ಮಧುಮೇಹಿಗಳಲ್ಲಿ ಕೊರೋನಾ ಪರಿಣಾಮ ತೀವ್ರ: ಮುಂಜಾಗ್ರತೆ ವಹಿಸುವುದು ಹೇಗೆ?

ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಜನರನ್ನು ಮಹಾಮಾರಿ ಕೊರೋನಾ ವೈರಸ್ ಹೆಚ್ಚು ಬಾಧಿಸುತ್ತದೆ. ಸಾಕಷ್ಟು ಜನರು ಕೊರೋನಾ ಸೋಂಕು ತಗುಲಿದ ಕೂಡಲೇ ಜೀವನವೇ ಮುಗಿಯಿತು ಎಂದು ಭಾವಿಸುತ್ತಿದ್ದಾರೆ. ಸಾವೇ ನಿಶ್ಚಿತ ಎಂದು ಬಹುತೇಕರು ತಿಳಿದಿದ್ದಾರೆ.

file photo

ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಜನರನ್ನು ಮಹಾಮಾರಿ ಕೊರೋನಾ ವೈರಸ್ ಹೆಚ್ಚು ಬಾಧಿಸುತ್ತದೆ. ಸಾಕಷ್ಟು ಜನರು ಕೊರೋನಾ ಸೋಂಕು ತಗುಲಿದ ಕೂಡಲೇ ಜೀವನವೇ ಮುಗಿಯಿತು ಎಂದು ಭಾವಿಸುತ್ತಿದ್ದಾರೆ. ಸಾವೇ ನಿಶ್ಚಿತ ಎಂದು ಬಹುತೇಕರು ತಿಳಿದಿದ್ದಾರೆ. ಇದಕ್ಕೆ ಕಾರಣ ಕೊರೋನಾ ಸೋಂಕಿಗೆ ಔಷಧ ಇಲ್ಲದಿರುವುದು. ಜೊತೆಗೆ ಸೋಂಕಿನ ಬಗ್ಗೆ ವಿಶ್ವದಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿರುವುದೂ ಕೂಡ ಆಗಿದೆ.

ದೇಶದಲ್ಲಿ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಶೇ.73ರಷ್ಟು ಜನರು ಕೊರೋನಾಗೆ ಬಲಿಯಾಗಿದ್ದಾರೆ. ದೀರ್ಘಕಾಲಿಕ ರೊಗಗಳಲ್ಲಿ ಒಂದಾಗಿರುವ ಮಧುಮೇಹ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಜನರನ್ನು ಬಾಧಿಸುತ್ತಿದ್ದು, ಮಧುಮೇಹ ನಿಯಂತ್ರಣ ಚಿಂತೆ ಒಂದೆಡೆಯಾದರೆ ಮತ್ತೊಂದೆಡೆ ಕೊರೋನಾ ವೈರಸ್ ಕೂಡ ಮಧುಮೇಹಿಗಳನ್ನು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ. ಕೊರೋನಾ ನಡುವೆ ಮಧುಮೇಹ ನಿಯಂತ್ರಣ ಹೇಗೆ, ಮುಂಜಾಗ್ರತೆ ವಹಿಸುವುದಾದರೂ ಹೇಗೆ ಎಂಬುದರ ಬಗ್ಗೆ ಬೆಂಗಳೂರು ನಗರದ ವಿಕ್ರಮ್ ಆಸ್ಪತ್ರೆಯ ಮಧುಮೇಹ ಮತ್ತು ಎಂಡೋಕ್ರೈನ್ ವಿಭಾಗದ ವೈದ್ಯರು ಮಾಹಿತಿ ನೀಡಿದ್ದಾರೆ…

ಮಧುಮೇಹಿಗಳು ಕೊರೋನಾಗೆ ಹೆಚ್ಚು ಸೋಂಕಿಗೊಳಗಾಗುತ್ತಾರೆಯೇ…? ಸೋಂಕು ತಗುಲಿದ ಮಧುಮೇಹಿಗಳಿಗೆ ಜೀವ ಅಪಾಯದಲ್ಲಿರಲಿದೆಯೇ? 
ಮಧುಮೇಹ ಇರುವವರಿಗೆ ಹೆಚ್ಚು ಕೊರೋನಾ ಸೋಂಕು ತಗುಲುತ್ತದೆ ಎಂದು ಹೇಳುವುದಕ್ಕೆ ಯಾವುದೇ ರೀತಿಯ ವರದಿಗಳಿಲ್ಲ. ಆದರೆ, ಕೊರೋನಾ ಸೋಂಕಿಗೊಳಗಾಗಿದ್ದೇ ಆದರೆ, ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ವಯಸ್ಸು ಮತ್ತು ಸ್ಥೂಲಕಾಯತೆ ಇರುವವರು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಒಂದು ಅಧ್ಯಯನವೊಂದರಲ್ಲಿ ಎಚ್‌ಬಿಎ 1 ಸಿ > 7.5% ರೋಗಿಗಳಲ್ಲಿ ಮರಣ ಪ್ರಮಾಣ ಹೆಚ್ಚು ಎಂದು ತಿಳಿಸಿದೆ.

ಕೊರೋನಾ ಸೋಂಕು ಪೀಡಿತ ಮಧುಮೇಹಿಗಳು ನಿಯಮಿತವಾಗಿ ಮಧುಮೇಹ ಔಷಧಿಗಳನ್ನು ಮುಂದುವರಿಸಬಹುದೇ?
ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ವೈದ್ಯರೇ ಈ ಬಗ್ಗೆ ಚಿಕಿತ್ಸೆಗಳನ್ನು ನೀಡುತ್ತಾರೆ. ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವವರು ಬಹುತೇಕ ಔಷಧಿಗಳನ್ನು ಮುಂದುವರೆಸಬಹುದು. ಒಂದು ವೇಳೆ ಸೋಂಕಿತ ವ್ಯಕ್ತಿ ಆಹಾರ ಸೇವನೆ ಮಾಡಲು ಸಾಧ್ಯವಾಗದಿದ್ದರೆ ಅಥವಾ ವಾಂತಿಯಾಗುತ್ತಿದ್ದರೆ ಇಂತಹ ಅನಾರೋಗ್ಯದ ಸಮಯದಲ್ಲಿ ಮೆಟ್‌ಫಾರ್ಮಿನ್, ಎಸ್‌ಜಿಎಲ್‌ಟಿ 2 ಐ ನಂತಹ ಕೆಲವು ಔಷಧಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗುತ್ತದೆ.

ಕೋವಿಡ್-19 ನೊಂದಿಗೆ ಮಧುಮೇಹ ನಿಯಂತ್ರಣ ಹದಗೆಡುತ್ತದೆಯೇ?
ಹೌದು, ಕೋವಿಡ್ -19 ಸೋಂಕು ಇನ್ಸುಲಿನ್ ಪ್ರತಿರೋಧದಿಂದಾಗಿ ಹೈಪರ್ಗ್ಲೈಸೀಮಿಯಾವನ್ನು ಇನ್ನಷ್ಟು ಹದಗೆಡಿಸುತ್ತದೆ, ಮಧುಮೇಹ ಕೀಟೋಆಸಿಡೋಸಿಸ್ ಮತ್ತು ಹೈಪರೋಸ್ಮೋಲಾರ್ ಹೈಪರ್ಗ್ಲೈಸೀಮಿಯಾ ಸಿಂಡ್ರೋಮ್ ಅನ್ನು ಉಂಟುಮಾಡಬಹುದು. ಕೆಲವು ರೋಗಿಗಳಲ್ಲಿ ಸ್ಟೀರಾಯ್ಡ್ ಔಷಧಿಗಳ ಬಳಕೆಯಿಂದ ಈ ಹೈಪರ್ಗ್ಲೈಸೀಮಿಯಾ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಇದಕ್ಕೆ ಚಿಂತೆ ಪಡುವ ಅಗತ್ಯವಿಲ್ಲ. ಇನ್ಸುಲಿನ್ ಚುಚ್ಚುಮದ್ದು ಮತ್ತು ರಕ್ತದಲ್ಲಿನ ಗ್ಲೂಕೋಸ್‌ ಮೇಲಿನ ನಿಗಾಯಿರಿಸಿ ಔಷಧಿಗಳೊಂದಿಗೆ ಇದನ್ನು ನಿರ್ವಹಿಸಬಹುದು. ಮುಖ್ಯವಾಗಿ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ರಕ್ತದಲ್ಲಿನ ಗ್ಲೂಕೋಸ್ ಅನ್ನು ಆಗಾಗ ಪರಿಶೀಲಿಸುತ್ತಿರಬೇಕಾಗುತ್ತದೆ. 

ಕೋವಿಡ್ -19 ಸೋಂಕಿನ ಸಮಯದಲ್ಲಿ ನಿಯಮಿತವಾಗಿ ಬಿಪಿ ಮತ್ತು ಕೊಲೆಸ್ಟ್ರಾಲ್’ಗೆ ಸಂಬಂಧಿಸಿ ಔಷಧಿಗಳನ್ನು ತೆಗೆದುಕೊಳ್ಳುವುದು ಸುರಕ್ಷಿತವೇ?
ಎಸಿಇ ಇನ್ಹಿಬಿಟರ್ಸ್ ಮತ್ತು ಎಆರ್’ಬಿ ಬಗ್ಗೆ ಆರಂಭದಲ್ಲಿ ಕೆಲವು ಚಿಂತೆಗಳು ಸೃಷ್ಟಿಯಾಗಿದ್ದವು. ಆದರೆ, ಅಧ್ಯಯನಗಳು ಯಾವುದೇ ಹಾನಿಯಲ್ಲ ಎಂದು ತಿಳಿಸಿದ ಬಳಿಕ ಇವುಗಳನ್ನು ಸುರಕ್ಷಿತವಾಗಿ ಮುಂದುವರಿಸಬಹುದಾಗಿದೆ. ಕೋವಿಡ್-19 ಹೃದಯದ ತೊಂದರೆಗಳಿಗೆ ಕಾರಣವಾಗಬಹುದು ಮತ್ತು ಸ್ಟ್ಯಾಟಿನ್ಗಳು ರಕ್ಷಣಾತ್ಮಕವಾಗಿರುವುದರಿಂದ ಸ್ಟ್ಯಾಟಿನ್ ನಂತಹ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಿಗಳನ್ನು ಮುಂದುವರಿಸಬೇಕಾಗುತ್ತದೆ. 

ಮಧುಮೇಹ ಹೊಂದಿರುವ ರೋಗಿಗಳು ಈ ಸಾಂಕ್ರಾಮಿಕ ಸಮಯದಲ್ಲಿ ಇನ್‌ಫ್ಲೂಯೆಂಜಾ ಲಸಿಕೆ ತೆಗೆದುಕೊಳ್ಳಬಹುದೇ?
ಹೌದು, ವೈದ್ಯರ ಸೂಚನೆಯಂತೆ ವಾರ್ಷಿಕ ಫ್ಲೂ ಲಸಿಕೆ ತೆಗೆದುಕೊಳ್ಳಬಹುದು, ವಾಸ್ತವವಾಗಿ, ಇನ್‌ಫ್ಲೂಯೆಂಜಾ ಲಸಿಕೆ ತೆಗೆದುಕೊಳ್ಳುವುದರಿಂದ ಆಗಾಗ ಆಸ್ಪತ್ರೆಗೆ ಭೇಟಿ ನೀಡುವುದು ಕಡಿಮೆಯಾಗುತ್ತದೆ. ಇದರಿಂತ ಕೊರೋನಾ ಸೋಂಕು ತಗುಲುವ ಸಾಧ್ಯತೆಗಳೂ ಕೂಡ ಕಡಿಮೆಯಾಗುತ್ತದೆ. 

ಮಧುಮೇಹ ಹೊಂದಿರುವವರಿಗೆ ಕೋವಿಡ್-19 ನ ಪರೋಕ್ಷ ಪರಿಣಾಮಗಳು ಯಾವುವು?
ಸಾಂಕ್ರಾಮಿಕ ರೋಗವು ಮಧುಮೇಹಿಗಳಲ್ಲಿ ಒತ್ತಡ, ನಿಯಮ ಆಹಾರ ಸೇವನೆಯಲ್ಲಿ ಅಡ್ಡಿ, ವ್ಯಾಯಾಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಮಧುಮೇಹಿಗಳು ಸಾಧ್ಯವಾದಷ್ಟು ಆರೋಗ್ಯಕವಾದ ಆಹಾರವನ್ನು ಸೇವನೆ ಮಾಡಬೇಕು. ಮನೆಯಲ್ಲಿ, ಮನೆಯ ಮಹಡಿ ಮೇಲೆ ಅಥವಾ ಉದ್ಯಾನವನಗಳಲ್ಲಿ ವ್ಯಾಯಾಮ ಮಾಡಬೇಕು. ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಾಮಾಜಿಕ ಅಂತರ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಪ್ರಮುಖವಾಗಿ ಪ್ರತೀನಿತ್ಯ ಮನೆಯಲ್ಲಿಯೇ ಬಿಪಿ ಹಾಗೂ ಗ್ಲೂಕೋಸ್ ಪ್ರಮಾಣ, ತೂಕವನ್ನು ಪರಿಶೀಲಿಸುತ್ತಿರಬೇಕು. ಕುಟುಂಬಸ್ಥರು, ವೈದ್ಯಕೀಯ ತಂಡ ಹಾಗೂ ಸ್ನೇಹಿತರೊಂದಿಗೆ ಆನ್’ಲೈನ್ ಮೂಲಕ ಸಂಪರ್ಕವನ್ನು ಹೊಂದಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *