ನಾಡಿನ ಸಿಂಹದ ಅವಕಾಶವಾದಿತನ ಮತ್ತು ಕಾಡಿನ ಹುಲಿಯ ತ್ಯಾಗದ ಸ್ಮರಣೆ

ಅಕ್ಷರ ಮಾಂತ್ರಿಕ ಲಂಕೇಶ್ ಪ್ರಭಾವಕ್ಕೊಳಗಾಗದವರಿಲ್ಲ ಎನ್ನುವ ಕಾಲದಲ್ಲಿ ಕಣ್ಣುಬಿಟ್ಟ ನನ್ನಂಥ ಅನೇಕರಿಗೆ ಲಂಕೇಶ್ ಮಾನಸಗುರು. ಪ್ರಜಾವಾಣಿಯಲ್ಲಿ ಲಂಕೇಶ್ ಅಂಕಣ ಬರೆಯುತಿದ್ದರು ಎಂದು ಕೇಳಿದ್ದ ನಮಗೆ ಲಂಕೇಶ್ ಇಂಗ್ಲೀಷ್ ಉಪನ್ಯಾಸಕರಾಗಿದ್ದರು ಎನ್ನುವುದು ಅರಿವಿತ್ತಷ್ಟೇ. ಒಂದೆರಡು ದಶಕ ಲಂಕೇಶ್ ಪ್ರಭಾವಳಿಯ ಗಾಳಿ ತಾಕಿಸಿಕೊಂಡ ನಮ್ಮಂ ಥ ಅನೇಕರು ಸೇರಿ ವೈದಿಕ ಮನಸ್ಥಿತಿಯ ತಥಾಕಥಿತ ಹಿಂದುತ್ವವಾದಿಗಳೊಂದಿಗೆ ಜಗಳಕ್ಕೆ ಬೀಳುತಿದ್ದೆವು. ಕಾರವಾರದ ಕಾಲೇಜಿನಲ್ಲಿ ಲಂಕೇಶ್ ಪತ್ರಿಕೆ ಅಂಚೆಯಲ್ಲಿ ಬರುವುದನ್ನೇ ಕಾಯುತ್ತಾ ಕುಳಿತು ತುಂಟಾಟ, ಟೀಕೆ ಟಿಪ್ಪಣಿ, ಈ ವಾರ ಓದಿದ ಮೇಲೆ ಲಂಕೇಶ್ ಬೇರೆಯವರ ಕೈವಶವಾಗುತಿತ್ತು. ನೆಲ್ಸನ್ ಮಂಡೇಲಾ, ಕಾಫ್ಕಾ, ಬೋದಿಲೇರ್, ಶೇಕ್ಸ್ಫಯರ್ ಶೆಲ್ಲಿಗಳ ಬಗ್ಗೆ ಲಂಕೇಶ್ ನಲ್ಲಿ ಓದಿ ಬೆರಗು ಮೂಡಿಸಿಕೊಂಡಿದ್ದ ನಮಗೆ ಇಂಗ್ಲೀಷ್ ಸಾಹಿತ್ಯ ಓದಲಾಗಲಿಲ್ಲವಲ್ಲ ಎನ್ನುವ ಕೊರಗೊಂದು ಲಾಗಾಯ್ತಿನಿಂದಲೂ ಭದ್ರವಾಗಿದೆ.

ವಿಚಿತ್ರವೆಂದರೆ ನಾವೆಲ್ಲಾ ಲಂಕೇಶ್ ಬಗ್ಗೆ ಒಲವಿನಿಂದ ಬದುಕುತಿದ್ದ ಕಾಲದಲ್ಲಿ ಲಂಕೇಶ್ ಬ್ರಷ್ಟರಾಗಿದ್ದರು ಎಂದು ಒಬ್ಬ ವೈದಿಕ ಪತ್ರಕರ್ತ ದೂರಿದ್ದ,ಲಂಕೇಶ್ ಬಗ್ಗೆ ಓದಿಕೊಂಡಿದ್ದ ಪ್ರತಾಪ ಸಿಂಹ ಲಂಕೇಶ್ ಪಥದಲ್ಲಿ ಸಾಗಿದರೆ ಲಾಭವಿಲ್ಲ ಎಂದರಿತು ವೈದಿಕರ ಸೇವೆಗೆ ಸಿದ್ಧನಾಗಿದ್ದಾಗ ನಾವೆಲ್ಲಾ ಸಿಂಹನನ್ನು ಕೆಣಕುತಿದ್ದೆವು. ಸತೀಶ ಅಡಿಂಜೆ ಥರದವರಿಗೆ ಬ್ರಾಹ್ಮಣನೆಂಬ ಕಾರಣಕ್ಕೆ ಮಂಗಳೂರು ವಿಶ್ವವಿದ್ಯಾಲಯ ಚಿನ್ನದ ಪದಕ ಕೊಡುತ್ತೆ ಎಂದು ಅಲವತ್ತುಕೊಳ್ಳುತಿದ್ದ ಆತ ಅವರಿಗೆ ಅವರ ಶೈಲಿಯಲ್ಲೇ ಪಾಠ ಕಲಿಸಬೇಕು ಎಂದು ಗೊಣಗುತಿದ್ದ. ಆಗಲೇ ಸುರಕ್ಷಿತ ವಲಯದವರ ಸ್ನೇಹ ಗಿಟ್ಟಿಸಿಕೊಂಡಿದ್ದ ಸಿಂಹ ಬರುಬರುತ್ತಾ ವೈದಿಕರ ಸೇವಕನಾಗಿ ಬದಲಾಗಿ ಹೋದ.

ಇವೆಲ್ಲಾ ಘಟಿಸುತಿದ್ದ ಕಾಲದಲ್ಲೇ ನಾವು ಕ್ರಾಂತಿಗೆ ಹಂಬಲಿಸುತಿದ್ದೆವು. ಲಂಕೇಶರ ಬರಹ, ಬಂಗಾರಪ್ಪ, ಇಬ್ರಾಹಿಂ, ಹೆಗಡೆಗಳ ಭಾಷಣಕ್ಕೆ ಮರುಳಾಗುತಿದ್ದೆವು. ಹೆಗಡೆ ಜನತಾ ದಳ ಯು ಪಕ್ಷವನ್ನು ಬಿ.ಜೆ.ಪಿ.ಜೊತೆ ಹೊಂದಾಣಿಕೆ ಮಾಡಿಸಿ ಜನತಾದಳ, ಕಾಂಗ್ರೆಸ್ ಬೆನ್ನುಮುರಿದ ಸಮಯದಲ್ಲಿ ನಾವು ಗೌಡರ ಪರ ವಾದ ಮಾಡುತಿದ್ದೆವು. ಹೀಗೆ ನಮ್ಮ ವೈಚಾರಿಕತೆ, ಬದುಕು ಕುಂಟುತ್ತಾ ಸಾಗುತಿದ್ದಾಗ ನಮಗೆ ಸ್ಫೂರ್ತಿಯಾಗಿದ್ದ ಲಂಕೇಶ್ ಮರೆಯಾದರು. ಅದಕ್ಕೂ ಮೊದಲೇ ಕುವೆಂಪು ಕಾಲವಾಗಿದ್ದರು. ಈ ದಶಕಗಳಲ್ಲೇ ತೇಜಸ್ವಿ ನಿಧನರಾದರು, ಕೊನೆಗೆ ಅನಂತಮೂರ್ತಿ.

ಈ ಸಾವುಗಳೆಲ್ಲಾ ಮರೆಯದ ಸಮಯದಲ್ಲಿ ಗೌರಿ ಲಂಕೇಶ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು. ಲಂಕೇಶ್ ರ ಬೌದ್ಧಿಕತೆ ಆಪ್ತವಾಗಿದ್ದ ನಮಗೆ ಗೌರಿ ಲಂಕೇಶ್ ಸಾಹಿತ್ಯಿಕವಾಗಿ ಅಷ್ಟು ಆಪ್ತವಾಗದಿದ್ದರೂಗೌರಿ ಬದ್ಧತೆ ಲಂಕೇ ಶ್ ರಿಗಿಂತ ತುಸು ಹೆಚ್ಚೇ ಇಷ್ಟವಾಗತೊಡಗಿತು.

ಈ ವಾತಾವರಣದ ಮಧ್ಯೆ ಚಿಕ್ಕಮಂಗಳೂರಿನಲ್ಲಿ ಗೌರಿ ನಕ್ಸಲ್ ಗಳ ಭೇಟಿ ಮಾಡಿ ಕೆಲವರನ್ನು ಮನ ಒಲಿಸತೊಡಗಿದರಲ್ಲ ಆಗ ಸ್ನೇಹಿತ ಆನಂದ ಗೌರಿ ಜೊತೆ ತೆರಳಿದ್ದ. ಆನಂದ ಗೌರಿ ಬಗ್ಗೆ ಹೇಳಿದ್ದ ಅವನ ಅನುಭವ ಗೌರಿ ಮೇಲೆ ನಮಗೆ ವಿಶೇಶ ಅಭಿಮಾನ ತರಿಸಿತ್ತು. ಕೇವಲ ಶಾಂತಿ, ಸೌಹಾರ್ಧತೆಗೆ ಮಿಡಿಯುವ ಗೌರಿ ನಕ್ಸಲೈಟ್ ಗಳು, ಧಮನಿತರು, ಹೋರಾಟಗಾರರನ್ನು ತನ್ನ ತಮ್ಮ,ಮಗ ಎಂದು ಭಾವಿಸುತಿದ್ದ ಅವರ ಪ್ರೀತಿಗೆ ಸಿಕ್ಕ ಹೊಸ ತಲೆಮಾರಿನವರಲ್ಲಿ ನಾನೂ ಒಬ್ಬ ಎಂದುಕೊಳ್ಳಲು ನನಗಂತೂ ಹೆಮ್ಮೆ.

ಗೌರಿ ಲಂಕೇಶ್ ಹಿತಶತ್ರುಗಳು, ಮತಾಂಧರು,ಸೋಗಲಾಡಿಗಳನ್ನು ಜಾಡಿಸುತಿದ್ದಾಗ ಕೋಮುವಾದಿಗಳು ಅವರ ವಿರುದ್ಧ ವ್ಯೂಹ ರಚಿಸಿದ್ದರೆ ಎನ್ನುವ ಅನುಮಾನ ಬರುವ ರೀತಿ ದುಷ್ಟರ ಧರ್ಮಾಂಧತೆಗೆ ಬಲಿಯಾದರು. ಹೀಗೆ ಅವರ ದುರಂತ ಅಂತ್ಯದ ಸುದ್ದಿಕೇಳುವ ಸರಿಸುಮಾರ ಐದಾರು ವರ್ಷಗಳ ಕೆಳಗೆ ಹೊಸನಗರದ ಸ್ವಾಮಿಯೊಬ್ಬರ ಭಕ್ತರೆನ್ನುವ ಕೆಲವು ವ್ಯಕ್ತಿಗಳು ದಾಖಲಿಸಿದ ಪ್ರಕರಣಗಳ ವಿಚಾರಣೆಗೆ ಉತ್ತರ ಕನ್ನಡ, ಶಿವಮೊಗ್ಗಕ್ಕೆ ಬರುತಿದ್ದಾಗ ಹಿರಿಯ ವಕೀಲ ಎನ್.ಡಿ. ನಾಯ್ಕರ ಮಾಹಿತಿ ಮೇರೆಗೆ ಗೌರಕ್ಕನನ್ನು ಸಿದ್ಧಾಪುರ ನ್ಯಾಯಾಲಯದಲ್ಲಿ ಮೊದಲು ಭೇಟಿಯಾದೆ.

ನ್ಯಾಯಾಲಯದಲ್ಲಿ ನಂತರ ಕೋರ್ಟ್ ಆವರಣದ ಹೊರಗೆ ಹರಟುತ್ತಾ ಲಂಕೇಶ್ ಪತ್ರಿಕೆ ಓದದಿದ್ದರೆ ನಾನಂತೂ ಪತ್ರಿಕೋದ್ಯಮ ಪ್ರವೇಶಿಸುತ್ತಿರಲಿಲ್ಲ ಎಂದೆ, ಫೈನ್ ಎಂದ ಗೌರಿ ಪತ್ರಿಕೋದ್ಯಮ ಯಾವ ಕಾಲದಲ್ಲೂ ಬಡವರು, ಇಲ್ಲದವರ ಪರವಾಗಿರಲಿಲ್ಲ ಅಲ್ವೆ ಎಂದರು. ಅಪ್ಪನ ಕುರಿತು ಹೆಚ್ಚೇನೂ ಮಾತನಾಡದೆ ಮುಂದೆ ಸಾಗಬೇಕಾದ ದಾರಿ ದೂರ ಎಂದರು. ಇದಾದ ನಂತರ ಮತ್ತೆ ಶಿರಸಿ-ಸಿದ್ದಾಪುರ ಉತ್ತರ ಕನ್ನಡ ಶಿವಮೊಗ್ಗ ಕಡೆ ಬಂದಾಗಲೆಲ್ಲ ನೆನಪು ಮಾಡುತಿದ್ದರು. ಸಿದ್ಧಾಪುರ ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದರಿಂದ ನನಗೆ ಸಿದ್ಧಾಪುರದಲ್ಲಿ ಗೌರಿ ಲಂಕೇಶ್ ಜೊತೆಗೆ ಒಂದು ಸಂವಾದ ಕಾರ್ಯಕ್ರಮ ಮಾಡುವ ಅವಕಾಶವಾಯಿತು. ಸಮಾಜ, ಸೌಹಾರ್ಧತೆ, ಬದ್ಧತೆ, ಪ್ರಾಮಾಣಿಕತೆ, ಸಮಾಜವಾದಗಳೇ ಆಸ್ತಿ ಕನಸಾಗಿದ್ದ ಗೌರಿ ನಮ್ಮ ಜೊತೆ ಸಣ್ಣದೊಂದು ಹೋಟೆಲ್ ನಲ್ಲಿ ಮೀನಿನೂಟ ಸವಿದಿದ್ದರು. ಅದನ್ನು ಸ್ಮರಿಸುತಿದ್ದ ಗೌರಕ್ಕ ನಾನು ಭೇಟಿಗೆ ಸಿಗದಿದ್ದಾಗಲೂ ಗಣೇಶ್ ಹೋಟೆಲ್ ನಲ್ಲಿ ಮೀನೂಟ ಮಾಡಿ ಸಾಗುತಿದ್ದ ಬಗ್ಗೆ ಹೇಳುತಿದ್ದರು.

ಲಂಕೇಶ್ ಬಿಟ್ಟುಹೋದ ಶೂನ್ಯದಲ್ಲಿ ಉಲ್ಕೆಯಂತೆ ಉರಿದು ತಂಪು ನೀಡಿದ ಗೌರಿ ಮೇಲೆ ಮತಾಂಧರ ಕಣ್ಣು ಬಿದ್ದದ್ದು ಅವರ ಅವಸಾನಕ್ಕೆ ಕಾರಣವಾದ ದುರಂತವೇ ಕೋಮುವಾದಿಗಳಿಗೆ ಅಂತ್ಯ ಬರೆಯುವ ಮುನ್ನುಡಿಯಾಗಿದ್ದು ಅವರ ಜೀವನದ ಸಾರ್ಥಕತೆ. ಸರಳತೆ, ಬದ್ಧತೆ, ವಿಶ್ವಮಾನವತ್ವದ ಚಿಂತನಾಕ್ರಮ ಗೌರಕ್ಕನ ಆಸ್ತಿಯಾಗಿತ್ತೆಂದರೆ ಅದು ಉತ್ಪ್ರೇಕ್ಷೆಯಂತೂ ಅಲ್ಲ.

ಲಂಕೇಶ್ ರನ್ನು ತಿಳಿದುಕೊಂಡ ಸಿಂಹ ಅವಕಾಶವಾದಿಯಾಗುವುದು, ಲಂಕೇಶ್ ರನ್ನು ಮೈಗೂಡಿಸಿಕೊಂಡಿದ್ದ ಗೌರಿ ಹೋರಾಟಗಾರ್ತಿಯಾಗುವುದು ಸಮಾಜದ ಎರಡು ಧಾರೆಗಳು. ಗೌರಿ ಸತ್ತಿಲ್ಲ ಬೀಜವಾಗಿ ಕುಡಿ ಒಡೆದಿದ್ದಾಳೆ ಮತ್ತು ಮರವಾಗುತ್ತಾಳೆ ಕೂಡಾ. ಯಾಕೋ ಸೆ. 5 ರ ವೀರಲಿಂಗನಗೌಡ್ರ ಕವನ, ಸಾಮಾಜಿಕ ಜಾಲತಾಣದಲ್ಲಿ ಅನೇಕರು ಗೌರಕ್ಕನನ್ನು ಸ್ಮರಿಸಿಕೊಂಡ ಕಾರಣಕ್ಕೆ ನನ್ನ ನೆನಪುಗಳನ್ನೂ ದಾಖಲಿಸಿದೆ. ಬಸವಣ್ಣ,ಅಕ್ಕಮಹಾದೇವಿಯ ಶರಣತ್ವದ ಕುಡಿಯಾಗಿದ್ದ ಗೌರಿ ಲಿಂಗಾಯತರಾಗಿದ್ದು ಕಾಕತಾಳೀಯ. (ಲಂಕೇಶ್ ದಲಿತರೆಂದು ಭಾವಿಸಿದ್ದ ಅನೇಕರಲ್ಲಿ ಲಿಂಗಾಯತರಿದ್ದುದು ಅವರ ಜಾತ್ಯಾತೀತತೆಗೆ ಸಾಕ್ಷಿ)

ತಾಲಿಬಾನಿಗಳ ಮತಾಂಧತೆಯ ಅಟ್ಟಹಾಸದ ರಾಷ್ಟ್ರೀಯ ಸುಳ್ಳುಕೋರರ ಯುಗದಲ್ಲಿ ಗೌರಿ, ಲಂಕೇಶ್, ಅನಂತಮೂರ್ತಿ, ಕುವೆಂಪು, ಶಶಿಧರ ಭಟ್, ನಾಗೇಶ್ ಹೆಗಡೆ ಇಂಥವರ ಪಥದ ಪ್ರಾಮುಖ್ಯತೆ ಅರಿಯಬೇಕಿದೆ ಅಷ್ಟೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *