ದೇವರೆ ಇದರ ಅರ್ಥವೇನು?

ಬದ್ಧತೆಯ ನೇರ,ದಿಟ್ಟ ಹೋರಾಟಗಾರ ಇನ್ನು ನೆನಪು
ದೇವರೆ ಇದರ ಅರ್ಥವೇನು?
ಇವೆಲ್ಲದರ ಅರ್ಥವೇನು?
ಇದು ನಾಸ್ತಿಕ ಗಿರೀಶ್ ಕಾರ್ನಾಡರ ಪ್ರಸಿದ್ಧ ನಾಟಕ ಯಯಾತಿ ರಂಗ ಪ್ರಸ್ತುತಿಯ ಕೊನೆಯ ಸೀನ್, ಸಂಭಾಷಣೆ.
ಪುರುರಾಜ ಚಿತ್ರಲೇಖೆ ಯನ್ನು ಕಳೆದುಕೊಂಡಿದ್ದಾನೆ.
ಕೊನೆಗೆ ದಕ್ಕಿದ ಶರ್ಮಿಳೆಯೊಂದಿಗೆ ಯಯಾತಿ ವಾನಪ್ರಸ್ಥಕ್ಕೆ ಹೊರಟಿದ್ದಾನೆ, ಪುರುರಾಜನ ಯೌವನ ಮರುಕಳಿಸಿದೆ.ಕ್ಲೈಮ್ಯಾಕ್ಸ್ ದೇವರೆ ಇದರ ಅರ್ಥವೇನು?
ಗಿರೀಶ್ ಕಾರ್ನಾಡರ ನಿಧನದ ಸುದ್ದಿ ಕೇಳಿದ ಅನೇಕರಿಗೆ ಇದೇ ಅನಿಸಿರಬೇಕು.
ಪ್ರಾಧ್ಯಾಪಕ, ಸಾಹಿತಿ,ಸಂಘಟಕ, ಹೋರಾಟಗಾರ ಹೀಗೆ ಬಹುಮುಖ ಪ್ರತಿಭೆಯ ಕಾರ್ನಾಡ್ ಕನ್ನಡದ ಮಲೆನಾಡು, ಬಯಲುಸೀಮೆ, ಅರೆಬಯಲುಸೀಮೆ ಜೋಡಿಸಿದವರು.
ಭಾರತದ ಭಾವೈಕ್ಯತೆಯ ಕನ್ನಡ, ತೆಲುಗು, ಮಲಿಯಾಳಿ, ಮರಾಠಿ, ಹಿಂದಿಗಳೊಂದಿಗೆ ಸಂಬಂಧ ಬೆಸೆದವರು.
ಮಾತನಾಡಿದ್ದಕ್ಕಿಂತ ಹೆಚ್ಚು ಬರೆದರು. ಬರೆದದ್ದಕ್ಕಿಂತ ಹೆಚ್ಚು ಕ್ರೀಯಾಶೀಲರಾಗಿ ಹೋರಾಟ, ಚಳವಳಿ, ಬದ್ಧತೆಗಳಿಂದ ಮನೆಮಾತಾದರು.
ಮಾತೃಭಾಷೆ ಮರಾಠಿಯಂತೆ. ಕನ್ನಡ, ಇಂಗ್ಲಿಷ್, ಹಿಂದಿಗಳೊಂದಿಗೆ ಅನೇಕ ಭಾಷೆ ಸಂಸ್ಕøತಿಗಳಿಗೆ ಧ್ವನಿಯಾದರು.
ಒಬ್ಬ ಕ್ರೀಯಾಶೀಲ ಹೋರಾಟಗಾರ ಚಳವಳಿಗಳ ಮೂಲಕ ಬೆಳೆಯುತ್ತಾ ಸಂಕಥನಗಳನ್ನು ಕಟ್ಟಿಕೊಡಬಲ್ಲ. ಆದರೆ ಅಂತ್ಯದವರೆಗೆ ಪ್ರತಿಪಾದಕನಾಗಿ ನಿಂತು ಸತ್ಯಸಂಶೋಧಕನಾಗಿ ಉಳಿಯಬೇಕಾದರೆ, ಪ್ರಬುದ್ಧತೆ, ನಿರ್ಲಿಪ್ತತೆ,ಸ್ಥಿತಪ್ರಜ್ಞೆತೆಗಳೊಂದಿಗೆ ಸಾತ್ವಿಕ ಹಠವಿರಬೇಕಾಗುತ್ತದೆ.
ಈ ಸಾತ್ವಿಕ ಹಠ ಉಪನ್ಯಾಸಕ, ಹೋರಾಟಗಾರ ರಂಗಕರ್ಮಿ, ನಿರ್ಧೇಶಕ, ನಟ, ಸಹೃದಯಿ, ಸತ್ಯ ಶೋಧಕ, ಚಳವಳಿಗಾರ, ನೇರ,ದಿಟ್ಟ ಮಾತುಗಾರ ಎಲ್ಲವೂ ಆಗಿ ಅರಳಿದೆ.
ಕನಸುಗಳ ದಾರಿ ಹುಡುಕಿಹೊರಟ ಕಾರ್ನಾಡರ ಭೌತಿಕತೆ,ಉಸಿರು ಕತ್ತಲಲ್ಲೂ ನಡೆಯುತ್ತಿದೆ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಕನಸಿಲ್ಲದ ದಾರಿಯ ನಡೆ ದುಸಾಧ್ಯ ಎನ್ನುವಂತೆ.

  • ಸೂರ್ಯನ ತೇಜದಲ್ಲಿ ಆಗದ ಕೆಲಸ ಸುವರ್ಣ ನಾಣ್ಯಗಳ ಪ್ರತಿಬಿಂಬದ ಕಾಂತಿಯಲ್ಲಾಗುತ್ತದೆ.(ಪುರುವಿಗೆ ಯಯಾತಿ ಹೇಳುವ ಮಾತು)
  • ಬೆಳಕಿಲ್ಲದ ದಾರಿಯಲ್ಲಿ ಹೋಗಬಹುದು,ಕನಸುಗಳಿಲ್ಲದ ದಾರಿಯಲ್ಲಿಹೇಗೆ ಹೋಗುವುದು?
  • ಕಾರಣವಿಲ್ಲದೆ ಬಲಿದಾನ ಮಾಡುವುದು ವಿಕೃತಿಯ ಲಕ್ಷಣ
  • ನಾನು ಕಲ್ಲನ್ನು ಮಾತ್ರ ಒಗೆಯಬಲ್ಲೆ ಅದೆಬ್ಬಿಸಿದ ಅಲೆಗಳ ಮೇಲೆ ನನಗೆ ಅಧಿಕಾರವಿಲ್ಲ.
  • ತ್ಯಾಗದ ಅತಿರೇಕವೂ ಒಂದು ಮೋಹ
  • ನೀತಿಯೆಂದರೆ ಸಾಮಾನ್ಯ ಜನತೆ ತನ್ನ ರಕ್ಷಣೆಗಾಗಿ ಕಟ್ಟಿಕೊಂಡ ಬಂಧನ
    ಇಂಥ ಸತ್ಯದ, ಸತ್ವಗಳ ಸಾಲುಗಳ ನಡುವಿನ ಮೌನ, ವಿವೇಕಗಳಲ್ಲಿ ಕಾರ್ನಾಡ್ ನಿತ್ಯ ನಮ್ಮೊಂದಿಗೆ ಬದುಕಿರುತ್ತಾರೆ.
    ಮತೀಯವಾದಿಗಳ ಅಧಿಕಾರಲಾಲಸೆಯ ದುರಾಸೆಯ ಮೂಲಭೂತವಾದಿ ದುಷ್ಟ ಚಿಂತನೆಗಳ ಅವಾಂತರಕಾರಿ ದುಷ್ಟಪರಿವಾರಕ್ಕೆ ದುಸ್ವಪ್ನವಾಗಿ ಬದುಕಿನ ಕೊನೆಉಸಿರಿರುವವ ವರೆಗೂ ಸಾಹಿತ್ಯ, ಸಾಂಸ್ಕøತಿಕ ಲೋಕದ ಐಕಾನ್ ಆಗೇ ಮೆರೆದ ಕಾರ್ನಾಡ್ ರ ಮೌಲ್ಯಯುತ ಬದುಕಿಗೆ, ಅವರ ದಿವ್ಯ ನೆನಪಿಗೆ ಅವರದೇ ಅಕ್ಷರಗಳು ಸಮರ್ಪಿತ
    -ಕನ್ನೇಶ್,

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *