ಮರದಿಂದ ಕೆಳ ಬಿದ್ದ ದುರಂತ,ಮುಂದುವರಿದ ನೋವಿನ ಅಧ್ಯಾಯ

ಬಡವರಿಗೆ ಸಾವ ಕೊಡ ಬ್ಯಾಡ ನನ ದೇವರೆ, ಎಂದು ಜಾನಪದ ಹೇಳುತ್ತೆ.

ಸಿದ್ಧಾಪುರದಲ್ಲಾದ ಮೂರು ದುರಂತಗಳು ಈ ಹೇಳಿಕೆಯನ್ನು ನೆನಪಿಸಿವೆ.

ಮೊದಲ ಆಕಸ್ಮಿಕ ಸಾವು ಶಿವಶಂಕರ್‌ ಕಟ್ರೆನ್‌ ಕೋಲಶಿರಸಿಯವರದ್ದು, ೨೦ ವರ್ಷಗಳಿಂದ ಮಾಧ್ಯಮಕ್ಷೇತ್ರದಲ್ಲಿದ್ದು ಪಟ್ಟಭದ್ರರು, ಜಾತಿವಾದಿ ಸೌಮ್ಯ ಮತಾಂಧರನ್ನು ಎದುರಿಸಿದ ಶಿವಶಂಕರ್‌ ಬಡವರು ಕೌಟುಂಬಿಕ,ಸಾಮಾಜಿಕ, ಸಂಸಾರಿಕ ರಗಳೆಗಳಿಂದ ಅಕಾಲಿಕ ಮರಣಕ್ಕೆ ತುತ್ತಾದ ಶಿವಶಂಕರ್‌ ತಂದೆ ಲಿಂಗಾ ನಾಯ್ಕರಿಗೆ ೮೦ ವರ್ಷಗಳು, ತಾಯಿ ಲಕ್ಷ್ಮಿಗೆ ೭೦ ವರ್ಷಗಳು ಈ ವೃದ್ಧ ದಂಪತಿಗಳ ನೆರವಿಗೆ ಸಮಾಜ ಕೈಜೋಡಿಸಬೇಕಿದೆ.

ಎರಡನೇ ದುರಂತ ಕೋಲಶಿರ್ಸಿಯದ್ದೇ ೬೬ ವರ್ಷಗಳ ರಾಮಕೃಷ್ಣ ಮೈಲಾ ನಾಯ್ಕ ಹಳದೋಟದಲ್ಲಿ ಅಡಕೆ ಮರದಿಂದ ಬಿದ್ದು ಆಕಸ್ಮಿಕ ಸಾವಿಗೆ ಶರಣಾಗಿದ್ದಾರೆ. ಇಬ್ಬರು ಮಕ್ಕಳ ತಂದೆ ರಾಮಕೃಷ್ಣ ನಾಯ್ಕ ಪತ್ನಿ ಕಳೆದ ಒಂದು ವಾರದಿಂದ ಮಂಗಳೂರು ಆಸ್ಫತ್ರೆಯಲ್ಲಿ ಗಂಭೀರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತಿದ್ದಾರೆ. ವಿವಾಹಿತ ಮಗಳು,ಮಗ ಪತ್ನಿಯೊಂದಿಗೆ ವಾಸವಾಗಿದ್ದ ರಾಮಕೃಷ್ಣ ಕೊಟ್ಟೆ ಕೊನೆ ವೃತ್ತಿ ಮಾಡುತಿದ್ದರೂ ಕಳೆದ ಎರಡು ವರ್ಷಗಳಿಂದ ಈ ವೃತ್ತಿಯನ್ನು ನಿರಂತರವಾಗಿ ಮಾಡುತ್ತಿರಲಿಲ್ಲ ಮದುವೆಯೊಂದರ ಚಪ್ಪರದ ಸಾಮಾನಿಗೆ ಮರ ಕಡಿಯಲು ಹೋದ ಈ ವೃದ್ಧ ಸಾವನ್ನಪ್ಪಿದ್ದು ಅವರ ಪತ್ನಿ ಆಸ್ಫತ್ರೆಯಲ್ಲಿ ಜೀವನ್ಮರಣದ ಹೋರಾಟದಲ್ಲಿದ್ದಾಗ. ಒಮ್ಮೆಯೇ ಎರಡ್ಮೂರು ಆಘಾತಕ್ಕೊಳಗಾಗಿರುವ ಈ ಕುಟುಂಬಕ್ಕೂ ಸಹಾಯ ಸಾಂತ್ವನದ ಅನಿವಾರ್ಯತೆ ಇದೆ.

ಮೂರನೇ ಪ್ರಕರಣ ಶ್ಯಾಮಸನ್‌ ಸಾವು. ನಗರದ ನಿವೃತ್ತ ನೌಕರನ ಸಂಪನ್ನ ಮಗ ಮಳಗಿಯಲ್ಲಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಇವರನ್ನು ಸಂತೈಸಲು ಸಮಾಜ ಸಹಕರಿಸಬೇಕೆಂಬುದು ಸಮಾಜಮುಖಿ ಡಾಟ್‌ ನೆಟ್‌ ಕಾಳಜಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *