ಲಾಭದಾಯಕ ವಾಗುತ್ತಾ, ಕಾಡಿಂದ ನಾಡಿಗೆ ಬರುತ್ತಿದೆ ಮಾಡ ಹಾಗಲ


ಮಲೆನಾಡು ಭಾಗದ ಕಾಡ ಬೆಳೆ ಕಾಡ ಹಾಗಲ ಅಥವಾ ಮಾಡಹಾಗಲ ಈಗ ಲಾಭದಾಯಕ ಬೆಳೆಯಾಗಿ ನಾಡಿಗೆ ಬರುತ್ತಿದೆ. ಕೆಲವೇ ವರ್ಷಗಳ ಹಿಂದೆ ಹೆಚ್ಚಿನ ಔಷಧಿಗುಣ, ಪೌಷ್ಠಿಕಾಂಶಗಳ ಆಗರ ಎನ್ನಲಾಗುತ್ತಿದ್ದ ಮಾಡ ಹಾಗಲವನ್ನು ಕಾಡಿಂದ ಕೊಯ್ದು ತರಕಾರಿ, ಆಹಾರವಾಗಿ ಬಳಸುತಿದ್ದರು. ಆದರೆ ಇದೇ ಕಾಡ ಹಾಗಲ ಈಗ ರೈತನ ಕೃಷಿಭೂಮಿಯ ಬೆಳೆ, ಮಾರುಕಟ್ಟೆಯ ದುಬಾರಿ ತರಕಾರಿಯಾಗಿ ಗಮನ ಸೆಳೆಯುತ್ತಿದೆ.
ಕೆಲವೇ ವರ್ಷಗಳ ಹಿಂದೆ ಮಾರುಕಟ್ಟೆಮೌಲ್ಯವಿಲ್ಲದ ಈ ಮಾಡ ಹಾಗಲವನ್ನು ಕಾಡಿನಲ್ಲಿ ಹುಡುಕಿ ತಂದು ಬಳಸಿ ಖುಷಿಪಡುತ್ತಿದ್ದ ಮಲೆನಾಡಿನ ಜನತೆ ಈಗ ಈ ತರಕಾರಿಗೆ 200-300 ಬೆಲೆ ನೀಡಬೇಕಾಗಿ ಬಂದಿರುವುದು ಅದಕ್ಕೆ ಬಂದಿರುವ ಮಾರುಕಟ್ಟೆ ಮೌಲ್ಯಕ್ಕೆ ಸಾಕ್ಷಿ. ಅಡಿಗೆಯಲ್ಲಿ ಚಟ್ನಿ, ಪಲ್ಲೆ,ಗೊಜ್ಜಾಗಿ ಬಳಕೆಯಾಗುತಿದ್ದ ಈ ಕಾಡ ಹಾಗಲ ಈಗ ಇನ್ನಷ್ಟು ವಿಭಿನ್ನ ಖಾದ್ಯವಾಗಿ ಗಮನ ಸೆಳೆಯುತ್ತಿದೆ.
ಮನೆಯಂಗಳ, ಬಯಲುಪ್ರದೇಶ, ತಾರಸಿಗಳಲ್ಲಿ ನೆಟ್ಟು ಬೆಳೆಸಬಹುದಾದ ಈ ಬಹುಉಪಯೋಗಿ ತರಕಾರಿ60 ರಿಂದ 70 ದಿವಸಗಳ ಬೆಳೆಯಾಗಿದ್ದು ವರ್ಷಕ್ಕೆ ಮೂರ್ನಾಲ್ಕಕ್ಕೂ ಹೆಚ್ಚುಬಾರಿ ನಿರಂತರವಾಗಿ 5-6 ವರ್ಷಗಳ ವರೆಗೆ ಒಂದೇ ಬಳ್ಳಿಯಲ್ಲಿ ಕಾಯಿಕೊಡುವ ಕಾಮಧೇನು. ಈ ಮಾಡ ಹಾಗಲ ಈಗ ರೈತರಿಗೆ ಲಾಭದಾಯಕ ಬೆಳೆಯಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಕೃಷಿ ತಜ್ಞರು.
ಟೀಸಲ್ಗೌಡ್ ವೈಜ್ಞಾನಿಕ ಹೆಸರಿನ ಮಾಡಹಾಗಲ ಮೂಲತ: ಬರ್ಮಾ ದೇಶದ್ದು, ಮಲೆನಾಡಿನ ಬಯಲಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಂಡು ಹೂ,ಕಾಯಿ ಬಿಟ್ಟು ಮರೆಯಾಗುವ ಸಸ್ಯ ಪಶ್ಚಿಮಬಂಗಾಲ, ಓರಿಸ್ಸಾ, ತ್ರಿಪುರಾ, ಅಂಡಮಾನ್‍ಗಳ ವಾಣಿಜ್ಯ ಬೆಳೆ.
ಆರೋಗ್ಯಕಾರಿ ಪೌಷ್ಠಿಕಾಂಶ ಗಳ ವಿಶೇಶತೆಯ ಈ ಕಾಡಹಾಗಲದ ಬಗ್ಗೆ ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲೂ ಅಧ್ಯಯನ, ಪ್ರಾಯೋಗಿಕತೆ ನಡೆದಿದೆ. ಮಾಡಹಾಗಲದ ವಿಶೇಶ, ಮಾರುಕಟ್ಟೆ, ಬೆಳೆಯುವ ರೀತಿಗಳ ಮಾಹಿತಿಗಾಗಿ 7483282402,9449636569 ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಪ್ರಾಯೋಗಿಕ ಮಾಧ್ಯಮ ನಿರ್ಬಂಧ ಬಿ.ಜೆ.ಪಿ.ಪ್ಯಾಸಿಸ್ಟ್ ನೀತಿ ಮತ್ತು ಬಹುಸಂಖ್ಯಾತ ವಿರೋಧಿ ನೀತಿಪ್ರತಿಬಿಂಬ
ರಾಜ್ಯ ವಿಧಾನಸಭೆಯ ಕಲಾಪಕ್ಕೆ ಖಾಸಗಿ ದೃಶ್ಯಮಾಧ್ಯಮಗಳ ನಿಷೇಧ ಮತ್ತು ಪ್ರವಾಹ ಪರಿಹಾರದ ಬಗ್ಗೆ ಚರ್ಚೆಗೆ ಅವಕಾಶ ನೀಡದ ರಾಜ್ಯ ವಿಧಾನಸಭಾ ಅಧ್ಯಕ್ಷ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆಯವರ ಪಕ್ಷಪಾತದ ನಡೆ ಬಗ್ಗೆ ಸಾರ್ವಜನಿಕ ವಲಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ. ಶಾಸನ ಸಭೆಯಲ್ಲಿ ಜನಪ್ರತಿನಿಧಿಗಳು ಏನು? ಮಾಡುತ್ತಾರೆ. ಹ್ಯಾಗೆ ವರ್ತಿಸುತ್ತಾರೆ ಎಂದು ತಿಳಿಯುವ ಹಕ್ಕು ಮತದಾರ ಸಾರ್ವಜನಿಕರು ಅಥವಾ ಜನಸಾಮಾನ್ಯರಿಗಿದೆ. ಹಿಂದೆಲ್ಲಾ ಮಾಧ್ಯಮಸ್ವಾತಂತ್ರ್ಯ, ಶಾಸಕರ ಹಕ್ಕು, ಹಕ್ಕುಚ್ಯುತಿ,ಜನಪ್ರತಿನಿಧಿಗಳ ತೇಜೋವಧೆ, ಮಾಧ್ಯಮಗಳ ಮಿತಿಗಳ ಬಗ್ಗೆ ಅನೇಕ ಬಾರಿ ವಿಧಾನಸಭೆಯಲ್ಲಿ ಚರ್ಚೆಯಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *