ಗುತ್ತಿಮನೆ ಕುಂಬಾರಿಕೆ & ಕುಶಲ ಕೈಗಾರಿಕಾ ಸಂಘಕ್ಕೆ ಬೇಕು ಹೊಸರೂಪ

ಸಿದ್ಧಾಪುರ ತಾಲೂಕಿನ ಏಕೈಕ ಕರಕುಶಲ ಕೈಗಾರಿಕಾ ಕೆಲಸಗಾರರ ಸಂಘ ಪುನಶ್ಚೇತನಕ್ಕೆ ಕಾಯುತ್ತಾ ಉಸಿರು ಹಿಡಿದುಕೊಂಡಿದೆ. ಸಹಕಾರಿ ಜಿಲ್ಲೆಯೆಂದೇ ಪ್ರಖ್ಯಾತವಾಗಿರುವ ಉತ್ತರಕನ್ನಡದಲ್ಲಿ ತೋಟಗಾರಿಕೆ,ಕೃಷಿ, ಕೈಗಾರಿಕೆಗಳನ್ನೊಳಗೊಂಡ ವಿವಿದೋದ್ಧೇಶ ಸಹಕಾರಿ ಸಂಘಗಳು ಉತ್ತಮ ಕೆಲಸಗಳ ಮೂಲಕ ಸಾಧನೆ ಮಾಡಿವೆ.
ಇಂಥ ಘನ ಉದ್ದೇಶದಿಂದ ಸಿದ್ದಾಪುರದ ಪ್ರಮುಖರಿಂದ ಪ್ರಾರಂಭವಾದ ಕಾನಗೋಡು ಗ್ರಾ.ಪಂ. ಐಗೋಡಿನ ಗುತ್ತಿಮನೆ ಕುಂಬಾರ ಕರಕುಶಲ ಕೈಗಾರಿಕಾ ಕೆಲಸಗಾರರ ಸಹಕಾರಿ ಸಂಘ ತನ್ನ ನಾಲ್ಕು ದಶಕದ ಅವಧಿಯುದ್ದಕ್ಕೂ ಕುಂಟುತ್ತಾ ಸಾಗುತ್ತಿರುವುದು ಅದರ ಉದ್ಧೇಶಕ್ಕೆ ಅಪವಾದವಾದಂತಾಗಿದೆ.
ಕುಂಬಾರಿಕೆ ಕಸುಬುಮಾಡುವ 74 ಜನರ ಸಹಕಾರಿ ಸಂಘಕ್ಕೆ ಹಿರಿಯ ಸಮಾಜವಾದಿ ದಿ.ಗೋವಿಂದ ಶಾನಭಾಗ ಮೊದಲ ಅಧ್ಯಕ್ಷರು. ಅವರ ನಂತರ ಅನೇಕರು ಅಧ್ಯಕ್ಷರು,ಸದಸ್ಯರಾಗಿ ಕಾರ್ಯನಿರ್ವಹಿಸಿದರೂ ಅದರ ಪ್ರಗತಿ ವೇಗಪಡೆದುಕೊಳ್ಳಲೇ ಇಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುವ ಜನರ ಅಭಿರುಚಿ, ಮಣ್ಣಿನ ಕುಂಬಾರಿಕೆ ಕೆಲಸಕ್ಕೆ ಬೇಕಾಗುವ ಸೂಕ್ತ ಮಣ್ಣಿನ ಅಲಭ್ಯತೆ ಸೇರಿದಂತೆ ಅನೇಕ ತೊಂದರೆಗಳ ನಡುವೆ 20 ಲಕ್ಷಕ್ಕೂ ಮಿಕ್ಕಿ ಸಂಘ ವ್ಯವಹಾರ ಮಾಡುತ್ತದೆಯಾದರೂ ಅದರ ಸಾಂಪ್ರದಾಯಿಕ ಸ್ವಭಾವದಿಂದಾಗಿ ಅಭಿವೃದ್ಧಿಯಾಗದೇ ಉಳಿದುಕೊಂಡಿದೆ.
ನಾಲ್ಕುದಶಕಗಳ ಹಿಂದೆ ಈ ಸಹಕಾರಿ ಸಂಘ ಪ್ರಾರಂಭವಾದಾಗ ಅಂದಿನ ಪ್ರಮುಖರು ಈ ಸಂಘದಿಂದ ಅಪರೂಪದ ಕುಂಬಾರಿಕೆ ಮಾಡುವ ತಾಲೂಕಿನ ಜನರಿಗೆ ಭವಿಷ್ಯ,ಭದ್ರತೆಯ ಮುಂದಾಲೋಚನೆಯಿಂದಲೇ ಈ ಸಂಘ ಪ್ರಾರಂಭವಾಯಿತಾದರೂ ಈ ಸಂಘಕ್ಕೆ ತುಸು ಚೇತರಿಕೆ ಸಿಕ್ಕಿದ್ದು 90 ರದಶಕದಲ್ಲಿ, ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಕುಂಬಾರಿಕೆ ಕೆಲಸಗಾರರು ಮತ್ತು ಈ ಸಹಕಾರಿ ಸಂಘಕ್ಕೆ ಸರ್ಕಾರದ ನೆರವು,ಉತ್ತೇಜನ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದರು.
ಆದರೆ ಆ ಅವಧಿಯ ಹಿಂದೆ ಮತ್ತು 90 ರ ದಶಕದ ನಂತರ ಈ ಸಂಘ, ಇಲ್ಲಿಯ ಕಸುಬುದಾರರನ್ನು ಯಾರೂ ಕೇಳದಿದ್ದುದರಿಂದ ಸಂಘ ಅಭಿವೃದ್ಧಿಯತ್ತ ಚಲನೆ ಪ್ರಾರಂಭಿಸಲೇ ಇಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುವ ಅವಶ್ಯಕತೆ,ಅನಿವಾರ್ಯತೆಗಳಿಗೆ ತಕ್ಕಂತೆ ನಾವು ಬದಲಾಗದಿರುವುದೇ ನಮ್ಮ ಹಿನ್ನಡೆಗೆ ಕಾರಣ ಎನ್ನುವ ಇದರ ವ್ಯವಸ್ಥಾಪಕ ಕೆ.ಎಂ. ನಾಯ್ಕ ಕುಂಬಾರಿಕೆಯೊಂದಿಗೆ ಇತರ ವ್ಯವಹಾರ ಪ್ರಾರಂಭಿಸಿದ್ದರೆ ಸಂಘದ ಕನಸು ನನಸಾಗುತಿತ್ತೇನೋ ಎನ್ನುವ ಅವರು ಆ ದಿಸೆಯಲ್ಲೂ ಯೋಚಿಸಿ ಕಾರ್ಯಪ್ರವೃತ್ತರಾಗದಿದ್ದುದೇ ನಮ್ಮ ಈ ಸ್ಥಿತಿಗೆ ಕಾರಣ ಎನ್ನುವ ಸತ್ಯ ಒಪ್ಪುತ್ತಾರೆ.
ಕೆಲವು ವರ್ಷಗಳಿಂದ ಈ ಸಂಘದ ಅಧ್ಯಕ್ಷರಾಗಿರುವ ನಾಗೇಂದ್ರಪ್ಪ ಚಕ್ರಸಾಲಿ ನಾವು ಹಳೆಯ ಜನ, ಹೊಸ ಜನಾಂಗ ಈ ಸಂಘದೊಂದಿಗೆ ಕೈ ಜೋಡಿಸಿ ಹೊಸ ಯೋಚನೆ,ಚಿಂತನೆಗಳ ಮೂಲಕ ಸಂಘವನ್ನು ಪುನಶ್ಚೇತನ ಮಾಡುವ ಹಿನ್ನೆಲೆಯಲ್ಲಿ ಸ್ಥಳಿಯರು ಸಹಕರಿಸಿದರೆ ಸಂಘದ ಪ್ರಗತಿಯ ದಾರಿ ತೆರೆದುಕೊಳ್ಳಲು ಸಹಾಯಕವಾಗಬಹುದು ಎನ್ನುವ ಅವರಿಗೆ ಆಸಕ್ತಿ ಇದ್ದರೂ ಆಸಕ್ತಿ,ಅನುಭವಕ್ಕೆ ತಕ್ಕಂತೆ ಇತರ ಅನುಕೂಲಗಳಿಲ್ಲ. ಎನ್ನುತ್ತಾರೆ.
ಹೀಗೆ ನಿರೀಕ್ಷಿತ ಪ್ರಗತಿ ಕಾಣದಿದ್ದರೂ ಇರುವ ಕೆಲವೇ ಸದಸ್ಯರ ಆಸಕ್ತಿ ಕುಂದಿಲ್ಲ. ಸಂಘದಿಂದ ಶ್ರಮದಾನ, ಸಾಮಾಜಿಕ ಕೆಲಸ, ಗ್ರಾಮೀಣಾಭಿವೃದ್ಧಿಯ ಕನಸಿಗೆ ಶಕ್ತಿ ತುಂಬುವ ಇಲ್ಲಿಯ ಸದಸ್ಯರಿಗೆ ಸಹಕಾರಿ ಕ್ಷೇತ್ರದ ಫಲ,ಅನುಕೂಲ,ಹೊಸ ಚಿಂತನೆಯ ಕೊರತೆ ಎದ್ದು ಕಾಣುತ್ತದೆ.
ತಾಲೂಕಿನ ಏಕೈಕ ಕರಕುಶಲ ಕೆಲಸಗಾರರ ಸಹಕಾರಿ ಸಂಘದ ದುಸ್ಥಿತಿ ಈ ಕುಶಲಕರ್ಮಿಗಳ ಭವಿಷ್ಯದ ಪ್ರತಿಬಿಂಬದಂತಿದೆ. ಸಹಕಾರಿ ಇಲಾಖೆ,ಸರ್ಕಾರ ಈ ಸಂಘದ ನೆರವಿಗೆ ಬಂದು ಪುನಶ್ಚೇತನಕ್ಕೆ ಸಹಕರಿಸಿದರೆ ಹಿರಿಯರ ಆಸೆಯ,ಕನಸಿನ ಸಹಕಾರಿ ಸಂಘ ಜನರ ಒಳಿಗಾಗಿ ಕೆಲಸಮಾಡಬಹುದು. ಆದರೆ ಸರ್ಕಾರಿ ವ್ಯವಸ್ಥೆಯ ಪ್ರಮುಖರಿಗೆ ಈ ಕಲ್ಫನೆ, ಯೋಚನೆಕಡಿಮೆ. ಆಸಕ್ತ,ಬದ್ಧತೆಯ ನಾಯಕರು ಈ ಸಂಘಕ್ಕೆ ಹೊಸ ದಾರಿ ತೋರಿ,ರೂಪ ನೀಡಿದರೆ ತಾಲೂಕಿನ ವಿಶಿಷ್ಟ,ಜನೋಪಯೋಗಿ ಸಹಕಾರಿ ಸಂಘ ಚೇತರಿಸಿಕೊಳ್ಳಬಹುದು.ಸ್ಥಳಿಯರು ಈ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ.
ಕರಕುಶಲ ಕೆಲಸಗಾರರ ವ್ಯಾಪ್ತಿ ಹಿಗ್ಗಿಸಿ ಇತರ ಕುಶಲಕರ್ಮಿಗಳೂ ಸದಸ್ಯರಾಗಿ ಸಂಘವನ್ನು ಅಭಿವೃದ್ಧಿ ಪಡಿಸುವುದು.

  • ಸರ್ಕಾರ ವಿಶೇಶ ಪ್ಯಾಕೇಜ್ ನೀಡುವ ಮೂಲಕ ಈ ಸಂಘದ ಪುನಶ್ಚೇತನ ಮಾಡುವುದು.
  • ಸರ್ಕಾರದ ಉದ್ಯೋಗಖಾತ್ರಿ ಯೋಜನೆಯಂಥ ಕಾರ್ಯಕ್ರಮಗಳಲ್ಲಿ ಕೂಲಿ ನೀಡಿ ಈ ಕರಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವುದು.
  • ಆಸಕ್ತ ಯುವ ನಾಯಕತ್ವದಡಿ ಸಂಸ್ಥೆಯ ಉದ್ಧೇಶ,ವ್ಯಹಾರಗಳನ್ನು ವಿಸ್ತರಿಸಿ ಸಂಘಕ್ಕೆ ಹೊಸರೂಪ ನೀಡುವುದು.
  • ಸರ್ಕಾರದ ನೆರವಿನಿಂದ ಸಂಘವನ್ನು ಅಭಿವೃದ್ಧಿಪಡಿಸಿ ಹೆಚ್ಚಿನ ಸದಸ್ಯರು,ವ್ಯಹಾರಗಳ ಮೂಲಕ ಸಂಘವನ್ನು ವಿಸ್ತರಿಸುವುದು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *