ಮಿಶ್ರ ಕೃಷಿಯಲ್ಲಿ ಲಾಭ ಪಡೆಯುತ್ತಿರುವ ಸುನಿಲ್‍ಕುಮಾರ

ಆಧುನಿಕ ಅನುಕೂಲ, ತಂತ್ರಜ್ಞಾನಕ್ಕಾಗಿ ಮಹಾನಗರಕ್ಕೆ ಹೋಗಬೇಕು, ಕೃಷಿಗೆ ಗ್ರಾಮ ಸೇರಬೇಕು ಎನ್ನುವ ಸಾಮಾನ್ಯ ಗ್ರಹಿಕೆಯೊಂದಿದೆ. ಆದರೆ ಕಾಲ ಈ ಗೃಹಿಕೆ,ಗಾದೆ,ಪರಿಸ್ಥಿತಿಗಳನ್ನು ಬದಲಿಸುತ್ತಿದೆ. ನಗರದಲ್ಲಿ, ನಗರದ ಮನೆಯ ಟಾರಸಿಮೇಲೆ ಕೃಷಿ ಮಾಡಿ ಲಾಭ ಕಂಡವರಿದ್ದಾರೆ. ಗ್ರಾಮೀಣ ಪರಿಸರದಲ್ಲಿದ್ದೂ ಎಲ್ಲಾ ಆಧುನಿಕ ಅನುಕೂಲಗಳೊಂದಿಗೆ ಸುಖವಾಗಿದ್ದವರಿದ್ದಾರೆ. ಇಂಥ ಅಪವಾದಗಳಲ್ಲಿ ಸಂಪಕಂಡದ ಸುನಿಲ್ ನಾಯ್ಕ ಒಬ್ಬರು. ಆಟೋಮೊಬೈಲ್ ಡಿಪ್ಲೊಮಾ ಓದಿ ವಿಜ್ಞಾನ, ತಂತ್ರಜ್ಞಾನ ಎಂದು ನಗರ ಸೇರದೆ, ಹುಟ್ಟೂರಲ್ಲೇ ಕೃಷಿಯಲ್ಲಿ ಖುಷಿ ಕಂಡಿದ್ದಾರೆ.
ಇವರ ತೋಟದಲ್ಲಿ ಬೊನ್ಸಾಯಿ ಕಾಳುಮೆಣಸಿನ ಬಳ್ಳಿಗಳಿವೆ. ಅಗರ್ವುಡ್ ಮರಗಳಿವೆ, ಯಾಲಕ್ಕಿ ಗಿಡಗಳಿವೆ ಹೀಗೆ ಮಿಶ್ರ ಕೃಷಿಯಲ್ಲಿ ಎಲ್ಲವನ್ನೂ ಬೆಳೆಯುತ್ತಾ ಪ್ರಯೋಗಶೀಲರಾಗಿ ಕೃಷಿಯಲ್ಲಿ ತೊಡಗಿಕೊಂಡ ಇವರಿಗೆ ಕಾಳುಮೆಣಸು, ಯಾಲಕ್ಕಿ, ಅಡಿಕೆಯಷ್ಟೇ ಆದಾಯ ಕೊಡುತ್ತಿವೆ. ಅಗರ್‍ವುಡ್ ಕೈ ಹಿಡಿಯಬಹುದೆಂದು ಕಾಯುತಿದ್ದಾರೆ. ಮಂಗನಕಾಟದಲ್ಲಿ ಏಲಕ್ಕಿ ಬೆಳೆದ್ದು ಹೇಗೆ ಎಂದರೆ ಬ್ಲೂಟೂತ್ ಮೂಲಕ ತೋಟದಲ್ಲಿ ಸೈರನ್ ಕೂಗಿಸಿ ಮಂಗ ಓಡಿಸುತ್ತೇವೆ ಎನ್ನುತ್ತಾರೆ.
ಅವರ ತೋಟಗಳಲ್ಲಿ ಸಾಂಪ್ರದಾಯಿಕ ಮಾದರಿಯೊಂದಿಗೆ ಆಧುನಿಕ ಅನುಕೂಲಗಳನ್ನೂ ಅಳವಡಿಸಿದ್ದಾರೆ. ಹನಿ ನೀರಾವರಿ ನೀರಿಗಿಂತ ಸ್ಪಿಂಕ್ಲರ್ ನೀರಿನಿಂದ ಭೂಮಿ ಹೆಚ್ಚು ಹಸಿಯಾಗುತ್ತದೆ ಎನ್ನುವ ಸುನಿಲ್ ಕುಮಾರ್ ಅಪ್ಪ-ಅಮ್ಮ ಶಿಕ್ಷಕ-ಶಿಕ್ಷಕಿಯರಾದರೂ ಸರ್ಕಾರಿ ನೌಕರಿ ದೂರದೂರಿನ ಕೆಲಸಕ್ಕೆ ಕೈ ಚಾಚದೆ ಕೃಷಿಗೆ ಒಗ್ಗಿಕೊಂಡು ಯುವಕೃಷಿಕನಾಗಿ ಹೆಸರುಮಾಡುತಿದ್ದಾರೆ.
ಈ ವರ್ಷದ ಬರ-ಮಳೆಗಳು ಎಲ್ಲರಂತೆ ಇವರನ್ನೂ ಬಾಧಿಸಿವೆ ಆದರೆ ಕೃಷಿಯಲ್ಲಿ ಏರು-ಪೇರು ಸಾಮಾನ್ಯ ಎನ್ನುವ ಸುನಿಲ್ ಒಂದುವರ್ಷ ಕಡಿಮೆಯಾದರೆ ಮತ್ತೊಂದು ವರ್ಷ ಹೆಚ್ಚಾಗುತ್ತದೆ ಎನ್ನುವ ಆತ್ಮವಿಶ್ವಾಸದ ಮಾತನ್ನಾಡುತ್ತಾರೆ.
ಕೃಷಿಯಲ್ಲಿ ನಗದಿತ-ನಿಯಮಿತ ಆದಾಯವಿಲ್ಲ ಆದರೆ ಕೃಷಿ ಕೊಡುವ ಖುಷಿ ಬೇರೆ ಎಲ್ಲೂ ಸಿಗುವುದಿಲ್ಲ ಎನ್ನುವ ಇವರು ಕೃಷಿ-ಆಧಾರಿತ ಮತ್ತು ಪೂರಕ ಚಿಕ್ಕ ಉದ್ಯಮಗಳಿಂದ ಗ್ರಾಮೀಣ ಪ್ರದೇಶದಲ್ಲಿ ಜನ ಉಳಿಯುವಂತೆ ಮಾಡಬಹುದೆನ್ನುವ ಸುನಿಲ್‍ಕುಮಾರ ಮಲೆನಾಡಿನ ನೀರು, ವಾತಾವರಣ ಬಳಸಿಕೊಂಡು ಇಲ್ಲಿರದಿದ್ದರೆ ಈ ನೈಸರ್ಗಿಕ ಅನುಕೂಲಗಳಿಂದ ವಂಚಿತರಾಗಬೇಕಾಗುತ್ತದೆ ಎನ್ನುತ್ತಾ ಕೃಷಿಯ ಬಗ್ಗೆ ಆಸಕ್ತಿ ತುಂಬಿದ ತಂದೆ-ತಾಯಿಯರ ಸಹಕಾರ, ಆಶೀರ್ವಾದಗಳಿಂದ ಹೀಗಿರಲು ಸಾಧ್ಯವಾಗಿದೆ ಎನ್ನುವದನ್ನು ಮರೆಯದೇ ಹೇಳುತ್ತಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *