ಮಹಿಳಾ ಶಿಕ್ಷಣದ ಮನ್ವಂತರೆ ಸಾವಿತ್ರಿಭಾಯಿ ಫುಲೆ


ನೈಗಾಂವ್ ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿ. ಶಿಕ್ಷಕಿಯೊಬ್ಬರು ಕೈಚೀಲವೊಂದನ್ನು ಹೆಗಲಿಗೇರಿಸಿ ಮುನ್ನಡೆಯುತ್ತಿದ್ದರು. ‘ಇವಳೊಬ್ಬಳು ಗುರುವಂತೆ ಗುರು! ರೊಟ್ಟಿ ತಟ್ಟಕೊಂಡು ಮನೇಲಿ ಬಿದ್ದಿರೋದು ಬಿಟ್ಟು ಊರವರಿಗೆಲ್ಲಾ ಶಾಲೆ ಕಲಿಸ್ತಾಳಂತೆ’ ಎಂದು ಚುಚ್ಚು ನುಡಿಯುತ್ತಿದ್ದರು.
ಯುವಕರಷ್ಟೇ ಅಲ್ಲ, ಕೆಲ ಮಹಿಳೆಯರು ಬಾಯಿಗೆ ಬಂದಂತೆ ನಿಂದಿಸುತ್ತಿದ್ದರು. ಕೆಲವರು ಕೆಸರು, ಸೆಗಣಿ ಎರಚುತ್ತಿದ್ದರು. ಇಷ್ಟಾದರೂ ಮರುಪ್ರತಿಕ್ರಿಯಿಸದೇ ಎರಚುವ ಸಗಣಿ, ತೂರುವ ಕಲ್ಲುಗಳನ್ನು ಹೂಗಳಂತೆ ಸ್ವೀಕರಿಸಿ ಮನೆಯಿಂದ ಬರುವಾಗ ಕೈ ಚೀಲದಲ್ಲಿ ಮತ್ತೊಂದು ಸೀರೆ ತಂದು ಮಕ್ಕಳು ಬರುವುದಕ್ಕಿಂತ ಮುಂಚಿತವಾಗಿ ಉಟ್ಟುಕೊಂಡು ಪಾಠ ಮಾಡುತ್ತಿದ್ದರಂತೆ. ಮರುಮಾತಿಲ್ಲದೆ ಮೌನವೇ ಉತ್ತರದಂತಿದ್ದ ಇವರ ನಡೆಯನ್ನು ಗುರುತಿಸಿ ಸಗಣಿ ಎರಚಿದವರೇ ಸರಿ ದಾರಿಗೆ ಬಂದರು. ದಿನಗಳೆದಂತೆ ಮರುಮಾತಿಲ್ಲದೇ ತಮ್ಮ ವಿರೋಧ ಬಿಟ್ಟು ಇವರ ಶಿಷ್ಯರಾದರು. ಹೀಗೆ 1848 ರಿಂದ 1852 ರವರೆಗೆ ಕೇವಲ 4 ವರ್ಷಗಳಲ್ಲಿ ಸತಾರ ಜಿಲ್ಲೆಯಾದ್ಯಂತ ಸುಮಾರು 18 ಶಾಲೆಗಳನ್ನು, ಒಂದು ಶಿಶುಪಾಲನಾ ಕೇಂದ್ರ, 2 ಅನಾಥಶ್ರಮ, ತೆರೆದು ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಅಕ್ಷರ ಭಾಗ್ಯ ತಲುಪಿಸಿದ ಶಾರದೆಯಾಗಿ ಕಂಗೊಳಿಸಿದವರೇ ದೇಶದ ಪ್ರಥಮ ಮಹಿಳಾ ಶಿಕ್ಷಕಿ, ಶೈಕ್ಷಣಿಕ ಮನ್ವಂತರೆ ಸಾವಿತ್ರಿಬಾಯಿ ಫುಲೆ.
ಇವರು ಮಹಾರಾಷ್ಟ್ರದ ಸತ್ತಾರ ಜಿಲ್ಲೆಯ ನೈಗಾಂವ ಎಂಬ ಗ್ರಾಮದಲ್ಲಿ ಜನವರಿ 3, 1831 ರಂದು ಹುಟ್ಟಿದರು. ತಂದೆ ನೇವಸೆ ಪಾಟೀಲ. ತಮ್ಮ 8ನೇ ವಯಸ್ಸಿನಲ್ಲಿ ಜ್ಯೋತಿಬಾ ಅವರನ್ನು ಅಂದಿನ ಪದ್ಧತಿಯಂತೆ ಬಾಲ್ಯವಿವಾಹವನ್ನಾಗಿ ಅನೇಕ ವಯೋಸಹಜ ಸಾಮಾಜಿಕ ಸಂಕಷ್ಟವನ್ನೆದುರಿಸಿದ್ದರೂ, ಆದರ್ಶ ಪತಿ ಜ್ಯೋತಿಬಾ ಅವರಿಂದಲೇ ಶಿಕ್ಷಣ ಹಾಗೂ ಸಾಮಾಜಿಕ ಅರಿವನ್ನು ಪಡೆದರು. ಪತಿ ಜ್ಯೋತಿಬಾ ಅವರು ತುಂಬಾ ಜ್ಞಾನವಂತರಾಗಿದ್ದು, ಸಾಮಾಜಿಕ ಹರಿಕಾರರೂ ಆಗಿದ್ದರು.
ಸಾವಿತ್ರಿ ಬಾಯಿ ಶ್ರೀ ಭಿಡೆ ಎಂಬುವವರ ಮನೆಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ತೆರೆದು ಪ್ರಧಾನಶಿಕ್ಷಕಿಯಾಗಿ ಹತ್ತಾರು ಹೆಣ್ಣುಮಕ್ಕಳಿಗೆ ಅರಿವಿನ ಮೂಲಕ ಭವಿಷ್ಯವನ್ನು ಕಲ್ಪಿಸಿದ್ದರು. 1860 ರ ದಶಕದಲ್ಲಿ ಸಾಮಾಜಿಕ ಅನಿಷ್ಟಗಳಾದ ಬಾಲ್ಯವಿವಾಹ, ಸತಿ ಸಹಗಮನ, ವಿಧವಾ ಕೇಶಮುಂಡನೆ ವಿರುದ್ಧ ಹೋರಾಡಿ ಸಾಮಾಜಿಕ ಬಹಿಷ್ಕಾರಕ್ಕೂ ಒಳಗಾಗುತ್ತಾರೆ. ಆದರೂ ಯಾವುದಕ್ಕೂ ಧೃತಿಗೆಡದೆ ಅನಾಥರಿಗಾಗಿ ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿವಾಹ ಬಾಹೀರವಾಗಿ ಹುಟ್ಟಿದ ಅನೇಕ ಮಕ್ಕಳಿಗಾಗಿ ಭಿನ್ನವಾದ ಶಿಶುಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಮೂಲಕ ಮಹಿಳೆಯರ ಮತ್ತು ಮಕ್ಕಳ ನೂರಾರು ಪುನರ್ವಸತಿ ನೆಲೆ ಕಲ್ಪಿಸಿಕೊಟ್ಟಿದ್ದರು. ಸಾವಿತ್ರಿಬಾಯಿ ಅವರು ಅಂದಿನ ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾಗಿದ್ದರು.
19ನೇ ಶತಮಾನದಲ್ಲಿ ಹಿಂದೂ ಧಾರ್ಮಿಕ ಮದುವೆಗಳನ್ನು ಪೂಜಾರಿಗಳಿಲ್ಲದೇ ನೇರವೇರಿಸಿದ್ದುದು ಇವರ ಕ್ರಾಂತಿಕಾರಕ ನಡೆಯಾಗಿತ್ತು.
ಸ್ವತಃ ಸಾಹಿತಿಗಳಾಗಿದ್ದ ಜ್ಯೋತಿಬಾ ‘ಕಾವ್ಯ ಫುಲೆ’, ‘ಭುವನಕಾಶಿ ಸುಬೋಧ ರತ್ನಾಕರ’, ‘ಖರ್ಜೆ’ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಜ್ಯೋತಿಬಾ ಅವರಿಗೆ ಆದರ್ಶ ಪತ್ನಿಯಾಗಿ ಹಗಲಿರುಳು ಹೆಗಲಿಗೆ ಹೆಗಲು ಕೊಟ್ಟು ಸಾಮಾಜಿಕ ಶೈಕ್ಷಣಿಕ ಕ್ರಾಂತಿಯಲ್ಲಿ ಮುಂದುವರಿಯುತ್ತಾರೆ. ಪತ್ನಿಯ ಮೇಲೆ ಅಗಾಧ ಪ್ರೀತಿ ಹೊಂದಿದ ಜ್ಯೋತಿಬಾ ಫುಲೆ ಅವರು ಮಕ್ಕಳಾಗದಿದ್ದರೂ ಮರುಮದುವೆಯಾಗದೆ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು ಅನಾಥ ಮಕ್ಕಳಿಗಾಗಿ ಅವರ ಹೆಸರಿನಲ್ಲಿ ಶಿಶು ಕೇಂದ್ರವನ್ನು ತೆರೆದರು.
ಇವರ ಈ ಸಾಧನೆಗಳನ್ನು ಗುರುತಿಸಿ ಸರಕಾರವು ಈ ವರ್ಷದಿಂದ ಅವರ ಹುಟ್ಟಿದ ದಿನವಾದ ಜನವರಿ 3 ರಂದು ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಸ್ಮರಣೆಯ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಅವರ ಜನ್ಮದಿನವನ್ನು ಆಚರಿಸಲು ನಿರ್ಧರಿಸಿರುವುದು ಸ್ವಾಗಾತಾರ್ಹ.
-ಗೋಪಾಲ ನಾಯ್ಕ ಭಾಶಿ
ಶಿಕ್ಷಕರು, ಸಿದ್ದಾಪುರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *