ಮಾಣಿಹೊಳೆದಡದ ಜನರ ಬವಣೆ- ಸರ್ವ ಋತು ರಸ್ತೆಗಾಗಿ ಆಗ್ರಹ,ಮುಖ್ಯಮಂತ್ರಿಗಳಿಗೂ ಮನವಿ

ಉತ್ತರ ಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳಿಗೆ ಸೇತುವೆ,ರಸ್ತೆ ವ್ಯವಸ್ಥೆ ಇಲ್ಲದೆ ಮಳೆಗಾಲ ಶಾಪವಾಗಿ ಕಾಡುವುದು ಇಲ್ಲಿಯ ವಿದ್ಯಮಾನ. ಇಂಥ ಹಳ್ಳಿಗಳ ಸಾಲಿನಲ್ಲಿ ಸಿದ್ಧಾಪುರದ ಮಾಣಿಹೊಳೆ ದಂಡೆಯ ಅನೇಕ ಗ್ರಾಮಗಳು ಸೇರುತ್ತವೆ. ಸಿದ್ಧಾಪುರದ ಕುಮಟಾ ರಸ್ತೆ ಮತ್ತು ಹೆಗ್ಗರಣೆ ರಸ್ತೆಗಳನ್ನು ಸಂಪರ್ಕಿಸುವ ಕತ್ರಿಗಾಲ, ಮಾಣಿಹೊಳೆ ರಸ್ತೆಯ ಎಡಕ್ಕೆ ಸುಮಾರು ನಾಲ್ಕ್ಐದು ಕಿ.ಮೀ. ದೂರದಲ್ಲಿ ಮಾಣಿಹೊಳೆ (ಅಘನಾಶಿನಿ) ತನ್ನಷ್ಟಕ್ಕೆ ತಾನು ಹರಿದು ಹೋಗುತ್ತದೆ. ಈ ಹೊಳೆಯ ಇಕ್ಕೆಲಗಳ ಅನೇಕ ಗ್ರಾಮಗಳಿಗೆ ಈಗಲೂ ಅವಶ್ಯ ಸೇತುವೆ, ಸಂಪರ್ಕ ರಸ್ತೆಗಳಿಲ್ಲ. ಈ ತೊಂದರೆಯಿಂದ ಬೇಸತ್ತ ಇಲ್ಲಿಯ ಹಾವಿನಬೀಳು, ಹಾಸಗೋಡು, ಕಸ್ಗೆ, ಕಾನ್ಮನೆ ಉಳ್ಳಾಣೆಜಡ್ಡಿ ಜನರು ಇದೇ ವಾರದ ಮೊದಲದಿನ ಮಾಧ್ಯಮ ಪ್ರತಿನಿಧಿಗಳನ್ನು ತಮ್ಮೂರಿಗೆ ಕರೆಸಿ ತಮ್ಮ ಬವಣೆ ಹೇಳಿಕೊಂಡರು.

ಈ ಭಾಗದಲ್ಲಿ ಮೊಬೈಲ್ ಸಂಪರ್ಕ ಇಲ್ಲ, ರಸ್ತೆಗಳಲ್ಲಿ ಮಳೆಗಾಲದಲ್ಲಿ ಓಡಾಡುವುದೇ ಕಷ್ಟ, ಕೆಲವು ಸಮಯದಲ್ಲಂತೂ ಇಲ್ಲಿ ಬೀಳುವ ಮರಗಳನ್ನು ತೆರವುಮಾಡದೆ ದಿನವೀಡಿ ಮಾರ್ಗಮಧ್ಯೆದಲ್ಲೇ ಉಳಿಯುವ ದುಸ್ಥಿತಿ, ಇಂಥ ತೊಂದರೆಯಿಂದಾಗಿ ಈ ಭಾಗದ ಕೆಲವರು ಅನಾರೋಗ್ಯ, ಹೆರಿಗೆ ನೋವು,ಬಾಣಂತನದ ಅವಧಿಯಲ್ಲಿ ಜೀವಬಿಟ್ಟಿದ್ದಾರೆ ಎಂದರು. ಹಾವಿನಬೀಳಿನ ಪ್ರಕಾಶ ಹೆಗಡೆ.

ಮಳೆಗಾಲದಲ್ಲಿ ಇಲ್ಲಿ ಸಂಪರ್ಕ ರಸ್ತೆ, ಸಂಪರ್ಕ ಸಾಧನಗಳದ್ದೇ ಸಮಸ್ಯೆ ನನ್ನ ಹೆರಿಗೆ ಸಮಯದಲ್ಲಿ ಈ ತೊಂದರೆ ಬೇಡ ಎಂದು ಎರಡು ತಿಂಗಳು ಶಿರಸಿಯ ಸಂಬಂಧಿಗಳ ಮನೆಯಲ್ಲಿ ಉಳಿದಿದ್ದೆ, ಅಸಹಾಯಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಕಷ್ಟ ಅನುಭವಿಸಬೇಕಾಗುತ್ತದೆ ಈ ತೊಂದರೆ ಬಗ್ಗೆ ಜನಪ್ರತಿನಿಧಿಗಳೂ ಗಮನಹರಿಸದಿರುವುದು ನಮ್ಮ ದುರಂತ ಎನ್ನುತ್ತಾರೆ ಇದೇ ಗ್ರಾಮದ ಶ್ವೇತಾ ಹೆಗಡೆ

ಈಬಗ್ಗೆ ಈಗಾಗಲೇ ಹಲವು ಬಾರಿ ಜಿಲ್ಲಾಡಳಿತದ ವರೆಗೆ ಮನವಿ ಮಾಡಿದ್ದರೂ ಫಲ ಸಿಗಲಿಲ್ಲ ಹಾಗಾಗಿ ಈಗ ಮುಖ್ಯಮಂತ್ರಿಗಳ ವರೆಗೆ ನಿಯೋಗ ಹೋಗಿ ಈ ಸಮಸ್ಯೆ ಬಗೆಹರಿಸಬೇಕಾದ ಅನಿವಾರ್ಯತೆ ನಮಗಿದೆ ಎಂದು ಅಲವತ್ತುಕೊಂಡವರು ಕನ್ನ ನಾಯ್ಕ, ಮಂಜುಗೌಡ.

ಈ ಭಾಗದ ಸಮಸ್ಯೆ ಬಗ್ಗೆ ಮಾಧ್ಯಮಗಳ ಮೂಲಕ ಗಮನಸೆಳೆಯುವ ಪ್ರಯತ್ನ ಮಾಡಿರುವ ಸಿದ್ಧಾಪುರ ತಾಲೂಕಾ ಬಿ.ಎಸ್. ಎನ್.ಡಿ.ಪಿ. ಅಧ್ಯಕ್ಷ ವಿನಾಯಕ ನಾಯ್ಕ ತಾಲೂಕಿನಲ್ಲಿ ರಸ್ತೆ, ಸೇತುವೆಗಳಿಲ್ಲದೆ ಇಂಥ ತೊಂದರೆ ಇರುವ ಅನೇಕ ಗ್ರಾಮಗಳಿವೆ. ಈ ಗ್ರಾಮಗಳ ಸಮಸ್ಯೆ ಬಗೆ ಹರಿಸಲು ತಾಲೂಕಿಗೆ ಕನಿಷ್ಟ 200 ಕೋಟಿಗಳ ವಿಶೇಶ ಅನುದಾನ ಬೇಕು. ಈ ಬಗ್ಗೆ ನಮ್ಮನ್ನಾಳುತ್ತಿರುವ ಕಾಲು ಶತಮಾನಗಳ ಜನಪ್ರತಿನಿಧಿಗಳಿಂದ ಈ ಕೆಲಸ ಸಾಧ್ಯವೆ ಎನ್ನುವ ಅನುಮಾನ ನಮಗೆ ಎನ್ನುತ್ತಾರೆ.

ಹೀಗೆ ತಮ್ಮ ಬವಣೆ, ತೊಂದರೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಿವಿಯಾಗದೆ ಮಾಧ್ಯಮಗಳ ಮೊರೆ ಹೋಗಿರುವ ಇಲ್ಲಿಯ ಜನರ ನಿತ್ಯ ಸಮಸ್ಯೆ ರಸ್ತೆ, ಸಂಪರ್ಕಮಾಧ್ಯಮಗಳದ್ದು ಈ ಬಗ್ಗೆ ಒಂದು ತಿಂಗಳೊಳಗಾಗಿ ಅವಶ್ಯ ಭರವಸೆ ದೊರೆಯದಿದ್ದರೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಹೋಗುವ ಇವರ ಯೋಚನೆ, ಯೋಜನೆ ಇವರ ಸಮಸ್ಯೆಗೆ ಉತ್ತರ ದೊರಕಿಸಬಹುದೆ ಎನ್ನುವುದೇ ಯಕ್ಷ ಪ್ರಶ್ನೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *