ಮಂಡಗಳಲೆ ಯನ್ನು ಬದಲಾಯಿಸಿದ ಶಿಕ್ಷಣ!

ಮಲೆನಾಡಿನ#ಬಯಲು#ಸೀಮೆ#ಮುಳುಗಡೆ#ಮಂಡಗಳಲೆಯ#ಶಿಕ್ಷಣ#ಕ್ರಾಂತಿ#ನಿಮಗೆ#ಗೊತ್ತೇ…ಪೂರ್ವದಲ್ಲಿ ವರದಾ ನದಿಯು ಮಂಡಗಳಲೆಯ ದುಃಖ ನದಿಯಾಗಿ ಕಾಡಿದರೆ, ಪಶ್ಚಿಮದಲ್ಲಿ ಕನ್ನೆಹೋಳೆ ತೀರದ ಅಬ್ಬರಕ್ಕೆ ಪ್ರತಿವರ್ಷ ನಷ್ಟಕ್ಕೆ ಒಳಗಾಗುವ ತುಂಡು ಹೊಲದ, ಅಷ್ಟೇನೂ ಫಲವತ್ತಲ್ಲದ ಹೋಂಗಲು ಭೂಮಿಯ ರೈತಾಪಿಗಳ ಊರು ಮಂಡಗಳಲೆ.

ಮಳೆಗಾಲದ ಕೆಲವು ಮಾಸಗಳಲ್ಲಿ ಪ್ರತಿವರ್ಷ ಪ್ರವಾಹಕ್ಕೆ ಸಿಲುಕಿ ದ್ವೀಪ ಪ್ರದೇಶದಂತೆ ಕಾಣುವ ಮಂಡಗಳಲೆಯ ಜಡಿಮಳೆ ಕೆಲವರಿಗೆ ಅಚ್ಚರಿಯ ಪ್ರವಾಸಿತಾಣ, ಅಲ್ಲಿನ ನಿವಾಸಿಗಳಿಗೆ ಕಣ್ಣೀರಿನ ದುರಂತ ಮೌನಗಾನ.ಮಲೆನಾಡಿನ ಕೇಂದ್ರಭಾಗದ ಸಾಗರ ತಾಲೂಕಿನ ಕೆಳದಿ ಸೀಮೆಯ ಮಲೆನಾಡಿನ ಹಳ್ಳಿಯಾದರೂ ಮಂಡಗಳಲೆ ಯಲ್ಲಿ ಮಲೆನಾಡಿನ ಯಾವ ಲಕ್ಷಣವೂ ಇಲ್ಲ. ಕುರುಚಲು ಗಿಡ ಮರಗಳು, ಕಳ್ಳಿಮಟ್ಟಿ, ಕುನ್ನೇರಲು ಮರಗಳೇ ಹಸಿರು ಸಿರಿ. ಬಯಲು ಬೀಡಾದ ಹಬ್ಬೇವು ನಮ್ಮೂರಿನ ಹುಲ್ಲುಗಾವಲು. ಸಮೀಪದ ಗುಡವಿ ಪಕ್ಷಿಧಾಮಕ್ಕೆ ಹೋಗುವ ಹಲವು ಪಕ್ಷಿಗಳು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿಯೂ ಸಹ ಉಳಿಯುವುದು ಮಾತ್ರ ಮತ್ತೊಂದು ವಿಶೇಷ.

ಸಮೀಪದ ಕಾಗೋಡು, ಹಿರೇನೆಲ್ಲೂರಿನ ಸಮಾಜವಾದಿ ಗುಣ ಹುಟ್ಟಿದ್ದೇ ಮಂಡಗಳಲೆ ಮಣ್ಣಿನಲ್ಲಿ ,ಕಾಗೋಡು ಚಳವಳಿಯ ಹಲವು ರೂವಾರಿಗಳು ಮಂಡಗಳಲೆಯವರು ಎಂಬುದು ಹಲವು ಹಿರಿಯರ ಅಂಬೋಣ. ಈ ಬಗ್ಗೆ ಬಂಜಗೆರೆ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಹುಚ್ಚಪ್ಪ ಮಾಸ್ತರು ಸಂಪಾದಿಸಿದ ಪುಸ್ತಕದಲ್ಲಿ ಈ ಬಗ್ಗೆ ದಾಖಲೆಗಳ ಉಲ್ಲೇಖವಿದೆ.

ಇಂತಹ ಹಳ್ಳಿಯ ಜನಗಳ ಎದೆಯಲ್ಲಿ ಇದ್ದದ್ದು ಒಂದೇ ಸ್ವಾಭಿಮಾನ ಮತ್ತು ಪರಿಶ್ರಮ. ಶಿಕ್ಷಣವೇ ಶಕ್ತಿಯೆನ್ನುವ ತಿಳಿವು.ಇರುವ ಭೂಮಿ ಒಂದು ಕುಟುಂಬದಲ್ಲಿ ಕೇಂದ್ರೀಕೃತವಾಗಿತ್ತು. ಹೇಗೋ ಉಳುವವನೇ ಭೂ ಒಡೆಯ ಕಾನೂನಿನ ಅಡಿಯಲ್ಲಿ ಚೂರುಪಾರು ಭೂಮಿ ಗಿಟ್ಟಿಸಿಕೊಂಡರು ಕೂಲಿ ತಪ್ಪಲಿಲ್ಲ. ಹಲಸಿ ಬೀಜ ಹುಳಿಸಾರು ಗತಿಯಾಗಿತ್ತು. ಸಣ್ಣಪುಟ್ಟ ಕೆರೆ ಗುಂಡಿಯ ಮೀನಿನ ಆಸೆಗೆ ಈ ಊರಿನಲ್ಲಿ ಬೀಡುಬಿಟ್ಟು ನೆಲೆಸಿದ್ದೇವೆ ಹೊರತು ಇದು ಜನವಸತಿಗೆ, ಅಭಿವೃದ್ಧಿಗೆ ಪೂರಕವಾದ ಜಾಗವಲ್ಲ ಎಂಬುದು ನಮಗೂ ಗೊತ್ತಿತ್ತು ಆದರೂ ಇಲ್ಲೇ ಉಳಿದುಬಿಟ್ಟೇವು ಎಂದು ಪೂರ್ವಜರು ಮೀನಿನ ಆಸೆಯ ಹುಂಬತನವನ್ನು ಈಗಲೂ ಸ್ಮರಿಸಿಕೊಳ್ಳುತ್ತಾರೆ.

ಸಮೀಪದ ಬೆಳ್ಳಿಕೊಪ್ಪ ಎಂತದೋ ದೆವ್ವ-ಭೂತ ಮಾಟ-ಮಂತ್ರ ,ಮಲೇರಿಯಾ ರೋಗದ ಕಾಲದಲ್ಲಿ ಅವನತಿಯತ್ತ ಸಾಗಿದಂತೆ ಮಂಡಗಳಲೆಯಲ್ಲಿ ಜನವಸತಿ ಹೆಚ್ಚುತ್ತಾ ಹೋಯಿತು. ಈ ಮಂಡಗಳಲೆ ಜನವಸತಿ ಪ್ರದೇಶ ತೀರಾ ಇತ್ತೀಚಿನ ತಲೆಮಾರುಗಳಲ್ಲಿ ಬೆಳೆದದ್ದು ಹೊರತು ದೀರ್ಘಕಾಲದ ತಲೆಮಾರುಗಳ ಯಾವ ಇತಿಹಾಸವು ಇಲ್ಲ.ಆದರೆ ಈಗ ಮಂಡಗಳಲೆಯ ಚಿತ್ರಣವೇ ಬೇರೆ. ಸುತ್ತಲ ಕೆಳದಿಸೀಮೆ ಸಾಗರ, ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ನೌಕರರನ್ನು ಹೊಂದಿದ ಊರಷ್ಟೆ ಅಲ್ಲ, ಸಮಾಜವಾದಿ ನೆಲೆಗಟ್ಟಿನ ಗ್ರಾಮ ಸುಧಾರಣಾ ಸಮಿತಿ ಇರುವ, ಸುಂದರ ಗ್ರಾಮ ನಿರ್ಮಾಣ ಯೋಜನೆ, ಸುಸಜ್ಜಿತ ರಸ್ತೆಗಳು, ಸಾಲು-ಸಾಲು ತೆಂಗಿನ ತೋಪಿನ ನಡುವಿನ ಮನೆಗಳ ವಾತಾವರಣ ಮತ್ತು ನಗರ ಯೋಜನೆಯನ್ನು ಮೀರಿಸುವಂತಹ ವ್ಯವಸ್ಥಿತ ಕೇರಿ ಯೋಜನೆ , ರಸ್ತೆ ಚರಂಡಿ ಯೋಜನೆ ಇರುವ ಊರಾಗಿ ಮಂಡಗಳಲೆ ನಿಮ್ಮನ್ನು ಗಮನಸೆಳೆಯುತ್ತದೆ.

ಮಂಡಗಳಲೆಯ ಸಮೀಪದಲ್ಲಿ ಇತ್ತೀಚಿನ ವರ್ಷಗಳವರೆಗೂ ಯಾವ ಹೈಸ್ಕೂಲು ಕಾಲೇಜು ಇರಲಿಲ್ಲ ಆದರೂ ಎಂಬತ್ತರ ದಶಕದಲ್ಲಿಯೇ ಹಲವರು ಪದವೀಧರರು, ನೌಕರರು ಇದ್ದರು. ಬಹುತೇಕ ಇಡೀ ಊರಿನ ಕುಟುಂಬಗಳು ಸ್ವತಂತ್ರ ಹೋರಾಟಗಾರರ ಜೊತೆ ಕೈಜೋಡಿಸಿದ್ದು ಉಳುವವನೇ ಭೂ ಒಡೆಯ ಹೋರಾಟದಲ್ಲಿ ಎಲ್ಲ ಕುಟುಂಬಗಳು ಒಂದಾಗಿ ತೊಡಗಿಕೊಂಡಿದ್ದರೆಂಬುದು ಹಿರಿಯರ ಮಾತು.ಹೆಚ್ಚುವರಿ ಜಿಲ್ಲಾಧಿಕಾರಿಯಂತಹ ಉನ್ನತ ಹುದ್ದೆಗಳಿಂದ ಹಿಡಿದು, ವಿವಿಧ ಅಧಿಕಾರಿವರ್ಗ, ಹಲವು ಉಪನ್ಯಾಸಕರು, ಶಿಕ್ಷಕರು, ಪೊಲೀಸರು, ಇಂಜಿನಿಯರುಗಳು, ಉದ್ಯಮಿಗಳು, ಬರಹಗಾರರು, ವಿವಿಧ ಸ್ತರದ ಸರ್ಕಾರಿ ಮತ್ತು ಖಾಸಗಿ ನೌಕರರು, ಚಾರ್ಟೆಡ್ ಅಕೌಂಟೆಂಟ್, ರಾಜಕೀಯ ಸಕ್ರಿಯರು, ಗುತ್ತಿಗೆದಾರರು ಸೇರಿದಂತೆ ಅಂದಾಜು 60 ಕ್ಕೂ ಹೆಚ್ಚು ನೌಕರರು , ರೈಲ್ವೆ ಇಲಾಖೆ ಪಂಚಾಯಿತಿ, ಅಗ್ನಿಶಾಮಕದಳ ಮೆಟ್ರೋ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಇನ್ನಿತರ ವಿವಿಧ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಶಿಕ್ಷಿತ ಪ್ರಜ್ಞಾವಂತರ ಊರು ಮಂಡಗಳಲೆ.

ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಹೆಚ್ ಕೆ . ಕೂಡ ಮಂಡಗಳಲೆ ಊರಿನವರು.ಸಮಾಜವಾದಿ ನೆಲೆಗಟ್ಟಿನ ಗ್ರಾಮ ಸುಧಾರಣಾ ಸಮಿತಿಯು ಎಂತಹ ಹೈಕೋರ್ಟ್ ನ್ನು ಮೀರಿಸುವಂತಹ ಕಾನೂನು ವ್ಯಾಪ್ತಿಯ ದಕ್ಷತೆಯನ್ನು ಸದಾ ಮೆರೆಯುತ್ತಾ ಬಂದಿದೆ. ಗೋಮಾತೆಯೆಂದು ಬಡಾಯಿ ಭಾಷಣ ಬಿಗಿಯುವ ಹಲವರ ಎದುರು ಅತಿ ಹೆಚ್ಚಿನ ಮಲೆನಾಡು ಕಗ್ಗ ಹಸುಗಳನ್ನು ಸ್ವತಹ ಸಾಕಿ ಬೆಳೆಸಿ ಉಳಿಸಿಕೊಂಡಿರುವ ಊರು ಎಂಬುದಾಗಿಯೂ ಪಶುಸಂಗೋಪನಾ ಇಲಾಖೆಯ ಮಾಹಿತಿಗಳು ಉಲ್ಲೇಖಿಸುತ್ತವೆ.ಮಂಡಗಳಲೆಯಲ್ಲಿ ಇದ್ದದ್ದು ಹೊಂಗಲು ನೆಲದ ತುಂಡು ಭೂಮಿ ಆದರೂ ಇಂದು ಬಹುತೇಕ ಅದೇ ನೆಲದಲ್ಲಿ ಅಡಿಕೆ ಬೆಳೆಯುವ ಪ್ರಗತಿಪರ ಕೃಷಿಕರ ಸಂಖ್ಯೆ ಸಹ ಹೆಚ್ಚಿರುವುದು ಮತ್ತೊಂದು ವಿಶೇಷ. ಯಕ್ಷಗಾನ ಕಲಾವಿದರು , ನಾಟಕ ಕಲಾವಿದರು , ಜಾನಪದ ಕಲಾವಿದರು, ಭಜನೆ ಕಲಾವಿದರು , ರಾಜ್ಯಮಟ್ಟದ ಕ್ರೀಡಾಪಟುಗಳನ್ನು, ಬರಹಗಾರರನ್ನು ನೀಡಿರುವ ಊರು ಮಂಡಗಳಲೆ.ಇಲ್ಲಿನ ಜನಗಳಲ್ಲಿ ಇದ್ದದ್ದು ಒಂದೇ. ಸ್ವಾಭಿಮಾನದಿಂದ ಸಾಧಿಸುವ ಛಲ, ನಿರಂತರ ಪರಿಶ್ರಮ, ಶಿಕ್ಷಣದ ಮಹತ್ವವನ್ನು ಅರಿತ ಪ್ರಜ್ಞಾವಂತಿಕೆ.

-ರವಿರಾಜ್ ಸಾಗರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

1 Comment

  1. https://karnatakastartoday.com/a-education-revolution-sagar-taluku-mandagalale-village/

    ಮಂಡಗಳಲೆ ಎಂಬ ಹಳ್ಳಿಯಲ್ಲಿ ನ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ರಾಂತಿ ಕುರಿತು ವಿಶೇಷ ಲೇಖನ .
    ಓದಿ ..
    ಸುದ್ದಿ ಓದಿ ಕಮೆಂಟ್ ಮಾಡಿ.

    ಶೇರ್ ಮಾಡಿ.
    ಆತ್ಮೀಯ ಕನ್ನೇಶ ಅವರೆ… ಈ ಲೇಖನ ಅನಾಮಧೇಯ ಹೇಗೆ ಆಗುತ್ತದೆ…
    ಲೇಖನವನ್ನು ಯಥಾವತ್ತಾಗಿ ಪಡೆಯುವಾಗ ಸ್ವಲ್ಪ ಯೋಚಿಸಿ.. ತಾವು ಸಹ ಬರಹಗಾರರಾಗಿ ಮತ್ತೊಬ್ಬ ಬರಹಗಾರರನ್ನು ಪೋಷಿಸಿಸಬೇಕಾಗುವುದು ತಮ್ಮ ಕರ್ತವ್ಯ.

Leave a Reply

Your email address will not be published. Required fields are marked *