ದುರ್ಬಲ ನಾಯಕತ್ವದ ಅವಿವೇಕ ಪ್ರತಿಬಿಂಬ

ಕರೋನಾ ಭಯದಿಂದ ಜನ ಮನೆ ಸೇರಿದರು, ಮುಖ್ಯಸ್ಥ ಜಾಗಟೆ ಹೊಡೆಯಲು ಅವರನ್ನು ರಸ್ತೆಗೆ ಕರೆದ.
ಜನ ಭಯ, ಆತಂಕ, ಹಸಿವೆ, ರಗಳೆಗಳಿಂದ ಮನೆಯಲ್ಲಿ ನೋಯುತಿದ್ದಾರೆ ಮುಖ್ಯಸ್ಥ ಲೈಟ್‍ಬಂದ್ ಮಾಡಿ ಅಂಧಕಾರ ತೊಲಗಿಸಿ ಎಂದ.
ಇಂಥ ವರ್ತನೆ, ನಡವಳಿಕೆ, ನಾಟಕ ಸಹಜಮನುಷ್ಯರನ್ನು ಕೆರಳಿಸದೆ ಇರಲಾರದು.
ದೇಶದ ಅನುಕೂಲ, ಸಂಪತ್ತು, ಜನರ ತೆರಿಗೆ ಹಣದಲ್ಲಿ ಕಲಿತು, ಬೆಳೆದು ವಿದೇಶಕ್ಕೆ ಹಾರಿದವರು ಕರೋನಾಕ್ಕೆ ಹೆದರಿ ಸ್ವದೇಶಕ್ಕೆ ಮರಳತೊಡಗಿದರು ಆ ಸಮಯದಲ್ಲಿ ಮಧ್ಯಪ್ರದೇಶದ ಶಾಸಕರ ಖರೀದಿಯಲ್ಲಿ ತೊಡಗಿದ್ದ ಸಂಬಂಧಿಸಿದ ವ್ಯಕ್ತಿಗಳು ಸ್ವಾರ್ಥ, ಲಾಭಕ್ಕಾಗಿ ವಿಮಾನಗಳನ್ನು ನಿಲ್ಲಿಸದೆ ಕರೋನಾ ಪಸರಿಸಲು ಕಾರಣರಾದರು.
ಸಕಾಲದಲ್ಲಿ ಎಚ್ಚರಿಸದ ಆಡಳಿತಗಾರರ ನಿರ್ಲಕ್ಷದಿಂದಾಗಿ ಜನ ಮಂದಿರ, ಮಸೀದಿ, ಚರ್ಚ್,ಗುರುದ್ವಾರ ಎಲ್ಲೆಡೆ ಸೇರಿದರು. ಸಮಾವೇಶಗಳು ನಡೆದವು. ಈ ಬಗ್ಗೆ ವಿರೋಧಪಕ್ಷದ ಪ್ರಮುಖರು ಎಚ್ಚರಿಸಿದ್ದಾಗ್ಯೂ ಆಡಳಿತಗಾರರಿಗೆ ಶಾಸಕರ ಖರೀದಿ ತಮ್ಮ ಸ್ವಾರ್ಥ ರಾಜಕಾರಣ ಮುಖ್ಯವಾಯಿತು.

ಈಗ ಮತ್ತದೇ ಲಾಗಾಯ್ತಿನ ಸೋಗಿನಿಂದ ಜನರನ್ನು ಮರಳುಮಾಡಬಹುದೆಂದು ಬಲವಾಗಿ ನಂಬಿರುವ ನಾಯಕತ್ವ ಅಗತ್ಯ ಕೆಲಸ, ಜವಾಬ್ಧಾರಿ ನಿರ್ವಹಿಸದೆ ಲೋಪ ಎಸಗುತ್ತಾ ದೇಶದ ಜನರನ್ನು ಕೋಡಂಗಿಗಳನ್ನಾಗಿಸುತಿದ್ದಾರೆ. ಈ ಪ್ರತಿಕ್ರೀಯೆಗಳು ಇಂದು ಪ್ರಧಾನಿ ಮೋದಿಯವರ ಭಾಷಣಕ್ಕೆ ಪ್ರತಿಕ್ರೀಯೆಯಾಗಿ ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿವೆ. ಕರೋನಾ ನಿರ್ವಹಣೆ ರೀತಿಗೆ ಕೂಡಾ ಜನರು ಇಂಥದ್ದೇ ಪ್ರತಿಕ್ರೀಯೆ ನೀಡುತ್ತಿರುವುದು ವ್ಯಾಪಕವಾಗಿದೆ. ಒಟ್ಟಾರೆ ರಸ್ತೆ, ಆಣೆಕಟ್ಟುಗಳು, ಕೃಷಿಕರ ಹೊಲಗಳೇ ದೇವಾಲಯ ಎಂದು ನಂಬಿ ಪ್ರಗತಿಯೆಡೆಗೆ ಹೆಜ್ಜೆ ಇಟ್ಟಿದ್ದ ಭಾರತಕ್ಕೆ ಈ ಕಿಂದರಜೋಗಿ ವ್ಯಕ್ತಿತ್ವದ ಜೋಕರ್ ನಾಯಕತ್ವ ಈ ಕಾಲದ ಹೊರೆ ಎಂದೇ ಭಾವಿಸಬೇಕಾಗಿದೆ.
ಹೊಂದಾಣಿಕೆ ಇಲ್ಲದ ರಾಜ್ಯದ ಆಡಳಿತ-
ಕರೋನಾ ವಿಚಾರವಾಗಿ ಜವಾಬ್ಧಾರಿಯಿಂದ ವರ್ತಿಸದ ರಾಜ್ಯದ ಆರೋಗ್ಯ ಸಚಿವರ ಕರೋನಾ ನಿರ್ವಹಣೆ, ಪ್ರಚಾರದ ಹೊಣೆಯನ್ನು ವೈದ್ಯಕೀಯ ಶಿಕ್ಷಣ ಸಚಿವರಿಗೆ ನೀಡಿದ್ದು ಎಲ್ಲರಿಗೂ ತಿಳಿದಿರುವ ಬಹಿರಂಗ ಗುಟ್ಟು. ರಾಜ್ಯದ ಉಪಮುಖ್ಯಮಂತ್ರಿ ಅಶ್ವಥ್ಥ ನಾರಾಯಣ ರಾಜ್ಯದ ಪೊಲೀಸ್ ಮುಖ್ಯಸ್ಥರು ಲಂಚ ಪಡೆದು ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದರು ಎಂದು ಬಹಿರಂಗವಾಗಿ ಆರೋಪಿಸಿದರು.

ಇದರ ನಡುವೆ ಆಡಳಿತಕ್ಕೂ, ಮುಖ್ಯಮಂತ್ರಿಗಳು, ಕೆಲವು ಜಿಲ್ಲಾಧಿಕಾರಿಗಳಿಗೆ ಉಂಟಾದ ಸಮನ್ವಯದ ಕೊರತೆಯಿಂದ ಏನೆಲ್ಲಾ ತೊಂದರೆ, ತಲ್ಲಣಗಳಾದವು. ಇದರ ಮುಂದುವರಿದ ಭಾಗವಾಗಿ ಆಡಳಿತ ಪಕ್ಷ ತಮ್ಮದೇ ಸರ್ಕಾರವಿದ್ದರೂ ಪ್ರತ್ಯೇಕವಾಗಿ ಕರೋನಾ ನಿರ್ವಹಣೆ,ಪರಿಹಾರ ಕಾರ್ಯ ಮಾಡಬೇಕೆಂದು ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಆದೇಶ ಮಾಡಿದ್ದಾರೆ. ಇವೆಲ್ಲಾ ತುಘಲಕ್ ಆಡಳಿತ ನೆನಪಿಸುತ್ತದೆ ಎಂದರೆ ಪರಿವಾರ ರುದ್ರನರ್ತನಕ್ಕಿಳಿಯುತ್ತದೆ. ಇವೆಲ್ಲಾ ದುರ್ಬಲ ನಾಯಕತ್ವದ ಅವಿವೇಕದ ಪ್ರತಿಬಿಂಬ ಎನಿಸುತ್ತಿಲ್ಲವೆ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *