sorry- ಈಗ ಜಲಪಾತ ವೀಕ್ಷಣೆಗೆ ಪ್ರಸಕ್ತ ಕಾಲವಲ್ಲ!

ಮಲೆನಾಡಿನಲ್ಲಿ ಈಗ ಜಲಪಾತಗಳ ಬೋರ್ಗರೆತ ಹೆಚ್ಚಿದೆ. ಸಮಾಧಾನಕರ ಮಳೆಗಾಲಕಂಡ ಮಲೆನಾಡು ಜಲಪಾತಗಳನ್ನು ಮೈತುಂಬಿಸಿದೆ. ಮಳೆಕಡಮೆಯಾಯಿತೆಂದು ಈ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ  ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಆದರೆ ಮೋಡಕವಿದ ವಾತಾವರಣದ ಈ ಸಮಯ ಜಲಪಾತ ವೀಕ್ಷಣೆಗೆ ಅನುಕೂಲಕರವಲ್ಲ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ.

ಮಳೆಗಾಲದ ಕೊನೆಯಲ್ಲಿ ಜಲಪಾತಗಳು ತುಂಬಿ ಹರಿಯುವುದು ಸಾಮಾನ್ಯ . ಮಳೆನೀರಿನಿಂದ ಸೊಕ್ಕಿರುವ ಜಲಪಾತಗಳು ರಭಸದಿಂದ ಸುರಿಯುವ ಸಮಯದಲ್ಲಿ ತುಂತುರು ಹನಿ, ಹಿಮವನ್ನು ಸಿಡಿಸುವುದು ಸಾಮಾನ್ಯ.    ಇಂಥ ಹಿಮಚ್ಚಾದಿತ ವಾತಾವರಣದಲ್ಲಿ ಜಲಪಾತ ಕಾಣುವುದು ಸಾಧ್ಯವೆ? ಈ ಸಮಸ್ಯೆಯಿಂದಾಗಿ ಪ್ರವಾಸಿಗರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.


ಜಗತ್ಪಸಿದ್ಧ ಜೋಗಜಲಪಾತವನ್ನು ನೋಡಲು ಬರುವ ಬಹುತೇಕರು ಉತ್ತರ ಕನ್ನಡದ ಅನೇಕ ಜಲಪಾತಗಳನ್ನು ವೀಕ್ಷಿಸಲು ಕುತೂಹಲದಿಂದ ಬರುತ್ತಾರೆ. ಆದರೆ ಮೋಡಕವಿದ ವಾತಾವರಣ, ತುಂತುರು ಮಳೆಯಲ್ಲಿ ಜಲಪಾತ ವೀಕ್ಷಣೆಗೆ ಬಂದರೆ ಜಲಪಾತಗಳು ಹಿಮದಿಂದ ತುಂಬಿ ಕಾಣುವುದೇ ಇಲ್ಲ. ಮಳೆಗಾಲದ ನಂತರ ಬಿಸಿಲು ಬಿದ್ದರೆ ಬಿಸಿಲು, ಉಷ್ಣಕ್ಕೆ ಮಂಜುಕರಗಿ ಜಲಪಾತಗಳ ದರ್ಶನವಾಗುತ್ತದೆ. ಆದರೆ ಈ ವರ್ಷ ಮಳೆಗಾಲ ಮುಗಿಯುವ ಸಮಯಕ್ಕೆ ಮೋಡ, ಮಂಜು ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆಯಾಗುತ್ತಿದೆ. ಈ ವಾತಾವರಣದಲ್ಲಿ ಜಲಪಾತಗಳೆಲ್ಲಾ ಮಂಜಿನಲ್ಲಿ ಮರೆಯಾಗಿ ಮಸುಕಾಗಿವೆ.


ಈ ವಾತಾವರಣದಲ್ಲೂ ಜಲಪಾತ ನೋಡೇ ತೆರಳುತ್ತೇವೆ ಎನ್ನುವ ಸಾಹಸಿಗಳಿಗೇನೂ ಕಡಮೆಇಲ್ಲ, ಜೋಗ ಜಲಪಾತ, ಬುರುಡೆ ಫಾಲ್ಸ್, ಉಂಚಳ್ಳಿ ಸೇರಿದಂತೆ ಬಹುತೇಕ ಜಲಪಾತಗಳಲ್ಲಿ ಬಿಸಿಲಿಗಾಗಿ ಕಾದು ಕ್ಷಣಮಾತ್ರದಲ್ಲಿ ಮತ್ತೆ ಕವಿಯುವ ಮಂಜನ್ನು ದೂಷಿಸಿ ತೆರಳುವ ಪ್ರವಾಸಿಗರೂ ಸಿಗುತ್ತಾರೆ. ಹಾಗಾಗಿ ಬಿಸಿಲು, ಉಷ್ಣತಾಪಮಾನದ ಸಮಯದಲ್ಲಿ ಜಲಪಾತ ನೋಡುವವರಿಗೆ ಈಗಿನ ವಾತಾವರಣ ಅಡಚಣೆ ಉಂಟುಮಾಡುತ್ತಿದೆ. ಮಲೆನಾಡಿನ ವಾತಾವರಣ ಬಲ್ಲವರು ಅಕ್ಟೋಬರ್ ನಿಂದ ಜನೇವರಿ ತಿಂಗಳುಗ ಳ ವರೆಗೆ ಇಲ್ಲಿಯ ಜಲಪಾತಗಳ ವೀಕ್ಷಣೆಗೆ ಬರುತ್ತಾರೆ. ಆ ಸಮಯದಲ್ಲಿ ಜಿಟಿಜಿಟಿ ಮಳೆ ಮಂಜುಕವಿದ ವಾತಾವರಣ ಇರುವುದಿಲ್ಲ. ಇಂಥ ಪ್ರತಿಕೂಲ ವಾತಾವರಣವಿದ್ದರೂ ಬೆಳಕು, ಬಿಸಿಲು ನುಸುಳುವುದರಿಂದ ಆಗೊಮ್ಮೆ ಈಗೊಮ್ಮೆಯಾದರೂ ಜಲಪಾತಗಳ ದರ್ಶನ ದೊರೆಯುತ್ತಿದೆ. ಮಲೆನಾಡು, ಕರಾವಳಿಯಲ್ಲಿ ಮಳೆ ಕಡಿಮೆಯಾಯ್ತೆಂದು ಧಾವಿಸಿಬಂದು ಇಲ್ಲಿ ಜಲಪಾತ ನೋಡಲಾಗದೆ ಚಡಪಡಿಸಿದ ಅನೇಕ ಪ್ರಕರಣಗಳ ಮಾಹಿತಿಯಿಂದ ವಿಜಯಕರ್ನಾಟಕ ಪ್ರವಾಸಿಗರಿಗೆ ಈ ವಿಶೇಶ ಮಾಹಿತಿ ನೀಡುತ್ತಿದೆ. ನೆನಪಿಡಿ ಅಕ್ಟೋಬರ್ ಮೊದಲು ಜಲಪಾತವೀಕ್ಷಣೆಗೆ ಕಾಲ ಪ್ರಸಕ್ತವಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *