ಕರೋನಾ: ಅತಿಕೆಟ್ಟ ರಾಷ್ಟ್ರೀಯ ದುರಂತವನ್ನೂ ವ್ಯಕ್ತಿ ಆರಾಧನೆಗಾಗಿ (ದುರ್ಬಳಕೆ) ಬಳಕೆ ?

ಹಿರಿಯ ಲೇಖಕ, ಚಿಂತಕ ರಾಮಚಂದ್ರ ಗುಹಾ ಅವರ ಟ್ವೀಟ್:

ಈಗಾಗಲೇ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯೊಂದು ಅಸ್ತಿತ್ವದಲ್ಲಿರುವಾಗ ಹೊಸ ನಿಧಿಯನ್ನು ಸ್ಥಾಪಿಸುವ ಅಗತ್ಯವಾದರೂ ಏನಿದೆ?

ಅದೂ ಅಲ್ಲದೆ PM-CARES ಎನ್ನುತ್ತ ತನ್ನನ್ನು ತಾನೇ ಉಬ್ಬಿಸಿಕೊಳ್ಳುವಂತೆ ಹೆಸಿರಿಟ್ಟುಕೊಳ್ಳುವುದೇಕೆ? ಒಂದು ಅತಿಕೆಟ್ಟ ರಾಷ್ಟ್ರೀಯ ದುರಂತವನ್ನೂ ವ್ಯಕ್ತಿ ಆರಾಧನೆಗಾಗಿ (ದುರ್ಬಳಕೆ) ಬಳಕೆ ಮಾಡಿಕೊಳ್ಳಬೇಕೇ?

PM-CARES ಒಂದು ಸಾರ್ವಜನಿಕ ದತ್ತಿ ಸಂಸ್ಥೆಯಾಗಿದೆ. ಪ್ರಧಾನ ಮಂತ್ರಿಯು ಅದರ ಅಧ್ಯಕ್ಷರಾಗಿದ್ದು, ದೇಶದ ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಮಂತ್ರಿ ಈ ಸಂಸ್ಥೆಯ ಇತರ ಸದಸ್ಯರಾಗಿರುತ್ತಾರೆ.

ಸಂಸ್ಥೆಯ ಘೋಷಿತ ಧ್ಯೇಯೋದ್ದೇಶ: ಯಾವುದೇ ವಿಧವಾದ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವುದು ಮತ್ತು ಅದರಿಂದ ಬಾಧಿತರಾದವರಿಗೆ ಪರಿಹಾರ ಒದಗಿಸುವುದು.

ಉದಾಹರಣೆಗೆ ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದ ಉಂಟಾಗಿರುವ ತುರ್ತು ಪರಿಸ್ಥಿತಿ.
ಇದರ ಕುರಿತು ಕೆಲವು ಪ್ರಶ್ನೆಗಳು:

1. ಸಾರ್ವಜನಿಕ ದತ್ತಿ ಸಂಸ್ಥೆಯನ್ನು ರಚಿಸಲು ತೀರ್ಮಾನಿಸಿದ್ದು ಯಾವಾಗ?

2. ಹಾಗೆ ಮಾಡಲೇಬೇಕೆಂಬ ಬಲವಾದ ಕಾರಣಗಳೇನು?

3. ಈಗಾಗಲೇ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಅಸ್ತಿತ್ವದಲ್ಲಿದ್ದರೂ ಹೊಸದಾಗಿ ಸಾರ್ವಜನಿಕ ದತ್ತಿ ಸಂಸ್ಥೆಯೊಂದನ್ನು ಸ್ಥಾಪಿಸುವುದರಿಂದ ಉಂಟಾಗುವ ಪ್ರಯೋಜನಗಳೇನು?

4. ಅದರ ನಿಯಮಾವಳಿಗಳನ್ನು (ಬೈ ಲಾ) ನೋಡಲು/ ಓದಲು ನಮಗೆ ಅವು ಎಲ್ಲಿ ಲಭ್ಯವಾಗುತ್ತವೆ?

5. ಯಾವ ಕಾಯಿದೆಯ ಅಡಿಯಲ್ಲಿ ಈ ಸಂಸ್ಥೆಯನ್ನು ನೋಂದಣಿ ಮಾಡಲಾಗಿದೆ?

6. ಎಲ್ಲಿ ಮತ್ತು ಯಾವಾಗ ಈ ನೋಂದಣಿ ಮಾಡಲಾಯಿತು?

7. ಉಪ-ನೋಂದಣಾಧಿಕಾರಿಯವರು ಪ್ರಧಾನ ಮಂತ್ರಿಯವರ ಮನೆಗೆ ಭೇಟಿ ನೀಡಿದರೇ ಅಥವಾ ಪ್ರಧಾನಿಯವರೇ ಉಪ-ನೋಂದಣಾಧಿಕಾರಿಯವರ ಕಛೇರಿಗೆ ಹೋಗಿ ಬಂದರೇ?

8. ಈ ದತ್ತಿ ಸಂಸ್ಥೆಯ ಸೆಟ್ಲರ್ (ಸಂಸ್ಥೆಯನ್ನು ಪ್ರಾರಂಭಿಸುವವ) / ಅಧ್ಯಕ್ಷ ಯಾರು? – ಭಾರತದ ಪ್ರಧಾನ ಮಂತ್ರಿಯವರೇ ಅಥವಾ ನರೇಂದ್ರ ಮೋದಿಯವರೇ?

9. ಇತರ ಸದಸ್ಯರನ್ನು ಅವರವರ ವ್ಯಕ್ತಿಗತ ಹೆಸರುಗಳಿಂದ ನಾಮಕರಣ ಮಾಡಲಾಗಿದೆಯೋ ಅಥವಾ ಅವರ ಅಧಿಕೃತ ಹುದ್ದೆಗಳ ಮೂಲಕವೋ?

10. PM-CARES ಟ್ರಸ್ಟ್ ಕಛೇರಿ ನೋಂದಣಿಯಾಗಿರುವ ಅಧಿಕೃತ ವಿಳಾಸವೇನು?

11. ಹಾಗಾದರೆ ದೀರ್ಘಕಾಲದಿಂದ ಸಾಂಸ್ಥೀಕರಣಗೊಂಡಿರುವ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುವ ಬದಲಿಗೆ, ಹೊಸದಾಗಿ ಉದ್ಭವವಾಗಿರುವ ಈ ಸಾರ್ವಜನಿಕ ದತ್ತಿ ನಿಧಿಗೆ ದಾನ ಮಾಡಲು ಅಕ್ಷಯ್ ‘ಕೆನಡಾ’ ಕುಮಾರ್ (ಹಿಂದಿ ಸಿನಿಮಾ ನಟ), ವಿಜಯ್ ‘ಪೇ ಟಿಎಂ’ (ಉದ್ಯಮಿ – Paytm ಕಂಪನಿಯ ಸಂಸ್ಥಾಪಕ), ಜೇ ‘ಬಿಸಿಸಿಐ’ ಶಾ (ಅಮಿತ್ ಶಾ ಪುತ್ರ), ಮುಂತಾದವರು ಒಬ್ಬರ ಮೇಲೊಬ್ಬರು ಬೀಳುತ್ತಿರುವುದಕ್ಕೆ ಕಾರಣವೇನು?

#DeMo (ಡೀಮಾನೆಟೈಸೇಶನ್ – ನೋಟ್ ಅಮಾನ್ಯೀಕರಣ) ದ ಮರುದಿನವೇ Paytm ಜಾಹೀರಾತುಗಳಲ್ಲಿ ಮೋದಿ ಕಾಣಿಸಿಕೊಂಡಿದ್ದನ್ನು ಮರೆತಿದ್ದೀರೇನು?

– Translated by Com. Jyothi. A

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *