ಅಪಘಾನ್ ನಿಂದ ಅಮೇರಿಕಾದ ನಿರ್ಗಮನದ ಆನಂದ

ಅಫ್ಘಾನಿಸ್ತಾನದಿಂದ ಅಮೆರಿಕದ ನಿರ್ಗಮನ*

ಕಳೆದ ಕೆಲದಿನಗಳಿಂದ ಅಫ್ಘಾನಿಸ್ತಾನದ ವಿಷಯದಲ್ಲಿ ಕೆಲವು ಭಾರತೀಯರ ಅಭಿಪ್ರಾಯಗಳನ್ನು ಓದಿ ಪ್ರತಿಕ್ರಿಯಿಸುತ್ತಿದ್ದೇನೆ. ಅಮೆರಿಕದ ಹೆಚ್ಚಿನ ನಾಗರಿಕರಿಗೆ ಅಫ್ಘಾನಿಸ್ತಾನದ ವಿಷಯದಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ. ಆದಷ್ಟು ಬೇಗ ಆಫ್ಘನ್ ಸಂಘರ್ಷ ಮುಗಿದರೆ ಒಳ್ಳೆಯದು ಎಂಬ ಇಚ್ಛೆ ಇದೆ. 2001 ರಿಂದ ಸುಮಾರು 2,500 ಅಮೆರಿಕನ್ ಸೈನಿಕರು ಆಫ್ಘಾನಿಸ್ತಾನದಲ್ಲಿ ಸತ್ತಿದ್ದಾರೆ. 1,000 ಅಮೆರಿಕದ ಮಿತ್ರ ರಾಷ್ಟ್ರಗಳ ಸೈನಿಕರು ಸತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಆಫ್ಘನ್ ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಬೈಡನ್ ನಿಲುವಿಗೆ ಸಾರ್ವತ್ರಿಕ ಪ್ರತಿರೋಧ ಅಮೆರಿಕಲ್ಲಿಲ್ಲ. ಬೈಡನ್ ಮೊನ್ನೆ ಸಾರ್ವಜನಿಕವಾಗಿ ಮರುಗಿದ್ದು ಇತ್ತೀಚೆಗೆ ಜೀವ ತೆತ್ತ ಅಮೆರಿಕದ ಸೈನಿಕರ ಬಗ್ಗೆ ಅವರ ಅನುಕಂಪವನ್ನು ತೋರಿಸುತ್ತದೆ.

ಬೈಡನ್ ಅವರ ದೀರ್ಘಕಾಲದ ಸಾರ್ವಜನಿಕ, ರಾಜಕೀಯ ಜೀವನ ಮತ್ತು ಅವರು ಕೌಟುಂಬಿಕವಾಗಿ ಎದುರಿಸಿದ ಕಷ್ಟದ ಪರಿಸ್ಥಿತಿಗಳನ್ನು ಸ್ವಲ್ಪ ತಿಳಿದರೆ ಬೈಡನ್ ಕಂಬನಿಗರೆದದ್ದು ಅವರ ದೌರ್ಬಲ್ಯ ಎಂದು ಯಾರೂ ಭಾವಿಸುವುದಿಲ್ಲ. 5 ವರ್ಷಗಳ ಹಿಂದಿನವರೆಗೂ ಅವರು ಅಮೆರಿಕದ ಮೇಲ್ಮನೆಯ ದೀರ್ಘಕಾಲದ ಸದಸ್ಯರಾಗಿ, ನಂತರ 8 ವರ್ಷಗಳ ಕಾಲ ದೇಶದ ಉಪಾಧ್ಯಕ್ಷರಾಗಿ ಬೆಂಕಿಯ ಚೆಂಡಿನಂತೆಯೇ ಇದ್ದರು. ಈಗ ಜೀವನದಲ್ಲಿ ಮಾಗಿದ್ದಾರೆ. ಅಫ್ಘಾನಿಸ್ತಾನದ ಜನರಿಗೆ ತಮ್ಮ ಸ್ವಾತಂತ್ರ್ಯದ ಕುರಿತು ಹೋರಾಡಲು ಮನಸ್ಸಿಲ್ಲದಿದ್ದರೆ ಅಮೆರಿಕ ಯಾಕೆ ಹೋರಾಡಬೇಕು? ಎನ್ನುವ ಬೈಡನ್ ಮಾತು ಸತ್ಯವಾದುದು.

ಅಫ್ಘಾನಿಸ್ತಾನದ ಸೈನಿಕರಿಗೆ, ರಾಜಕಾರಣಿಗಳಿಗೆ ಇಚ್ಛಾಶಕ್ತಿ ಮತ್ತು ಪ್ರಾಮಾಣಿಕತೆಯ ಕೊರತೆ ಇದೆ. ಹೀಗಾಗಿ ಅಮೆರಿಕ ಇನ್ನು 50 ವರ್ಷ ಆಫ್ಘಾನಿಸ್ತಾನದಲ್ಲಿ ಇದ್ದರೂ ಕೇವಲ ಅಮೆರಿಕದ ಧನ ಮತ್ತು ಜನ ಹಾನಿ ಮಾತ್ರ ಆಗುತ್ತದೆ. ಅಫ್ಘಾನಿಸ್ತಾನದ ಜನರಿಗೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಕೊಡಿಸುವುದು ಎಂದರೆ ಗಾಳಿಯಲ್ಲಿ ಗುದ್ದಿ ಮೈನೋವು ಮಾಡಿಕೊಂಡಂತೆ.ಇದೇ ಬರುವ ಆಗಸ್ಟ್ 31 ರಂದು ಅಮೆರಿಕ ಆಫ್ಘಾನಿಸ್ತಾನದಿಂದ ನಿರ್ಗಮಿಸುವುದು ಯೋಜಿತವಾಗಿದೆ. ಆದರೆ ಅಮೆರಿಕ ಅಫ್ಘಾನಿಸ್ತಾನ ವಿಷಯದಲ್ಲಿ ಬೇರೆ ರೀತಿಯಲ್ಲಿ ಹೊರಗಿನಿಂದ ತೊಡಗಿಕೊಂಡಿರುವುದು ನಿಶ್ಚಿತ. ಓರ್ವ ವಿಶ್ಲೇಷಕರ ಪ್ರಕಾರ, ಬೈಡನ್ ಆಫ್ಘನ್ ಸಂಘರ್ಷದಲ್ಲಿ ಅಮೆರಿಕದ ಪಾತ್ರವನ್ನು ಕೊನೆಗೊಳಿಸಿಲ್ಲ. ಬದಲಾಗಿ ಅಮೆರಿಕದ ಆಫ್ಘನ್ ನೀತಿಯ ಪಥವನ್ನು ಬದಲಾಯಿಸಿದ್ದಾರೆ ಅಷ್ಟೇ.ಅಮೆರಿಕದಂತೆ ಪ್ರತಿದಿನ 300 ಮಿಲಿಯನ್ ಡಾಲರ್ ಗಳು (ರೂ. 2,250 ಕೋಟಿ) ಹಣವನ್ನು 20 ವರ್ಷಗಳ ಕಾಲ ಭಾರತ ಬೇರೆ ದೇಶದಲ್ಲಿ ಖರ್ಚು ಮಾಡುತ್ತಿದ್ದರೆ, ಭಾರತೀಯರಿಗೆ ಎನನಿಸುತ್ತಿತ್ತು?

ಭಾರತ ಸರಕಾರ ಹೀಗೆ ಬೇರೆ ದೇಶದಲ್ಲಿ ತೆರಿಗೆದಾರರ ಹಣವನ್ನು ಖರ್ಚು ಮಾಡುತ್ತಾ ಇರಲಿ ಎಂದು ಭಾರತೀಯರು ಅನುಮೊದಿಸುತ್ತಿದ್ದರೆ? ಖಂಡಿತವಾಗಿಯೂ ಇಲ್ಲ. ಭಾರತ ಆಫ್ಘಾನಿಸ್ತಾನದಲ್ಲಿ ಬಂಡವಾಳ ಹೂಡಿದ್ದ ಹಣ 3 ಬಿಲಿಯನ್ ಡಾಲರ್ ಅಂತೆ (ಅಂದರೆ ಅಮೆರಿಕ 10 ದಿನ ಆಫ್ಘಾನಿಸ್ತಾನದಲ್ಲಿ ಮಾಡಿದ ಖರ್ಚಿಗೆ ಸಮ). ಅಮೆರಿಕದ ಹಣ ಬಂಡವಾಳ ಹೂಡಿಕೆ ಅಲ್ಲ. ಅದು ಖರ್ಚು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯರು ಕೇವಲ ಪ್ರದರ್ಶನ ನೋಡುವ ಪ್ರೇಕ್ಷಕರಂತೆ. ಕುಣಿಯುವವರಿಗೆ ಕುಣಿದು ಕುಣಿದು ಸಾಕಾಗಿದೆ. ಆದಷ್ಟು ಬೇಗ ಪ್ರದರ್ಶನ ಮುಗಿದರೆ ಸಾಕು ಎಂಬಂತಾಗಿದೆ. ಆದರೆ ಪ್ರೇಕ್ಷಕರಿಗೆ ಪ್ರದರ್ಶನ ಮುಗಿಯುವುದು ಬೇಕಾಗಿಲ್ಲ.ಮೊನ್ನೆ ಆಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್ ಸ್ಫೋಟದಲ್ಲಿ ಸತ್ತ 13 ಅಮೆರಿಕದ ಸೈನಿಕರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಅವರಲ್ಲಿ ನಾನು ವಾಸಿಸುವ ಊರಿನ ನಿಕೋಲ್ ಜೀ ಎನ್ನುವ 23 ವರ್ಷದ ಮಹಿಳೆಯೂ ಒಬ್ಬಳು. 1 ವಾರದ ಹಿಂದೆ ಅಷ್ಟೇ ಅಫ್ಘಾನಿಸ್ತಾನದಲ್ಲಿ ಕಷ್ಟದಲ್ಲಿದ್ದ ಶಿಶುವೊಂದರ ರಕ್ಷಣೆಮಾಡುತ್ತಾ ಇರುವ ಚಿತ್ರವನ್ನು ನಿಕೋಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ತನ್ನ ಉದ್ಯೋಗವನ್ನು ಪ್ರೀತಿಸುತ್ತೇನೆ ಎಂದಿದ್ದಳು.ಆಫ್ಘಾನಿಸ್ತಾನದಿಂದ ಅಮೆರಿಕ ಹಿಂದಕ್ಕೆ ಸರಿಯಬಾರದು ಎಂದು ಹೇಳುವ ಜನರಿಗೆ ಒಂದು ಮಾತು – ಯುದ್ದಕ್ಕಿಂತ ಯುದ್ದದ ವಾರ್ತೆ ಕೇಳುವುದು ರೋಚಕವಂತೆ !!

*** ಚಿತ್ರ: ನಿಕೋಲ್ ಜೀ (23 ವರ್ಷ), ರೋಸವಿಲ್, ಕ್ಯಾಲಿಫಾರ್ನಿಯ ***– ಆನಂದ ಹಾಸ್ಯಗಾರ, ಕರ್ಕಿ (ಅಮೆರಿಕ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *