ಶೇಖರ್ ನಾಯ್ಕ ಕಲಕೈ ಇನ್ನಿಲ್ಲ & ದ್ರೋಣಾವಸಾನ

ಜನಾನುರಾಗಿ ಸಮಾಜಸೇವಕರಾಗಿದ್ದ ಶಿರಸಿ ಕಲಕೈ ಶೇಖರ್ ನಾಯ್ಕ ಸೋಮವಾರ ವಿಧಿವಶವಾದರು. ಕಲಕೈ ಕುಟುಂಬದ ಹಿರಿಯರಾಗಿ ಯಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿದ್ದ ನಾಯ್ಕ ಕೆಲವು ದಿವಸಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇತ್ತೀಚಿನ ಕೊನೆಯ ಶಸ್ತ್ರ ಚಿಕಿತ್ಸೆ ಸೇರಿ ಕೆಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ತಮ್ಮ ಅನಾರೋಗ್ಯ, ಅಸಹಾಯಕತೆ ಲೆಕ್ಕಿಸದೆ ಜನರ ಕೆಲಸ ಮಾಡುತಿದ್ದರು. ಅವರ ಸಾವಿಗೆ ಶಿರಸಿ-ಸಿದ್ಧಾಪುರ ತಾಲೂಕುಗಳ ಅನೇಕರು ಮರುಗಿದ್ದಾರೆ.

ದ್ರೋಣಾವಸಾನ ಯಕ್ಷಗಾನ ಸಂಪನ್ನ
ಧಾರ್ಮಿಕ ನೆಲೆಗಟ್ಟಿನ ಮಗ್ಗುಲಲ್ಲಿಯೇ ಸಾಂಸ್ಕೃ ತಿಕ ಆಯಾಮಗಳು ತನ್ನತನವನ್ನು ತೆರೆದುಕೊಂಡಿರುವುದು ಸ್ಪಷ್ಟವಾಗಿದೆ. ಅದರಲ್ಲೂ ನಮ್ಮ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನವು ದೇವಾಲಯಗಳಿಂದ ಪೋಷಿತವಾದುದು ಪರಂಪರೆಯಾಗಿದೆ. ತೇರು, ಜಾತ್ರಗಳಲ್ಲದೇ ಎಲ್ಲ ಉತ್ಸವಾದಿಗಳಲ್ಲೂ ಯಕ್ಷಗಾನ ತಾಳಮದ್ದಳೆ ಅಥವಾ ಪ್ರದರ್ಶನಗಳನ್ನು ಏರ್ಪಡಿಸುವುದು ವಾಡಿಕೆ. ತಾಲೂಕಿನ ಪ್ರಸಿದ್ದ ಶಿವಕ್ಷೇತ್ರವಾದ ಇಟಗಿ ರಾಮೇಶ್ವರ ದೇವರ ರಥೋತ್ಸವದಲ್ಲೂ ಪ್ರದರ್ಶನವನ್ನು ಸಂಘಟಿಸಿರುವುದು ಶ್ಲಾಘನೀಯ ಎಂದು ಯಕ್ಷಗಾನ ಭಾಗವತರಾದ ಸತೀಶ ಹೆಗಡೆ ದಂಟಕಲ್ ಹೇಳಿದರು.

ಇಟಗಿಯ ಕಲಾಭಾಸ್ಕರ ಸಂಸ್ಥೆಯವರು ಭಾರತ ಸರಕಾರದ ಸಂಸ್ಕೃ ತಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಸಿದ್ದಪಡಿಸಿದ ದ್ವಿತೀಯ ಪ್ರಯೋಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಪ್ರದರ್ಶನಗಳ ಮೂಲಕವಾಗಿಯೇ ಯಕ್ಷಗಾನ ಕಲೆಯು ಉಳಿಯುತ್ತದೆ. ಈ ಮಾಧ್ಯಮಕ್ಕೆ ಅಪಚಾರವಾಗದಂತೆ ಜನಪ್ರೀಯತೆಯನ್ನು ಉಳಿಸಿಕೊಂಡು ಕೃತಿಯನ್ನು ರಂಗಕ್ಕಿಳಿಸುವುದು ಇಂದಿನ ಸವಾಲಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಇಟಗಿ ಮಹಾಬಲೇಶ್ವರ ಸ್ವಾಗತಿಸಿದರು. ಹವ್ಯಾಸಿ ಕಲಾವಿದರಾದ ರಾಮಕೃಷ್ಣ ಹೆಗಡೆ ತಾರಗೋಡು, ಲಕ್ಕಿಜಡ್ಡಿ ಪರಮೇಶ್ವರ ಹೆಗಡೆ, ಗಜಾನನ ಮುರೂರು, ವೀರೇಂದ್ರ ಗೌಡ ಹಾರ್ಸಿಕಟ್ಟೆ ಮುಂತಾದವರು ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಆಭಾರ ಮನ್ನಣೆಗೈದರು. ವಿಜೃಂಬಣೆಯಿಂದ ನಡೆದ ರಾಮೇಶ್ವರ ದೇವರ ರಥೋತ್ಸವದ ಜೊತೆಗೇ “ದ್ರೋಣಾವಸಾನ” ಹಾಗೂ ರಾಮೇಶ್ವರ ಗೆಳೆಯರ ಬಳಗದ ಆಶ್ರಯದಲ್ಲಿ ಪ್ರಸಿದ್ದ ಕಲಾವಿದರ ಕೂಟದೊಂದಿಗೆ “ರಾಜಾ ರುದ್ರಕೋಪ” ಯಕ್ಷಗಾನ ಪ್ರದರ್ಶನಗಳು ನಡೆದವು. ಶಿರಳಗಿ ತಿಮ್ಮಪ್ಪ ಹೆಗಡೆ (ದ್ರೋಣ) ಇಟಗಿ ಮಹಾಬಲೇಶ್ವರ (ಶ್ರೀಕೃಷ್ಣ) ಅತ್ತಿಮರ್ಡು ನರೇಂದ್ರ (ಅಶ್ವತ್ಥಾಮ) ಶಿರಗುಣಿ ಲಕ್ಷ್ಮೀನಾರಾಯಣ (ಕೌರವ), ಮುರೂರು ನಾಗೇಂದ್ರ (ದುಃಶಾಸನ) ಬೈಲಗದ್ದೆ ಮಾರುತಿ ನಾಯ್ಕ(ಧರ್ಮರಾಯ) ನಿತಿನ್ ದಂಟಕಲ್ (ಅರ್ಜುನ), ಸಂತೋಷ ಹೆಗಡೆ ಹುಣಸೇಮಕ್ಕಿ(ಕರ್ಣ), ಕಾರ್ತಿಕ ದಂಟಕಲ್ (ಸಾತ್ಯಕಿ ಹಾಗೂ ದೃಷ್ಟಧ್ಯುಮ್ನ) ದಂಟಕಲ್ ನಂದನ ಹೆಗಡೆ ಮತ್ತು ಸತೀಶ ಹೆಗಡೆಯ ಭಾಗವತಿಕೆಯಲ್ಲಿ ಗುಡ್ಡೆದಿಂಬ ಮಂಜುನಾಥ ಹಾಗೂ ಕೆ.ಎನ್.ಭಾರ್ಗವರ ಮದ್ದಳೆ-ಚಂಡೆ ನಿನಾದದೊಂದಿಗೆ ಉಡುಪಿ ರಾಜಗೋಪಾಲಾಚಾರ್ಯ ಮತ್ತು ಹೊಸತೋಟ ಮಂಜುನಾಥ ಭಾಗವತರು ರಚಿಸಿದ “ದ್ರೋಣಾವಸಾನ”ವು ಅದ್ಭುತ ರಂಗಕೃತಿಯಾಗಿ ಮೈತಳೆಯಿತು.
ಅಜ್ಞಾತ ಕವಿ ರಚಿಸಿದ ಯಕ್ಷಗಾನ “ರಾಜಾ ರುದ್ರಕೋಪ” ವನ್ನು ಸಂಪ ಲಕ್ಷ್ಮೀನಾರಾಯಣ ಹಾಗೂ ಬೋಳ್ಗೆರೆ ಗಜಾನನ ಭಂಡಾರಿಯವರ ಚಂಡೆ–ಮದ್ದಳೆ ಸಾಥ್ ನೊಂದಿಗೆ ಪ್ರಸಿದ್ದ ಭಾಗವತ ಬ್ರಹ್ಮೂರು ಶಂಕರ ಭಟ್ಟ ಸುಶ್ರಾವ್ಯವಾಗಿ ನಡೆಸಿಕೊಟ್ಟರು. ಹೊನ್ನೆಕೈ ಗಣಪತಿ ಹೆಗಡೆ(ಚಂದ್ರಸೇನ), ಪ್ರಭಾಕರ ಹೆಗಡೆ ಹಣಜಿಬೈಲು (ರಕ್ತಜಂಘ), ಅಶೋಕ ಭಟ್ಟ ಸಿದ್ದಾಪುರ (ನಾರದ), ವಿನಯ ಭಟ್ಟ ಬೇರೊಳ್ಳಿ(ರುದ್ರಕೋಪ), ವೆಂಕಟೇಶ ಹೆಗಡೆ ಬೊಗರಿಮಕ್ಕಿ (ರಕ್ತಕೇಶಿ), ಸದಾಶಿವ ಭಟ್ಟ ಮಲವಳ್ಳಿ(ಚಿತ್ರಾಕ್ಷಿ), ಮಾರುತಿ ನಾಯ್ಕ(ಸಖಿ) ನಾಗಪತಿ ಕೊಪ್ಪ (ಸತ್ಯಶೀಲೆ) ಚಪ್ಪರಮನೆ ಶ್ರೀಧರ ಹೆಗಡೆ (ಹಾಸ್ಯ) ಮುಂತಾದವರ ಸಹಯೋಗವು ಸಾಕಾರವಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *