ಇಲ್ಲಿ ಇರಲಾರೆ, ಅಲ್ಲಿ ಹೋಗಲಾರೆ, ಇದು ದೇಶಪಾಂಡೆ ಸ್ಥಿತಿ

ದೇಶಪಾಂಡೆ ಕಿರುಕುಳಗಳಿಂದ ಬೇಸತ್ತ ಕಾಂಗ್ರೆಸ್ ಮುಖಂಡರಲ್ಲಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ರೊಂದಿಗೆ ಕನಿಷ್ಟ ಅರ್ಧಡಜನ್ ನಾಯಕರು ಉತ್ತರಕನ್ನಡದಲ್ಲಿದ್ದಾರೆ. ಶಿವರಾಮ ಹೆಬ್ಬಾರ್ ಸೇರಿದಂತೆ ಕೆಲವರು ದೇಶಪಾಂಡೆ ಜೊತೆ ಕಾಂಗ್ರೆಸ್ ನಲ್ಲಿ ಏಗಲಾರದೆ ಮೊದಲೇ ಬಿ.ಜೆ.ಪಿ. ಸೇರಿದ್ದಾರೆ. ಈಗ ಆರ್.ವಿ.ಡಿ. ಬಿ.ಜೆ.ಪಿ. ಸೇರಲಿದ್ದಾರೆ ಎನ್ನುವ ವದಂತಿ ಹಳಿಯಾಳದ ಬಿ.ಜೆ.ಪಿ.ಮುಖಂಡ ಸುನಿಲ್ ಹೆಗಡೆ,ಅನರ್ಹ ಶಾಸಕ ಹೆಬ್ಬಾರ್ ಸೇರಿದಂತೆ ಕೆಲವರ ರಕ್ತದೊತ್ತಡ ಏರಿಸಿದೆ. ಕಾಂಗ್ರೆಸ್ ನಲ್ಲಿ ಮೃಧು ಹಿಂದುತ್ವದ ಅಂದರ್ ಕಿಮಚ್ಚುವಾಳ್ಳಿಗಳ ಪ್ರಮುಖ ಮುಖಂಡ ದೇಶಪಾಂಡೆ ಉಳ್ಳವರ ಬಿ.ಜೆ.ಪಿ. ಒಲವಿನ ಹಿಂದೆ ಅದೆಷ್ಟು ಕಾರಣಗಳಿವೆಯೋ? ದೇಶಪಾಂಡೆ ಬಿ.ಜೆ.ಪಿ. ಸೇರಿದರೆ ಉತ್ತರಕನ್ನಡದ ಬಿ.ಜೆ.ಪಿ. ಒಡೆದ ಮನೆಯಂತಾಗುವುದು ಪಕ್ಕಾ. ಈಗ ಎಲ್ಲರ ಮುಂದಿರುವ ಪ್ರಶ್ನೆ ದೇಶಪಾಂಡೆ ಬಿ.ಜೆ.ಪಿ. ಸೇರುತ್ತಾರಾ? ಸೇರವುದಿದ್ದರೆ ಅವರೊಂದಿಗೆ ಯಾರ್ಯಾರು ಕಮಲ ಮುಡಿಯುತ್ತಾರೆ ಎನ್ನುವ ಕತೂಹಲ ಅನೇಕರಲ್ಲಿದೆ.


ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎನ್ನುವ ಸ್ಥಿತಿಯಲ್ಲಿ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆಯವರಿದ್ದಾರಾ?
ಎನ್ನುವ ಪ್ರಶ್ನೆ ಉದ್ಭವಿಸುವಂತೆ ವರ್ತಿಸುತಿದ್ದಾರೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ.
ಆರ್.ವಿ.ದೇಶಪಾಂಡೆ ಮೊದಲು ರಾಜಕೀಯಕ್ಕೆ ಬಂದಿದ್ದೇ ಕಾಂಗ್ರೆಸ್‍ನಿಂದ ಆಗ ಸ್ವಾತಂತ್ರ್ಯ ದೊರೆತ ಸಮಯದಲ್ಲಿ ಜಮೀನ್ಧಾರರ ಕುಟುಂಬದ ವಕೀಲ ದೇಶಪಾಂಡೆ ಅಂದಿನ ಶ್ರೀಮಂತರು,ಜಮೀನ್ಧಾರರ ಆಯ್ಕೆಯಾಗಿದ್ದ ಕಾಂಗ್ರೆಸ್ ಸೇರಿದ್ದು ಸಹಜ.
ನಂತರ ರಾಮಕೃಷ್ಟ ಹೆಗಡೆಯವರೊಂದಿಗೆ ಸೇರಿ ಜನತಾದಳದಲ್ಲಿ ಕೆಲಸ ಮಾಡಿ ಫಲ ಉಂಡು ನಂತರ ಮತ್ತೆ ಕಾಂಗ್ರೆಸ್ ಸೇರಿ ಎರಡು ದಶಕ ಕಳೆದಿಲ್ಲ.ಈ ಅವಧಿಯಲ್ಲಿ ತನ್ನ ಹಣಬಲ, ವ್ಯಾವಹಾರಿಕತೆಯಿಂದ ಜನತಾದಳ, ಕಾಂಗ್ರೆಸ್ ನಾಯಕರನ್ನೇ ಬಲಿತೆಗೆದುಕೊಂಡ ಆರ್.ವಿ.ದೇಶಪಾಂಡೆ ಶ್ರೀಮಂತರ ಕೂಟ ಬಿ.ಜೆ.ಪಿ. ಸೇರದಿದ್ದುದೇ ಆಶ್ಚರ್ಯ ಎನ್ನುತ್ತಿರುವಾಗಲೇ ಬಿ.ಜೆ.ಪಿ. ಕಡೆಯಿಂದ ದೇಶಪಾಂಡೆಯವರಿಗೆ ಬುಲಾವ್ ಬಂದಿತ್ತು ಎನ್ನಲಾಗುತ್ತಿದೆ.
ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯ ಮೊದಲೇ ದೇಶಪಾಂಡೆ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಗುಲ್ಲೆದ್ದಿತ್ತು. ಆದರೆ ದೇಶಪಾಂಡೆ ಕಾಂಗ್ರೆಸ್ ಬಿಡಲಿಲ್ಲ. ಎಲ್ಲಿಹೋದರೂ ಹಣ ಕೊಟ್ಟೇ ಮುಖ್ಯಮಂತ್ರಿಯಾಗಬೇಕು ಹಾಗಾಗಿ ಯಾವ ಪಕ್ಷವಾದರೇನು? ಎನ್ನುತಿದ್ದಾರೆ ಆರ್.ವಿ.ದೇಶಪಾಂಡೆ ಎಂದು ಅವರ ವಿರೋಧಿಗಳು ವದಂತಿ ಹರಡುತಿದ್ದಾಗ ದೇಶಪಾಂಡೆ ಕಾಂಗ್ರೆಸ್ ಬಿಡುವುದನ್ನಾಗಲಿ, ಬಿ.ಜೆ.ಪಿ.ಸೇರುವುದನ್ನಾಗಲಿ ಪ್ರಕಟಿಸಿರಲಿಲ್ಲ.
ಆದರೆ ಗಾಳಿ ಸುದ್ದಿಗಳು ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ದಂಗುಬಡಿಸಿದ್ದವು.
ಈಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭ ಕೋರಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಭಟ್ಟಂಗಿಗಳಂತೆ ಸ್ವಾಮಿ ಭಕ್ತಿ ಮೆರೆದಿದ್ದಾರೆ ಎನ್ನುವ ಟೀಕೆಗಳು ವ್ಯಕ್ತವಾಗಿವೆ.
ವಿವಾದ, ರಗಳೆ, ಜಗಳಕ್ಕೆ ಹೋಗದ ದೇಶಪಾಂಡೆ ರಾಜಕೀಯ ವಿರಕ್ತಿಯ ಮಾತುಗಳನ್ನಾಡುತ್ತಲೇ ಕಾಂಗ್ರೆಸ್ ನಲ್ಲಿ ಅತ್ತ್ಯುನ್ನತ ಸ್ಥಾನಕ್ಕೇರಿದವರು.
ಕಾಂಗ್ರೆಸ್ ನ 10 ಜನಪಥ್ ಸದಸ್ಯರ ರಾಜ್ಯ ಸಮೀತಿಯ ಪ್ರಮುಖರಾಗಿರುವ ಆರ್.ವಿ.ದೇಶಪಾಂಡೆ ಕುಸಿಯುತ್ತಿರುವ ಕಾಂಗ್ರೆಸ್ ಮತ್ತು ಹೊಂದಾಣಿಕೆ,ಸೇರ್ಪಡೆಗೆ ವಿರೋಧಿಗಳಾಗಿರುವ ಅನ್ಯಪಕ್ಷಗಳ ನಾಯಕರನ್ನು ಗುರಿಮಾಡುತ್ತಿರುವ ಬಿ.ಜೆ.ಪಿ. ಗುಜರಾತಿಗಳ ತೊಂದರೆ ತಪ್ಪಿಸಿಕೊಳ್ಳುವ ಅಂಗವಾಗಿ ಬಿ.ಜೆ.ಪಿ. ಜೊತೆಗೆ ರಕ್ಷಣಾತ್ಮಕ ಆಟಕ್ಕೆ ಸಿದ್ಧರಾಗಿದ್ದಾರೆ ಎನ್ನುವುದರಲ್ಲಿ ಅನುಮಾನಗಳಿಲ್ಲ.
ಜಾತಿ ಬಲ, ಸಮೂದಾಯದ ಶಕ್ತಿಗಳಿಲ್ಲದ ದೇಶಪಾಂಡೆ ಎಲ್ಲರನ್ನೂ, ಎಲ್ಲವನ್ನೂ ಹಣದಿಂದಲೇ ಸರಿಮಾಡಬಲ್ಲ ಚಾಣಾಕ್ಷ. ಆದರೆ ಗುಜರಾತಿ ಬಿ.ಜೆ.ಪಿ.ಗಳಿಗೆ ಎಲ್ಲಿ ತಟ್ಟಿದರೆ ಎಲ್ಲಿ ಸಿಡಿಯುತ್ತದೆ ಎಂದು ಗೊತ್ತು. ತಟ್ಟಿ-ಮುಟ್ಟಿ ಸರಿಯಾಗದ ಡಿ.ಕೆ.ಶಿವಕುಮಾರರನ್ನು ಉಪಾಯದಿಂದ ಪಂಜರದೊಳಗೆ ಸೇರಿಸಿ ಕಾಂಗ್ರೆಸ್ ನ ಇತರ ಫೈನಾನ್ಸರ್ ಗಳಿಗೆ ಶಾಕ್ ನೀಡಿರುವ ಕೇಂದ್ರದ ಗುಜರಾತಿ ಬಿ.ಜೆ.ಪಿ.ಗಳು ಆಯ್.ಎಂ.ಎ. ಆರೋಪ,ಇತರ ಹಣಕಾಸಿನ ವ್ಯಹಾರಗಳ ಹಿನ್ನೆಲೆಯಲ್ಲಿ ದೇಶಪಾಂಡೆಯವರ ಬಳಿ ನೆಲಬಾಂಬ್ ಎಸೆದಿದ್ದರಂತೆ!
ಇದರಿಂದ ಕಂಗಾಲಾದ ದೇಶಪಾಂಡೆ ಹೊರಗಿದ್ದು ಆರೋಪಿಯಾಗುವುದು, ಅಪರಾಧಿಯಾಗಿ ಸೆರೆಮನೆ ಸೇರುವುದಕ್ಕಿಂತ ಸಂಘಿಗಳ ಜೊತೆ ಸೇರಿ ಸರಳವಾಗಿ ಬಚಾವಾಗಬಹುದು ಎಂದು ಎಣಿಸಿ ದೇಶಪಾಂಡೆ ಮೋದಿ-ಶಾ ಗಳ ಭಜನಾಮಂಡಳಿ ಸದಸ್ಯರಾಗುವ ತೀರ್ಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಈವರೆಗೆ ಪ್ರತಿಕ್ರೀಯೆ ವ್ಯಕ್ತಪಡಿಸದ ದೇಶಪಾಂಡೆ ಮೌನಕ್ಕೂ ಈಗಾಗಲೇ ದೇಶಪಾಂಡೆ ಕಾಂಗ್ರೆಸ್ ಸೇರುತ್ತಾರೆ ಎನ್ನುವ ವದಂತಿಗಳಿಗೂ ಮೌನಂ ಸಮ್ಮತಿ ಲಕ್ಷಣಂ ಎನ್ನುವ ಮಾತು ತಾಳೆಯಾಗುತ್ತಿದೆ.
ಮೃಧು ಹಿಂದುತ್ವವಾದಿ ಆರ್.ವಿ.ಡಿ. ಬಿ.ಜೆ.ಪಿ. ಸೇರುವ ಬಗ್ಗೆ ಇರುವ ಕುತೂಹಲ, ನಿರೀಕ್ಷೆಗಳಿಗಿಂತ ಅವರು ಕಾಂಗ್ರೆಸ್ ಬಿಡಲಿದ್ದಾರೆ ಎನ್ನುವ ಸುದ್ದಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *