ಬ್ರಾಹ್ಮಣ್ಯವಲ್ಲದಿದ್ದರೆ ಮತ್ತೇನು? ಭಾಗ-02

1990 ರ ಅಂತ್ಯದ ಅವಧಿಯಲ್ಲಿ ನಾವೆಲ್ಲಾ ವಿದ್ಯಾರ್ಥಿಗಳು.ನಾವು ಕಾರವಾರದಲ್ಲಿ ಅಧ್ಯಯನ ಮಾಡಿದ್ದರಿಂದಾಗಿ ನಮಗೆ ಜಾತಿ-ಧರ್ಮ,ಪ್ರಾದೇಶಿಕತೆಗಳ ಸಂಕುಚಿತತೆಗಳಿರಲಿಲ್ಲ. ಇದೇ ಅವಧಿಯಲ್ಲಿ ಕಾರವಾರದ ವೈಶಿಷ್ಟ್ಯದ ಬಗ್ಗೆ ಒಂದೆರಡು ಅನಿಸಿಕೆ ಬರೆದರೆ ಅದು ಅಪ್ರಸ್ತುತವಾಗಲಾರದು ಕೂಡಾ. ನನ್ನ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿ ಕಾರವಾರದ ರಸ್ತೆಗಳೆಲ್ಲಾ ಸಮುದ್ರ ಸೇರುತ್ತವೆ ಎಂದು ಬರೆದಿದ್ದಾರೆ. ಹೌದು ಕಾರವಾರದ ರಸ್ತೆಗಳೆಲ್ಲಾ ಕೊನೆಗೆ ವಿಶಾಲಸಮುದ್ರ ಸೇರಿ ಅಂತ್ಯವಾಗುತ್ತವೆ. ಹಾಗಾಗಿ ಅಲ್ಲಿಯ ಜನರಲ್ಲಿ ಜಾತಿಯತೆಯ ಸಂಕುಚಿತತೆ ಕಡಿಮೆ. ಕೊಂಕಣಿ ಮಾತನಾಡಿ, ಮೀನುತಿಂದು ಅವರೊಳಗೆ ಒಂದಾಗಿಬಿಟ್ಟರೆ ಕಾರವಾರಕ್ಕೆ ಯಾವ ಪರದೇಶಿಯೂ ಹಂಮ್ಗೆಲೆ (ನಮ್ಮವ ) ಆಗಿಬಿಡುವ ಹಿಂದೆ ಕಾರವಾರದ ಜನರ ವೈಶಿಷ್ಟ್ಯ,ಮಿತಿಗಳಿವೆ. ಈ ವಾತಾವರಣದಲ್ಲಿ ಎಂಟ್ಹತ್ತು ವರ್ಷ ಕಳೆದ ನನಗೆ ಉತ್ತರ ಕನ್ನಡ ಜಿಲ್ಲೆಯ ಜಾತೀವಾದ, ಧರ್ಮಾಂಧತೆ, ಮತಾಂಧತೆ ಅರಿವಿಗೆ ಬಂದದ್ದೇ ಶಿರಸಿಗೆ ಬಂದ ಮೇಲೆ.

ಮೊದಲ ಕಂತಿನಲ್ಲಿ ಶಿರಸಿಯ ಮಾಧ್ಯಮಜೀವಿಗಳ ಪರಿವಾರದ ಸಂಕುಚಿತತೆ ಬಗ್ಗೆ ಬರೆದಿದ್ದೇನಿ. ಈ ಪರಿವಾರದ ಕೆಲವರು ಈಗ ಕಾಲಲಯದಲ್ಲಿ ಸವೆದು ಹೋಗಿದ್ದಾರೆ. ಕೆಲವರು ಈಗಲೂ ವರದಿಗಾರರಾಗಿ ಜೀವಂತವಾಗಿದ್ದಾರೆ. ಇವರ ಒಂದು ತಂಡಕ್ಕೆ ಆರ್.ಎಸ್.ಎಸ್. ಹಿನ್ನೆಲೆಯ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ ದಂಡನಾಯಕನಾದರೆ ಇನ್ನೊಂದು ತಂಡದಲ್ಲಿ ಲೋಕಧ್ವನಿಯ ಅಂದಿನ ಸಂಪಾದಕ ಗೋಪಾಲಕೃಷ್ಣ ಆನವಟ್ಟಿ ಪ್ರಮುಖರು, ಇವರ ಮಧ್ಯೆ ಜನಮಾಧ್ಯಮದ ಜಯರಾಮ ಹೆಗಡೆಯವರೂ ಇದ್ದರೆನ್ನಿ.

ಜಯರಾಮ ಹೆಗಡೆ ಇಂದು, ಅಂದು ಎಂದೆಂದೂ ಜಾತ್ಯಾತೀತವಾಗಿ, ಪ್ರಗತಿಪರವಾಗಿ ಯೋಚಿಸುವ ಮನುಷ್ಯ. ಗೋಪಾಲಕೃಷ್ಣ ಆನವಟ್ಟಿ ಸಂಘದ ಸಂಪರ್ಕದ ವರಾದರೂ ಭತ್ತಗುತ್ತಿಗೆ ಜನರಷ್ಟು ಧರ್ಮಾಂಧರು,ಜಾತ್ಯಾಂಧರು ಆಡುವುದೊಂದು ಮಾಡುವುದೊಂದು ಗುಣಗಳ ಬೂಟಾಟಿಕೆ (ವ್ಯಕ್ತಿಯಾಗಿರಲಿಲ್ಲ) ವ್ಯಕ್ತಿಯಾಗಿರಲಿಲ್ಲ.

ಹೊಸದಾಗಿ ಶಿರಸಿ ಮಾಧ್ಯಮಲೋಕ ಸೇರಿದ ನಮ್ಮಂಥವರು ಅವರೆದುರು ಮಾತನಾಡದ ಸ್ಥಿತಿ. ಮೊದಮೊದಲು ನಮಗೆ ಈ ಪರಿವಾರದ ಗುಂಪುಗಳ ಮಾಹಿತಿ ಅಷ್ಟಾಗಿರಲಿಲ್ಲ. ಶೂದ್ರರನ್ನು ನೋಡಿ ವಿಚಿತ್ರವಾಗಿ ಆಡುತಿದ್ದ ಸಚ್ಚಿದಾನಂದ ಹೆಗಡೆ ತನ್ನ ಪರಿವಾರದ ಹಿನ್ನೆಲೆಯ ಗುಂಪಿನೊಂದಿಗೆ ಗುಂಪುಗಾರಿಕೆ ಮಾಡುವುದು,ಸತ್ಯವನ್ನು ಸುಳ್ಳುಮಾಡುವುದು, ಸುಳ್ಳನ್ನು ಸತ್ಯ ಮಾಡುವ ವೈದಿಕ ಹೀನತನವೇ ಪತ್ರಿಕೋದ್ಯಮ ಎಂದುಕೊಂಡಂಗಿದ್ದ. ಈ ವೈದಿಕ ಕುಟಿಲತೆಯ ಸಮರ್ಥನೆಗೆ ತನ್ನ ಅಳಿಯ ವಿಶ್ವೇಶ್ವರ ಭಟ್ಟ, ಅವರ ಚೇಲಾ ಪ್ರತಾಪಸಿಂಹನಂಥ ಮತಾಂಧರನ್ನು ಅತಿಥಿಗಳಾಗಿ ಕರೆಸುತಿದ್ದ! ಇದಕ್ಕೆ ಚಪ್ಪಾಳೆ ತಟ್ಟಲು ಎ.ಬಿ.ವಿ.ಪಿ. ಹುಡುಗರು,ಪತ್ರಕರ್ತ ಬಳಗದಲ್ಲಿ ತರಬೇತಿ ಪಡೆದಿದ್ದ ಅಡ್ಡಕಸಬಿಗಳನ್ನು ಬಳಸುತಿದ್ದ. ಇವರ ಈ ವೈದಿಕ ಕುಟಿಲತೆಗೆ ಅಂದಿನ ಎಂ.ಇ.ಎಸ್. ಅಧ್ಯಕ್ಷರಾಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತರಾಮ ಹೆಗಡೆ ಸೇರಿದಂತೆ ಯಾರೂ ವಿರೋಧಿಸುತ್ತಿರಲಿಲ್ಲ.?!

ಇದೇ ಸಂದರ್ಭದಲ್ಲಿ ಎದುರಾದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷತೆಗೆ ನಾನೂ ಸ್ಫರ್ಧಿಸಿದೆ. ನನಗೆ ಎದುರಾಗಿದ್ದ ಪ್ರತಿಸ್ಫರ್ಧಿ ಸುಬ್ರಾಯ ಭಟ್ಟರಿಗೆ ಸಚ್ಚಿ ಪರಿವಾರದ ಬೆಂಬಲ ಅವರ ವಿರುದ್ಧವಿದ್ದ ಕೆಲವರು ನನ್ನ ಬೆಂಬಲಕ್ಕೆ ನಿಂತು ಚುನಾವಣೆ ನಡೆದು ಎರಡ್ಮೂರು ಗುಂಪುಗಳಾಗಿ ಜಾತಿ-ಧರ್ಮಾಂಧತೆಯ ಅವರ ಕುಟಿಲತೆಯ ವಿರುದ್ಧ ನಾನು ಸೋಲಬೇಕಾಯಿತು. ಚುನಾವಣೆ ನಂತರ “ಅಲ್ಲಾ ಭಟ್ರೆ ಇದು ಮಾಧ್ಯಮಲೋಕದ ಚುನಾವಣೆ ನೀವು ನೋಡಿದ್ರೆ ಜಾತಿ-ಧರ್ಮ,ಹಣ ಎಲ್ಲವನ್ನೂ ಪ್ರಯೋಗಿಸಿಬಿಟ್ಟರಲ್ರೀ , ಅಂದೆ ಅದಕ್ಕವರು ‘ಚುನಾವಣೆ ಅಂದ್ರೆ ಚುನಾವಣೆ, ಅಂದ್ರು. ಅಷ್ಟರಮೇಲೆ ಮತ್ತೊಂದೆರಡು ಚುನಾವಣೆ ಎದುರಿಸಿದ ಮೇಲೆ ನಮಗೆ ಅರ್ಥವಾದದ್ದು ‘ಚುನಾವಣೆ ಅಂದ್ರೆ ಚುನಾವಣೆ’!

ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಎಲ್ಲವನ್ನೂ ಪ್ರಯೋಗಿಸಿ ಗೆದ್ದ ಸಚ್ಚಿಯ ವೈದಿಕ ಪರಿವಾರ ನಮ್ಮ ತೋಜೋವಧೆಗೂ ಅಹರ್ನಿಸಿ ಪ್ರಯತ್ನಿಸಿತ್ತು. ಅದೇ ಪರಿವಾರ ನಂತರ ನಮ್ಮ ಜಿ.ಪಂ. ಚುನಾವಣೆಗಳಲ್ಲೂ ಬೇನಾಮಿ ಪತ್ರ ಪ್ರಕಟಿಸಿ, ಮಾಧ್ಯಮಗಳಲ್ಲಿ, ಭಿತ್ತಿಚಿತ್ರಗಳಲ್ಲಿ ಬರೆದು ಅವರ ಹಿಂದುತ್ವವಾದಿ ವೈದಿಕ ಕುಟಿಲತೆಗಳನ್ನು ಪ್ರತಿಬಿಂಬಿಸಿತ್ತು. ಬಾಯಲ್ಲಿ ಹಿಂದುತ್ವ, ಆಚರಣೆಯಲ್ಲಿ ವೈದಿಕತೆ, ಹೆಸರಿಗೆ ರಾಷ್ಟ್ರೀಯವಾದ ವಾಸ್ತವದಲ್ಲಿ ಹಿಂದುತ್ವದ ಸೋಗಿನಲ್ಲಿ ಜಾತ್ಯಾಂಧತೆ,ಧರ್ಮಾಂಧತೆ ಇವೆಲ್ಲಾ ಬ್ರಾಹಮಣ್ಯದ ಅಸಹ್ಯಗಳಾಗದಿದ್ದರೆ ಇವೆಕ್ಕೆ ಬೇರೆ ಎನೆಂದು ಹೆಸರಿಸಬೇಕು?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *