ಕಾಸರಕೋಡು ಬಂದರಿನ ಖಾಸಗೀಕರಣ: ಒಂದು ಸಕಾಲಿಕ ಸ್ಪಂದನ

ಹೊನ್ನಾವರದ ಕಾಸರಕೋಡು ಬಂದರಿನ ಖಾಸಗೀಕರಣ ರದ್ದಾಗಲಿ.

ಕಡಲಂಚಿನ ಪಟ್ಟಣ ಹೊನ್ನಾವರದ ಕಾಸರಕೋಡು ಬಂದರನ್ನು ಖಾಸಗೀಕರಣ ಮಾಡುವುದನ್ನು ಮೀನುಗಾರರು ಪ್ರತಿಭಟಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸಮುದ್ರಕ್ಕೆ ಧುಮುಕಿದ್ದಾರೆ. ಈ ಘಟನೆ ಅಷ್ಟೇ ನೂ ದೊಡ್ಡ ಸುದ್ದಿಯಾಗಿಲ್ಲ. ಕೆಲವು ಸ್ಥಳಿಯ ಪತ್ರಿಕೆಗಳಲ್ಲಿ ಮತ್ತು ಯಾವುದೋ ಒಂದೆರಡು ವಾಹಿನಿಗಳಲ್ಲಿ ಸಣ್ಣದಾಗಿ ಸುದ್ದಿಯಾಗಿರುವುದು ಕಂಡುಬಂದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಈ ಬಗೆಗೆ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಅಂದರೆ ಗಂಭೀರ ಸಮಸ್ಯೆಯೊಂದು ಎಷ್ಟು ಚರ್ಚೆಯಾಗಬೇಕಿತ್ತೋ ಆ ಪ್ರಮಾಣದಲ್ಲಿ ಸುದ್ದಿಯಾಗದಿರುವುದು ಜನರ ಗಮನ ಸೆಳೆಯದಿರುವುದು ಕಾಣಿಸುತ್ತಿದೆ.ಈ ಕಾಲದ ಆಳುವವರ ಸ್ವಾರ್ಥದ ಯೋಜನೆಗಳು ಮತ್ತು ನೀತಿಗಳು ಜನಸಾಮಾನ್ಯರನ್ನು ಬಲಿತೆಗೆದುಕೊಳ್ಳುವ ಉದ್ದೇಶಕ್ಕೆ ತಕ್ಕಂತೆ ಹೊನ್ನಾವರದ ಬಂದರಿನ ಖಾಸಗೀಕರಣವೂ ನಡೆದಿದೆ. ರಾಜ್ಯದ ವಿಮಾನ ನಿಲ್ದಾಣಗಳನ್ನು ಖಾಸಗಿಕರಣ ಮಾಡಿದಾಗ ಎದುರಾಗದ ಪ್ರತಿರೋಧ ಬಂದರಿನ ಖಾಸಗೀಕರಣದಿಂದ ಎದುರಾಗಿದೆ. ಇದಕ್ಕೆ ಕಾರಣ ಬಂದರಿನ ಖಾಸಗೀಕರಣ ನೇರವಾಗಿ ಮೀನುಗಾರರ ಉದ್ಯೋಗವನ್ನು ಭೂಮಿಯನ್ನು ಕಡಲಿನ ಮೇಲಿನ ಸ್ವಾಮ್ಯವನ್ನು ಕಸಿದುಕೊಳ್ಳುತ್ತದೆ. ಇದರಿಂದ ಮೀನುಗಾರರ ಬದುಕು ಮೂರಾಬಟ್ಟೆಯಾಗುತ್ತದೆ. ಹಾಗಾಗಿ ಸಹಜವಾಗಿಯೇ ಪ್ರತಿರೋಧ ಸ್ಪೋಟಗೊಂಡಿದೆ.

ಕೃಶಿ ಕಾಯಿದೆಗಳು ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸುವಂತೆ ಕಡಲು ಮತ್ತು ಬಂದರುಗಳ ಖಾಸಗೀಕರಣ ಮೀನುಗಾರರನ್ನು ನಾಶಮಾಡುತ್ತದೆ. ಕಿರು ಮತ್ತು ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸುವ ಮೀನುಗಾರರು ಈ ಮೊದಲೇ ವಿಪರೀತ ನಷ್ಟದಲ್ಲಿದ್ದರು. ಮೀನಿನ ಸಂಪತ್ತು ಕಡಿಮೆಯಾಗಿ ಆದಾಯ ಕುಗ್ಗಿತ್ತು. ಅಂತಹದ್ದರಲ್ಲಿ ಬಂದರಿನ ಖಾಸಗೀಕರಣವು ಮೀನುಗಾರರನ್ನು ಖಾಯಮ್ಮಾಗಿ ನಾಶಮಾಡಲಿದೆ. ಈಗಾಗಲೇ ಹಲವು ಯೋಜನೆಗಳು ಕಡಲಂಚಿನ ಪಟ್ಟಣಗಳಲ್ಲಿ ಜಾರಿಯಾಗಿ ಅದರಿಂದ ಮೀನುಗಾರರು ವಿಪರೀತ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಕಡಲಿನ ವಿಪರೀತ ಮಾಲಿನ್ಯದಿಂದ ಮೀನಿನ ಸಂತತಿ ನಶಿಸುತ್ತಿದೆ. ದೊಡ್ಡ ಉದ್ದಿಮೆಗಳು ನಡೆಸುವ ಆಳ ಸಮುದ್ರದ ಮೀನುಗಾರಿಕೆಯಿಂದ ಪಾರಂಪರಿಕ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಅಂದರೆ ಅನೇಕ ಸಮಸ್ಯೆಗಳು ಮೀನುಗಾರರನ್ನು ಬಾಧಿಸುತ್ತಿವೆ. ರಾಜಕೀಯ ಮತ್ತು ಶೈಕ್ಶಣಿಕ ಅರಿವಿನ ಕೊರತೆಯಿಂದ ಮೀನುಗಾರ ಸಮುದಾಯ ಬಳಲು ತ್ತಿದೆ. ಆದರೆ ತನ್ನ ಸಮಸ್ಯೆಗಳಿಗಿಂತ ಹೆಚ್ಚಾಗಿ ಮೀನುಗಾರ ಸಮುದಾಯ ಮತೀಯ ರಾಜಕಾರಣದ ಕಡೆಗೆ ಆಸಕ್ತಿ ತಾಳಿರುವುದು ಸುಳ್ಳಲ್ಲ. ಮತೀಯ ರಾಜಕಾರಣದ ಕಾಲಾಳುಗಳಂತೆ ಮೀನುಗಾರ ಸಮುದಾಯದ ಯುವಕರು ದುಡಿಯುತ್ತಿದ್ದಾರೆ. ಉಳಿದವರು ಮತವೊತ್ತುವ ಯಂತ್ರಗಳಾಗಿದ್ದಾರೆ. ಅಂದರೆ ತಮ್ಮ ನಿಜವಾದ ಸಮಸ್ಯೆಗಳ ಬಗೆಗೆ ಹೆಚ್ಚು ತಲೆ ಕೆಡಿಸಿಕೊಂಡವರಲ್ಲ. ಈಗ ತಮ್ಮ ಬುಡಕ್ಕೆ ಬೆಂಕಿಬಿದ್ದಿರುವ ಕಾರಣ ಆತಂಕಗೊಂಡು ಪ್ರತಿಭಟನೆಗಿಳಿದಿದ್ದಾರೆ. ಇದು ಸಹಜವಾದ ಬೆಳವಣಿಗೆಯೇ ಸರಿ. ಈಗಲಾದರೂ ಮೀನುಗಾರ ಸಮುದಾಯ ಎಚ್ಚೆತ್ತು ಸಂಘಟಿತ ಪ್ರಯತ್ನದಿಂದ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಒಮ್ಮೆ ಸಾರ್ವಜನಿಕ ಸಂಪತ್ತು ಖಾಸಗಿಯವರಿಗೆ ಪರಭಾರೆಯಾದರೆ ಅದು ಮತ್ತೆಂದೂ ಸಾರ್ವಜನಿಕ ಬಳಕೆ ಇಲ್ಲದಂತೆ ಆಗಿಹೋಗುತ್ತದೆ. ಹಾಗಾಗಿ ಸಾರ್ವಜನಿಕರೂ ಕೂಡ ಈ ಬಗ್ಗೆ ಎಚ್ಚತ್ತು ಮೀನುಗಾರ ಸಮುದಾಯವನ್ನು ಬೆಂಬಲಿಸಬೇಕು. ಬದುಕುವ ಹಕ್ಕುಗಳನ್ನು ಎತ್ತಿಹಿಡಿಯಬೇಕು. ಸದ್ಯ ಬಂದರಿನ ಖಾಸಗಿಕರಣ ಯೋಜನೆಯನ್ನು ನಿಲ್ಲಿಸಿ ಅದನ್ನು ಸ್ಥಳಿಯರ ಅಭಿವೃದ್ದಿಗೆ, ಮೀನುಗಾರ ಸಮುದಾಯ ಒಳಿತಿಗೆ ತಕ್ಕಂತೆ ಉಳಿಸಿ ಬೆಳೆಸಬೇಕು. ಯಾವುದೇ ಯೋಜನೆಯು ಸ್ಥಳೀಯ ಜನಸಮುದಾಯಗಳ ಒಳಿತಿಗೆ ತಕ್ಕಂತೆ ಅಭಿವೃದ್ಧಿ ಪಡಿಸದೆ, ಸ್ಥಳಿಯರನ್ನು ಪರಕೀಯಗೊಳಿಸಿ ‘ಅಭಿವೃದ್ಧಿ’ ಯೋಜನೆಗಳನ್ನು ರೂಪಿಸಿದರೆ ಅವು ದಮನಿತ ಸಮುದಾಯಗಳ ಸಮಾಧಿ ಮೇಲೆ ಕಟ್ಟಿದ ಮೋಸಗಾರರ ದಂತಗೋಪುರಗಳಾಗಿರುತ್ತವೆ. ದುರಂತವೆಂದರೆ ಜನರ ಒಳಿತಿಗೆ ಕೆಲಸ ಮಾಡಬೇಕಾದ ಆಡಳಿತ ಯಂತ್ರಾಂಗ ಬಲಿತವರ ಪರವಾಗಿ ನಿಂತು ದಮನಿತರ ಮೇಲೆ ದಬ್ಬಾಳಿಕೆ ನಡೆಸುವುದು ಅಕ್ಶಮ್ಯ. ಸದ್ಯ ಎದ್ದಿರುವ ಪ್ರತಿಭಟನೆಯ ಆಕ್ರೋಶದಿಂದಲಾದರೂ ಪಾಠ ಕಲಿತು ಸ್ಥಳೀಯ ಮೀನುಗಾರರು ಮತ್ತು ಇತರೆ ಜನರ ಹಿತಾಸಕ್ತಿಯನ್ನು ಕಾಪಾಡುವ ಬುದ್ಧಿ ಆಡಳಿತ ಯಂತ್ರಾಂಗಕ್ಕೆ ಬರಲಿ ಎಂದು ಎಲ್ಲರೂ ಒತ್ತಾಯಿಸಬೇಕಿದೆ.

-ರಂಗನಾಥ ಕೋಣನಕುಂಟೆ, ಹೊನ್ನಾವರ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *