ಜನರ ನಂಬಿಕೆ ಮತ್ತು ಕೊರೋನಾ ವೈರಾಣು

-ಮೇಟಿ ಮಲ್ಲಿಕಾರ್ಜುನ

ಇಡೀ ಜಗತ್ತು ಇವತ್ತು ಆತಂಕದಲ್ಲಿದೆ. ಇದೊಂದು ಭಯಾನಕವಾದ ಆತಂಕ. ಇದನ್ನು ಎದುರಿಸುವ ಬಗೆಗಳನ್ನು ಹಲವು ರೀತಿಯಲ್ಲಿ ಪ್ರಯೋಗಿಸಲಾಗುತ್ತಿದೆ. ಯಾವುದೇ ಪ್ರಯೋಗಕ್ಕೆ ಖಚಿತವಾದ ಗ್ರಹಿಕೆಯಿಲ್ಲ. ಇದನ್ನು ಒಂದು ಬಗೆಯಲ್ಲಿ ಟ್ರೈಯಲ್ ಮತ್ತು ಎರರ್ ಎಂದು ಹೇಳಬಹುದು. ಈ ವಿಧಾನ ಅತ್ಯಂತ ಹಳೆಯದು. ವೈಜ್ಞಾನಿಕ ಆವಿಷ್ಕಾರಗಳು ತಲೆಯೆತ್ತುವ ಸನ್ನಿವೇಶದಲ್ಲಿ ಈ ವಿಧಾನವನ್ನು ಬಹುವಾಗಿ ನೆಚ್ಚಿಕೊಳ್ಳಲಾಗಿತ್ತು. ಇವತ್ತು ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಯೋಗ ಮತ್ತು ಬಳಕೆಯ ಭರಾಟೆಯಲ್ಲಿರುವ ಹೊತ್ತಿನಲ್ಲಿಯೂ ಈ ಟ್ರೈಯಲ್ ಮತ್ತು ಎರರ್ ವಿಧಾನವನ್ನೇ ಅನುಸರಿಸಲಾಗುತ್ತಿದೆ.

ಅಂದರೇನಾಯ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಸರಿಸಾಟಿಯಾಗಿ ನಮ್ಮ ಸಮೂಹಗಳ ಯೋಚನಾ ಕ್ರಮಗಳಲ್ಲಿ ಬೆಳವಣಿಗೆ ಆಗಿಲ್ಲವೆಂದಾಯ್ತು. ನಮ್ಮನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ನಿಯಂತ್ರಿಸುವ, ನಡೆಸುವ ಹಾಗೂ ನಿರ್ವಹಿಸುವ ಅಸ್ತ್ರಗಳನ್ನಾಗಿ ಮಾತ್ರ ಈ ವಿಜ್ಞಾನ ಹಾಗೂ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಬದುಕಿನ ಸಾರ್ಥಕತೆಯನ್ನು ಪಡೆಯುವಲ್ಲಿ ಇವುಗಳ ಹೆಚ್ಚುಗಾರಿಕೆಯನ್ನು ನೋಡಲು ಸಾಧ್ಯವಿಲ್ಲ ಎಂದಾದರೆ ಇವುಗಳನ್ನು ನಂಬುವುದಾದರೂ ಯಾಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ನಮಗಿಲ್ಲಿ ಎದುರಾಗುತ್ತದೆ. ಮೌಢ್ಯದ ಹಾವಳಿ ಹೆಚ್ಚಾಗುತ್ತಲೇ ಇದೆ ಹೊರತು ವೈಚಾರಿಕತೆ ಬೆಳೆಯುತ್ತಿಲ್ಲ ಎಂಬ ಸಂದೇಹವನ್ನು ಇಲ್ಲಿ ನಿರಾಕರಿಸುವಂತಿಲ್ಲ. ಇಂತಹದೇ ಕಂದಕವನ್ನು ಸಂವಿಧಾನದ ಆಶಯ ಮತ್ತು ಬದುಕಿನ ಸನ್ನಿವೇಶಗಳ ನಡುವೆ ಏರ್ಪಟ್ಟಿರುವುದನ್ನು ನೋಡಬಹುದು.
ಈ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವೇನೆಂದರೆ, ದೇಶದಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಆದರೆ ಜನರು ಈ ಪರಿಸ್ಥಿತಿಯನ್ನು ಅನುಸರಿಸುವಂತೆ ಅವರ ಮನವೋಲಿಸುವಲ್ಲಿ ಸಾಕಷ್ಟು ಏರುಪೇರುಗಳು ಆಗುತ್ತಿವೆ. ಪರಿಣಾಮವಾಗಿ ಜನರಿಗೆ ಪೊಲೀಸರ ಮೇಲೆ ನಂಬಿಕೆ ಕಡಿಮೆಯಂತಲೋ ಇಲ್ಲವೇ ಪೊಲೀಸರಿಗೆ ಜನರ ಮೇಲೆ ನಂಬಿಕೆ ಕಡಿಮೆಯೆಂದೋ ವಾದಿಸಲಾಗುತ್ತಿದೆ. ಈ ನಂಬಿಕೆಯ ಪ್ರಶ್ನೆಯನ್ನು ಅಡ್ರೆಸ್ ಮಾಡುವುದಾದರೂ ಹೇಗೆ? ಜನರ ನಂಬಿಕೆಯನ್ನು ಗಳಿಸುವ ವಿಧಾನಗಳು ಕಾಲ-ದೇಶಕ್ಕೆ ಅನುಗುಣವಾಗಿ ವಿಭಿನ್ನ ರೀತಿಯಲ್ಲಿ ರೂಪುಗೊಂಡಿವೆ. ರಾಜಪ್ರಭುತ್ವದ ಇಲ್ಲವೇ ವಸಾಹತುಶಾಹಿ ಸಂದರ್ಭದಲ್ಲಿದ್ದ ನಂಬಿಕೆಯ ಸ್ವರೂಪ ಸ್ವಾತಂತ್ರ್ಯ ಹೋರಾಟದಲ್ಲಿ ಬೇರೆ ಸ್ವರೂಪದಲ್ಲಿದ್ದವು. ಈಗ ಸಂವಿಧಾನ ಅಸ್ತಿತ್ವಕ್ಕೆ ಬಂದು ಏಳು ದಶಕಗಳಾಗಿವೆ. ನಮ್ಮೀ ಸಂವಿಧಾನಕ್ಕೆ ಒಂದು ಸ್ಪಷ್ಟವಾದ ವೈಚಾರಿಕತೆಯಿದೆ. ಈ ವೈಚಾರಿಕ ಚೌಕಟ್ಟಿಗೆ ಪೂರಕವಾಗಿ ನಮ್ಮ ದೇಶದ ಜನರ ನಂಬಿಕೆಯನ್ನು ರೂಪಿಸುವುದು ತಾತ್ವಿಕವಾಗಿಯೂ ಮತ್ತು ಪ್ರಾಯೋಗಿಕವಾಗಿಯೂ ಸರಿಯಾದ ನಿಲುವು. ಅಂದರೆ ‘ನಾವು ಭಾರತೀಯರು’ ಎನ್ನುವ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಈ ದೇಶದ ಜನರ ವಿಶ್ವಾಸ ಮತ್ತು ನಂಬಿಕೆಯನ್ನು ಗಳಿಸುವುದಾಗಿದೆ. ಆದರೆ ಜಾತಿ, ಧರ್ಮ, ಪ್ರದೇಶ ಮತ್ತು ಭಾಷೆಗಳನ್ನು ನೆಲೆಯಾಗಿಸಿಕೊಂಡು ಜನರ ನಂಬಿಕೆಯನ್ನು ಪಡೆಯುವಂತಾದರೆ, ನಾವು ಭಾರತೀಯರು ಎನ್ನುವ ಸಂವಿಧಾನದ ಮಂತ್ರಕ್ಕೆ ಕುತ್ತು ಬರುತ್ತದೆ. ಐಕ್ಯತೆ ಏರ್ಪಡುವ ಜಾಗದಲ್ಲಿ ಪ್ರತ್ಯೇಕತೆ ಏರ್ಪಡುತ್ತದೆ. ಜಾತಿ ಮತಗಳ ಮೂಲಕ ಭಾರತೀಯರು ಎನ್ನುವ ಐಕ್ಯಭಾವವನ್ನು ಸಾಧಿಸಲು ಸಾಧ್ಯವಿಲ್ಲ. ಹೌದು ನಾವು ಶಾಸಕರಾಗಿ, ಸಚಿವರಾಗಿ, ಲೋಕಸಭಾ ಸದಸ್ಯರಾಗಿ, ಮುಖ್ಯಮಂತ್ರಿಯಾಗಿ ಇಲ್ಲವೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸುವಾಗ, ಬಹುತೇಕವಾಗಿ ನಮ್ಮನಮ್ಮ ನಂಬಿಕೆಯ ದೇವರ ಮೇಲೆ ಪ್ರಮಾಣ ಮಾಡಿ, ಪ್ರಮಾಣವಚನ ಸ್ವೀಕರಿಸುತ್ತೇವೆ. ಆದರೆ ಸಮುದಾಯಗಳ ಏಳ್ಗೆಯ ಪ್ರಶ್ನೆ ಇಲ್ಲವೇ ದೇಶದ ಐಕ್ಯತೆಯ ಪ್ರಶ್ನೆ ಬಂದಾಗ ಜಾತಿ, ಮತ, ಸ್ವಜನಪಕ್ಷಪಾತ ಎಲ್ಲವನ್ನೂ ಮೀರಿ ಈ ದೇಶದ ಐಕ್ಯತೆಯನ್ನು ಕಾಪಾಡುತ್ತೇವೆ ಮತ್ತು ಜನರ ಕಲ್ಯಾಣಕ್ಕಾಗಿ ಬದ್ಧರಾಗಿರುತ್ತೇವೆ ಎಂದು ಇದೇ ಪ್ರಮಾಣ ವಚನದಲ್ಲಿ ಪ್ರಮಾಣ ಮಾಡಲಾಗುತ್ತದೆ.
ನಮ್ಮ ದೇಶದ ಸಾಮಾಜಿಕ ರಚನೆಯನ್ನು ಯಥಾವತ್ತಾಗಿ ಸಂವಿಧಾನದ ಪ್ರಕಾರ ಒಪ್ಪಲು ಸಾಧ್ಯವಿಲ್ಲ. ಸಮಾಜದ ಎಷ್ಟೋ ಈ ನಿಲುವುಗಳು ಪೂರ್ವಾಗ್ರಹದಿಂದ ಕೂಡಿರುತ್ತವೆ. ಮುಖ್ಯವಾಗಿ ಜಾತಿ, ಧರ್ಮ, ಲಿಂಗ, ಪ್ರದೇಶ, ವರ್ಗ ಮತ್ತು ಭಾಷೆಗಳನ್ನು ಆಧರಿಸಿಕೊಂಡಿರುತ್ತವೆ. ಜನರನ್ನು ಪ್ರಜಾಸತ್ತಾತ್ಮಕ ನೆಲೆಗಳಲ್ಲಿ ಗುರುತಿಸದೇ ಹೋದರೆ, ಜನರ ನಂಬಿಕೆಯನ್ನು ಪಡೆಯುವುದು ದುಸ್ತರವೇ ಸರಿ. ಈ ಲಾಕ್ಡೌನ್ ಸನ್ನಿವೇಶದಲ್ಲಿ ನಾವು ಕೆಲವರನ್ನು ಗುರುತಿಸುವ ರೀತಿ ಹಾಗೂ ಕೂಲಿಕಾರ್ಮಿಕ ವಲಸಿಗರನ್ನು ನಡೆಸಿಕೊಳ್ಳುವ ವಿಧಾನಗಳನ್ನು ನೋಡಿದರೆ, ಪ್ರಜಾಸತ್ತಾತ್ಮಕ ಎಂದು ಹೇಳುವ ಈ ಸಮಾಜಗಳಲ್ಲಿ ನೆಲೆಗೊಂಡಿರುವ ಕ್ರೌರ್ಯ ಅರ್ಥವಾಗುತ್ತದೆ. ಇಂತಹ ಹಲವಾರು ನಿಲುವುಗಳು ಈ ಲಾಕ್ಡೌನ್ ಸನ್ನಿವೇಶದ ಮೇಲೆ ಪ್ರಭಾವವನ್ನು ಬೀರಿರುತ್ತಿವೆ. ಕೇವಲ ನಿರ್ಬಂಧನೆಗಳ ಮೂಲಕ ಇಲ್ಲವೇ ಪೊಲೀಸರ ಕಟ್ಟಪ್ಪಣೆಗಳ ಮುಖಾಂತರ ಎಲ್ಲವನ್ನೂ ನಿರ್ವಹಿಸಲು ಸಾಧ್ಯವಿಲ್ಲ. ಅಂತಿಮವಾಗಿ ಜನರು ಮನಸ್ಸು ಮಾಡಬೇಕಾದ ಅಗತ್ಯವಿದೆ.
ಇವತ್ತು ಎಷ್ಟೊಂದು ಜನರು ತೋಡಿಕೊಳ್ಳುತ್ತಿರುವ ತಮ್ಮೀ ಸಮಸ್ಯೆಗಳು ಕೇವಲ ಕೊರೋನಾ ವೈರಾಣುವಿನ ಹಾವಳಿಯಿಂದ ತಲೆಯೆತ್ತಿದವುಗಳಲ್ಲ. ಈ ಎಲ್ಲ ಸಮಸ್ಯೆಗಳು 1947ರ ಮೊದಲು ಇದ್ದವು ಮತ್ತು ನಂತರವೂ ಮುಂದುವರೆದಿವೆ.

ಆದರೆ ಕೆಲವು ಜಾತಿ, ಧರ್ಮ, ವರ್ಗ, ಪ್ರದೇಶ ಮತ್ತು ಭಾಷೆಗಳ ಜನರ ಬದುಕಿನ ದಾರಿಗಳು ಸುಗಮವಾಗಿವೆ. ಮತ್ತೆ ಇನ್ನೂ ಕೆಲವು ಜಾತಿ, ಧರ್ಮಗಳ ಬದುಕಿನ ಸಮಸ್ಯೆಗಳು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇವೆ. ಪರಿಣಾಮವಾಗಿ ನಾವು ಎಲ್ಲರೂ ಭಾರತೀಯರು ಎನ್ನುವ ವಿಶ್ವಾಸವನ್ನು ಗಳಿಸುವಲ್ಲಿ ಸೋತಿದ್ದೇವೆ. ಈ ದೇಶದ ಎಲ್ಲ ಜನರ ನಂಬಿಕೆಯನ್ನು ಗಳಿಸಲು ನಮಗಿರುವ ಏಕೈಕ ಮಾರ್ಗ ನಮ್ಮ ಸಂವಿಧಾನದ ‘ನಾವು ಭಾರತೀಯರು’ ಎನ್ನುವ ಧ್ಯೇಯವಾಕ್ಯ ಮಾತ್ರ. ಇದಕ್ಕೆ ಸೀಮಿತರಾಗಿ ನಮ್ಮ ನಡೆ ನುಡಿಗಳನ್ನು ಮರುರೂಪಿಸಿಕೊಳ್ಳಬೇಕು. ಅನಾದಿಕಾಲದಿಂದಲೂ ನಮ್ಮ ಸಮೂಹಗಳನ್ನು ಕಾಡುತ್ತಿರುವ ಅದೇ ಸಾಮಾಜಿಕ ಪೀಡುಗುಗಳನ್ನು ಮುಂದಿಟ್ಟುಕೊಂಡು ನಮ್ಮ ಸದ್ಯದ ಬಿಕ್ಕಟ್ಟುಗಳನ್ನು ನಿಭಾಯಿಸುವುದು ದುಸ್ತರವೇ ಸರಿ. ಹಾಗಾಗಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಶಿಖ್ಖರು ಎಂಬ ಯಾವ ಭೇದಭಾವವನ್ನು ನಮ್ಮ ಸಮೂಹಗಳಲ್ಲಿ ಹರಡದಂತೆ, ಈ ಕೊರೋನಾ ಮಹಾಮಾರಿ ವೈರಾಣುವನ್ನು ಎದುರಿಸುವ ಆತ್ಮಬಲವನ್ನು ನಮ್ಮ ಭಾರತೀಯರೆಲ್ಲರಲ್ಲೂ ಬೆಳೆಸುವ ಅಗತ್ಯವಿದೆ. ಈ ವೈರಾಣು ದೇಶದುದ್ದಕ್ಕೂ ಹರಡಲು ಇಂತಹದೇ ಜಾತಿ, ಧರ್ಮದವರು ಕಾರಣವೆಂದು ಆರೋಪ ಮಾಡಿದರೆ, ಈ ವೈರಾಣು ಜೊತೆಗೆ ಸೆಣಸಾಡುವುದಕ್ಕಿಂತ ಮಿಗಿಲಾಗಿ ಕೇವಲ ಧರ್ಮ, ಜಾತಿಗಳ ಹೆಸರಿನಲ್ಲಿ ಪರಸ್ಪರ ಸಂಘರ್ಷಕ್ಕೆ ಅಣಿಯಾಗುತ್ತೇವೆ. ಈ ದುರಿತ ಕಾಲದಲ್ಲಿ ಹೀಗೆ ದೋಷಾರೋಪವನ್ನು ಮಾಡುವುದು ಎಷ್ಟು ಸೂಕ್ತ? ನಮ್ಮ ಸಮೂಹಗಳ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಈ ನಿಲುವುಗಳು ನಮಗೆ ಹೇಗೆ ನೆರವಿಗೆ ಬರಬಲ್ಲವು? ನಮ್ಮ ದೇಶದ ಐಕ್ಯತೆಯನ್ನು ಕಾಪಾಡುವ ಹೊಣೆಗಾರಿಕೆ ನಮ್ಮದು ಎನ್ನುವ ವಿವೇಕ ಮತ್ತು ಎಚ್ಚರ ಜಾಗ್ರತವಾಗದೆ ನಮ್ಮ ನಡೆ ನುಡಿಗಳು ಬದಲಾಗುವುದಿಲ್ಲ. ಸಹಬಾಳ್ವೆಯ ಪರಿಸರವನ್ನು ರೂಪಿಸಿಕೊಳ್ಳುವುದು ಕೂಡ ಅಸಾಧ್ಯ.

ಆದ್ದರಿಂದ ಭಾರತೀಯರು ಎನ್ನುವ ಪರಿಭಾಷೆಯ ಮೂಲಕವೇ ನಮ್ಮ ದೇಶ, ಜನತೆ, ಅಭಿವೃದ್ಧಿ ಮತ್ತು ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಜರೂರಿದೆ. ಉದಾ.ಗೆ ಭಾರತೀಯರನ್ನು ಜಾತಿ, ಧರ್ಮಗಳ ಆಧಾರದ ಮೇಲೆ ಗುರುತಿಸದೇ ನಾಗರಿಕರೆಂದು, ನಮ್ಮ ನೆರೆಹೊರೆ ದೇಶಗಳನ್ನು ಅಂತರ್ರಾಷ್ಟ್ರೀಯ ಸಂಬಂಧದಲ್ಲಿ ಗುರುತಿಸುವುದು, ಈ ದೇಶದ ಎಲ್ಲ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕಗೊಳಿಸುವುದು, ಅಭಿವೃದ್ಧಿ ಪರಿಕಲ್ಪನೆ ಮತ್ತು ಯೋಜನೆಗಳನ್ನು ಭಾರತೀಯ ನಾಗರಿಕರ ಹೆಸರಲ್ಲಿ ಮಾತ್ರ ಚಾಲ್ತಿಗೆ ತರಬೇಕು ಹಾಗೂ ಯುದ್ಧ ಮತ್ತು ಶಾಂತಿಗೆ ಸಂಬಂಧಿಸಿದ ಪರಿಭಾಷೆಯೂ ನಾಗರಿಕ ಪರಿಕಲ್ಪನೆಯಲ್ಲಿಯೇ ನೆಲೆಗೊಳ್ಳಬೇಕು. ಇಲ್ಲಿ ಮತ್ತೇ ಜಾತಿ, ಧರ್ಮ, ಪ್ರದೇಶಗಳ ಪ್ರಶ್ನೆಗಳು ಮುಖ್ಯವಾದರೆ, ಇದಕ್ಕೆ ಬಲಿಪಶು ಆಗುವವರು ಸಾಮಾನ್ಯ ಜನರು ಮಾತ್ರ. ಈ ದೇಶದ ಶ್ರಿಸಾಮಾನ್ಯ ಜನರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಮತ್ತು ಅದುವೇ ನಮ್ಮ ನೈತಿಕತೆಯೂ ಆಗಬೇಕು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *