ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿ ತಟ್ಟೆಕಾಸಿನ ಬಿರುಗಾಳಿಯೂ..!

ಮೊನ್ನೆ ನನ್ನ ಗೆಳೆಯ ಮಂಜುನಾಥನ ಜಮೀನು ನೋಡಲು ಮಂಜುನಾಥ ಕರೆದುಕೊಂಡು ಹೋಗಿದ್ದ. ಹೊಲ ಅಂದರೆ ಆ ಜಮೀನಿನಲ್ಲಿ ಒಂದು ವಿಚಿತ್ರ ಸಾರ್ವಜನಿಕ ಬೋರ್ಡ್ ಕಾಣಿಸಿತು. ಅದು ಈ ರೀತಿಯಲ್ಲಿ ಇತ್ತು. ‘ಈ ಹೊಲಕ್ಕೆ ಅಂದರೆ ಜಮೀನಿಗೆ ಸಿಗಂದೂರ ಚೌಡೇಶ್ವರಿ ಆರ್ಶಿವಾದವಿದೆ. ಈ ಜಮೀನಿನಲ್ಲಿ ಏನಾದರೂ ಕಳ್ಳತನ ಮಾಡಿದರೆ ಕಳ್ಳತನ ಮಾಡಿದವರು ಕೈಕಾಲು ಬಿದ್ದು ಹೋಗಿ ವಿಚಿತ್ರವಾಗಿ ಖಾಯಿಲೆಗೆ ಬಿದ್ದು ಸಾಯುತ್ತಾರೆ’ ಎಂದು.

ನನಗೆ ಆಶ್ಚರ್ಯವಾಗಿ ಗೆಳೆಯ ಮಂಜುನಾಥನನ್ನು ಕೇಳಿದೆ. ಇದೇನಿದು ಎಂದು. ಆತ ಹೇಳಿದ ಈ ಜಮೀನಿನಲ್ಲಿ ತಾಯಿ ಸಿಗಂದೂರ ಚೌಡೇಶ್ವರಿ ವಾಸವಾಗಿದ್ದಾಳೆ. ಯಾರಾದರೂ ಇಲ್ಲಿ ಕಳ್ಳತನ ಮಾಡಿದರೆ ಅವರು ಸಿಗಂದೂರ ಚೌಡೇಶ್ವರಿ ಶಾಪಕ್ಕೆ ಗುರಿಯಾಗುತ್ತಾರೆ ಎಂದು ಹೇಳಿದ ಗೆಳೆಯ ಮಂಜುನಾಥ.

ಆಗ ಡಂಬಾಚರದ ಆಸ್ತಿಕನಲ್ಲದ ನನಗೆ ನಗು ಬಂದಿತು. ಅಲ್ಲದೆ ಆಯಿತು, ಆಗ ನಾನು ಆ ನಿನ್ನ ಸಿಗಂದೂರ ಚೌಡೇಶ್ವರಿಯನ್ನು ನೋಡಬೇಕಲ್ಲ. ಅಲ್ಲಿಗೆ ಕರೆದುಕೊಂಡು ಹೋಗುತ್ತೀಯಾ ಎಂದು ನನ್ನ ಗೆಳೆಯ ಮಂಜುನಾಥನನ್ನು ಕೇಳಿದೆ. ಆಯಿತು ಹೋಗೋಣ ಎಂದು ಮೊನ್ನೆ ಸಿಗಂದೂರ ಚೌಡೇಶ್ವರಿ ದೇವಾಲಯಕ್ಕೆ ಕರೆದುಕೊಂಡು ಹೋದ ಗೆಳೆಯ ಮಂಜುನಾಥ.ಅಲ್ಲಿಗೆ ಹೋದಾಗ ನನಗೊಂದು‌ ಆಶ್ಚರ್ಯಕರ ಘಟನೆ ಕಾಯ್ದಿತ್ತು. ಅದು ಸಿಗಂದೂರ ಚೌಡೇಶ್ವರಿ ದೇವಾಲಯದ ತಟ್ಟೆಕಾಸಿನ ಜಗಳದ ಹೂರಣವಾಗಿತ್ತು.ಅಲ್ಲಿ ಒಬ್ಬ ನನಂತಹ ಆಸಾಮಿಯಾದ ಅಲ್ಲಿಯ ಗೆಳೆಯ ಬಂಡುರಾವ್ ಕುಲಕರ್ಣಿಯವರು ಒಂದು ಕಥೆಯನ್ನೇ ಹೇಳಿದರು. ಅದು ಹೀಗಿದೆ ನೋಡಿ…

ಅದು ಆ ದೇವಾಲಯ ಅಥವಾ ಮಠದ ಆಸ್ತಿ ಜಗಳವಾಗಿತ್ತು. ಅದು ಅಲ್ಲಿ ದೇವರ ಹೆಸರಿನಲ್ಲಿ ಬೀಳುವ ತಟ್ಟೆ ಕಾಸಿನ ಜಗಳ. ಅದು ಈಗ ತಾರಕಕ್ಕೆ ಏರಿದೆ ಈಗ. ಅದೂ ಹೀಗಿದೆ ನೋಡಿ…ಮಠದಲ್ಲಿ ಬೀಳುವ ಸಿಗಂದೂರ ಚೌಡೇಶ್ವರಿ ದೇವಾಲಯದ ಹೆಸರಲ್ಲಿ ಮೂಢ ಭಕ್ತರು ಹಾಕುವ ಹುಂಡಿಗಿನ ಲಕ್ಷಾಂತರ ರೂಪಾಯಿಯು ಯಾರಿಗೆ ಸೇರಬೇಕು ಎಂಬ ಆ ಹಣದ ವಹಿವಾಟಿನ ಜಗಳ.ಆ ಕಾರಣಕ್ಕಾಗಿಯೇ ಅಲ್ಲಿಯ ಧರ್ಮದರ್ಶಿ ಮತ್ತು ಒಬ್ಬ ಟ್ರಸ್ಟಿಗೂ ನಡೆದ ಜಗಳ. ಅದು ಹೀಗಿದೆ ನೋಡಿ.

ಈ ಜಗಳ ಅಲ್ಲಿಯ ಶಾಸಕ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ವರೆಗೂ ಹೋದರು, ಬಗೆಹರಿದಿಲ್ಲ. ಮಠದವರ ಮಧ್ಯಸ್ಥಿಕೆಯೂ ಸರಿಬಂದಿಲ್ಲ. ಈ ಜಗಳವನ್ನು ಎರಡ್ಮೂರೂ ಕಂತುಗಳಲ್ಲಿ ಬರೆಯುತ್ತೇನೆ. ಅಷ್ಟು ಹೂರಣವಿದೆ ಸದರೀ ಮಠದ್ದು.ಸದರೀ ಆ ಮಠದ ತಟ್ಟೆ ಕಾಸಿನ ಜಗಳ ಹೀಗಿದೆ ನೋಡಿ…ಮಠದವರ ಮಧ್ಯಸ್ಥಿಕೆ ಹೊಂದಾಣಿಕೆಯ ಸೂತ್ರ ಯಶಸ್ವಿಯಾಗಲಿಲ್ಲ. ಹಾಗಾಗಿ ಭಟ್ಟರು ನೇರವಾಗಿ ಮುಖ್ಯಮಂತ್ರಿ ಯಡ್ಡಿಯೂರಪ್ಪನವರ ಮುಂದೆ ದೂರು ತೋಡಿಕೊಂಡಿದ್ದರು. ಸಿಎಂ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸುವಂತೆ ಸ್ಥಳೀಯ ಶಾಸಕ ಹಾಗೂ ಸ್ವತಃ ಧರ್ಮದರ್ಶಿ ರಾಮಪ್ಪ ಅವರ ಅಳಿಯ ಹರತಾಳು ಹಾಲಪ್ಪ ಅವರಿಗೆ ಸೂಚಿಸಿದ್ದರು. ಆದರೆ, ಶಾಸಕರ ಪ್ರಯತ್ನ ಕೂಡ ಫಲ ನೀಡಿಲ್ಲ.

ಮಾಟ ಮಂತ್ರ, ರಾಜಿ ಪಂಚಾಯ್ತಿ, ಕಷ್ಟ- ಸಂಕಷ್ಟ ಪರಿಹಾರದ ನಂಬಿಕೆಯ ಗೊಡ್ಡ ಸಂಪ್ರಾದಯದ ಕಾರಣಕ್ಕೆ ಹೆಸರಾಗಿರುವ ಸಿಗಂದೂರು ದೇವಾಲಯ, ಇದೀಗ ಸ್ವತಃ ವಿವಾದದ ಕೇಂದ್ರವಾಗಿದೆ. ಅಮಾಯಕ ಭಕ್ತರ ತಟ್ಟೆಕಾಸಿನ ವಿಷಯದಲ್ಲಿ ದೇವಾಲಯದ ಇಬ್ಬರು ಪ್ರಮುಖರ ನಡುವೆ ಭುಗಿಲೆದ್ದಿರುವ ಸಂಘರ್ಷ ಪರಸ್ಪರ ತೊಡೆ ತಟ್ಟುವ ಮಟ್ಟಕ್ಕೆ ಬೆಳೆದುನಿಂತಿದೆ. ಹಾಗಾಗಿ ಕರೋನಾ ಲಾಕ್ ಡೌನ್ ನಡುವೆಯೂ ಸಿಗಂದೂರು ಭಾರೀ ಸುದ್ದಿಯಲ್ಲಿದೆ.ಶರಾವತಿ ಹಿನ್ನೀರಿನ ದ್ವೀಪ ತುಮರಿ ಭಾಗದಲ್ಲಿರುವ ಸಿಗಂದೂರು ಚೌಡೇಶ್ವರಿ ದೇವಾಲಯ, ಕಳೆದ ಎರಡು ದಶಕಗಳಿಂದ ರಾಜ್ಯದ ಪ್ರಮುಖ ಪೂಜಾ ಸ್ಥಳವಾಗಿ, ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಅಲ್ಲಿನ ದೇವರ ಮೇಲಿನ ಭಕ್ತಿ ಮತ್ತು ಶಕ್ತಿಯ ಕುರಿತ ಪ್ರಭಾವಳಿಯ ಕಾರಣಕ್ಕೆ ನಿತ್ಯ ಸಾವಿರಾರು ಮಂದಿ ರಾಜ್ಯದ ಮೂಲೆಮೂಲೆಯಿಂದ ದೇವಾಲಯಕ್ಕೆ ಆಗಮಿಸುವುದು, ಪೂಜೆಪುನಸ್ಕಾರ ನಡೆಸುವುದು, ಹೋಮ ಹವನ ಮಾಡಿಸುವುದು, ಹರಕೆ ತೀರಿಸುವುದು ಹೀಗೆಯೇ ಹಲವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ದೇವಾಲಯಕ್ಕೆ ನೂರಾರು ಕೋಟಿ ರೂಪಾಯಿಗಳ ಆದಾಯ ಹರಿದು ಬರುತ್ತಿದೆ. ಹೀಗೆ ಹರಿದು ಬರುವ ಭಕ್ತರ ದುಡ್ಡೇ ಈಗ ದೇವಾಲಯದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಭಕ್ತರ ಎಲ್ಲಾ ಕಷ್ಟ ಪರಿಹಾರ ಮಾಡುವ ಕ್ಷೇತ್ರವೇ ಈಗ ಸಂಕಷ್ಟಕ್ಕೆ ಸಿಲುಕಿದೆ..!ವಾಸ್ತವವಾಗಿ ದೇವಾಲಯದಲ್ಲಿ ಎರಡು ಬಣಗಳಾಗಿದ್ದು, ದೇವಾಲಯದ ಧರ್ಮದರ್ಶಿ ಎಂದು ಹೇಳಲಾಗುವ ರಾಮಪ್ಪ ಮತ್ತು ಅವರ ಕುಟುಂಬ ಒಂದು ಕಡೆಯಾದರೆ, ಪ್ರಧಾನ ಅರ್ಚಕರೆಂದು ಹೇಳಲಾಗುವ ಶೇಷಗಿರಿ ಭಟ್ ಮತ್ತು ಅವರ ಕಡೆಯುವರು ಮತ್ತೊಂದು ಬಣವಾಗಿದ್ದಾರೆ. ಈ ಎರಡು ಬಣಗಳ ನಡುವೆ ಕಳೆದ ಎರಡು ಮೂರು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ತಟ್ಟೆಕಾಸಿನ ಕುರಿತ ಕಿತ್ತಾಟ, ಇದೀಗ ವ್ಯಾಪಕ ಸ್ವರೂಪ ಪಡೆದುಕೊಂಡಿದ್ದು, ಎರಡೂ ಕಡೆಯುವರ ನಡುವೆ ದೇವಾಲಯದ ಆವರಣದಲ್ಲಿಯೇ ಕೈಕೈ ಮಿಲಾವಣೆಯ ವರೆಗೆ ಸಂಘರ್ಷ ಬೆಳೆದಿದ್ದು, ಸದ್ಯ ಪರಸ್ಪರರು ಬಾಡಿಗೆ ಬಂಟರನ್ನು ಜೊತೆಗಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳೇ ಹೇಳುತ್ತಾರೆ.ಪ್ರಮುಖವಾಗಿ ದೇವಾಲಯದ ಆಡಳಿತ, ಅಭಿವೃದ್ಧಿ ನೋಡಿಕೊಳ್ಳುವ ರಾಮಪ್ಪ ಮತ್ತು ಅವರದೇ ಕೌಟುಂಬಿಕ ಟ್ರಸ್ಟ್, ದೇವಾಲಯದ ಆದಾಯದಲ್ಲಿ ಹುಂಡಿ ಕಾಸು, ಹರಕೆ, ರಶೀದಿ ಸೇವೆಗಳ ಹಣ, ಮನಿ ಆರ್ಡರ್, ವಸ್ತು-ಒಡವೆ ಕಾಣಿಕೆಗಳು ತನಗೆ ಸಲ್ಲಬೇಕು ಎಂದು ಅವುಗಳನ್ನೆಲ್ಲಾ ಪಡೆಯುತ್ತಿತ್ತು. ದೇವಾಲಯದ ಪ್ರಧಾನ ಅರ್ಚಕ ಶೇಷಗಿರ ಭಟ್, ಆರತಿ ತಟ್ಟೆಗೆ ಹಾಕುವ ತಟ್ಟೆಕಾಸು, ರಶೀದಿ ರಹಿತ ಸೇವೆಗಳ ಹಣ, ಹೋಮ-ಹವನದ ವೆಚ್ಚ, ವಿಶೇಷ ಮಂಗಳಾರತಿ, ಮಹಾ ಮಂಗಳಾರತಿಯ ಹಣವನ್ನು ತನ್ನ ಪಾಲು ಎಂದು ಪಡೆಯುತ್ತಿದ್ದರು. ಇದು ದಶಕಗಳಿಂದ ನಡೆದುಕೊಂಡ ಪದ್ಧತಿಯಾಗಿತ್ತು. ಆದರೆ, ಇದೀಗ ಕಳೆದ ಕೆಲವು ವರ್ಷಗಳಿಂದ ಹೋಮ-ಹವನಗಳ ಮೂಲಕ ಭಟ್ಟರು ನಿತ್ಯ ಲಕ್ಷಾಂತರ ರೂಪಾಯಿ ಆದಾಯ ಪಡೆಯತೊಡಗಿದ ಮೇಲೆ ಧರ್ಮದರ್ಶಿ ಮತ್ತು ಅರ್ಚಕರ ನಡುವೆ ಹಣಕಾಸಿನ ವಿಷಯದಲ್ಲಿ ವೈಮನಸ್ಯ ಹೆಡೆ ಎತ್ತಿತ್ತು.ದೇವಿಯ ಪ್ರಭಾವಳಿಯ ಕುರಿತ ದಂತಕಥೆಗಳು ಬೆಳೆದು, ಚೌಡೇಶ್ವರಿ ಚಾಮುಂಡೇಶ್ವರಿಯಾಗಿ ಅವತಾರವೆತ್ತಿದ್ದಂತೆಯೇ, ದೇವಾಲಯದ ಅಂಗಳದಲ್ಲಿ ಆದಾಯದ ವಾರಸುದಾರಿಕೆಯ ಕಲಹ ಕೂಡ ಬೆಳೆಯುತ್ತಲೆ ಹೋಯಿತು. ದೇವಾಲಯದ ಪ್ರಧಾನ ಅರ್ಚಕರಿಗೆ ಟ್ರಸ್ಟಿನಿಂದ ವೇತನ ನೀಡುವುದರಿಂದ ದೇವಾಲಯದ ಎಲ್ಲಾ ರೀತಿಯ ಆದಾಯವೂ ಸಂಪೂರ್ಣವಾಗಿ ಟ್ರಸ್ಟ್ ಅಥವಾ ಧರ್ಮದರ್ಶಿಗೆ ಅಂದರೆ ಹಾಲಪ್ಪನಿಗೇ ಸೇರಬೇಕು. ನೀವು ಸಂಬಳ ಪಡೆದು ಪೂಜೆ ಮಾಡಿಕೊಂಡು ಇರುವುದಾದರೆ ಇರಿ, ಇಲ್ಲವಾದರೆ ಬಿಟ್ಟು ಹೊರಡಿ ಎಂದು ಹುಕುಂ ಹೊರಡಿಸಿದ ಧರ್ಮದರ್ಶಿಗಳಾದ ಹಾಲಪ್ಪ ಮತ್ತು ಹಿಂದಿನ ಪದ್ಧತಿಯಿಂದ ತಮಗೆ ಸಲ್ಲಬೇಕಾದ ಹಣ ಸಲ್ಲಬೇಕು ಎಂಬ ಹಠಕ್ಕೆ ಬಿದ್ದ ಪ್ರಧಾನ ಅರ್ಚಕರ ನಡುವಿನ ಕದನ ಕೆಲವು ದಿನಗಳ ಹಿಂದೆ ಅಕ್ಷರಶಃ ಮಾರಾಮಾರಿಯ ಮಟ್ಟಕ್ಕೆ ಹೋಗಿತ್ತು. ಧರ್ಮದರ್ಶಿಗಳ ಕಡೆಯವರು ಬಲಪ್ರಯೋಗದ ಮೂಲಕ ತಮ್ಮನ್ನು ಹೊರಗಟ್ಟಲು ಮುಂದಾದಾಗ, ಭಟ್ಟರೂ ಹುಬ್ಬಳ್ಳಿ ಕಡೆಯಿಂದ ಕೆಲವರು ಭಂಟರನ್ನು ಕರೆಸಿಕೊಂಡು ತಾವೂ ಬಲಪ್ರದರ್ಶನಕ್ಕೆ ಮುಂದಾದರು. ಅಷ್ಟೇ ಅಲ್ಲದೆ, ತಮ್ಮ ಸಮುದಾಯದ ರಾಮಚಂದ್ರಾಪುರ ಮಠದ ಮೊರೆಹೋಗಿ, ಧರ್ಮದರ್ಶಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದರು. ಆದರೆ, ಕೊನೆಗೆ ಮಠದವರು ಮಧ್ಯಸ್ಥಿಕೆ ಹೊಂದಾಣಿಕೆಯ ಸೂತ್ರ ತಂದರೂ ಆ ಹೊಂದಾಣಿಕೆ ಸೂತ್ರ ಯಶಸ್ವಿಯಾಗಲಿಲ್ಲ.

ಹಾಗಾಗಿ ಭಟ್ಟರು ನೇರವಾಗಿ ಮುಖ್ಯಮಂತ್ರಿ ಯಡ್ಡಿಯೂರಪನವರ ಮುಂದೆ ದೂರು ತೋಡಿಕೊಂಡಿದ್ದರು. ಸಿಎಂ ಯಡಿಯೂರಪ್ಪ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸುವಂತೆ ಸ್ಥಳೀಯ ಹರಿತಾಳ ಹಾಲಪ್ಪ ಹಾಗೂ ಸ್ವತಃ ಧರ್ಮದರ್ಶಿ ರಾಮಪ್ಪ ಅವರ ಅಳಿಯ ಹರತಾಳು ಹಾಲಪ್ಪ ಅವರಿಗೆ ಸೂಚಿಸಿದ್ದರು. ಆದರೆ, ಶಾಸಕರ ಪ್ರಯತ್ನ ಕೂಡ ಫಲ ನೀಡಿಲ್ಲ. ಹಾಗಾಗಿ ತಟ್ಟೆಕಾಸಿನ ಜುಗಲ್ ಬಂಧಿ ಯಥಾ ಪ್ರಕಾರ ಮುಂದುವರಿದಿದೆ.

ಇದೀಗ ಈ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದ್ದು, ಸಾಗರ ದಸಂಸ(ದಲಿತ ಸಂಘರ್ಷ ಸಮಿತಿ) ಮತ್ತು ಮಲೆನಾಡಿನ ಹಲವು ಜನಪರ ಸಂಘಟನೆಗಳು ಭಕ್ತರ ಹಣದ ವಿಷಯದಲ್ಲಿ ದೇವಾಲಯದಲ್ಲಿ ಎರಡು ಬಣಗಳ ನಡುವೆ ಸಂಘರ್ಷ ಉಂಟಾಗಿದ್ದು, ಪರಸ್ಪರರು ರೌಡಿ ಪಡೆಗಳನ್ನು ಜೊತೆಗಿಟ್ಟುಕೊಂಡು ಕತ್ತಿ ಮಸೆಯುತ್ತಿದ್ದಾರೆ. ಹಾಗಾಗಿ, ದೇವಾಲಯವನ್ನು ಕೂಡಲೇ ಮುಜರಾಯಿ ಇಲಾಖೆಯ ವಶಕ್ಕ ಪಡೆಯಬೇಕು. ಅಮಾಯಕ ಭಕ್ತರು ದೇವಾಲಯದ ಮೇಲೆ ಇಟ್ಟಿರುವ ನಂಬಿಕೆಗೆ ಚ್ಯುತಿಯಾಗದಂತೆ ಸ್ವಚ್ಛ, ಪ್ರಾಮಾಣಿಕ ಮತ್ತು ಪಾರದರ್ಶಕ ವ್ಯವಸ್ಥೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ.

‘ಮುಖ್ಯವಾಗಿ ಜನರ ಕಾಣಿಕೆಯ ಹಣ ಮತ್ತು ಹರಕೆಯ ನಗ-ನಗದುಗಳು ಇಬ್ಬರು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ. ವಾರ್ಷಿಕ ನೂರಾರು ಕೋಟಿ ರೂಪಾಯಿಗಳ ಹಣ ಮತ್ತು ವಸ್ತು ಒಡೆವೆ ಸಂದಾಯವಾಗುತ್ತಿದ್ದರೂ, ಅದಾವುದಕ್ಕೂ ಲೆಕ್ಕಪತ್ರವಿಲ್ಲ, ಹೊಣೆಗಾರಿಕೆ ಇಲ್ಲ, ಉತ್ತರದಾಯಿತ್ವವೂ ಇಲ್ಲ. ತೆರಿಗೆಯಾಗಲೀ, ಸರ್ಕಾರಕ್ಕೆ ಲೆಕ್ಕಪತ್ರವಾಗಲೀ ಸಲ್ಲಿಸುತ್ತಿಲ್ಲ. ಕನಿಷ್ಟ ದೇವಾಲಯದ ಸುತ್ತಮುತ್ತಲ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಕನಿಷ್ಟ ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು ಮುಂತಾದ ನಾಗರಿಕ ಸೌಲಭ್ಯಗಳಿಗೂ ಚಿಕ್ಕಾಸು ಬಳಕೆಯಾಗುತ್ತಿಲ್ಲ. ಹಾಗಾಗಿ, ಕೂಡಲೇ ದೇವಾಲಯದ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನೂರಾರು ಕೋಟಿ ವರ್ಷಗಳ ಅಕ್ರಮ ಆಸ್ತಿ ಪತ್ತೆ ಮಾಡಿ, ವಶಪಡಿಸಿಕೊಳ್ಳಬೇಕು ಮತ್ತು ದೇವಾಲಯವನ್ನು ಮುಜರಾಯಿ ಇಲಾಖೆಗೆ ವಹಿಸಬೇಕು’ ಎಂದು ದಸಂಸ ನಾಯಕ ದೂಗೂರು ಪರಮೇಶ್ವರ ಆಗ್ರಹಿಸಿದ್ದಾರಾದರೂ ಆದರೂ ಅದು ಸಾರ್ವಜನಿಕ ಆಸ್ತಿಯಾಗಿಲ್ಲ. ಮೊನ್ನೆ ಸೋಮವಾರ ಸಾಗರದಲ್ಲಿ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆಗ್ರಹ ಮುಂದಿಟ್ಟಿದ್ದಾರೆ.‘ಪತ್ರಿಕೆ’ಯೊಂದಿಗೆ ಮಾತನಾಡಿದ ಅವರು, ‘ಭಕ್ತರ ಹಣ ಸಂಪೂರ್ಣ ದುರುಪಯೋಗವಾಗುತ್ತಿದೆ. ದುಡ್ಡಿನ ವಿಷಯದಲ್ಲಿಯೇ ಇದೀಗ ಇಬ್ಬರ ನಡುವೆ ಸಂಘರ್ಷ ಉಂಟಾಗಿದೆ. ಅಕ್ರಮ ಗಳಿಕೆಯ ಹಣ ದೇವಾಲಯ ಅಥವಾ ಆ ದ್ವೀಪ ಪ್ರದೇಶದ ಒಳಿತಿಗೆ ಬಳಕೆಯಾಗುವ ಬದಲು ರಾಮಪ್ಪ ಮತ್ತು ಭಟ್ಟರ ಖಜಾನೆ ಪಾಲಾಗುತ್ತಿದೆ. ಇಬ್ಬರೂ ರಾಜ್ಯದ ಮೂಲೆಮೂಲೆಯಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ, ತೋಟ- ಜಮೀನು ಖರೀದಿಸಿದ್ದಾರೆ.

ನೂರಾರು ಕೋಟಿ ರೂಪಾಯಿಗಳ ಮಾಡಿದ್ದಾರೆ. ಮತ್ತು ಆ ಮೌಲ್ಯದ ಈ ಆಸ್ತಿಪಾಸ್ತಿ ಸಂಪೂರ್ಣ ಅಕ್ರಮವಾಗಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಕ್ಕೆ ದೂರು ಸಲ್ಲಿಸಿದ್ದಾರೆ ‘ದಸಂಸ’ದವರು. ಜೊತೆಗೆ ಸಿಎಂ ಯಡಿಯೂರಪ್ಪ ಅವರಿಗೂ ಮನವಿ ಮಾಡಿದ್ದೇವೆ. ದೇವಾಲಯದ ಹೆಸರಿನಲ್ಲಿ ಅರಣ್ಯ ಭೂಮಿ ಕಬಳಿಕೆ, ಸರ್ಕಾರಿಜಮೀನು ಒತ್ತುವರಿಯಂತಹ ಅಕ್ರಮಗಳನ್ನೂ ಈ ಇಬ್ಬರು ಎಸಗಿದ್ದಾರೆ. ಆ ಬಗ್ಗೆ ಕೂಡ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದೂ ಹೇಳುತ್ತಾರೆ ದೂಗುರ ಪರಮೇಶ್ವರ.

ಈ ನಡುವೆ, ಇಬ್ಬರ ನಡುವಿನ ವಿವಾದ ಬಗೆಹರಿಯದೇ ಇದ್ದಲ್ಲಿ, ದೇವಾಲಯವನ್ನು ಮುಜರಾಯಿ ಇಲಾಖೆಯ ವಶಕ್ಕೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಸಾಗರದ ಜನಪ್ರತಿನಿಧಿಗಳ ಕಡೆಯಿಂದಲೇ ಸರ್ಕಾರದ ಉನ್ನತ ಮಟ್ಟಕ್ಕೆ ರವಾನೆಯಾಗಿದೆ. ಸ್ಥಳೀಯವಾಗಿ ಎರಡು ಪ್ರಬಲ ಸಮುದಾಯಗಳ ನಡುವಿನ ಸಂಘರ್ಷವಾಗಿ ಈ ವಿವಾದ ಬೆಳೆಯುವ ಸಾಧ್ಯತೆ ಇದ್ದು, ಹಾಗೇನಾದರೂ ಆದಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೇ ಕೊಡಲಿ ಪೆಟ್ಟು ಎಂಬುದನ್ನು ಊಹಿಸಿರುವ ಸ್ಥಳೀಯ ನಾಯಕರು, ಸರಳ ಪರಿಹಾರವಾಗಿ ಮುಜರಾಯಿ ಇಲಾಖೆಯ ಅಸ್ತ್ರ ಪ್ರಯೋಗಕ್ಕೆ ಮುಂದಾದರೂ ಅಚ್ಚರಿ ಇಲ್ಲ.ಈ ನಡುವೆ, ಧರ್ಮದರ್ಶಿ ಮತ್ತು ಭಟ್ಟರ ನಡುವಿನ ಸಂಘರ್ಷ, ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ಹಲವು ಅಕ್ರಮಗಳ ಬಗ್ಗೆಯೂ ಸಾರ್ವಜನಿಕ ಚರ್ಚೆಗೆ ಚಾಲನೆ ನೀಡಿದ್ದು, ವಿವಾದ ದೇವಾಲಯದ ಖ್ಯಾತಿಯ ರೀತಿಯಲ್ಲೇ ಬಿರುಗಾಳಿಯಂತೆ ಹಬ್ಬತೊಡಗಿದೆ..!

-# ಕೆ.ಶಿವು.ಲಕ್ಕಣ್ಣವರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *