ಬಿಳಗಿ ಸೀಮೆಯ ಮಾರಿಕಾಂಬಾ ಜಾತ್ರೆ & ಬಿಳಗಿಯ ವೈಶಿಷ್ಟ್ಯ

ಬಿಳಗಿಯಲ್ಲಿ ಮಾರಿಕಾಂಬಾ ಜಾತ್ರೆ ಮುಕ್ತಾಯವಾಗಿದೆ. ಈ ಬಿಳಗಿ ಸುಮಾರು 200-300 ವರ್ಷಗಳ ಹಿಂದೆ ರಾಜಧಾನಿಯಾಗಿ ಮೆರೆದಿದ್ದ ಪ್ರದೇಶ.
ಅಘನಾಶಿನಿ ನದಿಯ ತೊಪ್ಪಲಿನ ಈ ಪ್ರದೇಶದ ಪಾಕೃತಿಕ ವೈಶಿಷ್ಟ್ಯ, ಜನಜೀವನ, ವಿಭಿನ್ನವಾಗಿದೆ.ರಾಜರ ಕಾಲದ ಜೈನಬಸದಿ ಇಲ್ಲಿದ್ದು 22,23,24 ನೇ ತೀರ್ಥಂಕರರ ಮೂರ್ತಿಗಳು ಇಲ್ಲಿವೆ. ಇದೇ ಪ್ರದೇಶದಲ್ಲಿ ಗೋಲ್‍ಭಾವಿ, ವಿರೂಪಾಕ್ಷ ದೇವಾಲಯಗಳೆಲ್ಲಾ ಇವೆ.

200 ವರ್ಷಗಳಿಗೂ ಹಿಂದೆ ಬಿಳಗಿಯಲ್ಲಿ ಸಾಮಂತರಾಗಿದ್ದ
ಅರಸರು ಕಟ್ಟಿದ ನಿರ್ಮಾಣಗಳು, ಸ್ವತಂತ್ರ ಭಾರತದಲ್ಲಿ ಇಲ್ಲಿ ಸ್ಥಾಪನೆಯಾದ ವಿದ್ಯಾಸಂಸ್ಥೆಗಳು, ಸಹಕಾರಿ ಸಂಘಗಳು,ಜೇನು ಸೊಸೈಟಿ ಹೀಗೆ ಇತ್ತೀಚಿನ 200-300 ವರ್ಷಗಳಿಂದ ಪ್ರಮುಖ ಕೇಂದ್ರವಾಗಿದ್ದ ಬಿಳಗಿ ಈಗಲೂ ವಿಭಿನ್ನ ಜಾತಿ-ಸಮೂದಾಯ, ಧಾರ್ಮಿಕ ಮತಾವಲಂಬಿಗಳು ಇರುವ ಪ್ರದೇಶ.
ಬಿಳಗಿ ಕೇಂದ್ರವನ್ನಾಗಿಟ್ಟುಕೊಂಡು ನೋಡಬಹುದಾದ ರಾಜಕಾರಣಿಗಳು,ಸಾಧಕರು, ಬೆಳೆಗಳು,ಉದ್ಯಮಿಗಳು ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕಾಣುವ ಬಿಳಗಿಕೇಂದ್ರದ ಸೀಮೆಗಳು ಈಗಿನ 10 ಗ್ರಾಮ ಪಂಚಾಯತ್ ಗಳಲ್ಲಿ ವಿಸ್ತರಿಸಿವೆ.
ಇಲ್ಲಿಯ ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳು ಈ ಭಾಗದ ಜನರ ಭಕ್ತಿಯ ಕೇಂದ್ರಗಳು.
ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳಿಗೆ ಒಂದೇ ಆಡಳಿತ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿರುವ ಪುರಾತನ ದೇವಾಲಯಗಳು ಇಲ್ಲಿಯ ಪ್ರಾಚೀನ ಪಳಯುಳಿಕೆಗಳ ನಿರ್ವಹಣೆಯನ್ನು ಕೇಂದ್ರದ ಪ್ರಾಚ್ಯವಸ್ತು ಇಲಾಖೆ ಮಾಡುತ್ತಿದೆ. ಐತಿಹಾಸಿಕ ಮಹತ್ವದಿಂದ ಬಿಳಗಿ ಪ್ರಸಿದ್ಧವಾಗಿದ್ದರೆ ಈ ಐತಿಹಾಸಿಕ ಪ್ರಾಮುಖ್ಯತೆ ಇಲ್ಲಿಯ ಜನಜೀವನಕ್ಕೂ ತೊಂದರೆಮಾಡಿದೆ. ಇಲ್ಲಿಯ ಕೆಲವು ವಾಸದ ಮನೆಗಳ ದುರಸ್ಥಿ, ಹೊಸನಿರ್ಮಾಣಕ್ಕೆ ಅನುಕೂಲ ಕಲ್ಫಿಸದ ಪ್ರಾಚ್ಯವಸ್ತು ಇಲಾಖೆ ನೀತಿ-ನಿಯಮಗಳು ಜನರಿಗೆ ಅನಾನುಕೂಲ ಮಾಡಿವೆ.
ಸರ್ಕಾರ ಮತ್ತು ಗ್ರಾಮ ಪಂಚಾಯತ್ ನಿರ್ವಹಿಸುತ್ತಿರುವ ಇಲ್ಲಿಯ ಐತಿಹಾಸಿಕ ಪಳಯುಳಿಕೆಗಳನ್ನು ನೋಡುವವರೂ ಕಡಿಮೆ. ಪ್ರಚಾರದ ಕೊರತೆ, ಸ್ಥಳಿಯರ ಅರಿವಿನ ಕೊರತೆ ಹೀಗೆ ಐತಿಹಾಸಿಕ ಹಿನ್ನೆಲೆಯ ಈ ಕೇಂದ್ರ ಅಭಿವೃದ್ಧಿಯ ಹಿನ್ನೆಲೆಯಲ್ಲೂ ಹಿಂದಿದೆ.ದೇವರು, ಧರ್ಮ, ನಂಬಿಕೆ ಆಧಾರದಲ್ಲೇ ಬದುಕುತ್ತಿರುವ ಈ ಪ್ರದೇಶದ ಜನ ವೆಚ್ಚದಾಯಕ ಜಾತ್ರೆ-ಹಬ್ಬಗಳನ್ನೂ ರೂಢಿ-ಸಂಪ್ರದಾಯದಂತೆ ನಡೆಸುತ್ತಾರೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ಬಿಳಗಿ ಜಾತ್ರೆಯಲ್ಲಿ ಜಾತ್ರಾ ಆಕರ್ಷಣೆಗಳಾಗಿ ಮನೋರಂಜನಾ ಸಾಧನಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಶಿಸ್ತು-ಪರಿಸರ ಪೂರಕ ಉತ್ಸವದ ಹಿನ್ನೆಲೆಯಲ್ಲಿ ಜಾತ್ರಾ ಸಮೀತಿ ಪ್ಲಾಸ್ಟಿಕ್ ನಿರ್ಬಂಧ ಹೇರಿರುವುದು, ವಾಹನ ನಿಲುಗಡೆ, ಸಂಚಾರಿ ವ್ಯವಸ್ಥೆಗಳನ್ನು ಬಿಗಿಮಾಡಿರುವುದು ಈ ಜಾತ್ರೆಯ ವಿಶೇಶವಾಗಿತ್ತು.
ಬಿಳಗಿ ಮಾರಿಕಾಂಬಾ ದೇವಾಲಯಕ್ಕೂ ಇಲ್ಲಿಯ ರಾಜರ ಆಡಳಿತಕ್ಕೂ ಸರಿಸುಮಾರು ಸಮಾನ ಚರಿತ್ರೆಯಿದೆ. ಬಿಳಗಿ ಮಾಂಡಳೀಕರ ಕಾಲದಲ್ಲಿ ಪೂಜಿಸಲ್ಪಡುತಿದ್ದ ಮಾರಿಕಾಂಬೆಗೆ ಆ ನಂತರ ಸೀಮೆಯ ವ್ಯಾಪ್ತಿ ದೊರೆತು ಈ ಜಾತ್ರೆಯೂ ಪ್ರಸಿದ್ಧವಾಯಿತು ಎನ್ನಲಾಗುತ್ತಿದೆ. ದೇವಾಲಯದ ಆಡಳಿತಮಂಡಳಿ. ಜಾತ್ರಾಮಹೋತ್ಸವದ ಅಧ್ಯಕ್ಷತೆಗಳ ವಿಚಾರದಲ್ಲಿ ಇತ್ತೀಚಿನ 40-50 ವರ್ಷಗಳಿಂದಲೂ ವೈದಿಕರು, ವೈದಿಕೇತರ ಹಿಂದುಳಿದ ವರ್ಗಗಳ ನಡುವೆ ಸಂಘರ್ಷದ್ದೂ ಲಾಗಾಯ್ತಿನ ಇತಿಹಾಸವೇ ಇದೆ.

ಇಂದು ವಿದ್ಯುಕ್ತವಾಗಿ ಮುಗಿದ ಬಿಳಗಿ ಮಾರಿಕಾಂಬಾ ಜಾತ್ರೆ
ಕಳೆದ ಒಂದು ವಾರದಿಂದ ನಡೆದ ತಾಲೂಕಿನ ಬಿಳಗಿ ಶ್ರೀಮಾರಿಕಾಂಬಾ ಜಾತ್ರಾ ಮಹೋತ್ಸವ ಇಂದು ವಿದ್ಯುಕ್ತವಾಗಿ ಮುಕ್ತಾಯವಾಯಿತು.
ವಾಹನ ನಿಲುಗಡೆ ವ್ಯವಸ್ಥೆ,ಪ್ಲಾಸ್ಟಿಕ್ ಮುಕ್ತ ಉತ್ಸವಗಳಿಂದಾಗಿ ಸಾರ್ವಜನಿಕರಿಗೆ ತುಸು ಕಿರಿಕಿರಿಯಾದರೂ ಸ್ವಚ್ಛತೆ,ನಿರ್ವಹಣೆಗಳ ಹಿನ್ನೆಲೆಯಲ್ಲಿ ಜಾತ್ರೆಯ ಯಶಸ್ಸು ಅಭೂತಪೂರ್ವ ಎನ್ನುವಂತಿತ್ತು.
ಶನಿವಾರ,ರವಿವಾರಗಳಂದು ಹೆಚ್ಚಿನ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ವ್ಯಾಪಾರ,ವ್ಯವಹಾರ, ಗಳಿಕೆ ಹಿನ್ನೆಲೆಯಲ್ಲಿ ಜಾತ್ರೆ ಯಶಸ್ವಿ ಎನ್ನಲಾಗಿದೆ. ಸ್ಥಳಿಯರು,ಪೊಲೀಸರು ಮತ್ತು ಸಂಘಟಕರ ಪ್ರಯತ್ನಗಳಿಂದಾಗಿ ಜಾತ್ರೆಯಲ್ಲಿ ಅಹಿತಕರ ಘಟನೆಗಳಾಗಿಲ್ಲ ಎನ್ನುವ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ಮಂಗಳವಾರದ ಮಧ್ಯರಾತ್ರಿ ಆಚರಣೆಗಳ ನಂತರ ಹಿಂದಿನ ಬುಧವಾರ ಬೆಳಿಗ್ಗೆ ಜಾತ್ರೆಯ ಗದ್ದುಗೆಗೆ ಬಂದಿದ್ದ ಮಾರಿಕಾಂಬೆ ಈ ಬುಧವಾರದ ಮುಂಜಾನೆವೇಳೆಗೆ ವಿಸರ್ಜನೆಯಾಗಿದ್ದಾಳೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *