ಶಾಸಕರು-ಸಂಸದರಿಗೆ ಮನವಿ ಕೊಟ್ಟರೂ ಆಗದ ಕೆಲಸ- ತರಳಿ-ಇರಾಸೆ ನಡುವೆ 2 ಸೇತುವೆ, ಸರ್ವಋತು ರಸ್ತೆ ನಿರ್ಮಾಣಕ್ಕೆ ಈ ತಿಂಗಳಲ್ಲೇ ಅನುದಾನ ಮಂಜೂರಾಗದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಸಿದ್ಧಾಪುರ ತಾಲೂಕಿನ ತರಳಿಯಿಂದ ಹಾರ್ಸಿಕಟ್ಟಾ ಮತ್ತು ತ್ಯಾಗಲಿ ಪಂಚಾಯತ್ ವ್ಯಾಪ್ತಿಯ 5 ಕಿ.ಮೀ. ರಸ್ತೆಯ ಇಕ್ಕೆಲಗಳಲ್ಲಿ 50 ಕ್ಕೂ ಹೆಚ್ಚು ಮನೆಗಳಿವೆ.
ಈ ದಾರಿಗಂಟ ಸಾಗಿದರೆ ಗಡಿಹೊಳೆ ಮತ್ತು ಬೆಣ್ಣೇಕೇರಿ ಹೊಳೆಗಳು ರಸ್ತೆಗೆ ಅಡ್ಡ ಬರುತ್ತವೆ. ಬೇಸಿಗೆಯಲ್ಲಾದರೆ ಈ ನದಿಗಳನ್ನು ದಾಟಿ ಹೋಗಬಹುದು ಆದರೆ ಈ ಭಾಗದಲ್ಲಿ ಕನಿಷ್ಟ 4-5 ತಿಂಗಳು ಮಳೆ ಸುರಿಯುತ್ತದೆ. ಆಗ ಸಂಕಗಳೋ ಅಥವಾ ಇಪ್ಪತ್ತು ಇಪ್ಪತೈದು ಕಿ.ಮೀ. ಬಳಸುಮಾರ್ಗವೋ ಇಲ್ಲಿಯ ಜನರಿಗೆ ಅನಿವಾರ್ಯ.
ಇಂಥ ತರಳಿ-ಇರಾಸೆ ನಡುವಿನ ಜನ ಈಗಾಗಲೇ ಎರಡುಬಾರಿ ಶಾಸಕರಿಗೆ ಒಮ್ಮೆ ಸಂಸದರಿಗೆ ತಮ್ಮೂರಿನ ರಸ್ತೆ, ಸೇತುವೆ ಮಾಡಿಕೊಡಿ ಎಂದು ಅರ್ಜಿ ಬರೆದಿದ್ದಾರೆ. ಆದರೆ ಈ ಅರ್ಜಿಗಳು ಏನಾದವು ಎನ್ನುವುದು ಸಂಸದರು, ಶಾಸಕರ ಕಛೇರಿಗಳ ಅಧಿಕಾರಿಗಳಿಗೂ ಮಾಹಿತಿ ಇಲ್ಲ.


ಹೀಗೆ ಶತಮಾನಗಳಿಂದ ಹೊಳೆಗಳಿಗೆ ಸೇತುವೆ, ಊರಿಗೆ ರಸ್ತೆ ಇಲ್ಲದಿದ್ದರೂ ಈ ಭಾಗದ ಜನರು ತಲೆಕೆಡಿಸಿಕೊಂಡಿಲ್ಲ ವರ್ಷಕ್ಕೆ ಒಂದೆರಡು ಬಾರಿ ಇವರೇ ಶ್ರಮದಾನದಿಂದ ರಸ್ತೆ ಮಾಡಿಕೊಳ್ಳುತ್ತಾರೆ. ಈ ತರಳಿ,ಇರಾಸೆ ರಸ್ತೆಗೆ ಒಮ್ಮೆ ಮಾತ್ರ ಸರ್ಕಾರದ ಅನುದಾನದ ಕಾಮಗಾರಿ ಬಂದಿದೆ ಎಂದರೆ ಇಲ್ಲಿಯ ದುಸ್ಥಿತಿಗೆ ಬೇರೆ ದಾಖಲೆಗಳೇ ಬೇಡ.
ಹೀಗೆ ಬುದ್ಧಿವಂತರ ಜಿಲ್ಲೆ, ಸುಸಂಸ್ಲೃತರ ಕ್ಷೇತ್ರದ ಅನೇಕರು ಹಲವಾರು ವರ್ಷಗಳಿಂದ ಸುಮ್ಮನಿದ್ದವರು. ಎರಡ್ಮೂರು ಬಾರಿ ಜನಪ್ರತಿನಿಧಿಗಳಿಗೆ ಅರ್ಜಿ ಕೊಟ್ಟವರು ಒಂದು ದಿನ ಮಾಧ್ಯಮದವರನ್ನು ಕರೆದು ತಮ್ಮ ತೊಂದರೆಗಳನ್ನು ಬಿಚ್ಚಿ ಹೇಳಿದರು.


ತ್ಯಾಗಲಿ ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ನಾಗವೇಣಿ ಹಸ್ಲರ್, ಅಣ್ಣಪ್ಪ ರಾಮಾ ನಾಯ್ಕ, ದ್ಯಾವಾ ನಾರಾಯಣ ಗೌಡ ಕಾನತೋಟ, ಇವರೊಂದಿಗೆ ವಿನಾಯಕ ನಾಯ್ಕರೆಲ್ಲಾ ಸೇರಿ ವಾಟಗಾರಿನ ಗಣೇಶ್ ಹೆಗಡೆಯವರ ಮನೆಯಲ್ಲಿ ಕುಳಿತು ತಮ್ಮ ಸಂಪರ್ಕರಸ್ತೆ, ಸಂಪರ್ಕ ಸೇತುವೆಗಳ ಅನಿವಾರ್ಯತೆ ಹೇಳಿದವರು ಅಲ್ಲಿಯ ಯುವಕರಾದ ಮಹೇಶ್, ಚೇತನ್, ಎಂಬ ಹುಡುಗರೊಂದಿಗೆ ತಮ್ಮ ಹೊಳೆಯ ಪ್ರತ್ಯಕ್ಷ ದರ್ಶನಕ್ಕೆ ಕರೆದೊಯ್ದರು.
ಈ ಮಾರ್ಚ್‍ನಲ್ಲಿ ಗಡಿಹೊಳೆ ನೀರಿಗೆ ಕಾಲು ತಾಕಿಸಿದರೆ ತಣ್ಣನೆಯ ಅನುಭವ ಆದರೆ ಈ ಹೊಳೆಯ ಮಳೆಗಾಲದ ನರ್ತನ ಈ ತಂಪು-ಕಂಪಿಗೆ ವಿರುದ್ಧ ಎನ್ನುವುದನ್ನು ಹೇಳಿದರು.
ಈ ಮಾರ್ಗದಲ್ಲಿ ಈ ಗಡಿಹೊಳೆಗೆ ಒಂದು ಸೇತುವೆ ಮತ್ತು ಇದೇ ಹೊಳೆಗೆ ಮೇಲೆ ಇರಾಸೆ ಬಳಿ ಒಂದು ಸೇತುವೆಯಾದರೆ ತ್ಯಾಗಲಿ ಪಂಚಾಯತ್ ನ ನಾಣಿಕಟ್ಟಾದಿಂದ ತರಳಿ ಮಾರ್ಗವಾಗಿ ಹಾರ್ಸಿಕಟ್ಟಾ ಮತ್ತು ತಾಲೂಕು ಕೇಂದ್ರ ಸಿದ್ಧಾಪುರಕ್ಕೆ ತೆರಳಬಹುದು. ಹೀಗೆ ಈ ಹೊಳೆಗೆ ಎರಡು ಪ್ರದೇಶಗಳಲ್ಲಿ ಸೇತುವೆಗಳಾದರೆ ಕಾನತೋಟ, ಬಾಳೆಗದ್ದೆ, ಪೇರಲಕೊಡ್ಲು ವಾಟಗಾರ, ಗಡಿಹೊಳೆ ಗ್ರಾಮಗಳಿಗೆ ಸಂಪರ್ಕ ದೊರೆಯುತ್ತದೆ. ಇಲ್ಲದಿದ್ದರೆ ಅತ್ತ ಧರೆ ಇತ್ತಹುಲಿ ಯಾಕೆಂದರೆ, ಈಗ್ರಾಮಗಳೆಲ್ಲಾ ಕಾಡಿನ ನಡುವೆ ಇವೆ. ಸರ್ವಋತು ರಸ್ತೆಯಲ್ಲದ ಇಲ್ಲಿಯ ರಸ್ತೆ ಮಳೆಗಾಲದಲ್ಲಿ ಕುಸಿಯತೊಡಗುತ್ತದೆ.
ಹೊಳೆ, ಮಳೆ, ಕೆಸರು ರಸ್ತೆ, ಕುಸಿಯುವ ಮಣ್ಣಿನ ರಸ್ತೆ, ಸ್ಥಿತಿಯಲ್ಲಿ ಇಲ್ಲಿಯ ಶಾಲಾ ಮಕ್ಕಳು, ವೃದ್ಧರು, ಅಂಗವಿಕಲರು ಗರ್ಭಿಣಿಯರು, ಬಾಣಂತಿಯರು ಗೋಳಾಡಬೇಕು.
ಈ ಕಷ್ಟ ಪರಿಹರಿಸಿ ಎಂದು ಈ ಭಾಗದ ಜನರು ಸಂಸದರು, ಶಾಸಕರಿಗೆ ಮಾತಿನಲ್ಲೂ ಹೇಳಿದ್ದಾರೆ, ಅರ್ಜಿಕೊಟ್ಟೂ ವಿನಂತಿಸಿದ್ದಾರೆ. ಇತ್ತೀಚೆಗೆ ನಾಣಿಕಟ್ಟಾದಲ್ಲಿ ಇವರ ಮನವಿ ಸ್ವೀಕರಿಸಿದ ವಿಧಾನಸಭಾ ಅಧ್ಯಕ್ಷರು ಮತ್ತೆ ಹಿಂದಿನಂತೆ ಭರವಸೆ ನೀಡಿ ತೆರಳಿದ್ದಾರೆ!.


ಇಷ್ಟೆಲ್ಲಾ ಆದ ಮೇಲೆ ಈಗ ಈ ಭಾಗದ ಯುವಕರು ವಿನಾಯಕ ನಾಯ್ಕ ನೇತೃತ್ವದಲ್ಲಿ ಈ ತಿಂಗಳಲ್ಲಿ ನಮ್ಮ ರಸ್ತೆ, ಸೇತುವೆಗಳ ಕಾಮಗಾರಿ ಮಂಜೂರಿಯಾಗದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಎರಡು ಗ್ರಾಮ ಪಂಚಾಯತ್ ಗಳು, ಎರಡು ತಾಲೂಕಾ ಪಂಚಾಯತ್ ಕ್ಷೇತ್ರಗಳು ಹಾಗೂ ಒಂದೇ ಜಿಲ್ಲಾ ಪಂಚಾಯತ್ ಕ್ಷೇತ್ರದ ಈ ಗ್ರಾಮಗಳ ಸ್ಥಿತಿ ನೋಡಿದರೆ ಯಾರಿಗೂ ಅಯ್ಯೋ ಎನಿಸದೆ ಇರದು. ಆದರೆ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಇವರ ತೊಂದರೆ ಸಮಸ್ಯೆಯೆಂದು ಅರ್ಥವಾಗುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳಾದ ತಾಲೂಕಾ ಪಂಚಾಯತ್ ಅಧ್ಯಕ್ಷರು, ರಾಜ್ಯ ವಿಧಾನಸಭಾ ಅಧ್ಯಕ್ಷರು, ಮಾಜಿ ಕೇಂದ್ರ ಸಚಿವರ ಗಮನಕ್ಕೆ ಬಾರದಿರುವುದು ಸಹಜ ಎನ್ನುವಂತಿಲ್ಲ.
ಅಂದಹಾಗೆ ಈ ಕೆಲಸಗಳಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ಮತ ಬಹಿಷ್ಕರಿಸುವ ಬಗ್ಗೆ ಒಮ್ಮತದ ನಿರ್ಣಯ ಮಾಡಬೇಕೆಂಬ ಅಭಿಪ್ರಾಯವೂ ಮಾಧ್ಯಮ ಪ್ರತಿನಿಧಿಗಳ ಎದುರು ಬಹಿರಂಗವಾಗಿ ಚರ್ಚೆಯಾಗಿದೆ.
ರಾಜ್ಯ, ರಾಷ್ಟ್ರಮಟ್ಟದಲ್ಲಿ ಶಾಂತಿ-ಸಂಮೃದ್ಧಿಯ ಜಿಲ್ಲೆ ಎಂದು ಬಿಂಬಿಸಿಕೊಳ್ಳುವ ನಮ್ಮ ಶಾಸಕರು, ಸಂಸದರ ಕ್ಷೇತ್ರಗಳಲ್ಲಿ ಇಂಥ ಅನೇಕ ಕುಗ್ರಾಮಗಳಿರುವುದು ಅಂಥ ಪ್ರಮುಖರ ನಜರ್‍ನಲ್ಲಿಲ್ಲ ಎಂದರೆ ಅದೂ ಸತ್ಯವಲ್ಲ.

ಆರೋಗ್ಯವರ್ಧಕ ಅಣಬೆಯತ್ತ ಶಿಕ್ಷಿತರ ಚಿತ್ತ
ಪ್ರಧಾನಿ ಮೋದಿ ಮತ್ತು ಶ್ರೀಮಂತ ಐಶಾರಾಮಿಗಳ ಆರೋಗ್ಯವನ್ನು ಕಾಪಾಡುವ ಅಣಬೆಗಳೆಂದರೆ ಎಲ್ಲರಿಗೂ ಇಷ್ಟ.
ನೈಸರ್ಗಿಕ ಅಣಬೆಗಳನ್ನು ವರ್ಷವಿಡಿ ಸಂಗ್ರಹಿಸಲು ಸಾಧ್ಯವಿಲ್ಲ ಹಾಗಾಗಿ ವರ್ಷವಿಡೀ ಬೆಳೆಯುವ ಕೃತಕ ಅಣಬೆಗಳು ಅಣಬೆಪ್ರೀಯರನ್ನು ಸಮಾಧಾನಪಡಿಸುತ್ತವೆ.
ಹೆಚ್ಚಿನ ಉಷ್ಣಾಂಶ,ನೀರು ಬಯಸುವ ಅಣಬೆ ಕೃಷಿ ಅಷ್ಟು ಸುಲಭಸಾಧ್ಯ ಕೆಲಸವೂ ಅಲ್ಲ. ಹೆಚ್ಚಿನ ಉಷ್ಣಾಂಶದ ಕರಾವಳಿ, ಬಯಲುಸೀಮೆಯಲ್ಲಿ ಬೆಳೆಯಲು ಯೋಗ್ಯವಾದ ಅಣಬೆಯನ್ನು ಸಿದ್ಧಾಪುರದಂಥ ಮಲೆನಾಡಿನ ತಂಪಿನ ವಾತಾವರಣದಲ್ಲಿ ಬೆಳೆದು ತೋರಿಸುವ ಮೂಲಕ ಹದಿನಾರನೇ ಮೈಲಿಕಲ್ಲು ಗಿಳಿಲಗುಂಡಿಯ ದಯಾನಂದ ನಾಯ್ಕ ಸಾಧನೆ ಮಾಡುತಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *