ತಣ್ಣಗಾದ ದೀಪಾವಳಿ!

ಅಕಾಲದಮಳೆಯ ನಡುವೆ
ತಣ್ಣಗಾದ ದೀಪಾವಳಿ
ಮಲೆನಾಡಿನ ದೊಡ್ಡ ಹಬ್ಬ ದೀಪಾವಳಿಯ ಸಂಬ್ರಮಕ್ಕೆ ಮಳೆ ತಣ್ಣೀರೆರಚಿದೆ. ಕಳೆದ ಒಂದು ವಾರದಿಂದ ಪ್ರತಿನಿತ್ಯ ಬೀಳುತ್ತಿರುವ ಮಳೆ
ರೈತರನ್ನು ಕಂಗಾಲು ಮಾಡಿದೆ. ಮಳೆ-ಬೆಳೆ ಆಶ್ರಯಿಸಿರುವ ರೈತರು ಸೊಂಪಾಗಿದ್ದರೆ ಹಬ್ಬಕ್ಕೆ ಮಜಾ. ಆದರೆ ಈ ವರ್ಷದ ಮಳೆ ರೈತರ ಖುಷಿ-ಸಂಬ್ರಮ ಕಸಿದುಕೊಂಡಿದೆ.
ರೈತರು ತಾವು ಬೆಳೆದ ಫಸಲನ್ನೇ ವಿಭಿನ್ನವಾಗಿ ಪೂಜಿಸುವ ಹಬ್ಬಕ್ಕೆ ಅಡಿಕೆ, ಅಡಿಕೆಯ ಹಿಂಗಾರ ತೆಗೆಯಲು ಈ ಅಕಾಲದ ಮಳೆ ಅನುಕೂಲ ಮಾಡಿಕೊಟ್ಟಿಲ್ಲ. ಸಿದ್ಧಾಪುರದಂಥ ಚಿಕ್ಕ ನಗರದಲ್ಲಿ ಕೂಡಾ ಅಡಿಕೆ, ಹಿಂಗಾರ, ಎಲೆ ಸೇರಿದಂತೆ ದೀಪಾವಳಿ ಫಲಾವಳಿಗಳು ಮಾರುಕಟ್ಟೆಪ್ರವೇಶಿಸಿವೆ. ರೈತರು ಅಡಿಕೆ,ಸಿಂಗಾರ ತೆಗೆಯುವ ಕೂಲಿಗೆ ಕೊಡುವ ವೇತನದಲ್ಲಿ ನಗರದಲ್ಲಿ ಈ ವಸ್ತುಗಳು ಸಿಗುತ್ತವೆ ಎಂದುಕೊಂಡು ಖರೀದಿಯಲ್ಲಿ ತೊಡಗಿದ್ದ ರೈತರ ನಿರುತ್ಸಾಹದ ಹಿಂದೆ ಈ ವರ್ಷದ ಮಳೆಯ ಪ್ರಭಾವವಿದೆ.
ಖರೀದಿ ಜೋರು-
ಮೂರು-ನಾಲ್ಕು ದಿವಸಗಳ ದೀಪಾವಳಿ ಈ ವರ್ಷಮೂರೇ ದಿನಗಳಿಗೆ ಸೀಮಿತವಾಗಿರುವುದು ಈ ವರ್ಷದ ವಿಶೇಶ. ಪ್ರತಿವರ್ಷ ಅಮವಾಸ್ಯೆಯ ಹಿಂದಿನ ದಿವಸದಿಂದ ವರ್ಷತೊಡಕಿನ ವರೆಗೆ ಗ್ರಾಮೀಣ ಜನರಿಗೆ ನಾಲ್ಕೈದು ದಿನಗಳು, ನಗರದ ಜನರಿಗೆ ಮೂರು ದಿವಸಗಳ ಹಬ್ಬ ನಡೆಯುವುದು ವಾಡಿಕೆ.
ಆದರೆ ಈ ವರ್ಷ ಅಮವಾಸ್ಯೆ, ಮರುಪಾಡ್ಯಗಳು ತಳುಕುಹಾಕಿಕೊಂಡಿರುವುದರಿಂದ ಬಹುತೇಕ ಕಡೆ ಗೋಪೂಜೆ ಸೋಮುವಾರವೇ ನಡೆಯುತ್ತಿದೆ. ವೈದಿಕರು ರಾಕ್ಷಸನನ್ನು ಸಂಹರಿಸುವ ರೀತಿ, ಅಬ್ರಾಹ್ಮಣರು ತಮ್ಮ ದ್ರಾವಿಡದೊರೆ ಬಲೀಂದ್ರನನ್ನು ಆರಾಧಿಸುವ ರೀತಿ-ನೀತಿಗಳಿಂದ ಆಚರಿಸುವ ಈ ಹಬ್ಬ ಮಾಂಸಾಹಾರ,ಸಿಹಿತಿನಿಸುಗಳ ವಿಶೇಶದ ಉತ್ಸವ.
ಮಲೆನಾಡಿನ ಕೆಲವು ಕಡೆ ಗೋಪೂಜೆ, ದನ ಬೆರೆಸುವ ಮೊದಲು ಪ್ರಾಣಿಬಲಿಕೊಟ್ಟು ಈ ಹಬ್ಬವನ್ನು ಆಚರಿಸುತ್ತಾರೆ. ಬದಲಾಗುತ್ತಿರುವ ರೀತಿ-ನೀತಿ, ಆಧುನಿಕತೆಯ ಸ್ಫರ್ಶ, ಪಶುಪಾಲನೆಯ ವಿರಳತೆಗಳ ನಡುವೆ ಈ ವರ್ಷದ ದೀಪಾವಳಿಗೆ ಮಳೆಯ ರಗಳೆ ಕೂಡಾ ಸೇರಿದೆ. ಆದರೆ ಹೂವು,ಹಣ್ಣು, ಮೀನು-ಮಾಂಸ ಖರೀದಿಯ ಪ್ರಮಾಣ,ಉತ್ಸಾಹ ತಗ್ಗಿಲ್ಲ.

ಕಾಗೋಡುತಿಮ್ಮಪ್ಪನವರಿಗೆ
35 ವರ್ಷಗಳಲ್ಲಿನ
ಎರಡು ವಿಭಿನ್ನ ಪತ್ರಗಳು
ದೀವರು ಈಡಿಗರಲ್ಲ. ಎಂದು ಅನೇಕ ವರ್ಷಗಳಿಂದ ಚರ್ಚೆ, ಸಂವಾದ, ವಿವಾದಗಳೆಲ್ಲಾ ನಡೆಯುತ್ತಿವೆ. 1970-80 ರ ದಶಕದಲ್ಲಿ ದೀವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ಗೋಪಾಲಗೌಡರ ನೇತೃತ್ವದಲ್ಲಿ ಸದನದ ಒಳಗೆ, ಹೊರಗೂ ಚರ್ಚೆ ನಡೆದು ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರಿಂದಾಗಿ ದೀವರ ಪಂಗಡ ಇತರ ಹಿಂದುಳಿದವರ ಪಟ್ಟಿಯಲ್ಲಿ ಸೇರ್ಪಡೆಯಾಯಿತು. ಇದೇ ಸಮಯದಲ್ಲಿ ರಾಜ್ಯದ ಕೆಲವೆಡೆ ಅನೇಕರು ಈ ಚರ್ಚೆ ಸಂವಾದಗಳಲ್ಲಿ ಪಾಲ್ಗೊಂಡು ‘ದೀವರ’ ವಿಚಾರವನ್ನು ಸರ್ಕಾರ, ಸಾರ್ವಜನಿಕರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು.
ರೈತ ಹೋರಾಟಗಾರ ದಿನಕರ ದೇಸಾಯಿಯವರಿಗೆ ತಾಲೂಕಿನಲ್ಲೇ ಮೊಟ್ಟಮೊದಲ ಬಾರಿಗೆ ವೇದಿಕೆ ಕಲ್ಪಿಸಿದ ನಮ್ಮೂರು ಕೋಲಶಿರ್ಸಿ, ದೀವರು ನಾಮಧಾರಿಗಳ ಸಂಘಟನೆಗೆ ನಮ್ಮಜ್ಜ ಕನ್ನಾ ಕೆ. ನಾಯ್ಕರ ನೇತೃತ್ವದಲ್ಲಿ ಸಂಘಟನೆ ಪ್ರಾರಂಭಿಸಿತ್ತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *