

- ಮಾನಸಿಕ ಸ್ಥಿರತೆ ಇಟ್ಟುಕೊಳ್ಳಿ * ಸಹಜ ಕುತೂಹಲ ದಾರಿ ತಪ್ಪಲು ಪ್ರೇರೇಪಿಸುತ್ತವೆ
- ಚಟಕ್ಕೆ ಒಮ್ಮೆ ಸಿಲುಕಿದರೆ ಹೊರಗೆ ಬರುವುದು ಕಷ್ಟ
- ವ್ಯಸನ ಅನೇಕ ರೋಗಗಳಿಗೂ ಕಾರಣ.
ಮಾನಸಿಕ ದೌರ್ಬಲ್ಯಗಳು ವ್ಯಸನಗಳಿಗೆ ಬಲಿಯಾಗಲು ಕಾರಣ: ಸ್ವರ್ಣವಲ್ಲೀ ಶ್ರೀ ಮಾನಸಿಕ ದೌರ್ಬಲ್ಯಗಳು ವ್ಯಸನಗಳಿಗೆ ಬಲಿಯಾಗಲು ಮುಖ್ಯ ಕಾರಣ. ವಿದ್ಯಾರ್ಥಿಗಳಲ್ಲಿನ ಸಹಜ ಕುತೂಹಲವು ಅವರು ವ್ಯಸನಗಳಿಗೆ ಬಲಿಯಾಗುವಂತೆ ಮಾಡುತ್ತದೆ ಎಂದು ಸೋಂದಾ ಶ್ರೀಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಎಚ್ಚರಿಸಿದರು.
ಬುಧವಾರ ಅವರು 29ನೇ ಚಾತುರ್ಮಾಸ್ಯ ಅಂಗವಾಗಿ ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳಿಗೆ ವ್ಯಸನದಿಂದ ಮುಕ್ತ ಸಮಾಜ ನಿರ್ಮಾಣದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾರ್ಗದರ್ಶನ ಮಾಡಿದರು.
ಜಾಹೀರಾತು, ಹಿರಿಯರ ಅನುಕರಣೆ, ವ್ಯಸನಿಗಳ ಸಹವಾಸ, ಫ್ಯಾಶನ್ ಇತ್ಯಾದಿಗಳು ವ್ಯಸನಗಳಿಗೆ ಒಳಗಾಗಲು ಕಾರಣಗಳಾಗಿವೆ.
ತಂಬಾಕು, ಮದ್ಯಪಾನ, ಗಾಂಜಾ, ಹೆರೋಯಿನ್ಗಳಂಥಹ ಮಾದಕ ದ್ರವ್ಯಗಳ ಸೇವನೆ, ಜೂಜು ಮುಂತಾದವುಗಳು ಜನರನ್ನು ಕಾಡುತ್ತಿರುವ ವ್ಯಸನಗಳಾಗಿವೆ. ಇತ್ತೀಚಿನ ಕಾಲದಲ್ಲಿ ಮೊಬೈಲ್ ಕೂಡ ದುವ್ರ್ಯಸನವಾಗಿ ಪರಿಣಿಮಿಸಿದೆ ಎಂದು ಆತಂಕಿಸಿದ ಸ್ವಾಮೀಜಿಗಳು, ಮೊಬೈಲನ್ನು ಸದುಪಯೋಗ ಮಾಡಿಕೊಳ್ಳುವ ಬದಲು ಗೇಮ್, ಅತಿಯಾದ ಅಂತರ್ಜಾಲಗಳ ಬಳಕೆಯಿಂದ ಸಮಾಜ ವ್ಯಸನಗಳಿಗೆ ಒಳಗಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿಯೂ ತೊಂದರೆಗಳುಂಟಾಗುತ್ತಿವೆ ಅನೇಕ ರೋಗಗಳಿಗೆ ಕೂಡ ಕಾರಣವಾಗಿದೆ. ವ್ಯಸನಗಳನ್ನು ರೂಢಿಸಿಕೊಂಡ ನಂತರ ಅದು ನಮ್ಮ ಪ್ರಾಣ ಇರುವವರೆಗೂ ಅದರಿಂದ ದೂರವಾಗಲು ಬಿಡುವುದಿಲ್ಲ. ದುವ್ರ್ಯಸನಗಳಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಮಾನಸಿಕ ದೌರ್ಬಲ್ಯ, ನರಮಂಡಲಗಳಿಗೆ ಸಂಬಂಧಿಸಿದ ತೊಂದರೆಗಳು, ಮೂರ್ಛೆರೋಗಗಳು ಬರುತ್ತವೆ ಎಂದೂ ಕಳವಳ ವ್ಯಕ್ತಪಡಿಸಿದರು.
ದುವ್ರ್ಯಸನಗಳಿಂದ ಅಪಘಾತಗಳು ಸಂಭವಿಸುತ್ತವೆ. ಮಾದಕ ದ್ರವ್ಯಗಳ ಸೇವನೆಯಿಂದ ಮನಸ್ಸು ಸ್ಥಿಮಿತ ಕಳೆದುಕೊಂಡು ಅಪರಾಧ ಪ್ರಕರಣಗಳು ಹೆಚ್ಚುತ್ತವೆ. ಶಾಸ್ತ್ರಕಾರರು ವ್ಯಸನಗಳನ್ನು ಮಾಡಬಾರದೆಂದು ತಿಳಿಸಿದ್ದಾರೆ. ಹಿರಿಯರ ಮಹಾತ್ಮರ ಮಾತನ್ನು ಮೀರಿ ವ್ಯಸನಗಳಿಗೆ ಒಳಗಾಗಿ ಕೊನೆಯಲ್ಲಿ ನಾಶ ಹೊಂದಿದ ಅನೇಕ ಉದಾಹರಣೆಗಳನ್ನು ಪುರಾಣ ಇತಿಹಾಸಗಳಲ್ಲಿ ಕಾಣಬಹುದು ಎಂದ ಸ್ವಾಮೀಜಿಗಳು, ಧ್ಯಾನ, ಜಪ, ಸ್ತೋತ್ರ, ಪೂಜೆ ಇವುಗಳನ್ನು ಮಾಡುವುದರಿಂದ ವ್ಯಸನಗಳಿಂದ ದೂರವಿರಬಹುದು. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಹಾಗೂ ಶೌಚಾದಿಗಳನ್ನು ಮುಗಿಸಿ ಪ್ರತಿನಿತ್ಯ ಧ್ಯಾನ, ಜಪ, ಸ್ತೋತ್ರ, ಪೂಜೆ ಇವುಗಳಲ್ಲಿ ಒಂದನ್ನಾದರು ಆಚರಿಸಬೇಕು.
ಸಂಗೀತ, ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸದ್ಗ್ರಂಥಗಳ ಅಧ್ಯಯನ ಮಾಡಬೇಕು. ಮಹಾತ್ಮರ ಜೀವನ ಚರಿತ್ರೆಯನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿತವಾದ ಮಿತವಾದ ಆಹಾರವನ್ನು ಸೇವಿಸಬೇಕು. ಯೋಗಾಭ್ಯಾಸವನ್ನು ಪ್ರತಿನಿತ್ಯವೂ ಮಾಡಬೇಕು. ಸ್ತ್ರೀಯರನ್ನು ಮಾತೃಭಾವನೆಯಿಂದ ಕಾಣಬೇಕು ಎಂದರು.
ಶ್ರೀದೇವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಾಂತಾರಾಮ ಹೆಗಡೆ ಹೊಸ್ತೋಟಾ, ಸಂಘಟಕ ಅಶೋಕ ಭಟ್ಟ ಗೋಳಿಕೊಪ್ಪ ಪಾಲ್ಗೊಂಡರು. ಈ ಮೊದಲು ಶಾಲೆಗಳಲ್ಲಿ ಡಾ| ಕೃಷ್ಣಮೂರ್ತಿ ರಾಯ್ಸದ ಹಾಗೂ ಡಾ|ರವಿಕಿರಣ ಪಟವರ್ಧನ ಉಪನ್ಯಾಸ ನೀಡಿದ್ದರು. ಶ್ರೀದೇವಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀನಿಕೇತನ ಶಾಲೆಯ 9 ಮತ್ತು 10 ನೇ ತರಗತಿಯ 250ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
