ಕೋರೋನ ಒಡ್ಡುವ ಸವಾಲುಗಳು ಮತ್ತು ಸಿದ್ಧತೆ ಹೇಗಿರಬೇಕು?

ಮುಂದಿನ ಕೆಲವು ದಿನಗಳಲ್ಲಿ ಕೋರೋನ ಭಯಂಕರ ದಿನಗಳನ್ನು ನೆನಪಿಸುತ್ತದೆ. ಸಂಪೂರ್ಣ ನಷ್ಟವನ್ನು ಅನುಭವಿಸಿರುವ ಈ ಸಂದರ್ಭದಲ್ಲಿ ನಾಗರಿಕರ ದಿನನಿತ್ಯದ ಜೀವನ ಶೈಲಿಯೂ ಕೂಡ ಬದಲಾಗಬಹುದು& ಐಷಾರಾಮಿ ಜೀವನದಿಂದ ದೂರವಿದ್ದು ಕನಿಷ್ಠ ಜೀವನವನ್ನು ಸಾಗಿಸುವರು. ಭವಿಷ್ಯತ್ತಿನಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ . ಒಂದು ದಿನ ಮುಷ್ಕರ ನಡೆದರೆ ಊಹಿಸಲಾಗದಷ್ಟು ನಷ್ಟ ಹಾಗೂ ಇಡೀ ದೇಶದ ಆರ್ಥಿಕ ಪ್ರಗತಿ ನಿಂತು ಹೋಗುತ್ತಿತ್ತು ಆದರೆ ಸುಮಾರು ಎರಡು ತಿಂಗಳು ಯಾವುದೇ ಉದ್ಯೋಗವಿಲ್ಲದೆ, ಹೊರಬರಲಾರದೆ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ನಮ್ಮ ದೇಶದ ಅಭಿವೃದ್ಧಿಯು ಸಂಪೂರ್ಣ ಕುಂಠಿತಗೊಂಡಿದೆ .ಮುಖ್ಯವಾಗಿನಮ್ಮ ದೇಶದ ಆರ್ಥಿಕ ಬೆನ್ನೆಲುಬಾದ ಕೃಷಿ ಚಟುವಟಿಕೆ ಸಂಪೂರ್ಣವಾಗಿ ನಿಂತು ಹೋಗಿದೆ. ಕೃಷಿ ಚಟುವಟಿಕೆ ಸಂಪೂರ್ಣವಾಗಿ ನಿಂತು ಹೋಗಿರುವುದು ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ ಜಗತ್ತಿನಲ್ಲಿರುವ ಎಲ್ಲ ರಾಷ್ಟ್ರಗಳಲ್ಲಿ ಕೃಷಿ ಚಟುವಟಿಕೆ ನಿಂತು ಹೋಗಿರುವದರಿಂದ ಮೊದಲಿಗೆ ಆಹಾರದ ಕೊರತೆಯುಂಟಾಗುತ್ತದೆ.
ಹೌದು ಸರ್ಕಾರವು ಆಹಾರದ ಕೊರತೆಯನ್ನು ನೀಗಿಸಲು ಎಷ್ಟೋ ವರ್ಷಗಳವರೆಗೂ ಕಷ್ಟಪಡಬೇಕಾಗುತ್ತದೆ. ದಿನನಿತ್ಯ ಕೂಡ ಕೂಲಿ ಕಾರ್ಮಿಕರು ತಮಗೆ ಬೇಕಾದ ದಿನಸಿಗೊಸ್ಕರ ಪರದಾಡಬೇಕಾಗುತ್ತದೆ.

*ವಾಣಿಜ್ಯೋದ್ಯಮ ಕೂಡ ಸಂಪೂರ್ಣವಾಗಿ ನಷ್ಟ ಅನುಭವಿಸುತ್ತದೆ.*

ಈಗಾಗಲೇ ದಿವಾಳಿಯಾಗಿರುವ ಸುಮಾರು ಉದ್ದಿಮೆಗಳು ಮತ್ತಷ್ಟು ದಿವಾಳಿತನವನ್ನು ಅನುಭವಿಸುತ್ತವೆ ಏಕೆಂದರೆ ಈ ಕರೊನ ಎಂಬ ಮಹಾಮಾರಿ ಸಂಪೂರ್ಣವಾಗಿ ಎಲ್ಲವನ್ನೂ ಸ್ತಬ್ಧ ಗೊಳಿಸಿದೆ. ಒಂದು ದಿನದ ಮುಷ್ಕರದಿಂದಾಗಿ ಎಷ್ಟೊ ಖಾಸಗಿ ಕಂಪನಿಗಳು ಕಾರ್ಮಿಕರ ಒಂದು ದಿನದ ವೇತನವನ್ನು ಕಡಿತಗೊಳಿಸಿದ ಉದಾಹರಣೆ ಇದೆ.

*ಅತಿಹೆಚ್ಚು ಕಾರ್ಮಿಕ ವರ್ಗವನ್ನು ನಿರೀಕ್ಷಿಸಬಹುದು.*

ಲಾಕ್ಡೌನ್ ಆಗಿ ಪ್ರತಿಯೊಬ್ಬರು ಒಂದು ತುತ್ತಿಗೂ ಕೂಡ ಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಮುಂದೆ ಲಾಕ್ಡೌನ್ ತೆರವು ಆದನಂತರ ಪ್ರತಿಯೊಬ್ಬರೂ ಕೂಡ ಯಾವುದೇ ಕೆಲಸ ಸಿಕ್ಕರೂ ನಾನದನ್ನು ಮಾಡಬಲ್ಲೆ ಎಂಬ ದೃಢ ನಿರ್ಧಾರಕ್ಕೆ ಬಂದರು ಆಶ್ಚರ್ಯಪಡಬೇಕಿಲ್ಲ ಇದರಿಂದ ಉದ್ಯೋಗದ ಕೊರತೆ ಸಂಭವಿಸುತ್ತದೆ.

*ಜನಸಾಮಾನ್ಯರ ಆರ್ಥಿಕ ಮುಗ್ಗಟ್ಟು*

ಮುಖ್ಯವಾಗಿ ಬಡವರು ತಮ್ಮ ಜೀವನೋಪಾಯಕ್ಕೆ ಕಾಯ್ದಿರಿಸಿದ ಆಸ್ತಿ ಒಡವೆ ಬೆಲೆಬಾಳುವ ವಸ್ತುಗಳನ್ನು ಮರಾಟ ಮಾಡುವ ಸಂದರ್ಭ ಬಂದರು ಅಚ್ಚರಿ ಪಡಬೇಕಾಗಿಲ್ಲ

*ಎರಡು ವರ್ಷಗಳವರೆಗೂ ಕೂಡ ಸರ್ಕಾರದ ಖಜಾನೆ ಖಾಲಿಯಾಗಿರುವುದು.*

ಒಂದು ಕುಟುಂಬ ಯಾವ ರೀತಿಯಾಗಿ ನಷ್ಟವನ್ನು ಅನುಭವಿಸಿದಾಗ ಕೇವಲ ದಿನನಿತ್ಯದ ಬಗ್ಗೆ ಚಿಂತಿಸುತ್ತದೆ ಹಾಗೆ ಬಂದು ಸರ್ಕಾರವೂ ಕೂಡ ತನ್ನ ಪ್ರಜೆಗಳ ಒಳಿತಿಗಾಗಿ ಅವರ ಜೀವನೋಪಾಯಕ್ಕೆ ಬೇಕಾಗುವಂತಹ ಸಾಮಗ್ರಿಗಳನ್ನು ಸಂಗ್ರಹಿಸಲು ಪರದಾಡಬೇಕಾಗುತ್ತದೆ ಇದರಿಂದ ಎರಡು ವರ್ಷಗಳವರೆಗೂ ಕೂಡ ಸರ್ಕಾರದ ಖಜಾನೆ ಖಾಲಿಯಾಗಿರುವುದು. .

*ಬಡವ ಶ್ರೀಮಂತ ಎಂಬ ಭೇದ-ಭಾವ ಹೆಚ್ಚಾಗುತ್ತದೆ.*

ಇನ್ನು ಮುಂದೆ ಉಳ್ಳವರು ಬಡವರ ನಡುವೆ ತುಂಬಾನೇ ವ್ಯತ್ಯಾಸವಿರುತ್ತದೆ ಏಕೆಂದರೆ ತಮ್ಮ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದ ಶ್ರಮಿಕ ವರ್ಗವನ್ನು ಉಳ್ಳವರು ಪರಿಸ್ಥಿತಿಯ ಲಾಭ ಪಡೆದು ಮತ್ತೆ ಜೀತಪದ್ಧತಿಗೆ ದೂಡಬಹುದು.

*ಸಾಮಾಜಿಕ ಅನೋನ್ಯತೆಗೆ ಮಾರಕ.*

ಮಡಿಯಿಂದ ಜನರನ್ನು ಮೊದಲೇ ದೂರವಿಡುತ್ತಿದ್ದ ಕೆಲವೊಂದು ವರ್ಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎನ್ನುವ ಕೋರೋನ ಮಹಾಮಾರಿಯ ಸಾಮಾಜಿಕ ಅಂತರ ಕೆಲವೊಬ್ಬರ ಬಂಡವಾಳವಾಗಿ ಕೂಡ ಸಾಮಾಜಿಕವಾಗಿ ಭೇದ-ಭಾವವನ್ನು ಸೃಷ್ಟಿಸಬಹುದು.

*ಯುವ ಪೀಳಿಗೆಗೆ ಉದ್ಯೋಗದ ಕೊರತೆ.*

ಮೊದಲೇ ಉದ್ಯೋಗದ ಅಭಾವ ಎದುರಿಸುತ್ತಿರುವಂತಹ ನವ ಪೀಳಿಗೆ ಮುಂದೆ ಉದ್ಯೋಗದ ಕೊರತೆಯನ್ನು ಅನುಭವಿಸುತ್ತದೆ ಏಕೆಂದರೆ ಈಗಾಗಲೇ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವುದರಿಂದ ಹೊಸ ಹುದ್ದೆಗಳನ್ನು ಸೃಷ್ಟಿಸುವುದು ಕೇವಲ ನಿರೀಕ್ಷೆ ಅಷ್ಟೇ ಸರಿ .

*ಕೆಲವು ಖಾಸಗಿ ಬ್ಯಾಂಕುಗಳು ದಿವಾಳಿತನವನ್ನು ಅನುಭವಿಸುತ್ತವೆ.*

ಇಡೀ ದೇಶವೇ ಲಾಕ್ ಡೌನದಿಂದ ಸ್ತಬ್ಧವಾಗಿರುವಾಗ
ಈ ಸಂದರ್ಭದಲ್ಲಿ ಕೆಲಸವಿಲ್ಲದೆ ಎಲ್ಲರೂ ಕೈಚೆಲ್ಲಿ ಕುಳಿತಿರುವಾಗ ಬ್ಯಾಂಕುಗಳು ಈಗಾಗಲೇ ನೀಡಿರುವಂತಹ ಸಾಲದ ಮರುಪಾವತಿಗೆ ಪರದಾಡುವ ಪರಿಸ್ಥಿತಿ ಬರುತ್ತದೆ. ಗ್ರಾಹಕರು ತಮ್ಮ ಈ ಸಾಲದ ಮರುಪಾವತಿಯನ್ನು ಸರಿಯಾಗಿ ಮರು ಪಾವತಿಸದೆ ಇರುವುದರಿಂದ ಕೆಲವು ಬ್ಯಾಂಕುಗಳು ದಿವಾಳಿತನವನ್ನು ಅನುಭವಿಸಬಹುದು. ಹೀಗೆ ಕೋರೋನ ಇನ್ನು ಹತ್ತು ಹಲವಾರು ಭಯಾನಕ ಸನ್ನಿವೇಶಗಳನ್ನು ನಮ್ಮ ಕಣ್ಣೆದುರಿಗೆ ತಂದೊಡ್ಡುತ್ತದೆ.

*ಶೈಕ್ಷಣಿಕ ವ್ಯವಸ್ಥೆಯ ಬುಡಮೇಲು ಮಾಡಿದೆ.*

ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯ ಕ್ಯಾಲೆಂಡರ್ ನ್ನು ಬುಡಮೇಲು ಮಾಡಿರುವುದರಿಂದ ಅಹ೯ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಮತ್ತು ಉನ್ನತ ಶಿಕ್ಷಣಕ್ಕೆ ಯಾವ ಮಾನದಂಡವನ್ನು ಅನುಸರಿಸಬೇಕೆಂಬುದು ಯಕ್ಷಪ್ರಶ್ನೆಯಾಗಿದೆ ಇದರಿಂದ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಕಷ್ಟಪಟ್ಟು ಶ್ರಮಿಸಿದ ನಿಜವಾದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ.

*ಕೊರೊನಾ ಒಡ್ಡುವ ಸವಾಲುಗಳಿಗೆ ಸಿದ್ಧತೆ ಹೇಗಿರಬೇಕು?*

ಸರ್ಕಾರವು ಕೃಷಿ ಚಟುವಟಿಕೆಗೆ ಹೆಚ್ಚು ಒತ್ತು ಕೊಡಬೇಕು. ರೈತರಿಗೆ ಬೇಕಾಗುವಂತಹ ಬೀಜ ಗೊಬ್ಬರವನ್ನು ಹಾಗೂ ಕೃಷಿಗೆ ಬೇಕಾಗುವಂತಹ ಸಾಮಗ್ರಿಗಳನ್ನು ಪ್ರಥಮ ಪ್ರಾಶಸ್ತ್ಯ ಎಂದು ಪೂರೈಸಬೇಕು ಇಲ್ಲವಾದಲ್ಲಿ ಭಯಂಕರವಾದ ಆಹಾರದ ಕೊರತೆಯನ್ನು ಅನುಭವಿಸುತ್ತೆವೆ.
ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಟಿಸುವುದು.
ಅತಿ ಕಷ್ಟದಲ್ಲಿ ದಿನಗಳನ್ನು ದೂಡುತ್ತಿರುವ ಕಡುಬಡವರಿಗೆ ಹಾಗೂ ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಬಹುಮುಖ್ಯ ಕರ್ತವ್ಯವಾಗಿದೆ.
ಶಿಕ್ಷಣ ವ್ಯವಸ್ಥೆಯನ್ನು ಸರಳಿಕರಣಗೊಳಿಸಿ ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕ ತೊಂದರೆ ಆಗದಂತೆ ಶಿಕ್ಷಣವನ್ನು ನೀಡುವುದು ಪಠ್ಯಪುಸ್ತಕಗಳ ಹೊರೆಯನ್ನು ಕಡಿಮೆ ಮಾಡುವುದು ಹಾಗೂ ಅವುಗಳಿಂದ ವಿದ್ಯಾರ್ಥಿಗಳಿಗೆ ಆಗುವಂತಹ ಆರ್ಥಿಕ ತೊಂದರೆಯನ್ನು ಕಡಿಮೆ ಮಾಡಿ ಆನ್ಲೈನ್ ತರಗತಿಗಳಿಗೆ ಹೆಚ್ಚು ಒತ್ತುಕೊಡುವುದು. ಮತ್ತೊಂದು ಬಹುಮುಖ್ಯ ಬದಲಾವಣೆಯೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸುವಂತಹ ಅತಿಹೆಚ್ಚು ಶುಲ್ಕವನ್ನು ಕಡಿಮೆ ಮಾಡುವುದು ಇದರಿಂದ ಆರ್ಥಿಕ ನಷ್ಟವನ್ನು ಕೂಡ ತಪ್ಪಿಸಬಹುದು.
ವಾಣಿಜ್ಯೋದ್ಯಮ ಮತ್ತು ದೇಶದ ಆರ್ಥಿಕತೆಯನ್ನು ಸುಧಾರಿಸಲು ಸರಕಾರ ಪ್ರಥಮ ಆದ್ಯತೆ ನೀಡಿ ಹೆಚ್ಚು ಉದ್ಯೋಗವನ್ನು ಸೃಷ್ಟಿಸಬೇಕು.

ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನವಷ್ಟೇ ಎನ್ನಬಹುದು.

-ಡಾ.ರಾಜು ಟಿ.ಮಾಳಗಿಮನಿ
ಉಪನ್ಯಾಸಕರು
ಎಸ್ ಡಿ ಎಂ ಪಿ ಯು ಕಾಲೇಜ್ ಹೊನ್ನಾವರ್.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *