ಅಡಿಕೆ ಬೆಳೆಗಾರರ ಪರವಾಗಿ ನಿಂತ ಗುಂಜಗೋಡು ಕುಟುಂಬ

ಸಿದ್ಧಾಪುರ ತಾಲೂಕಿನಲ್ಲಿ ಗುಂಜಗೋಡು ಗ್ರಾಮ ಮತ್ತು ಗುಂಜಗೋಡು ಕುಟುಂಬಕ್ಕೆ ಮಹತ್ವದ ಸ್ಥಾನವಿದೆ. ತಾಲೂಕು ಕೇಂದ್ರದಿಂದ ತುಸುದೂರದ ಗುಂಜಗೋಡು ಲಾಯಾಯ್ತಿನಿಂದ ಸಮಾಜದ ಆಗುಹೋಗುಗಳೊಂದಿಗೆ ಸ್ಪಂದಿಸಿದೆ. ಸುಶಿಕ್ಷಿತ,ಸಮಾಜಮುಖಿ ಗ್ರಾಮವಾದ ಗುಂಜಗೋಡು ಈಗಲೂ ಬಿಳಗಿ ಸೀಮೆಯ ಪ್ರಸಿದ್ಧ ಗ್ರಾಮ. ಸ್ವಾತಂತ್ರ್ಯ ಹೋರಾಟ, ಧಾರ್ಮಿಕ ಕೆಲಸ, ಕಲೆ, ಸಾಂಸ್ಕೃತಿಕತೆ ಎಲ್ಲದರಲ್ಲೂ ಗುಂಜಗೋಡು ಗುರುತಿಸಿಕೊಂಡಿದೆ.

ಗುಂಜಗೋಡಿನ ಕೃಷಿ ಪ್ರಧಾನ ಕುಟುಂಬಗಳಲ್ಲಿ ಹಲವರು ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಹೆಸರು ಮಾಡಿ ದ್ದಾರೆ. ಅವರಲ್ಲಿ ಕೆಲವರು ಅಡಿಕೆ ವ್ಯಾಪಾರಿಗಳಾಗಿ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸಹಕರಿಸಿದ್ದಾರೆ.

ಗುಂಜಗೋಡಿನ ಕೆಲವು ಅಡಿಕೆ ವರ್ತಕರಲ್ಲಿ ಈಗಿನ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆಯವರ ತಂದೆ ಎಮ್.ಎಸ್. ಹೆಗಡೆ ಗುಂಜಗೋಡು ಹೆಗಡೆ ಎಂದೇ ಪ್ರಸಿದ್ಧರಾಗಿದ್ದರು. ಕಳೆದ ವರ್ಷ ಅಕ್ಟೋಬರ್ ಒಂದರಂದು ನಿಧನರಾಗಿದ್ದ ಎಮ್. ಎಸ್. ಹೆಗಡೆ ಸಿದ್ಧಾಪುರ ಪುರಸಭೆಯ ಸದಸ್ಯರಾಗಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಹಿಂದೆ ಸೇವೆ ಸಲ್ಲಿಸಿದ್ದರು. ಇಂಥ ಸಾರ್ವಜನಿಕ ಸೇವೆಗೆ ಬರುವ ಮೊದಲು ಗುಂಜಗೋಡು ಹೆಗಡೆ ಅಡಿಕೆ ವ್ಯಾಪಾರಸ್ಥರಾಗಿ ಸಾಹಸ ಮಾಡಿದ ವ್ಯಾಪಾರಿ ಕೃಷಿಕ. 1970 ರ ದಶಕದ ಕಷ್ಟದ ದಿನಗಳಲ್ಲಿ ತಾಲೂಕಿನ ಹಳ್ಳಿಗಳಿಗೆ ಸೈಕಲ್ ನಲ್ಲಿ ತೆರಳಿ ವ್ಯಾಪಾರ ಮಾಡುತ್ತಾ ಗಣ್ಯ ವರ್ತಕರಾಗಿ ಬೆಳೆದದ್ದು ಅವರ ಸಾಧನೆ. ಕುಗ್ರಾಮದಂತಿದ್ದಗುಂಜಗೋಡಿನಿಂದ ತಮ್ಮ ಸಾಹಸದ ಪಯಣ ಪ್ರಾರಂಭಿಸಿದ ಎಮ್.ಎಸ್. ಹೆಗಡೆ ಕ್ರಮೇಣ ಸಿದ್ಧಾಪುರಕ್ಕೆ ತಮ್ಮವಾಸ್ತವ್ಯ ಬದಲಿಸಿ ಕೃಷಿ-ವ್ಯಾಪಾರದಲ್ಲಿ ಯಶಸ್ವಿಯಾಗಿದ್ದರು. ಈ ನಡುವೆ ಸಿದ್ಧಾಪುರ ಭಾನ್ಕುಳಿಮಠದ ಆಸ್ತಿಯನ್ನು ಉಳಿಸುವಲ್ಲಿ ಹೆಗಡೆಯವರ ಪಾತ್ರ ಗುರುತವಾಗಿತ್ತು. ಎ.ಪಿ.ಎಂ.ಸಿ.ಯಾರ್ಡ್ ನಿರ್ಮಾಣ, ಭೂನ್ಯಾಯ ಮಂಡಳಿ ಸದಸ್ಯರಾಗಿ ಸಲ್ಲಿಸಿದ ಸೇವೆ ಅವರನ್ನು ಪ್ರಸಿದ್ಧರನ್ನಾಗಿಸಿತ್ತು.

ಇಂದು ಅವರಗುಪ್ಪಾದಲ್ಲಿ ನಡೆದ ಅವರ ವಾರ್ಷಿಕ ಸಂಸ್ಮರಣೆಯಲ್ಲಿ ಅವರ ಕುಟುಂಬಸ್ಥರು, ಹಿತೈಶಿಗಳು, ಗ್ರಾಮಸ್ಥರೆಲ್ಲಾ ಗುಂಜಗೋಡು ಹೆಗಡೆಯವರನ್ನು ಸ್ಮರಿಸಿದರು. ಸಿದ್ಧಾಪುರದಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿರುವ ಅಡಿಕೆ ವರ್ತಕರ ಕುಟುಂಬದ ಎಮ್.ಎಸ್. ಹೆಗಡೆ, ಅವರ ಪುತ್ರ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆ ತಮ್ಮ ಕೃಷಿ-ವ್ಯಾಪಾರ, ವ್ಯವಹಾರಗಳೊಂದಿಗೆ ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಮಕ್ಕಳಿಗೆ ವಿದ್ಯಾವಂತರನ್ನಾಗಿಸಿ ಅವರೂ ಕೂಡಾ ಸ್ಥಳೀಯತೆ, ಸಹಜತೆ ಅಳವಡಿಸಿಕೊಳ್ಳುವ ಹಿಂದೆ ಎಮ್.ಎಸ್. ಹೆಗಡೆಯವರ ಕುಟುಂಬದ ಕೊಡುಗೆ ಸ್ಮರಣೀಯ ಎಂದರು.

ಎಮ್.ಎಸ್. ಹೆಗಡೆಯವರ ಎರಡ್ಮೂರು ತಲೆಮಾರು ಕೃಷಿಕರು, ವರ್ತಕರೂ ಆಗಿ ಜನಮೆಚ್ಚುಗೆ ಪಡೆದಿದ್ದಾರೆ. ಹೊರ ಊರುಗಳಲ್ಲಿ ವಿದ್ಯಾಭ್ಯಾಸ,ಉದ್ಯೋಗ ಮಾಡಿ ಜನಮಾನಸದೊಂದಿಗೆ ಬೆರೆತ ಅವರ ಕುಟುಂಬದ ಕುಡಿಗಳೂ ಕೃಷಿ-ಅಡಿಕೆ ವ್ಯಾಪಾರಗಳ ಮೂಲಕ ತಾಲೂಕು, ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಎಮ್.ಎಸ್. ಹೆಗಡೆಯವರ ಸಾಧನೆ, ಸಂಸ್ಮರಣೆಗಳ ಹಿಂದೆ ಅವರ ಗ್ರಾಮ, ಕುಟುಂಬ ಎಂದು ಮತ್ತೊಮ್ಮೆ ಅವರು ಸಾರ್ವಜನಿಕ ಸ್ಮೃತಿಯ ಭಾಗವಾಗಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *