ನ್ಯಾಯವಾದಿ ಎಚ್.ವಿ. ಹೆಗಡೆ ಇನ್ನಿಲ್ಲ

ಹಿರಿಯ ನ್ಯಾಯವಾದಿ ಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಕುಮಟಾದಲ್ಲಿ ಮೂರು ಕುಟುಂಬಗಳು ನ್ಯಾಯವಾದಿಗಳ ಕುಟುಂಬ ಎಂದೇ ಪ್ರಸಿದ್ಧಿ ಪಡೆದಿತ್ತು.ಅದರಲ್ಲಿ ದಿವಂಗತ ವೆಂಕಟೇಶ ಶಾನಭಾಗರ ಕುಟುಂಬ, ಶಾಸ್ತ್ರೀ ಕುಟುಂಬ, ಹಾಗೂ ಇಂದು ಮೃತರಾದ ಎಚ್. ವಿ.ಹೆಗಡೆ. ಕುಟುಂಬ. ನಾನು ಎಚ್.ವಿ.ಹೆಗಡೆಯವರನ್ನು ನೋಡಿದ್ದು, ಅವರು ಕುರಿತು ಅವರು ಕುಟುಂಬದ ಕುರಿತು ಕೇಳಿದ್ದು.ನನ್ನ ತಂದೆ ಯವರಿಂದ ಮತ್ತು ದೊಡ್ಡಪ್ಪನವರಿಂದ . ಕಾರಣ ಇಷ್ಟೇ. ಹಿಂದೆ ಕೆಲವು ಕುಟುಂಬಕ್ಕೆ ಕುಲಪುರೋಹಿತರು ಇರುವುದನ್ನು ಕೇಳಿರಬಹುದು. ನಮ್ಮಕೂಜಳ್ಳಿಯ ಕುಪ್ಪನೇರಿ ಕುಟುಂಬಕ್ಕೆ ಎಚ್. ವಿ.ಹೆಗಡೆಯವರು ಹಾಗೂ ಅವರ ತಂದೆಯವರು ವಿ.ಟಿ. ಹೆಗಡೆ (ಅವರಿಗೆ ಮೂರೂರು ಹೆಗಡೆ ವಕೀಲರು ಅಂತಾ ಕರೆಯುತ್ತಿದ್ದರಂತೆ )ಖಾಯಂ ವಕೀಲರು . ವಕೀಲರಿಗೂ ನಮ್ಮ ಕುಟುಂಬದ ಬಹುತೇಕರ ಹೆಸರು ಚಿರಪರಿಚಿತ ವಾಗಿತ್ತು. ಇವರು ಖಾಯಂ ನಮ್ಮ ವಕೀಲರು ಆಗಿರಲೂ ಕಾರಣ ವೃತ್ತಿಪರತೆ, ಕಕ್ಷೀದಾರರ ಪರ ನಿಲ್ಲುವ ಬದ್ಧತೆ. ಅಪಾರವಾದ ಕಾನೂನಿನ ಜ್ಞಾನ.ಇವರ ಗುಣಗಳು ಈ ರೀತಿ ಇದ್ದವಂತೆ. ಎಂದೂ ಇವರು ಫೀ ಗಾಗಿ ಒತ್ತಡ ಮಾಡುವುದಿಲ್ಲವಾಗಿತ್ತಂತೆ. ಹಣವನ್ನು ಆರಂಭದಲ್ಲಿ ತೆಗೆದುಕೊಂಡು ನಂತರ ಕೇಸು ಮುಗಿದ ಮೇಲೆ ಉಳಿದ ಖರ್ಚು ತೆಗೆದು ಕೊಳ್ಳುವುದು. ಅದೂ ಅವರ ಆಫೀಸಿನಲ್ಲಿ ಮಾತ್ರ ಹಣ ತೆಗೆದು ಕೊಳ್ಳುವುದು. ಸಿಕ್ಕ ಸಿಕ್ಕಲ್ಲಿ ಕೋರ್ಟ್ ಆವರಣದಲ್ಲಿ ಫೀ ತೆಗೆದು ಕೊಳ್ಳುತ್ತಿರಲಿಲ್ಲವಂತೆ.

ಕೇಸು ವಿಚಾರಣೆ ಗೆ ಬರುವ ದಿನಾಂಕದ ಮೊದಲು ಅಂಚೆ ಕಾರ್ಡ್ ಬರೆಯುತ್ತಿದ್ದರು. ಅದರಲ್ಲಿ ಕೇಸಿನ ದಿನಾಂಕ ನಮೂದಿಸಿ ಬೆಳಿಗ್ಗೆ ಆಫೀಸಿಗೆ ಬಂದು ಭೇಟಿಯಾಗುವುದು ಅಂತಾ ಇರುತ್ತಿತ್ತು.ನಮ್ಮ ತಂದೆಯವರು ಪಂಚೆ ಮತ್ತು ಆಕಾಶ ನೀಲಿ ಬಣ್ಣದ ಅಂಗಿ ತೊಟ್ಟು ನಡೆದು ಕುಮಟಾಕ್ಕೆ ಹೊರಟರು ಎಂದರೆ,ನಮ್ಮ ದೊಡ್ಡಪ್ಪ ರುಮಾಲು ಸುತ್ತಿ ಹಳದಿ ಷರಟು ಧರಿಸಿ ಕುಮಟಾಕ್ಕೆ ಹೊರಟರೆಂದರೆ ಬಹುತೇಕ ಸಾರಿ ಅದು ವಕೀಲರ ಮನೆಗೆ ಆಗಿರುತ್ತಿತ್ತು. ದಿವಂಗತರ ಬಗ್ಗೆ, ಅವರ ಕಾನೂನಿನ ಜ್ಞಾನ ದ ಬಗ್ಗೆ ಅಪಾರ ಗೌರವ ವಿಶ್ವಾಸವಿತ್ತು. ಅವರು ಕೇಸು ಹಿಡಿದರೆಂದರೆ ಗೆಲುವು ಖಚಿತ. ಎಲ್ಲಾ ಸಿವಿಲ್ ಕೇಸುಗಳನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಅಲ್ಲದೆ ಯಾವುದೇ ಕಾರಣಕ್ಕೂ ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಪೋಲಿಸ್ ಸ್ಟೇಷನ್ ಗೆ ಬರುತ್ತಿರಲಿಲ್ಲವಾಗಿತ್ತಂತೆ. ಇದೇ ಸಂದರ್ಭದಲ್ಲಿ ಅವರ ಆತ್ಮೀಯ ಸಹಾಯಕ ನನ್ನು ನೆನಪಿಸಲೇ ಬೇಕು. ಕಾಗದ ಪತ್ರಗಳನ್ನು ತಯಾರಿ ಮಾಡುವವನು ಅಳ್ವೇಕೋಡಿಯ ಬೀರಪ್ಪ ನಾಯ್ಕ. ಅವರ ನಂಬಿಗಸ್ತ ಸಹಾಯಕ. ಆತನು ಸಹ ಅದ್ಭುತ ಕಾನೂನಿನ ಜ್ಞಾನ ಹೊಂದಿದ್ದ. ಆತನು ಬರೆದ ದಸ್ತಾವೇಜು ನಾನು ಓದಿದ್ದೇನೆ. ಆಗ ದಸ್ತಾವೇಜು ಕೈ ಬರಹದಲ್ಲಿ ಇರುತ್ತಿತ್ತು. ಕೆಲವು ಮಾತ್ರ ಟೈಪ್ ಮಾಡಲಾಗುತ್ತಿತ್ತು.ಬೀರಪ್ಪ ನಾಯ್ಕಅವರ ಅಕ್ಷರ ಅಷ್ಟು ಸುಂದರ ಇರುತ್ತಿತ್ತು. ಛಾಪ ಕಾಗದದ ಮೇಲೆ ತಿದ್ದಿದ ಬರಹ ಇರಬಾರದು .ದಸ್ತಾವೇಜಿನಲ್ಲಿ ಅಥವಾ ವಿಲ್ಲ್ ನಾಮೆಯಲ್ಲಿ ದಸ್ತೂರು ಬೀರಪ್ಪ ನಾಯ್ಕ ಅಂತಾ ಇದ್ದರೆ ಅಲ್ಲಿ ದೋಷ ಇಲ್ಲ ಅಂತಾ ಅರ್ಥ. ಅಷ್ಟೊಂದು ಕರಾರುವಕ್ಕಾಗಿರುವ ಕರಾರು ಪತ್ರ. ವಾಂಟಣೀ ದಸ್ತಾವೇಜು. ಸಬ್ ರಿಜಿಸ್ಟ್ರಾರ್ ಸಂಬಂಧಿಸಿದ ಕಾಗದ ಪತ್ರಕ್ಕೆ ಬಹುತೇಕರು ನೇರವಾಗಿ ಅಳ್ವೇಕೋಡಿಯ ಬೀರಪ್ಪ ನಾಯ್ಕರನ್ನು ಭೇಟಿಯಾಗಿ ವ್ಯವಹರಿಸುತ್ತಿದ್ದರು.

ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬೀರಪ್ಪ ನಾಯ್ಕ ರು ವಕೀಲರು ಭೇಟಿಯಾಗಿ ಅಂದರೆ ಮಾತ್ರ ವಕೀಲರನ್ನು ಬೇಟಿಯಾಗುವದು. ಕಾಗದ ಪತ್ರಗಳ ವ್ಯವಾಹಾರ ಬೀರಪ್ಪನ ಹಂತದಲ್ಲಿ ಮುಗಿದು ಬಿಡುತ್ತಿತ್ತು. ಎಚ್. ವಿ. ಹೆಗಡೆಯವರು ಸಹ ಕೆಲವು ಕಾಗದ ಪತ್ರಗಳ ಬರವಣಿಗೆಗೆ ಬೀರಪ್ಪನ ಹತ್ತಿರ ಹೋಗಿ ಅನ್ನುತ್ತಿದ್ದರು. ಅವರಿಗೂ ಸಹ ಅವರ ಸಹಾಯಕನ ಬರವಣಿಗೆ ಯ ಬಗ್ಗೆ ಅಷ್ಟು ವಿಶ್ವಾಸ ಇತ್ತು. ನಮ್ಮ ಕುಟುಂಬದ ಬಹುತೇಕರಿಗೆ ಕಾನೂನಿನ ಜ್ಞಾನ, ಕಾನೂನಿನ ಭಾಷೆ, ಪರಿಚಿತವಾಗಿದ್ದು ದಿವಂಗತ ಎಚ್. ವಿ. ಹೆಗಡೆ ಮತ್ತು ಅವರ ಕುಟುಂಬದ ಕೊಡುಗೆ ಅಂದರೆ ಖಂಡಿತ ಅತಿಶಯೋಕ್ತಿಯಲ್ಲ. ಈ ಸಂದರ್ಭದಲ್ಲಿ ದಿವಂಗತ ರನ್ನು ನೆನಪಿಸಿ ಕೊಳ್ಳುವುದರ ಮೂಲಕ ವೈಯಕ್ತಿಕವಾಗಿ ನಮ್ಮ ಕುಟುಂಬದ ಪರವಾಗಿ ಹಾಗೂ ಅವರ ಎಲ್ಲಾ ಕಕ್ಷಿದಾರರ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅವರ ಬಂಧುಗಳಿಗೆ ಹಾಗೂ ಅವರ ಕಕ್ಷಿದಾರರಿಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

-ಡಾ.ಶ್ರೀಧರ ನಾಯ್ಕ ಕೂಜಳ್ಳಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *