ಮತ್ತೆ ಬರುತಿದ್ದಾರೆ ಶಂಕರ್!

ಶಂಕರ್ ಸಿ.ಎ. 30 ವರ್ಷಗಳ ಹಿಂದಿನ ದೊಡ್ಡ ಹೆಸರು.

ಸಿದ್ಧಾಪುರದಂಥ ಸಾಂಪ್ರದಾಯಿಕ ಹಳ್ಳಿಯಂಥ ತಾಲೂಕಿನಲ್ಲಿ ಆ ಕಾಲದಲ್ಲೇ ಡಿ.ಎಸ್.ಎಸ್. ನ ಪ್ರತಿಭಟನೆಗಳು ನಡೆಯುತಿದ್ದವು. ಚಳವಳಿ ಕಾವೇರುತಿದ್ದ ಕಾಲದಲ್ಲಿ ಹೋರಾಟವನ್ನು ಹತ್ತಿಕ್ಕಿದ ರಾಮಕೃಷ್ಣ ಹೆಗಡೆಯಂಥ ಮುಖ್ಯಮಂತ್ರಿಯವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಿದ್ದ ಯುವಕ ಸಿ.ಎ.ಶಂಕರ್ ಈ ಹೋರಾಟ, ಚಳವಳಿಗಳಿಂದ ಹಿಂದೆ ಸರಿದು ಶಿಕ್ಷಕರಾಗಿಬಿಟ್ಟಿದ್ದರು.

ಶಿಕ್ಷಕರಾಗುವ ಮೊದಲು ಪ್ರಗತಿಪರರ ವೇದಿಕೆ ಕಟ್ಟಿಕೊಂಡು ಪಟ್ಟಭದ್ರರಿಗೆ ಸಿಂಹಸ್ವಪ್ನವಾಗಿರುತಿದ್ದ ಕಾವಂಚೂರು ಹಿತ್ತಲಕೊಪ್ಪದ ಶಂಕರ್ ನೀನಾಸಂಗೆ ನಡೆದರು. ನೀನಾಸಂ ನಲ್ಲಿ ಕೂಡಾ ಬಂಡಾಯದಿಂದಲೇ ಹೆಸರಾಗಿದ್ದ ಶಂಕರ್ ಸಿದ್ಧಾಪುರದಲ್ಲಿ ಮುನಿವೆಂಕಟಪ್ಪನವರ ನೇತೃತ್ವದಲ್ಲಿ ನಡೆದ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೂ ದುಡಿದಿದ್ದರು.

ಡಿ.ಎಸ್.ಎಸ್. ನ ಹಾಡು, ರೈತ ಸಂಘ, ಪ್ರಗತಿಪರ ಸಂಘಟನೆಗಳ ಹೋರಾಟ, ಚಳವಳಿಯ ಎಳೆಯ ಹುಡುಗನಾಗಿದ್ದ ಶಂಕರ್ ಸರಳವಿವಾಹದ ಮೂಲಕ 30 ವರ್ಷಗಳ ಹಿಂದೇ ಸುದ್ದಿಮಾಡಿದ್ದರು. ಹೀಗೆ ಬಂಡಾಯ, ಹೋರಾಟಗಳ ಮೂಲಕ ಜನಪರವಾಗಿ, ಜನಸಾಮಾನ್ಯನ ಪರವಾಗಿ ಧ್ವನಿ ಮಾಡುತಿದ್ದ ಶಂಕರ್ ಶಿಕ್ಷಕರಾಗಿ ತೆರೆಯಿಂದ ಮರೆಯಾಗಿದ್ದರು.

ಮೊನ್ನೆ ಜುಲೈ ಕೊನೆಗೆ ಶಂಕರ್ ಸಾಗರದಲ್ಲಿ ನಿವೃತ್ತರಾದರು. ಸಾಗರದಿಂದ ಸೇವೆಪ್ರಾರಂಭವಾಗಿ ಸಾಗರದಲ್ಲಿ ನಿವೃತ್ತರಾಗುವ ನಡುವಿನ ಻ಅವಧಿಯಲ್ಲಿ ಶಂಕರ್ ಸಿ.ಎ. ದಾಂಡೇಲಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಸೇವೆಯಲ್ಲಿನ ಕಟ್ಟುಪಾಡುಗಳ ನಡುವೆ ದೀನ, ದಲಿತರು,ದುರ್ಬಲವರ್ಗದವರು, ಅಸಹಾಯಕರ ನೆರವಿಗೆ ಧಾವಿಸುತಿದ್ದ ಶಂಕರ್ ಈಗ ತಮ್ಮ ಸೇವೆಯಿಂದ ನಿವೃತ್ತರಾಗಿದ್ದು ಮತ್ತೆ ಸಿದ್ಧಾಪುರ, ಉತ್ತರ ಕನ್ನಡದಲ್ಲಿ ದಲಿತಸಂಘರ್ಷ ಸಮೀತಿ,ಪ್ರಗತಿಪರರ ಒಕ್ಕೂಟ ಕಟ್ಟುವ ಉತ್ಸಾಹದಲ್ಲಿದ್ದಾರೆ.

ಕಲೆ,ಸಂಸ್ಕೃತಿ, ಸಾಹಿತ್ಯ,ಸಾಮಾಜಿಕ ಬದುಕಿನ ನಿರಂತರ ಹೋರಾಟಗಾರರಾಗಿರುವ ಶಂಕರ್ ಅವರಿಗೆ ಈಗ ಸರ್ಕಾರ, ವ್ಯವಸ್ಥೆಯ ಬಂಧನ ಕಳಚಿಕೊಂಡ ಻಻ಅನುಭವ. ಅವರ ಆಗಮನ,ಅಭಿಲಾಷೆ, ಹೋರಾಟದ ಬದ್ಧತೆಗಳನ್ನು ಕಂಡಿರುವ ಻ಅವರ ಻ಅನೇಕ ಸ್ನೇಹಿತರು ಅವರ ಸೇವಾ ನಿವೃತ್ತಿಗೆ ಶುಭಕೋರಿ ಕಾಲುಶತಮಾನದ ನಂತರದ ಹೋರಾಟದ ಬದುಕಿಗೆ ಶುಭ ಹಾರೈಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *