ಶೇಖರ್ ನಾಯ್ಕ ಕಲಕೈ ಇನ್ನಿಲ್ಲ & ದ್ರೋಣಾವಸಾನ

ಜನಾನುರಾಗಿ ಸಮಾಜಸೇವಕರಾಗಿದ್ದ ಶಿರಸಿ ಕಲಕೈ ಶೇಖರ್ ನಾಯ್ಕ ಸೋಮವಾರ ವಿಧಿವಶವಾದರು. ಕಲಕೈ ಕುಟುಂಬದ ಹಿರಿಯರಾಗಿ ಯಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿದ್ದ ನಾಯ್ಕ ಕೆಲವು ದಿವಸಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇತ್ತೀಚಿನ ಕೊನೆಯ ಶಸ್ತ್ರ ಚಿಕಿತ್ಸೆ ಸೇರಿ ಕೆಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ತಮ್ಮ ಅನಾರೋಗ್ಯ, ಅಸಹಾಯಕತೆ ಲೆಕ್ಕಿಸದೆ ಜನರ ಕೆಲಸ ಮಾಡುತಿದ್ದರು. ಅವರ ಸಾವಿಗೆ ಶಿರಸಿ-ಸಿದ್ಧಾಪುರ ತಾಲೂಕುಗಳ ಅನೇಕರು ಮರುಗಿದ್ದಾರೆ.

ದ್ರೋಣಾವಸಾನ ಯಕ್ಷಗಾನ ಸಂಪನ್ನ
ಧಾರ್ಮಿಕ ನೆಲೆಗಟ್ಟಿನ ಮಗ್ಗುಲಲ್ಲಿಯೇ ಸಾಂಸ್ಕೃ ತಿಕ ಆಯಾಮಗಳು ತನ್ನತನವನ್ನು ತೆರೆದುಕೊಂಡಿರುವುದು ಸ್ಪಷ್ಟವಾಗಿದೆ. ಅದರಲ್ಲೂ ನಮ್ಮ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನವು ದೇವಾಲಯಗಳಿಂದ ಪೋಷಿತವಾದುದು ಪರಂಪರೆಯಾಗಿದೆ. ತೇರು, ಜಾತ್ರಗಳಲ್ಲದೇ ಎಲ್ಲ ಉತ್ಸವಾದಿಗಳಲ್ಲೂ ಯಕ್ಷಗಾನ ತಾಳಮದ್ದಳೆ ಅಥವಾ ಪ್ರದರ್ಶನಗಳನ್ನು ಏರ್ಪಡಿಸುವುದು ವಾಡಿಕೆ. ತಾಲೂಕಿನ ಪ್ರಸಿದ್ದ ಶಿವಕ್ಷೇತ್ರವಾದ ಇಟಗಿ ರಾಮೇಶ್ವರ ದೇವರ ರಥೋತ್ಸವದಲ್ಲೂ ಪ್ರದರ್ಶನವನ್ನು ಸಂಘಟಿಸಿರುವುದು ಶ್ಲಾಘನೀಯ ಎಂದು ಯಕ್ಷಗಾನ ಭಾಗವತರಾದ ಸತೀಶ ಹೆಗಡೆ ದಂಟಕಲ್ ಹೇಳಿದರು.

ಇಟಗಿಯ ಕಲಾಭಾಸ್ಕರ ಸಂಸ್ಥೆಯವರು ಭಾರತ ಸರಕಾರದ ಸಂಸ್ಕೃ ತಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಸಿದ್ದಪಡಿಸಿದ ದ್ವಿತೀಯ ಪ್ರಯೋಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಪ್ರದರ್ಶನಗಳ ಮೂಲಕವಾಗಿಯೇ ಯಕ್ಷಗಾನ ಕಲೆಯು ಉಳಿಯುತ್ತದೆ. ಈ ಮಾಧ್ಯಮಕ್ಕೆ ಅಪಚಾರವಾಗದಂತೆ ಜನಪ್ರೀಯತೆಯನ್ನು ಉಳಿಸಿಕೊಂಡು ಕೃತಿಯನ್ನು ರಂಗಕ್ಕಿಳಿಸುವುದು ಇಂದಿನ ಸವಾಲಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಇಟಗಿ ಮಹಾಬಲೇಶ್ವರ ಸ್ವಾಗತಿಸಿದರು. ಹವ್ಯಾಸಿ ಕಲಾವಿದರಾದ ರಾಮಕೃಷ್ಣ ಹೆಗಡೆ ತಾರಗೋಡು, ಲಕ್ಕಿಜಡ್ಡಿ ಪರಮೇಶ್ವರ ಹೆಗಡೆ, ಗಜಾನನ ಮುರೂರು, ವೀರೇಂದ್ರ ಗೌಡ ಹಾರ್ಸಿಕಟ್ಟೆ ಮುಂತಾದವರು ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಆಭಾರ ಮನ್ನಣೆಗೈದರು. ವಿಜೃಂಬಣೆಯಿಂದ ನಡೆದ ರಾಮೇಶ್ವರ ದೇವರ ರಥೋತ್ಸವದ ಜೊತೆಗೇ “ದ್ರೋಣಾವಸಾನ” ಹಾಗೂ ರಾಮೇಶ್ವರ ಗೆಳೆಯರ ಬಳಗದ ಆಶ್ರಯದಲ್ಲಿ ಪ್ರಸಿದ್ದ ಕಲಾವಿದರ ಕೂಟದೊಂದಿಗೆ “ರಾಜಾ ರುದ್ರಕೋಪ” ಯಕ್ಷಗಾನ ಪ್ರದರ್ಶನಗಳು ನಡೆದವು. ಶಿರಳಗಿ ತಿಮ್ಮಪ್ಪ ಹೆಗಡೆ (ದ್ರೋಣ) ಇಟಗಿ ಮಹಾಬಲೇಶ್ವರ (ಶ್ರೀಕೃಷ್ಣ) ಅತ್ತಿಮರ್ಡು ನರೇಂದ್ರ (ಅಶ್ವತ್ಥಾಮ) ಶಿರಗುಣಿ ಲಕ್ಷ್ಮೀನಾರಾಯಣ (ಕೌರವ), ಮುರೂರು ನಾಗೇಂದ್ರ (ದುಃಶಾಸನ) ಬೈಲಗದ್ದೆ ಮಾರುತಿ ನಾಯ್ಕ(ಧರ್ಮರಾಯ) ನಿತಿನ್ ದಂಟಕಲ್ (ಅರ್ಜುನ), ಸಂತೋಷ ಹೆಗಡೆ ಹುಣಸೇಮಕ್ಕಿ(ಕರ್ಣ), ಕಾರ್ತಿಕ ದಂಟಕಲ್ (ಸಾತ್ಯಕಿ ಹಾಗೂ ದೃಷ್ಟಧ್ಯುಮ್ನ) ದಂಟಕಲ್ ನಂದನ ಹೆಗಡೆ ಮತ್ತು ಸತೀಶ ಹೆಗಡೆಯ ಭಾಗವತಿಕೆಯಲ್ಲಿ ಗುಡ್ಡೆದಿಂಬ ಮಂಜುನಾಥ ಹಾಗೂ ಕೆ.ಎನ್.ಭಾರ್ಗವರ ಮದ್ದಳೆ-ಚಂಡೆ ನಿನಾದದೊಂದಿಗೆ ಉಡುಪಿ ರಾಜಗೋಪಾಲಾಚಾರ್ಯ ಮತ್ತು ಹೊಸತೋಟ ಮಂಜುನಾಥ ಭಾಗವತರು ರಚಿಸಿದ “ದ್ರೋಣಾವಸಾನ”ವು ಅದ್ಭುತ ರಂಗಕೃತಿಯಾಗಿ ಮೈತಳೆಯಿತು.
ಅಜ್ಞಾತ ಕವಿ ರಚಿಸಿದ ಯಕ್ಷಗಾನ “ರಾಜಾ ರುದ್ರಕೋಪ” ವನ್ನು ಸಂಪ ಲಕ್ಷ್ಮೀನಾರಾಯಣ ಹಾಗೂ ಬೋಳ್ಗೆರೆ ಗಜಾನನ ಭಂಡಾರಿಯವರ ಚಂಡೆ–ಮದ್ದಳೆ ಸಾಥ್ ನೊಂದಿಗೆ ಪ್ರಸಿದ್ದ ಭಾಗವತ ಬ್ರಹ್ಮೂರು ಶಂಕರ ಭಟ್ಟ ಸುಶ್ರಾವ್ಯವಾಗಿ ನಡೆಸಿಕೊಟ್ಟರು. ಹೊನ್ನೆಕೈ ಗಣಪತಿ ಹೆಗಡೆ(ಚಂದ್ರಸೇನ), ಪ್ರಭಾಕರ ಹೆಗಡೆ ಹಣಜಿಬೈಲು (ರಕ್ತಜಂಘ), ಅಶೋಕ ಭಟ್ಟ ಸಿದ್ದಾಪುರ (ನಾರದ), ವಿನಯ ಭಟ್ಟ ಬೇರೊಳ್ಳಿ(ರುದ್ರಕೋಪ), ವೆಂಕಟೇಶ ಹೆಗಡೆ ಬೊಗರಿಮಕ್ಕಿ (ರಕ್ತಕೇಶಿ), ಸದಾಶಿವ ಭಟ್ಟ ಮಲವಳ್ಳಿ(ಚಿತ್ರಾಕ್ಷಿ), ಮಾರುತಿ ನಾಯ್ಕ(ಸಖಿ) ನಾಗಪತಿ ಕೊಪ್ಪ (ಸತ್ಯಶೀಲೆ) ಚಪ್ಪರಮನೆ ಶ್ರೀಧರ ಹೆಗಡೆ (ಹಾಸ್ಯ) ಮುಂತಾದವರ ಸಹಯೋಗವು ಸಾಕಾರವಾಯಿತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *