ಬಲೀಂದ್ರ ಬಂದ

ಇನ್ನೇನು ನಮ್ಮ ಮನೆಗಳಲ್ಲಿ ಬಲಿ ರಾಜ ಬಂದು ಕೂರಲಿದ್ದಾ‌ನೆ. (ಮಣ್ಣಿನ ಮಡಕೆ, ಅದರ ಮೇಲೆ ಹಣತೆಯ ರೂಪದಲ್ಲಿ) ಅವನು ಬರುವಾಗ ರೈತಾಪಿಗಳ ಬೇಸಾಯದ ಪರಿಕರಗಳನ್ನೆಲ್ಲಾ ಜೋಡಿಸಿ ಇಡಲಾಗುತ್ತದೆ.
ವೈದಿಕರ ಪುರಾಣದಲ್ಲಿ ನಮ್ಮ ಬಲಿ ಚಕ್ರವರ್ತಿ ಒಬ್ಬ ದುರಹಂಕಾರಿಯಂತೆ. ವಾಮನ ಎಂಬ ಕುಬ್ಜ ವಂಚಕ ಬಂದು ಬಲಿರಾಜನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ಬಲಿಚಕ್ರವರ್ತಿಯ ಸಾಮ್ರಾಜ್ಯವನ್ನು ಕಿತ್ತುಕೊಂಡು ಮೋಸದಿಂದ ಕೊಲೆಮಾಡುತ್ತಾನೆ.

ಇಂದು ಪುರಾಣದ ಐತಿಹ್ಯದ ಸ್ವರೂಪದಲ್ಲಿ ಚಾಲ್ತಿಯಲ್ಲಿರುವ ಬಲಿರಾಜನ ಕತೆ ನಮಗೆ ನಮ್ಮ ನೆಲದ, ನಮ್ಮ ಜನರ ಇತಿಹಾಸದಲ್ಲಿ ‌ನಡೆದಿರುವ ವಂಚನೆ, ಕುತಂತ್ರದ ಕತೆಯನ್ನು ಹೇಳುತ್ತದೆ. ದ್ರಾವಿಡ ನಾಡಿನ ಮೂಲನಿವಾಸಿಗಳು ತಮ್ಮ ನೆಲವನ್ನು ಕಳೆದುಕೊಂಡು, ಪರಕೀಯರ ದಾಳಿಗೆ ತುತ್ತಾದ ಕತೆಯನ್ನೂ ಇದು ಹೇಳುತ್ತದೆ‌‌

ಆದರೆ ಬಲೀಂದ್ರನನ್ನು ಪ್ರತಿವರ್ಷ ಕರೆತರುವ ನಮ್ಮ ರೈತಾಪಿ ಸಂಸ್ಕೃತಿಯಲ್ಲಿ ಬಲೀಂದ್ರ ಜೀವಂತವಾಗಿದ್ದಾನೆ. ಇದೇ ಸಂಸ್ಕೃತಿಯ ಭಾಗವಾಗಿ ನಮ್ಮ ಕಡೆಯ ಜಾನಪದ ಹಾಡುಗಳಲ್ಲಿ ಬಲೀಂದ್ರನನ್ನು ಜನಪದರು ನೆನೆಸಿಕೊಳ್ಳುವ ಪರಿಯ ನೋಡಿ.

ಬಲ್ಲೇಳ ಬಲೀಂದ್ರರಾಯ
ಬಂದಾನೋ ತನ ರಾಜ್ಯಕೆ
ಬಲೀಂದ್ರರಾಜ ಬಂದು
ಬಾಗಿಲಾಗೆ ಕುಂತಾರೆ
ಕಲ್ಲಂತ ಮಳೆಯೆ ಕರೆದಾವೆ
ಕಲ್ಲಂತ ಮಳೆಯೆ ಕರದಾವೆ ಈ ಊರ
ಜಡ್ಡು ಜಬುರೆಲ್ಲ ಚಿಗುರ‌್ಯಾವೆ
ಜಡ್ಡು ಜಬುರೆಲ್ಲ ಚಿಗುರ‌್ಯಾವೆ ಈ ಊರ
ಗೊಡ್ಡ ದನಗಳೆಲ್ಲ ಕರಹಾಕಿ
ಹಂಡೆ ಹಂಡೆ ನೂರು ಹಂಡೆಯ ಕರ ನೂರು
ಹಂಡೆವ್ವ ನಿನ್ನ ದಯ ನೂರು
ಹಂಡೆಯ ಹಾಲ ಕರೆದು ಪಾಸೆ ಮಾಡಿ
ಬಂದ ಬಲೀಂದ್ರಸ್ವಾಮಿಗೆ ಎಡೆ ಮಾಡಿ

(ದೀವರ ಹಾಡುಗಳು, ಸಂಗ್ರಹ: Jayaram Kh ಜಯರಾಮ ಕೆ.ಎಚ್.)

ನಮ್ಮ ಜನಮಾನಸದ ದೊರೆ ಬಲೀಂದ್ರ ರಾಜ ಜನರ‌ ನೆನಪುಗಳಲ್ಲಿ ಚಿರಾಯುವಾಗಲಿ.

  • ಹರ್ಷಕುಮಾರ್ ಕುಗ್ವೆ
  • https://www.youtube.com/watch?v=VIM4Lqp_4pY&t=36s

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *