ಮತ್ತೆ ಬರುತಿದ್ದಾರೆ ಶಂಕರ್!

ಶಂಕರ್ ಸಿ.ಎ. 30 ವರ್ಷಗಳ ಹಿಂದಿನ ದೊಡ್ಡ ಹೆಸರು.

ಸಿದ್ಧಾಪುರದಂಥ ಸಾಂಪ್ರದಾಯಿಕ ಹಳ್ಳಿಯಂಥ ತಾಲೂಕಿನಲ್ಲಿ ಆ ಕಾಲದಲ್ಲೇ ಡಿ.ಎಸ್.ಎಸ್. ನ ಪ್ರತಿಭಟನೆಗಳು ನಡೆಯುತಿದ್ದವು. ಚಳವಳಿ ಕಾವೇರುತಿದ್ದ ಕಾಲದಲ್ಲಿ ಹೋರಾಟವನ್ನು ಹತ್ತಿಕ್ಕಿದ ರಾಮಕೃಷ್ಣ ಹೆಗಡೆಯಂಥ ಮುಖ್ಯಮಂತ್ರಿಯವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಿದ್ದ ಯುವಕ ಸಿ.ಎ.ಶಂಕರ್ ಈ ಹೋರಾಟ, ಚಳವಳಿಗಳಿಂದ ಹಿಂದೆ ಸರಿದು ಶಿಕ್ಷಕರಾಗಿಬಿಟ್ಟಿದ್ದರು.

ಶಿಕ್ಷಕರಾಗುವ ಮೊದಲು ಪ್ರಗತಿಪರರ ವೇದಿಕೆ ಕಟ್ಟಿಕೊಂಡು ಪಟ್ಟಭದ್ರರಿಗೆ ಸಿಂಹಸ್ವಪ್ನವಾಗಿರುತಿದ್ದ ಕಾವಂಚೂರು ಹಿತ್ತಲಕೊಪ್ಪದ ಶಂಕರ್ ನೀನಾಸಂಗೆ ನಡೆದರು. ನೀನಾಸಂ ನಲ್ಲಿ ಕೂಡಾ ಬಂಡಾಯದಿಂದಲೇ ಹೆಸರಾಗಿದ್ದ ಶಂಕರ್ ಸಿದ್ಧಾಪುರದಲ್ಲಿ ಮುನಿವೆಂಕಟಪ್ಪನವರ ನೇತೃತ್ವದಲ್ಲಿ ನಡೆದ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೂ ದುಡಿದಿದ್ದರು.

ಡಿ.ಎಸ್.ಎಸ್. ನ ಹಾಡು, ರೈತ ಸಂಘ, ಪ್ರಗತಿಪರ ಸಂಘಟನೆಗಳ ಹೋರಾಟ, ಚಳವಳಿಯ ಎಳೆಯ ಹುಡುಗನಾಗಿದ್ದ ಶಂಕರ್ ಸರಳವಿವಾಹದ ಮೂಲಕ 30 ವರ್ಷಗಳ ಹಿಂದೇ ಸುದ್ದಿಮಾಡಿದ್ದರು. ಹೀಗೆ ಬಂಡಾಯ, ಹೋರಾಟಗಳ ಮೂಲಕ ಜನಪರವಾಗಿ, ಜನಸಾಮಾನ್ಯನ ಪರವಾಗಿ ಧ್ವನಿ ಮಾಡುತಿದ್ದ ಶಂಕರ್ ಶಿಕ್ಷಕರಾಗಿ ತೆರೆಯಿಂದ ಮರೆಯಾಗಿದ್ದರು.

ಮೊನ್ನೆ ಜುಲೈ ಕೊನೆಗೆ ಶಂಕರ್ ಸಾಗರದಲ್ಲಿ ನಿವೃತ್ತರಾದರು. ಸಾಗರದಿಂದ ಸೇವೆಪ್ರಾರಂಭವಾಗಿ ಸಾಗರದಲ್ಲಿ ನಿವೃತ್ತರಾಗುವ ನಡುವಿನ ಻ಅವಧಿಯಲ್ಲಿ ಶಂಕರ್ ಸಿ.ಎ. ದಾಂಡೇಲಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಸೇವೆಯಲ್ಲಿನ ಕಟ್ಟುಪಾಡುಗಳ ನಡುವೆ ದೀನ, ದಲಿತರು,ದುರ್ಬಲವರ್ಗದವರು, ಅಸಹಾಯಕರ ನೆರವಿಗೆ ಧಾವಿಸುತಿದ್ದ ಶಂಕರ್ ಈಗ ತಮ್ಮ ಸೇವೆಯಿಂದ ನಿವೃತ್ತರಾಗಿದ್ದು ಮತ್ತೆ ಸಿದ್ಧಾಪುರ, ಉತ್ತರ ಕನ್ನಡದಲ್ಲಿ ದಲಿತಸಂಘರ್ಷ ಸಮೀತಿ,ಪ್ರಗತಿಪರರ ಒಕ್ಕೂಟ ಕಟ್ಟುವ ಉತ್ಸಾಹದಲ್ಲಿದ್ದಾರೆ.

ಕಲೆ,ಸಂಸ್ಕೃತಿ, ಸಾಹಿತ್ಯ,ಸಾಮಾಜಿಕ ಬದುಕಿನ ನಿರಂತರ ಹೋರಾಟಗಾರರಾಗಿರುವ ಶಂಕರ್ ಅವರಿಗೆ ಈಗ ಸರ್ಕಾರ, ವ್ಯವಸ್ಥೆಯ ಬಂಧನ ಕಳಚಿಕೊಂಡ ಻಻ಅನುಭವ. ಅವರ ಆಗಮನ,ಅಭಿಲಾಷೆ, ಹೋರಾಟದ ಬದ್ಧತೆಗಳನ್ನು ಕಂಡಿರುವ ಻ಅವರ ಻ಅನೇಕ ಸ್ನೇಹಿತರು ಅವರ ಸೇವಾ ನಿವೃತ್ತಿಗೆ ಶುಭಕೋರಿ ಕಾಲುಶತಮಾನದ ನಂತರದ ಹೋರಾಟದ ಬದುಕಿಗೆ ಶುಭ ಹಾರೈಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *