sorry- ಈಗ ಜಲಪಾತ ವೀಕ್ಷಣೆಗೆ ಪ್ರಸಕ್ತ ಕಾಲವಲ್ಲ!

ಮಲೆನಾಡಿನಲ್ಲಿ ಈಗ ಜಲಪಾತಗಳ ಬೋರ್ಗರೆತ ಹೆಚ್ಚಿದೆ. ಸಮಾಧಾನಕರ ಮಳೆಗಾಲಕಂಡ ಮಲೆನಾಡು ಜಲಪಾತಗಳನ್ನು ಮೈತುಂಬಿಸಿದೆ. ಮಳೆಕಡಮೆಯಾಯಿತೆಂದು ಈ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ  ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಆದರೆ ಮೋಡಕವಿದ ವಾತಾವರಣದ ಈ ಸಮಯ ಜಲಪಾತ ವೀಕ್ಷಣೆಗೆ ಅನುಕೂಲಕರವಲ್ಲ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ.

ಮಳೆಗಾಲದ ಕೊನೆಯಲ್ಲಿ ಜಲಪಾತಗಳು ತುಂಬಿ ಹರಿಯುವುದು ಸಾಮಾನ್ಯ . ಮಳೆನೀರಿನಿಂದ ಸೊಕ್ಕಿರುವ ಜಲಪಾತಗಳು ರಭಸದಿಂದ ಸುರಿಯುವ ಸಮಯದಲ್ಲಿ ತುಂತುರು ಹನಿ, ಹಿಮವನ್ನು ಸಿಡಿಸುವುದು ಸಾಮಾನ್ಯ.    ಇಂಥ ಹಿಮಚ್ಚಾದಿತ ವಾತಾವರಣದಲ್ಲಿ ಜಲಪಾತ ಕಾಣುವುದು ಸಾಧ್ಯವೆ? ಈ ಸಮಸ್ಯೆಯಿಂದಾಗಿ ಪ್ರವಾಸಿಗರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.


ಜಗತ್ಪಸಿದ್ಧ ಜೋಗಜಲಪಾತವನ್ನು ನೋಡಲು ಬರುವ ಬಹುತೇಕರು ಉತ್ತರ ಕನ್ನಡದ ಅನೇಕ ಜಲಪಾತಗಳನ್ನು ವೀಕ್ಷಿಸಲು ಕುತೂಹಲದಿಂದ ಬರುತ್ತಾರೆ. ಆದರೆ ಮೋಡಕವಿದ ವಾತಾವರಣ, ತುಂತುರು ಮಳೆಯಲ್ಲಿ ಜಲಪಾತ ವೀಕ್ಷಣೆಗೆ ಬಂದರೆ ಜಲಪಾತಗಳು ಹಿಮದಿಂದ ತುಂಬಿ ಕಾಣುವುದೇ ಇಲ್ಲ. ಮಳೆಗಾಲದ ನಂತರ ಬಿಸಿಲು ಬಿದ್ದರೆ ಬಿಸಿಲು, ಉಷ್ಣಕ್ಕೆ ಮಂಜುಕರಗಿ ಜಲಪಾತಗಳ ದರ್ಶನವಾಗುತ್ತದೆ. ಆದರೆ ಈ ವರ್ಷ ಮಳೆಗಾಲ ಮುಗಿಯುವ ಸಮಯಕ್ಕೆ ಮೋಡ, ಮಂಜು ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆಯಾಗುತ್ತಿದೆ. ಈ ವಾತಾವರಣದಲ್ಲಿ ಜಲಪಾತಗಳೆಲ್ಲಾ ಮಂಜಿನಲ್ಲಿ ಮರೆಯಾಗಿ ಮಸುಕಾಗಿವೆ.


ಈ ವಾತಾವರಣದಲ್ಲೂ ಜಲಪಾತ ನೋಡೇ ತೆರಳುತ್ತೇವೆ ಎನ್ನುವ ಸಾಹಸಿಗಳಿಗೇನೂ ಕಡಮೆಇಲ್ಲ, ಜೋಗ ಜಲಪಾತ, ಬುರುಡೆ ಫಾಲ್ಸ್, ಉಂಚಳ್ಳಿ ಸೇರಿದಂತೆ ಬಹುತೇಕ ಜಲಪಾತಗಳಲ್ಲಿ ಬಿಸಿಲಿಗಾಗಿ ಕಾದು ಕ್ಷಣಮಾತ್ರದಲ್ಲಿ ಮತ್ತೆ ಕವಿಯುವ ಮಂಜನ್ನು ದೂಷಿಸಿ ತೆರಳುವ ಪ್ರವಾಸಿಗರೂ ಸಿಗುತ್ತಾರೆ. ಹಾಗಾಗಿ ಬಿಸಿಲು, ಉಷ್ಣತಾಪಮಾನದ ಸಮಯದಲ್ಲಿ ಜಲಪಾತ ನೋಡುವವರಿಗೆ ಈಗಿನ ವಾತಾವರಣ ಅಡಚಣೆ ಉಂಟುಮಾಡುತ್ತಿದೆ. ಮಲೆನಾಡಿನ ವಾತಾವರಣ ಬಲ್ಲವರು ಅಕ್ಟೋಬರ್ ನಿಂದ ಜನೇವರಿ ತಿಂಗಳುಗ ಳ ವರೆಗೆ ಇಲ್ಲಿಯ ಜಲಪಾತಗಳ ವೀಕ್ಷಣೆಗೆ ಬರುತ್ತಾರೆ. ಆ ಸಮಯದಲ್ಲಿ ಜಿಟಿಜಿಟಿ ಮಳೆ ಮಂಜುಕವಿದ ವಾತಾವರಣ ಇರುವುದಿಲ್ಲ. ಇಂಥ ಪ್ರತಿಕೂಲ ವಾತಾವರಣವಿದ್ದರೂ ಬೆಳಕು, ಬಿಸಿಲು ನುಸುಳುವುದರಿಂದ ಆಗೊಮ್ಮೆ ಈಗೊಮ್ಮೆಯಾದರೂ ಜಲಪಾತಗಳ ದರ್ಶನ ದೊರೆಯುತ್ತಿದೆ. ಮಲೆನಾಡು, ಕರಾವಳಿಯಲ್ಲಿ ಮಳೆ ಕಡಿಮೆಯಾಯ್ತೆಂದು ಧಾವಿಸಿಬಂದು ಇಲ್ಲಿ ಜಲಪಾತ ನೋಡಲಾಗದೆ ಚಡಪಡಿಸಿದ ಅನೇಕ ಪ್ರಕರಣಗಳ ಮಾಹಿತಿಯಿಂದ ವಿಜಯಕರ್ನಾಟಕ ಪ್ರವಾಸಿಗರಿಗೆ ಈ ವಿಶೇಶ ಮಾಹಿತಿ ನೀಡುತ್ತಿದೆ. ನೆನಪಿಡಿ ಅಕ್ಟೋಬರ್ ಮೊದಲು ಜಲಪಾತವೀಕ್ಷಣೆಗೆ ಕಾಲ ಪ್ರಸಕ್ತವಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *