ಬಹುಮುಖಿ ಆಯ್.ಕೆ.

ಬಹುಮುಖಿ
ಆಯ್.ಕೆ. ಸುಂಗೋಳಿಮನೆ
ಸುತ್ತಮುತ್ತ ಅಡಿಕೆ ತೋಟ,ಎಲ್ಲೆಲ್ಲೂ ಬೆಟ್ಟ ಬಸ್ ಹೋಗದ ಕುಗ್ರಾಮ, ಅಲ್ಲಿ ಒಂದು ಮನೆ ವಿದ್ಯಾವಂತರ ಕುಟುಂಬ, ವೃತ್ತಿ ಕೃಷಿ, ಹವ್ಯಾಸ ನಾಟಕ,ಮೂರ್ತಿತಯಾರಿ, ರಾಜಕಾರಣ ಇತ್ಯಾದಿ…..
ಇಷ್ಟು ಹೇಳಿದರೆ ಸುಂಗೋಳಿಮನೆ ಆಯ್.ಕೆ.ನಾಯ್ಕರನ್ನು ಪರಿಚಯಿಸಿದಂತೆ. ಆದರೆ, ಅವರು ಅರ್ಥವಾಗಬೇಕೆಂದರೆ ಅವರ ಕಲಾಜೀವನ ಪರಿಚಯವಾಗಬೇಕು. ಮೂರ್ನಾಲ್ಕುಮಕ್ಕಳ ತುಂಬು ಕುಟುಂಬದ ಹಿರಿಯಣ್ಣ ಈಶ್ವರ, ಪ್ರಾಥಮಿಕ ಶಾಲೆಯಲ್ಲಿ ರಾಮನಮೂರ್ತಿ
ಮಾಡಲು ಹೋಗಿ ಭಿಕ್ಷಾಂದೇಹಿ ರಾಮನನ್ನು ಮೂಡಿಸಿದ್ದರಂತೆ! ಆಗ ನಕ್ಕ ಸ್ನೇಹಿತರು, ಸಂಬಂಧಿಗಳಿಗೆ ತಾನೇನು ಎಂದು ತೋರಿಸಬೇಕೆಂದು ಮಣ್ಣಿನ ಮೂರ್ತಿ ತಯಾರಿಸತೊಡಗಿದರಂತೆ. ಶಿಕ್ಷಕರೊಬ್ಬರು ಈ ಬಾಲಕ ಈಶ್ವರನ ಆಸಕ್ತಿ ಗಮನಿಸಿ ಸರಸ್ವತಿ ಮೂರ್ತಿ ತಯಾರಿಸುವ ಜವಾಬ್ಧಾರಿ ವಹಿಸಿದರಂತೆ. ಅದು ಪಕ್ಕಾ ಆದ ಮೇಲೆ ಗಣಪತಿ ಮೂರ್ತಿ ಮಾಡಿ ಸೈ ಎನಿಸಿಕೊಂಡ ಈಶ್ವರ ಮುಂದೆ ಕಲೆಯಿಂದ ಕಲಾವಿದರಾಗಲು ನೀನಾಸಂ ಸೇರಿದರು. ನಂತರ ರಂಗಸೌಗಂಧ ಇತ್ಯಾದಿ ಓಡಾಟ, ಒಡನಾಟ. ಜೊತೆಗೆ ರಾಜಕೀಯ, ಧಾರ್ಮಿಕ,ಸಾಮಾಜಿಕ ಇತ್ಯಾದಿ….ಕೆಲಸ.
ಇಷ್ಟೆಲ್ಲವನ್ನೂ ಮಾಡುತಿದ್ದವರು ಸುಂಗೋಳಿಮನೆಯ ಈಶ್ವರ ನಾಯ್ಕ ಆಯ್.ಕೆ.ಸುಂಗೋಳಿಮನೆ ಎಂದು ಪರಿಚಿತರಾಗಿರುವ ಇವರ ಬಗ್ಗೆ ಅನೇಕರಿಗೆ ಪರಿಚಯವಿರಲು ಕಾರಣ ಇವರ ರಾಜಕೀಯ, ಸಾಮಾಜಿಕ, ರಂಗಭೂಮಿಯ ಸೇವೆ. ಆದರೆ ಇವುಗಳಿಗಿಂತ ಹೆಚ್ಚು ಇವರ ಶೃದ್ಧೆ, ಕಲಾವಂತಿಕೆ ಕಾಣುವುದು ಮೂರ್ತಿ ರಚನೆ ಮತ್ತು ಕೃಷಿ ಕೆಲಸದಲ್ಲಿ. ವೃತ್ತಿಯಿಂದ ಕೃಷಿಕರಾಗಿರುವ ಆಯ್.ಕೆ. ಪೃವೃತ್ತಿಯಿಂದ ಮಣ್ಣಿನಮೂರ್ತಿ ನಿರ್ಮಾಪಕರು, ಪ್ರತಿವರ್ಷ 50 ಕ್ಕೂ ಹೆಚ್ಚು ನಾನಾ ಮಣ್ಣಿನ ಮೂರ್ತಿ ಮಾಡುವ ಇವರು ಮಾಡುವ ಗಣಪತಿ ವಿಗೃಹಗಳಿಗೆ ಬೇಡಿಕೆ ಹೆಚ್ಚು.
ಕುಟುಂಬ, ಸ್ನೇಹಿತರು ಮಕ್ಕಳ ಸಹಕಾರದಿಂದ ಮೂರ್ತಿ ತಯಾರಕರಾಗಿ ಹೆಸರುವಾಸಿಯಾಗಿರುವ ಇವರ ಗಣಪತಿ ಮೂರ್ತಿಗಳಿಗೆ ತಾಲೂಕಿನಾದ್ಯಂತ ಬೇಡಿಕೆ. ಹೀಗೆ ಕಲಾವಿದ ಚಿತ್ರ, ಮೂರ್ತಿ, ನಾಟಕ, ಸಮಾಜಸೇವೆ, ಸೇರಿದಂತೆ ನಾನಾಮಜಲುಗಳಲ್ಲಿ ಗುರುತಿಸಿಕೊಂಡರೂ ಅವರ ಬದ್ಧತೆ,ಸಾಮಾಜಿಕ ಕಾಳಜಿ, ಪಕ್ಷ, ಸೈದ್ಧಾಂತಿಕ ನಿಷ್ಠೆಗಳಿಗೆ ಅವರಿಗೆ ಅವರೇ ಸಾಟಿ.
ಗ್ರಾಮೀಣ ಜೀವನದ ತುಂಬು ಅವಿಭಕ್ತ ಕುಟುಂಬದ ಬಹುಮುಖಿ ಪ್ರತಿಭೆಯಾಗಿರುವ ಈಶ್ವರ ನಾಯ್ಕ ಸಂಗೋಳಿಮನೆ ಎಲ್ಲಾ ಪ್ರತಿಭೆ,ಸಾಮಥ್ರ್ಯಗಳಿದ್ದೂ ಎಲೆಮರೆಯ ಕಾಯಿ. ಸಮಾಜ, ಸಂಘಟನೆಗಳು ಅವರ ಬಹುಮುಖಿ ಬದುಕಿಗೆ ಗೌರವಿಸದಿದ್ದರೆ ಅನ್ಯಾಯ ಮಾಡಿದಂತೆಯೇ ಸರಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *