ತಮ್ಮಣ್ಣ ಬೀಗಾರರ ಕವನ


ಮತ್ತೆ ನಗುತ್ತದೆ……
ಹಗಲೆಲ್ಲ ನಗೆಯಾಡುತ್ತ ಇದ್ದ ಮರಗಳು
ರಾತ್ರಿ ಕತ್ತು ಕತ್ತರಿಸಿ ಬಿದ್ದಾಗಿದೆ….
ಹೂವು ಹಣ್ಣು ಎಲ್ಲಾ ಚಲ್ಲಾಪಿಲ್ಲಿ
ಅಲ್ಲಿ ಒಡೆದ ಮೊಟ್ಟೆ ಮುರಿದ ರಟ್ಟೆ
ಏನೆಲ್ಲಾ ಚಿತ್ರಗಳು….
ನಡೆಯಲಾಗದ ಅಜ್ಜಿ
ಮಗ ಕೂಡ್ರಿಸಿ ಹೊಗಿದ್ದಾನೆ ಇಲ್ಲಿ
ಮೊನ್ನೆ ಹಾಲು ಕುಡಿಸಿದ್ದು… ಮುದ್ದಾಡಿದ್ದು
ಇಂದು ಅಳುವಾಗಿ ಕಾಡುತ್ತಿದೆ
ನೆರಳೇ ಇಲ್ಲದ ಕಾಡಿನಲ್ಲಿ ನೆಳಲು
ಬೆನ್ನಿಗೆ ಬರುತ್ತಿದೆ…. ಬಿಸಿಲು ತಿನ್ನಿಸಿ ನಗುತ್ತಿದೆ
ಆನೆ ಹುಲಿ ಚಿರತೆ ಇನ್ನು ಅಲ್ಲಲ್ಲಿ
ಗದ್ದೆ ತೋಟಗಳಲ್ಲಿ ಓಡಾಡುತ್ತಿವೆ
ಬೆಂಗಳೂರಿನಲ್ಲಿ ಮರ ಬಿದ್ದ ಸುದ್ದಿ
ನಮ್ಮೂರಲ್ಲಿ ಆನೆಗಳ ಲದ್ದಿ
ಗುಡ್ಡದ ಮೇಲೆ ಕಾಣುವ ಕಲ್ಲು
ದೇವರಾಗಿ, ಮನೆಯಾಗಿ, ಸೇತುವೆಯಾಗಿ
ಹಣವಾಗಿ ಏನೇನೋ ಬದಲಾಗಿದೆ
ಇಲ್ಲಿ ಬಂದಿದೆ ಕೊಳವೆ ಬಾವಿ
ಮತ್ತು ಪಂಪು ಆ ಮೂಲಕ ತಂಪು
ಹಳ್ಳಿಯಲ್ಲಿರುವ ವೃದ್ಧರೆಲ್ಲ
ಕೆಲಸದ ಮಾತಾಡುತ್ತ ಕೆಲಸ ಮಾಡಲಾಗದೇಮೌನವಾಗಿದ್ದಾರೆ… ಹುಡುಗರು
ಅಮೇರಿಕಾದಿಂದ ಮನೆಯ ಒಳಗೆ ಬಂದು
ಮಾತಾಡುತ್ತಾರೆ ಮತ್ತೆ ಔಷಧಿ ಕಳುಹಿಸುತ್ತಾರೆ
ಭೂಮಿಯ ತಾಪ ಹೆಚ್ಚಿದೆ
ಅದು ಕರಗಿ ಕಣ್ಣೀರಾಗುತ್ತಿದೆ
ಬೀಜ ಬಿತ್ತುತ್ತಲೇ ಇರೋಣ
ಕಣ್ಣೀರು ತಣ್ಣೀರಾಗುತ್ತದೆ
ಬೀಜ ಚಿಗುರಿ ಮರವಾಗುತ್ತದೆ
ಮತ್ತೆ ನಗುತ್ತದೆ.
-ತಮ್ಮಣ್ಣ
ಬೀಗಾರ ( ತಮ್ಮಣ್ಣ ಬೀಗಾರ್ ವೃತ್ತಿಯಿಂದ ಶಿಕ್ಷಕರು,ಸಾಹಿತ್ಯ, ವ್ಯಂಗ್ಯ ಚಿತ್ರ ರಚನೆ ಅವರ ಹವ್ಯಾಸ. ಅತ್ಯುತ್ತಮ ಶಿಕ್ಷಕರೆಂದೇ ಅವರಿಗೆ ಸಿಕ್ಕಿದ್ದು ರಾಷ್ಟ್ರಪ್ರಶಸ್ತಿ. ಪ್ರಸ್ತುತ ಬಿದ್ರಕಾನ ಶಾಲೆ ಅವರ ಅಂಗಳ ಅವರ ವಿದ್ಯಾರ್ಥಿಗಳು,ಪ್ರಕಟಿತ ಪುಸ್ತಕಗಳೇ ಅವರ ಮೌಲ್ಯ ತಿಳಿಸುತ್ತವೆ. ಉಳಿದಂತೆ ಮಕ್ಕಳ ಸಾಹಿತ್ಯದಲ್ಲಿ ಅವರದು ದೊಡ್ಡ ಹೆಸರು.)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *