ದೇನೆ.
ಸುದೀರ್ಘ ಕಾಲ ಬದುಕಿರುವ ಪಾಲಕರ ಮಕ್ಕಳು ಬಹಳ ಕಾಲ ಬದುಕುತ್ತಾರೆ. ಆದಾಗ್ಯೂ, ತನ್ನ ಬದುಕನ್ನು ಪೂರ್ಣವಾಗಿ ಬದುಕುವುದಕ್ಕೆ ಮತ್ತು ಇರುವ ಕಾಲಾವಕಾಶವನ್ನು ಆರೋಗ್ಯಪೂರ್ಣವಾಗಿ ಮತ್ತು ಸಾಫಲ್ಯತೆಯಿಂದ ಬಾಳಲು ಹಲವು ದಾರಿಗಳಿವೆ.
1) ಪ್ರಯತ್ನಿಸಿ ಒಂದು ಆಟ ಆಡುವುದಕ್ಕೆ -ಅದು ಟೆನ್ನೀಸ್ ಇರಬಹುದು, ಸ್ಕ್ವಾಶ್ ಬ್ಯಾಡ್‍ಮಿಂಟನ್ ಅಥವಾ ಗಾಲ್ಫ್, ಒಂದು ಸುತ್ತಾಟ ಒಳ್ಳೆಯದು ನಿಮಗೆ.
ಅಥವಾ ನಿಯಮಿತವಾದ ವ್ಯಾಯಾಮ: ಒಂದು ಗಂಟೆಯ ಚುರುಕಾದ ನಡೆದಾಟ, ಈಜುವುದು ಅಥವಾ ಓಡುವುದು ಒಳ್ಳೆಯದು.
2) ಒಂದು ವೇಳೆ ನಿಮಗೆ ಇವುಗಳಲ್ಲಿ ಯಾವುದನ್ನೂ ಮಾಡಲಾಗದಿದ್ದರೆ, ಸುಮ್ಮನೆ ತೀವ್ರತೆಯಿಂದ ಕೂಡಿದ ಅಂಗಮರ್ಧನ ಮಾಡಿಸಿಕೊಳ್ಳಿ. ಕೊನೇಪಕ್ಷ ದಿನಕ್ಕೊಂದು ಬಾರಿ. ಶಕ್ತಿಶಾಲಿ ಕೈಗಳು ನಿಮ್ಮದೇಹದ ಮೇಲೆ ಚಲಿಸಲಿ.
ನತ್ತಿಯಿಂದ ಹಿಡಿದು ಕಾಲ್ಬೆರಳುಗಳ ತನಕ. ಇದು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.
3) ನೀವು ತೆಗೆದುಕೊಳ್ಳುವ ಆಹಾರದ ಪ್ರಮಾಣ ಕಡಿಮೆಗೊಳಿಸಿ ಕುಡಿಯುವುದರಲ್ಲಿಯೂ, ಊಟದ ವೇಳೆಯ ಬಗ್ಗೆ ಕಟ್ಟುನಿಟ್ಟಿನ ವೇಳಾಪಟ್ಟಿಯನ್ನು ಅನುಸರಿಸಿ:
ನಾನು ಮುಂಜಾನೆ 6.30ಕ್ಕೆ ನನ್ನ ಉಪಾಹಾರವನ್ನು ತೆಗೆದುಕೊಳ್ಳುತ್ತೇನೆ,
ಊಟ ಮಧ್ಯಾಹ್ನ, ಸಂಜೆ 7ಕ್ಕೆ ಪಾನೀಯ ಸೇವನೆ ಮತ್ತು ರಾತ್ರಿಯ ಔತಣ 8ಕ್ಕೆ ನಿಮ್ಮ ದಿನಚರಿಯನ್ನು ಒಂದು ಲೋಟ ಹಣ್ಣಿನ ರಸದಿಂದ ಆರಂಭಿಸಿ.
(ಸೀಬೆ ಹಣ್ಣಿನ ರಸ ಬೇರೆ ಯಾವುದೇ ಹಣ್ಣಿನ ರಸಕ್ಕಿಂತಲೂ ಉತ್ತಮ.)
4). ಸಂಜೆ ಒಂದು ಪೆಗ್ ಸಿಂಗಲ್ ಮಾಲ್ಟ್ ವಿಸ್ಕಿ ಒಳ್ಳೆಯದು ನಿಮ್ಮ ಹಸಿವನ್ನು ಹೆಚ್ಚಿಸುವುದಕ್ಕೆ
5)ನಿಮ್ಮ ಔತಣವನ್ನು ಸವಿಯಲು ಆರಂಭಿಸುವುದಕ್ಕೆ ಮುನ್ನ, ನಿಮಗೆ ನೀವೇ ಹೇಳಿಕೊಳ್ಳಿರಿ; ‘ಹೆಚ್ಚು ತಿನ್ನಬೇಡ. ಒಂಟಿಯಾಗಿ ಮತ್ತು ಮೌನವಾಗಿ ತಿನ್ನುವುದಕ್ಕೆ ಪ್ರಯತ್ನಿಸಿ….

6). ಒಂದೇ ರೀತಿಯ ತರಕಾರಿಗಳಿಗೆ ಅಥವಾ ಮಾಂಸಕ್ಕೆ ಒಗ್ಗಿಕೊಳ್ಳಿ,
ಊಟದ ನಂತರ ಇರಲಿ ಒಂದು ಚಿಟಿಕಿ ಚೂರ್ಣ. (ಇಡ್ಲಿ-ದೋಸೆ ಆರೋಗ್ಯಕರ ಬದಲಿ ಆಯ್ಕೆ, ಏಕೆಂದರೆ ಜೀರ್ಣಿಸಿಕೊಳ್ಳುವುದಕ್ಕೆ ಸುಲಭ).
7) ನಿಮ್ಮನ್ನು ನೀವು ಮಲಬದ್ಧತೆಗೆ ತುತ್ತಾಗುವುದಕ್ಕೆ ಅವಕಾಶ ಮಾಡದಿರಿ. ನಿಮ್ಮ ಹೊಟ್ಟೆಯನ್ನು ಕರುಳನ್ನು ಸ್ವಚ್ಛವಾಗಿರಿಸಿಕೊಳ್ಳಿ-
ಯಾವುದೇ ವಿಧಾನದಿಂದಾದರೂ ಸರಿ: ಮಲವಿಸರ್ಜನೆ ಮಾಡಿಸುವ ಪಿಚಕಾರಿ, ವಸ್ತಿದ್ರವ, ಗ್ಲಿಸರಿನ್ ಇತ್ಯಾದಿಗಳಿಂದ.
8). ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರಲಿ ಹಣ-
ಮನಸ್ಸಿನ ನೆಮ್ಮದಿಗಾಗಿ. ಅದು ಕೋಟಿಗಟ್ಟಲೆ ಇರಬೇಕಾಗಿಲ್ಲ. ಆದರೆ, ನಿಮ್ಮ ಭವಿಷ್ಯದ ಅಗತ್ಯಗಳನ್ನು ಪೂರೈಸುವಷ್ಟು ಕಾಯಿಲೆ ಕಸಾಲೆ, ಆರೋಗ್ಯದಲ್ಲಿ ಏರುಪೇರು ಇತ್ಯಾದಿಗಳಿಗೆ.
9). ನಿಮ್ಮ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬೇಡಿ. ಆಗಾಗ್ಗೆ ನಗುತ್ತಿರಿ.
10) ಸುಳ್ಳಾಡಬೇಡಿ.
11) ಉದಾರವಾಗಿ ನೀಡಿ. ಅದು ನಿಮ್ಮ ಅತ್ಮವನ್ನು ಶುದ್ಧಿಗೊಳಿಸುತ್ತದೆ. ನೆನಪಿಡಿ,
ನಿಮ್ಮಲ್ಲಿದ್ದದ್ದನ್ನು ನೀವು ಹೋಗುವಾಗ, ತೆಗೆದುಕೊಂಡು ಹೋಗಲಾಗುವುದಿಲ್ಲ.
12). ನಿಮ್ಮ ಅಮೂಲ್ಯ ಸಮಯವನ್ನು ಪ್ರಾರ್ಥಿಸುತ್ತ ಹಾಳುಮಾಡಿಕೊಳ್ಳಬೇಡಿ.
ಅದರ ಬದಲಿಗೆ ಒಂದು ಹವ್ಯಾಸವನ್ನು ರೂಢಿ ಮಾಡಿಕೊಳ್ಳಿ: ತೋಟಗಾರಿಕೆ, ಸಂಗೀತ, ಮಕ್ಕಳಿಗೆ ಸಹಾಯ ಮಾಡುವುದು ಅಥವಾ ಅಗತ್ಯವಿದ್ದವರಿಗೆ ನೆರವಾಗುವುದು.
ನೆನಪಿಡಿ: ನಿಮ್ಮ ಮನಸ್ಸು ಮತ್ತು ಕೈಗಳೆರಡೂ ಕೆಲಸ ಮಾಡುತ್ತಿರಲಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *