ಭಟ್ಕಳದಲ್ಲಿ ಕರೋನಾ ಗೆದ್ದ ಕತೆ ಗೊತ್ತಾ? no more lock down -dc harish kumar

ಭಟ್ಕಳವೆಂದರೆ…

ನಡುಗುವಂತಹ ಪ್ರಚಾರ ಪಡೆದಿದ್ದ ಭಟ್ಕಳಕ್ಕೆ ಮೊದಮೊದಲು ಕರೋನಾ ವಕ್ಕರಿಸಿದ್ದು ಕಾಕತಾಳೀಯ. ಆದರೆ ಅಲ್ಲಿಯ ಕರೋನಾ ಗೆದ್ದ ಕತೆಇದೆಯಲ್ಲ ಅದು ಜಿಲ್ಲಾಡಳಿತದ ಸಾಹಸವೇ ಸರಿ.
ಹೌದು, ಹೆಚ್ಚುಜನ ವಿದೇಶದಲ್ಲಿರುವ ಭಟ್ಕಳದಲ್ಲಿ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಕರೋನಾ ಸೋಂಕು ದೃಢಪಡುತಿದ್ದಂತೆ ಉತ್ತರಕನ್ನಡ ಜಿಲ್ಲೆಯೇನು, ರಾಜ್ಯಕ್ಕೆ ರಾಜ್ಯವೇ ದಂಗುಬಡಿದಿತ್ತು. ಹೀಗೆ ರಾಜ್ಯದ ಜನರನ್ನು ದಂಗುಬಡಿಸುವಂತೆ ಭಟ್ಕಳದಲ್ಲಿ ಕೋವಿಡ್ 19 ರುದ್ರನರ್ತನ ನಡೆದಿತ್ತು.

ಪ್ರಾರಂಭದಲ್ಲಿ ವಿದೇಶದಿಂದ ಬಂದವರು ಭಟ್ಕಳಕ್ಕೆ ಕರೋನಾ ಸೋಂಕು ತಂದರು.ನಂತರ ಮಂಗಳೂರಿನ ಆಸ್ಫತ್ರೆಗೆ ಹೋದವರು ಕರೋನಾ ಪೀಡಿತರಾದರು, ಉಳಿದಂತೆ ವಿದೇಶದಿಂದ ಬಂದ ಬಹುತೇಕರಲ್ಲಿ ಕರೋನಾ ದೃಢ ಪಟ್ಟಿದ್ದೇ, ಪಟ್ಟಿದ್ದು. ಮಕ್ಕಳು, ವೃದ್ಧರು ಅವರಿವರೆನ್ನದೆ ವಯಸ್ಸು, ಲಿಂಗಬೇಧ ವಿಲ್ಲದೆ ಭಟ್ಕಳದಲ್ಲಿ ಸೋಕುದೃಢ ಪಡತೊಡಗಿದಂತೆ ಉತ್ತರ ಕನ್ನಡಕ್ಕೆ ಕೆಟ್ಟ ಹೆಸರು,ಜಿಲ್ಲಾಡಳಿತಕ್ಕೆ ದೊಡ್ಡ ಜವಾಬ್ಧಾರಿ, ಸುತ್ತತೊಡಗಿತ್ತು.

ಜಿಲ್ಲಾಧಿಕಾರಿ ಹರೀಶ್ ಕುಮಾರ ಕೆ., ಜಿ.ಪಂ. ಮುಖ್ಯ ಕಾರ್ಯದರ್ಶಿ ಮಹಮದ್ ರೋಶನ್ ಭಟ್ಕಳದ ಕರೋನಾ ತೊಂದರೆಯನ್ನು ಸವಾಲಾಗಿ ತೆಗೆದುಕೊಂಡರು. ಬರೋಬ್ಬರಿ 70 ದಿವಸಗಳ ಕಾಲ ಭಟ್ಕಳದಲ್ಲಿ ಒಂದೆರಡು ಕಡೆ ಕಂಟೇನ್‍ಮೆಂಟ್ ಮಾಡಲಾಯಿತು. ಒಂದೊಂದೇ ಕೇಸು ಭಟ್ಕಳದಿಂದ ಕಾರವಾರಕ್ಕೆ ಚಿಕಿತ್ಸೆಗೆ ಸಾಗತೊಡಗಿದಂತೆ ಇವರೆಲ್ಲಾ ಮರಳಿ ಬರುತ್ತಾರೆಯೆ? ಎನ್ನುವ ಪ್ರಶ್ನೆ ಸ್ಥಳೀಯರಲ್ಲಿತ್ತು.

ಆದರೆ, ಭಟ್ಕಳದ ಮುಕ್ಕಾಲುಶತಕ ಕರೋನಾ ಪೀಡಿತರಲ್ಲಿ ಈಗ ಬಹುತೇಕ ಎಲ್ಲರೂ ಗುಣಮುಖರಾಗಿದ್ದಾರೆ. ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ ಕೆ. ಅವರ ಮಾತಿನಲ್ಲೇ ಕೇಳಬೇಕೆಂದರೆ….
ನಾವು ಭಟ್ಕಳದ ಕರೋನಾ ವಿಷಯವನ್ನು ಸವಾಲಾಗಿ ತೆಗೆದುಕೊಂಡೆವು. ರಾಜ್ಯದಲ್ಲಿ ಮೊಟ್ಟ ಮೊದಲು ಸಂಪೂರ್ಣ ಸಮೀಕ್ಷೆ ನಡೆಸಿದೆವು. ನಂತರ ಚಿಕಿತ್ಸೆ, ಕರೋನಾ ಸೋಂಕು ವಿಸ್ತರಿಸದಂತೆ ಮುಂಜಾಗ್ರತೆ ವಹಿಸಿದೆವು. ಈ ನಾಲ್ಕು ತಿಂಗಳುಗಳಲ್ಲಿ ಭಟ್ಕಳ ತನ್ನ ಪರಿಸ್ಥಿತಿಯನ್ನೇ ಬದಲಿಸುವ ಅಪಾಯವಿತ್ತು. ಆದರೆ ಎಲ್ಲವೂ ಸರಳವಾಗಿಯೇ ನಡೆಯಿತು. ನಾವು ಸ್ಥಳೀಯರು,ಕೋವಿಡ್ ಕಾರ್ಯಕರ್ತರ ನೆರವಿನಿಂದ ಅಪಾಯದಿಂದ ಪಾರಾದೆವು.
…..ಹೀಗೆ ಕರೋನಾ ಪೀಡಿತ ತಾಲೂಕು, ಕೇಂದ್ರವಾಗಬೇಕಿದ್ದ ಭಟ್ಕಳ ಈಗ ಕರೋನಾ ಗೆದ್ದ ತಾಲೂಕಾಗಿದೆ. ಇದೇ ರೀತಿ ಜಿಲ್ಲೆ, ರಾಜ್ಯ ದೇಶದಲ್ಲಿ ತಿಳುವಳಿಕೆ,ಮುಂಜಾಗ್ರತೆ, ಜವಾಬ್ಧಾರಿ, ಸಮೂದಾಯದ ಸಹಭಾಗಿತ್ವದಿಂದ ಕರೋನಾ ಗೆಲ್ಲಬಹುದು.

ಸಿದ್ಧಾಪುರದಂಥ ಮಲೆನಾಡಿನ ಸುಂದರ ಪರಿಸರದಲ್ಲಿ ಕರೋನಾ ವಿರುದ್ಧ ಜಯಿಸದಿದ್ದರೆ ಜಗತ್ತಿನಲ್ಲೇಲ್ಲೂ ಕೋವಿಡ್ ನಿಂದ ಬಚಾವಾಗುವುದು ಕಷ್ಟ.
ಹಾಗಾಗಿ ಸಾಮೂಹಿಕ, ಸಾಮೂದಾಯಿಕ ಜವಾಬ್ಧಾರಿಯಾಗಿ ನಾವೆಲ್ಲಾ ಮುತುವರ್ಜಿಯಿಂದ ಕೆಲಸ ಮಾಡಿದರೆ ಕರೋನಾ ಗೆಲ್ಲುವುದು ಕಷ್ಟವಲ್ಲ, ಎನ್ನುತ್ತಾ ಭಟ್ಕಳದೊಂದಿಗೆ, ಉತ್ತರ ಕನ್ನಡದ ಸ್ಥಿತಿಯನ್ನು ತುಲನಾತ್ಮಕವಾಗಿ ಸಿದ್ಧಾಪುರದ ಕಾರ್ಯಕ್ರಮದಲ್ಲಿ ತಿಳಿಸಿದ ಜಿಲ್ಲಾಧಿಕಾರಿಗಳು ಕೋವಿಡ್ ಕಾರ್ಯಕರ್ತರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು.


ಮುಂದೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ, ಕರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಮಾತ್ರವೇ ಪರಿಹಾರವೂ ಅಲ್ಲ, ಹಾಗಾಗಿ ಜೀವದಷ್ಟೆ, ಜೀವನ ಮುಖ್ಯ, ಬದುಕುಮಾಡಬೇಕಾದರೆ ಬದುಕಿರುವುದು ಮುಖ್ಯ. ಉತ್ತರ ಕನ್ನಡ ಜಿಲ್ಲಾ ಕೇಂದ್ರದಲ್ಲಿ 300 ಜನರಿಗೆ ಕರೋನಾ ಚಿಕಿತ್ಸೆಗೆ ವ್ಯವಸ್ಥಿತ ಸಂರಚನೆ ಇದೆ. ಆದರೆ ಅಲ್ಲಿ 30 ಜನ ಕೋವಿಡ್ ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತಿದ್ದಾರೆ. ಆದರೆ ಅನುಕೂಲವಿದ್ದವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ. ಆರೋಗ್ಯದೊಂದಿಗೆ ಆರ್ಥಿಕತೆ ಒಟ್ಟಾಗಿ ಸಾಗಬೇಕು. ಆ ವಾತಾವರಣಕ್ಕೆ ಕಾಲವೂ ಪಕ್ವವಾಗಿದೆ, ಜನರೂ ಸಿದ್ಧರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಉಪನ್ಯಾಸದ ಮಾದರಿಯ ಒಂದು ತಾಸಿನ ತರಬೇತಿ, ತಿಳುವಳಿಕೆಯ ಬಾಷಣಕ್ಕೆ ಪೂರ್ಣ ವಿರಾಮ ಇಡುತ್ತಲೇ 200 ಕ್ಕೂ ಹೆಚ್ಚು ಜನರಿದ್ದ ಶಂಕರಮಠದ ಆವರಣದಲ್ಲಿ ಚಪ್ಪಾಳೆಗಳ ಸುರಿಮಳೆ. ಅಷ್ಟಕ್ಕೆ ಭಟ್ಕಳದೊಂದಿಗೆ ಉತ್ತರಕನ್ನಡವೂ ಕೋವಿಡ್ ಗೆದ್ದಂತೆ ಭಾಸವಾಗಿದ್ದು ಸುಳ್ಳಲ್ಲ.

(ನಿನ್ನೆ ಸುದ್ದಿ)
ರಾಜ್ಯಾದ್ಯಂತ ಮಾಸ್ಕ್ ದಿನ ಆಚರಣೆ, ಭೂಸುಧಾರಣೆ ಕಾಯಿದೆ ತಿದ್ದುಪಡಿಗೆ ವಿರೋಧ
ಇಂದು ರಾಜ್ಯದಾದ್ಯಂತ ಮಾಸ್ಕ್ ದಿನ ಆಚರಿಸಲಾಗಿದ್ದು ಮುಖಗವಸು ಕಟ್ಟಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಬಳಕೆಯ ಉಪಯೋಗಗಳನ್ನು ತಿಳಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯಲ್ಲೂ ಸ್ಥಳಿಯ ಆಡಳಿತಗಳು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಸಿದವು. ಸಿದ್ಧಾಪುರದಲ್ಲಿ ನಗರದಲ್ಲಿ ಮರವಣಿಗೆ ನಡೆಸಿದ ಕೋವಿಡ್ ಕಾರ್ಯಕರ್ತರು ಚಂದ್ರಗುತ್ತಿ ವೃತ್ತದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಮಾಸ್ಕ್ ಪ್ರಯೋಜನ ಮತ್ತು ಮಾಸ್ಕ್ ದಿನದ ಮಹತ್ವ ಸಾರಿದರು………..for more details visit-samajamukhi.net

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *