ತೋಟಗಾರಿಕಾ ಬೆಳೆಗಳ ಹಾನಿ ಬಗ್ಗೆ ಈಗಲೂ ಇಲಾಖೆಗೆ ಅರ್ಜಿ ನೀಡಬಹುದು


ಕೊಳೆರೋಗಕ್ಕೆ ಬಲಿಯಾದ ಅಡಿಕೆ,ಕಾಳುಮೆಣಸು ತೋಟಿಗರ ಆತಂಕ ಹೆಚ್ಚಿಸಿದ ಬಿಸಿಲುಮಳೆ
ಈವರೆಗಿನ ಸಮೀಕ್ಷೆಯಂತೆ3018 ಹೆಕ್ಟೇರ್ ತೋಟಗಾರಿಕಾ ಕ್ಷೇತ್ರದ ಉತ್ತರಕನ್ನಡ ಜಿಲ್ಲೆಯ ಬೆಳೆಹಾನಿ 64 ಕೋಟಿ, ಈಗಿನ ವರದಿಯಂತೆ ಈ ಮಳೆಗಾಲದ ಅಂತ್ಯದ ವರೆಗೆ 20ಸಾವಿರ ಹೆಕ್ಟೇರ್ ತೋಟಗಾರಿಕಾ ಬೆಳೆಗಳ ಹಾನಿ ಪ್ರಮಾಣ 300 ಕೋಟಿ ರೂಪಾಯಿಗಳಾಗಬಹುದು.
-ಡಾ.ಬಿ.ಪಿ.ಸತೀಶ್ ಉಪನಿರ್ದೇಶಕರು ತೋಟಗಾರಿಕೆ ಇಲಾಖೆ, ಶಿರಸಿ
ಸಿದ್ಧಾಪುರ ತಾಲೂಕು ಸೇರಿದಂತೆ ಉತ್ತರಕನ್ನಡ ಜಿಲ್ಲೆ ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಈ ವರ್ಷ ಸುರಿದ ವಿಪರೀತ ಮಳೆ ಮತ್ತು ಈಗಿನ ಮಳೆ-ಬಿಸಲು ವಾತಾವರಣ ಬೆಳೆಗಳ ಮೇಲೆ ತೀವೃ ಪರಿಣಾಮ ಬೀರಿದೆ.
ಭತ್ತದ ಗದ್ದೆಗಳಲ್ಲಿ ತುಂಬಿರುವ ಪ್ರವಾಹದ ಮಣ್ಣು ಭತ್ತದ ಬೆಳೆಯನ್ನು ಮಣ್ಣುಮಾಡಿದ್ದರೆ, ತೋಟಿಗರ ಸ್ಥಿತಿ ಚಿಂತಾಜನಕವಾಗುವಂತೆ ಈ ವರ್ಷದ ಮಹಾಮಳೆ ಮತ್ತು ನಂತರದ ಬಿಸಿಲು ಮಳೆ ಕೆಲಸ ಮಾಡಿವೆ.
ಮಳೆಯಿಂದಾದ ನೇರ ಬೆಳೆಹಾನಿ ಬಗ್ಗೆ ಜಂಟೀ ಸಮೀಕ್ಷೆಮಾಡಿರುವ ಕಂದಾಯ, ಕೃಷಿ ಮತ್ತು ತೋಟಗಾರಿಗೆ ಇಲಾಖೆಗಳು ಶೇ,35-40 ಹಾನಿ ಎಂದು ವರದಿ ಮಾಡಿವೆ. ಆದರೆ ಈ ಸಮೀಕ್ಷೆಯಲ್ಲಿ ಸಂಪೂರ್ಣ ರೈತರು ಮತ್ತು ಕೃಷಿ ಕ್ಷೇತ್ರವನ್ನು ಸಮೀಕ್ಷೆ ಮಾಡಲಾಗಿಲ್ಲ.
ತೋಟಗಾರಿಕೆ ಇಲಾಖೆ ಈಗಾಗಲೇ ಪ್ರಾಥಮಿಕ ಹಾನಿಯ ವರದಿಯನ್ನು ರವಾನಿಸಿದ್ದು ಇದು ಆಗಷ್ಟ್ ತಿಂಗಳ ಮೊದಲಾರ್ಧದ ಹಾನಿಯ ಸಮೀಕ್ಷೆಯಾಗಿದೆ. ಈಗಾಗಲೇ ಆಗಿರುವ ಸಮೀಕ್ಷೆಗೆ ಸಿಕ್ಕ ಬೆಳೆಹಾನಿ ಹಾಗೂ ಈ ವರೆಗೂ ಲೆಕ್ಕಕ್ಕೆ,ವರದಿಗೆ ಸಿಗದ ಬೆಳೆಹಾನಿಗೆ ತಾಳೆನೋಡಿದರೆ ಲೆಕ್ಕಕ್ಕೆ ಸಿಗದ ಮತ್ತು ವರದಿಯೊಳಗೆ ಬರದ ಬೆಳೆಹಾನಿ ಪ್ರಮಾಣವೇ ಹೆಚ್ಚು ಎನ್ನಲಾಗುತ್ತಿದೆ.
ತೋಟಗಾರಿಕೆ ಬೆಳೆ ಹಾನಿ ವಿಳಂಬವಾಗಿ ಗಮನಕ್ಕೆ ಬರುವುದು, ಹಾಗೂ ಮಳೆಗಾಲ ಇನ್ನೂ ಒಂದು ತಿಂಗಳು ಬಾಕಿಇರುವುದರಿಂದ ತೋಟಗಾರಿಕಾ ಬೆಳೆಗಳ ಸಮಗ್ರಹಾನಿ 70-75% ದಾಟಿದರೆ ಆಶ್ಚರ್ಯವಿಲ್ಲ ಎನ್ನುವ ಅಭಿಪ್ರಾಯವಿದೆ.
ಸಮಾಜಮುಖಿ ಪ್ರತಿನಿಧಿಜೊತೆ ಮಾತನಾಡಿದ ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು ಈಗ ತ್ವರಿತವಾಗಿ ಮಳೆಹಾನಿ ವರದಿ ಸಲ್ಲಿಸುವ ಗಡಿಬಿಡಿಯಲ್ಲಿ ಸಾಧ್ಯವಾದಷ್ಟು ನಿಖರವಾಗಿ ಸಮೀಕ್ಷೆಮಾಡಿ ವರದಿ ನೀಡಲಾಗಿದೆ. ಆದರೆ ಅರ್ಜಿ ಕೊಡದ ರೈತರು, ನಿಧಾನವಾಗಿ ಬೆಳಕಿಗೆ ಬಂದ ಹಾನಿ ಹಾಗೂ ಸಮೀಕ್ಷೆ, ಕಾಲಮಿತಿ ನಂತರದ ಹಾನಿಗಳು ಸೇರ್ಪಡೆಯಾಗದಿರುವುದರಿಂದ ಈಗ ಸಮೀಕ್ಷೆಗೆ ದೊರೆತಿರುವ, ವರದಿಯೊಳಗೆ ಕಾಣಿಸಿದ ಹಾನಿಗಿಂತ ವಾಸ್ತವದ ಹಾನಿ ಹೆಚ್ಚು ಎಂದಿದ್ದಾರೆ.
ಈ ಹಿಂದಿನ ತರಾತುರಿಯ ಪ್ರಾಥಮಿಕ ಸಮೀಕ್ಷೆಯ ನಂತರ ಕೂಡಾ ತೋಟಗಾರಿಕಾ ಬೆಳೆಗಳ ಹಾನಿ ಬಗ್ಗೆ ಅರ್ಜಿ ಸಲ್ಲಿಸಲು ಸಮಯಾವಕಾಶವಿದ್ದು ಅಡಿಕೆ, ಬಾಳೆ, ಶುಂಠಿ, ಕಾಳುಮೆಣಸು ಸೇರಿದ ತೋಟಗಾರಿಕೆ ಬೆಳೆಗಳ ಹಾನಿ ಬಗ್ಗೆ ಈಗಲೂ ತೋಟಗಾರಿಕೆ ಇಲಾಖೆಗೆ ಅರ್ಜಿ ನೀಡಲು ಅವಕಾಶವಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *