ಏಪ್ರಿಲ್ ಫೂಲ್ ಸಂಕಲನದ ಸಮಾಜಮುಖಿ ಕಥೆಗಳು..

ಏಪ್ರಿಲ್ ಫೂಲ್’ ಕಥೆ ಓದುವಾಗ ತಡೆದುಕೊಳ್ಳಲಾಗದಷ್ಟು ಒತ್ತರಿಸಿಕೊಂಡು ಹೊರಬರುವ ನಗು ಒಂದ್ಕಡೆಯಾದರೆ, ಇನ್ನೊಂದ್ಕಡೆ ಇದು ಕಾಲ್ಪನಿಕ ಅನ್ನಿಸಿದರೂ, ದಿಟವಾಗುವ ದಿನಗಳು ದೂರವಿಲ್ಲ ಅನ್ನೊ ಆತಂಕ ಒಳಗೊಳಗೇ ತಣ್ಣಗೆ ಇರಿಯುತ್ತದೆ.
ಹನುಮಂತ ಹಾಲಿಗೇರಿಯವರ ಕಥೆ ಕಟ್ಟುವ ಕೌಶಲ್ಯಕ್ಕೆ ನಿಜಕ್ಕೂ ನಾನು ಬೆರಗಾಗಿ ಶರಣಾಗಿಬಿಟ್ಟೆ. ಕಥೆ ಓದುವಾಗ ಅತೀ ಹೆಚ್ಚು ನಕ್ಕಿದ್ದು ಪ್ರಾಯಶಃ ಇದೇ ಮೊದಲು.
ಸುಡುವ ನೆಲದವರ (ಬಯಲು ಸೀಮೆಯವರ) ಒಲವು, ನಿಲುವು, ಮುಗ್ಧತೆಯನ್ನು ಅರ್ಥೈಸಿಕೊಂಡು, ಅಲ್ಲಿಯೇ ನೆಲಸಿರುವ ಕೆಲ ದುಷ್ಟಶಕ್ತಿಗಳು ರಾಷ್ಟ್ರಪ್ರೇಮ, ರಾಷ್ಟ್ರ ರಕ್ಷಣೆ, ಧರ್ಮದ ನೆಪದಲ್ಲಿ ಇಡೀ ಊರಿನ ಸಾಮರಸ್ಯವನ್ನೇ ಕುಲಗೆಡಿಸುವ ಕುತಂತ್ರದ ಚಿತ್ರಣವನ್ನು ‘ಅಲೈದೇವ್ರು’ ಕಥೆ ತುಂಬಾ ಅರ್ಥಪೂರ್ಣವಾಗಿ ತೆರೆದಿಟ್ಟಿದೆ.
ಸ್ಮಶಾನದಲ್ಲಿ ಹೂತಿರೊ ಹೆಣಗಳನ್ನೇ ದೇವರೆಂದು ನಂಬಿ, ಕುಣಿತೋಡಿ ಬದುಕು ಕಟ್ಟಿಕೊಂಡವರ ತಲ್ಲಣಗಳು, ಸಮಾಜ ಅವರನ್ನು ನಡೆಸಿಕೊಳ್ಳುವ ರೀತಿ, ಪೊಲೀಸರ ಅಮಾನವೀಯತೆ, ಮುಳುವಾಗುವ ತಂತ್ರಜ್ಞಾನ ‘ಸುಡುಗಾಡು’ ಕಥೆಯಲ್ಲಿ ಓದುಗರ ಕರುಳ ಹಿಂಡುತ್ತವೆ. ಕಟ್ಟಕಡೆಯವರ ಕುರಿತು ಕಥೆಗಾರನಿಗಿರುವ ಕಾಳಜಿ ಕಂಡು ಪ್ರತಿ ಓದುಗನು ತೆಲೆಬಾಗಲೇಬೇಕು.
ಸ್ಥಿತಪ್ರಜ್ಞ, ಸಿದ್ಧಯ್ಯನ ಪವಾಡ ಮತ್ತು ಪ್ರೀತಿಗೆ ಸೋಲಿಲ್ಲ ಈ ಮೂರು ಕಥೆಗಳಲ್ಲಿ ಇಂದಿನ ಸ್ವಾಮಿಗಳ ಭಾವಶೂನ್ಯತೆ, ಅಸಹಿಷ್ಣುತೆ, ನಿಷ್ಕುರುಣೆ, ನಿರ್ಧಯತೆ ಎಲ್ಲವುಗಳ ಅನಾವರಣವಾಗಿದೆ.

ಮೌಢ್ಯ ಬಿತ್ತುವ, ವೈಚಾರಿಕ ವಿರೋಧಿ ಮಠಗಳಿಂದ ಜನ ಆದಷ್ಟು ಬೇಗ ವಿಮುಖರಾಗಬೇಕೆಂಬ ಸಂದೇಶವನ್ನು ತುಂಬಾ ಸ್ಪಷ್ಟವಾಗಿ ಸೂಚಿಸಿವೆ. ಹರಿಯುವ ಜೀವಪ್ರೀತಿಗೆ ಕಪಟ ಸ್ವಾಮೀಜಿಗಳು ಕಟ್ಟುವ ತಡೆಗಳನ್ನು, ಮಠಗಳ ಮುಖವಾಡಗಳನ್ನು ಕಥೆಗಾರರು ಕೆಡುವಿದ್ದಾರೆ.
ಇಂದಿನ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಸ್ವಾರ್ಥಕ್ಕಾಗಿ ಬದ್ಧತೆಯನ್ನೇ ಬದಿಗೊತ್ತಿ, ಮೇಲಾಧಿಕಾರಿಗಳೊಂದಿಗೆ ರಾಜಿಮಾಡಿಕೊಂಡು ಬದುಕುವ ಸೊಗಲಾಡಿ ವ್ಯಕ್ತಿಗಳ ಚಿತ್ರಣ ‘ಫಾರಿನ್ ಹೊಲಿಯಾ’ ಕಥೆಯಲ್ಲಿ ರೋಚಕವಾಗಿದೆ.
ಇಲ್ಲಿ ಮುಖ್ಯವಾಗಿ ಆಹಾರ ಪದ್ಧತಿಯ ಕುರಿತು ಸ್ವದೇಶಿ ಹಾಗೂ ವಿದೇಶಿ ವೈರುಧ್ಯಗಳ ಕುರಿತು ಆರೋಗ್ಯಕರ ಚರ್ಚೆ ಸಕಾಲಿಕವಾಗಿದೆ. ಮುಖ್ಯವಾಗಿ ದೇಶಭಕ್ತಿಯ ನಶೆಯಲ್ಲಿರುವ ಇಂದಿನ ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಈ ಕಥೆಯನ್ನು ಓದಲೇಬೇಕು.
ಒಟ್ಟಾರೆ ‘ಏಪ್ರಿಲ್ ಫೂಲ್’ ಕಥಾ ಸಂಕಲನದಲ್ಲಿರುವ ಹದಿನಾರೂ ಕಥೆಗಳನ್ನು ಓದಿದ ಮೇಲೆ ಲೇಖಕರ ಸಮಾಜಮುಖಿ ಕಾಳಜಿ, ವರ್ತಮಾನಕ್ಕೆ ಮುಖಾಮುಖಿಯಾಗುವ ತೀವೃತೆ, ಸ್ವಾರ್ಥಿಗಳ ಕುರಿತು ಸಾತ್ವಿಕ ಸೈದ್ಧಾಂತಿಕ ಸಿಟ್ಟಿನೊಡನೆ, ಬಹುತ್ವದ ಕನಸು ಕಟ್ಟುವ ಕಥೆಗಾರನ ಒಳನೋಟ ಆಪ್ತವೆನ್ನಿಸಿತು.

ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಬರೆಯದ, ತುಂಬಾ ಸ್ಪಷ್ಟವಾಗಿ ಹಲವು ಪಾತ್ರಗಳ ಮೂಲಕ ಎಲ್ಲವನ್ನೂ ಹೇಳಿಸಿರುವ ನೇರಕ್ರಿಯೆ ಇಷ್ಟವಾಯ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಜವಾರಿ ಭಾಷೆಯ ಶೈಲಿ ಭಾಳಾ ಅಂದ್ರ ಭಾಳಾ ಹಿಡಸ್ತು, -ಕೆ.ಬಿ.ವೀರಲಿಂಗನಗೌಡ್ರ. ಶಿರಸಿ.

ಕೃಷಿ-ಋಷಿ ತಿಮ್ಮಜ್ಜರ ಯಶಸ್ಸಿನಿಂದ ಪ್ರೇರಿತರಾಗಿ ತರಕಾರಿ ಬೆಳೆದು ಮಾರಿದವರೆಲ್ಲಾ ಯಶ ಕಂಡರು!
(ಬೇಸಾಯ,
ವ್ಯಾಪಾರದ ಕೃಷಿ-ಋಷಿ ತಿಮ್ಮಜ್ಜ)
ಸಿದ್ಧಾಪುರ ತಾಲೂಕಿನಲ್ಲಿ ಕೃಷಿಯಲ್ಲಿ ಖುಷಿಕಂಡ ಅಸಂಖ್ಯ ಕೃಷಿಕರಿದ್ದಾರೆ.ಅವರಲ್ಲಿ ಕೃಷಿಯೊಂದಿಗೆ ಸಂತೆಯ ವ್ಯಾಪಾರದ ಮೂಲಕ ಸಾಧಕ ಎನಿಸಿಕೊಂಡವರು ಗೋಳಗೋಡಿನ ತಿಮ್ಮಜ್ಜ.
ತಿಮ್ಮಪ್ಪ ನಾಯ್ಕ ಯುವಕರಾಗಿದ್ದಾಗ ಊರಿನಲ್ಲಿ ನೀರಿನ ವ್ಯವಸ್ಥೆಯೂ ಇರಲಿಲ್ಲ. ಕೃಷಿಯೆಂದರೆ ಭತ್ತ, ಅಡಿಕೆ, ಬಾಳೆ, ಏಲಕ್ಕಿ ಬಿಟ್ಟರೆ ಉಳಿದ ಬೆಳೆಗಳೇ ತಿಳಿದಿರಲಿಲ್ಲ. ಆದರೆ 80 ರ ದಶಕದಲ್ಲಿ ಹುಸೂರಿನ ಜಲಾಗಾರ ನಿರ್ಮಿಸಿ ಅಲ್ಲಿಂದ ಸಿದ್ದಾಪುರಕ್ಕೆ ಕುಡಿಯುವ ನೀರು ಪೂರೈಸತೊಡಗಿದರು ನೋಡಿ ತಿಮ್ಮಪ್ಪರಂಥ ಕೆಲವರು ಈ ನೀರು ಬಳಸಿ ತರಕಾರಿ ಬೆಳೆಯತೊಡಗಿದ್ದೇ ಪ್ರಾರಂಭ ನಂತರ ಸುತ್ತಮುತ್ತಲಿನ ಊರಿನ ನೂರಾರು ಜನರು
ತರಕಾರಿ ಬೆಳೆಯತೊಡಗಿದರು.
ತಿಮ್ಮಪ್ಪ ಸಹೋದರರನ್ನೂ ಬಳಸಿಕೊಂಡು ವ್ಯವಸಾಯ ಮಾಡುತ್ತಾ ಸುತ್ತಮುತ್ತಲಿನ ವಾರದ ಸಂತೆಗಳಲ್ಲಿ ತಾವು ಬೆಳೆದ ತರಕಾರಿ ವ್ಯಾಪಾರ ಮಾಡತೊಡಗಿದರು. ತರಕಾರಿ ತಿಮ್ಮಪ್ಪರಿಂದ ಬೆಳೆದಂತೆ ಅವರನ್ನೂ ಬೆಳೆಸತೊಡಗಿತು. ಇದರ ಅನುಕೂಲದಿಂದ ತಿಮ್ಮಪ್ಪ ತರಕಾರಿ ತಿಮ್ಮ ಎಂದೇ ಖ್ಯಾತರಾದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *