ಮಹಿಳಾ ಶಿಕ್ಷಣದ ಮನ್ವಂತರೆ ಸಾವಿತ್ರಿಭಾಯಿ ಫುಲೆ


ನೈಗಾಂವ್ ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿ. ಶಿಕ್ಷಕಿಯೊಬ್ಬರು ಕೈಚೀಲವೊಂದನ್ನು ಹೆಗಲಿಗೇರಿಸಿ ಮುನ್ನಡೆಯುತ್ತಿದ್ದರು. ‘ಇವಳೊಬ್ಬಳು ಗುರುವಂತೆ ಗುರು! ರೊಟ್ಟಿ ತಟ್ಟಕೊಂಡು ಮನೇಲಿ ಬಿದ್ದಿರೋದು ಬಿಟ್ಟು ಊರವರಿಗೆಲ್ಲಾ ಶಾಲೆ ಕಲಿಸ್ತಾಳಂತೆ’ ಎಂದು ಚುಚ್ಚು ನುಡಿಯುತ್ತಿದ್ದರು.
ಯುವಕರಷ್ಟೇ ಅಲ್ಲ, ಕೆಲ ಮಹಿಳೆಯರು ಬಾಯಿಗೆ ಬಂದಂತೆ ನಿಂದಿಸುತ್ತಿದ್ದರು. ಕೆಲವರು ಕೆಸರು, ಸೆಗಣಿ ಎರಚುತ್ತಿದ್ದರು. ಇಷ್ಟಾದರೂ ಮರುಪ್ರತಿಕ್ರಿಯಿಸದೇ ಎರಚುವ ಸಗಣಿ, ತೂರುವ ಕಲ್ಲುಗಳನ್ನು ಹೂಗಳಂತೆ ಸ್ವೀಕರಿಸಿ ಮನೆಯಿಂದ ಬರುವಾಗ ಕೈ ಚೀಲದಲ್ಲಿ ಮತ್ತೊಂದು ಸೀರೆ ತಂದು ಮಕ್ಕಳು ಬರುವುದಕ್ಕಿಂತ ಮುಂಚಿತವಾಗಿ ಉಟ್ಟುಕೊಂಡು ಪಾಠ ಮಾಡುತ್ತಿದ್ದರಂತೆ. ಮರುಮಾತಿಲ್ಲದೆ ಮೌನವೇ ಉತ್ತರದಂತಿದ್ದ ಇವರ ನಡೆಯನ್ನು ಗುರುತಿಸಿ ಸಗಣಿ ಎರಚಿದವರೇ ಸರಿ ದಾರಿಗೆ ಬಂದರು. ದಿನಗಳೆದಂತೆ ಮರುಮಾತಿಲ್ಲದೇ ತಮ್ಮ ವಿರೋಧ ಬಿಟ್ಟು ಇವರ ಶಿಷ್ಯರಾದರು. ಹೀಗೆ 1848 ರಿಂದ 1852 ರವರೆಗೆ ಕೇವಲ 4 ವರ್ಷಗಳಲ್ಲಿ ಸತಾರ ಜಿಲ್ಲೆಯಾದ್ಯಂತ ಸುಮಾರು 18 ಶಾಲೆಗಳನ್ನು, ಒಂದು ಶಿಶುಪಾಲನಾ ಕೇಂದ್ರ, 2 ಅನಾಥಶ್ರಮ, ತೆರೆದು ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಅಕ್ಷರ ಭಾಗ್ಯ ತಲುಪಿಸಿದ ಶಾರದೆಯಾಗಿ ಕಂಗೊಳಿಸಿದವರೇ ದೇಶದ ಪ್ರಥಮ ಮಹಿಳಾ ಶಿಕ್ಷಕಿ, ಶೈಕ್ಷಣಿಕ ಮನ್ವಂತರೆ ಸಾವಿತ್ರಿಬಾಯಿ ಫುಲೆ.
ಇವರು ಮಹಾರಾಷ್ಟ್ರದ ಸತ್ತಾರ ಜಿಲ್ಲೆಯ ನೈಗಾಂವ ಎಂಬ ಗ್ರಾಮದಲ್ಲಿ ಜನವರಿ 3, 1831 ರಂದು ಹುಟ್ಟಿದರು. ತಂದೆ ನೇವಸೆ ಪಾಟೀಲ. ತಮ್ಮ 8ನೇ ವಯಸ್ಸಿನಲ್ಲಿ ಜ್ಯೋತಿಬಾ ಅವರನ್ನು ಅಂದಿನ ಪದ್ಧತಿಯಂತೆ ಬಾಲ್ಯವಿವಾಹವನ್ನಾಗಿ ಅನೇಕ ವಯೋಸಹಜ ಸಾಮಾಜಿಕ ಸಂಕಷ್ಟವನ್ನೆದುರಿಸಿದ್ದರೂ, ಆದರ್ಶ ಪತಿ ಜ್ಯೋತಿಬಾ ಅವರಿಂದಲೇ ಶಿಕ್ಷಣ ಹಾಗೂ ಸಾಮಾಜಿಕ ಅರಿವನ್ನು ಪಡೆದರು. ಪತಿ ಜ್ಯೋತಿಬಾ ಅವರು ತುಂಬಾ ಜ್ಞಾನವಂತರಾಗಿದ್ದು, ಸಾಮಾಜಿಕ ಹರಿಕಾರರೂ ಆಗಿದ್ದರು.
ಸಾವಿತ್ರಿ ಬಾಯಿ ಶ್ರೀ ಭಿಡೆ ಎಂಬುವವರ ಮನೆಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ತೆರೆದು ಪ್ರಧಾನಶಿಕ್ಷಕಿಯಾಗಿ ಹತ್ತಾರು ಹೆಣ್ಣುಮಕ್ಕಳಿಗೆ ಅರಿವಿನ ಮೂಲಕ ಭವಿಷ್ಯವನ್ನು ಕಲ್ಪಿಸಿದ್ದರು. 1860 ರ ದಶಕದಲ್ಲಿ ಸಾಮಾಜಿಕ ಅನಿಷ್ಟಗಳಾದ ಬಾಲ್ಯವಿವಾಹ, ಸತಿ ಸಹಗಮನ, ವಿಧವಾ ಕೇಶಮುಂಡನೆ ವಿರುದ್ಧ ಹೋರಾಡಿ ಸಾಮಾಜಿಕ ಬಹಿಷ್ಕಾರಕ್ಕೂ ಒಳಗಾಗುತ್ತಾರೆ. ಆದರೂ ಯಾವುದಕ್ಕೂ ಧೃತಿಗೆಡದೆ ಅನಾಥರಿಗಾಗಿ ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿವಾಹ ಬಾಹೀರವಾಗಿ ಹುಟ್ಟಿದ ಅನೇಕ ಮಕ್ಕಳಿಗಾಗಿ ಭಿನ್ನವಾದ ಶಿಶುಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಮೂಲಕ ಮಹಿಳೆಯರ ಮತ್ತು ಮಕ್ಕಳ ನೂರಾರು ಪುನರ್ವಸತಿ ನೆಲೆ ಕಲ್ಪಿಸಿಕೊಟ್ಟಿದ್ದರು. ಸಾವಿತ್ರಿಬಾಯಿ ಅವರು ಅಂದಿನ ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾಗಿದ್ದರು.
19ನೇ ಶತಮಾನದಲ್ಲಿ ಹಿಂದೂ ಧಾರ್ಮಿಕ ಮದುವೆಗಳನ್ನು ಪೂಜಾರಿಗಳಿಲ್ಲದೇ ನೇರವೇರಿಸಿದ್ದುದು ಇವರ ಕ್ರಾಂತಿಕಾರಕ ನಡೆಯಾಗಿತ್ತು.
ಸ್ವತಃ ಸಾಹಿತಿಗಳಾಗಿದ್ದ ಜ್ಯೋತಿಬಾ ‘ಕಾವ್ಯ ಫುಲೆ’, ‘ಭುವನಕಾಶಿ ಸುಬೋಧ ರತ್ನಾಕರ’, ‘ಖರ್ಜೆ’ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಜ್ಯೋತಿಬಾ ಅವರಿಗೆ ಆದರ್ಶ ಪತ್ನಿಯಾಗಿ ಹಗಲಿರುಳು ಹೆಗಲಿಗೆ ಹೆಗಲು ಕೊಟ್ಟು ಸಾಮಾಜಿಕ ಶೈಕ್ಷಣಿಕ ಕ್ರಾಂತಿಯಲ್ಲಿ ಮುಂದುವರಿಯುತ್ತಾರೆ. ಪತ್ನಿಯ ಮೇಲೆ ಅಗಾಧ ಪ್ರೀತಿ ಹೊಂದಿದ ಜ್ಯೋತಿಬಾ ಫುಲೆ ಅವರು ಮಕ್ಕಳಾಗದಿದ್ದರೂ ಮರುಮದುವೆಯಾಗದೆ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು ಅನಾಥ ಮಕ್ಕಳಿಗಾಗಿ ಅವರ ಹೆಸರಿನಲ್ಲಿ ಶಿಶು ಕೇಂದ್ರವನ್ನು ತೆರೆದರು.
ಇವರ ಈ ಸಾಧನೆಗಳನ್ನು ಗುರುತಿಸಿ ಸರಕಾರವು ಈ ವರ್ಷದಿಂದ ಅವರ ಹುಟ್ಟಿದ ದಿನವಾದ ಜನವರಿ 3 ರಂದು ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಸ್ಮರಣೆಯ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಅವರ ಜನ್ಮದಿನವನ್ನು ಆಚರಿಸಲು ನಿರ್ಧರಿಸಿರುವುದು ಸ್ವಾಗಾತಾರ್ಹ.
-ಗೋಪಾಲ ನಾಯ್ಕ ಭಾಶಿ
ಶಿಕ್ಷಕರು, ಸಿದ್ದಾಪುರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *