ನೆಟ್​​​ವರ್ಕ್​​​ಗಾಗಿ ಆಗ್ರಹಿಸಿ ಪಾದಯಾತ್ರೆ ನಡೆಸಿದ ಶರಾವತಿ ಮುಳುಗಡೆ ಸಂತ್ರಸ್ತರು

ಅಡಿಕೆ ಬೆಳೆಗಾರರಿಗೆ ಸರ್ಕಾರದ ಹೊಡೆತ: ರೈತ ಮಾಹಿತಿ ಕೇಂದ್ರ ಹಾರ್ಟಿ ಕ್ಲಿನಿಕ್ ಬಂದ್

ತೋಟಗಾರಿಕೆ ಬೆಳೆಗಳ ಸಂರಕ್ಷಣೆ, ಇಳುವರಿ ಹೆಚ್ಚಳ, ತಾಂತ್ರಿಕ ಸುಧಾರಣೆ ಸೇರಿದಂತೆ ವಿವಿಧ ಮಾಹಿತಿ ಒದಗಿಸಲು ಆರಂಭಿಸಲಾಗಿದ್ದ ತೋಟಗಾರಿಕಾ ಇಲಾಖೆ ಮಾಹಿತಿ ಮತ್ತು ಸಲಹಾ ಕೇಂದ್ರ (ಹಾರ್ಟಿ ಕ್ಲಿನಿಕ್) ಅನುದಾನದ ಕೊರತೆಯಿಂದ ಸದ್ಯ ಬಾಗಿಲು ಮುಚ್ಚಿದೆ.

ಶಿರಸಿ: ಮಲೆನಾಡಿನ ಅಡಿಕೆ ಬೆಳೆಗಾರರ ಪಾಲಿಗಿದು ಮತ್ತೊಂದು ಕಹಿಸುದ್ದಿ. ಕೊಳೆ ರೋಗದಂತಹ ಹಲವಾರು ರೋಗಗಳಿಗೆ ತುತ್ತಾಗುತ್ತಿರೋ ಅಡಿಕೆಯ ಬಗೆಗಿನ ಸಂಶೋಧನಾ ಕ್ಲಿನಿಕ್ ಇದೀಗ ಮುಚ್ಚಿದೆ.

ಆಸ್ಪತ್ರೆಯ ಹೊರರೋಗಿ ವಿಭಾಗದಂತಿದ್ದ ಅಡಿಕೆಯ ಹಾರ್ಟಿ ಕ್ಲಿನಿಕ್‌ನ ಬಾಗಿಲನ್ನು ಸರ್ಕಾರದ ಅನುದಾನ ಇಲ್ಲದೆ ಮುಚ್ಚುವಂತಾಗಿದೆ. ಇದು ಸಾವಿರಾರು ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದಿದೆ.

ರೈತರ ಮಾಹಿತಿ ಕೇಂದ್ರ ಹಾರ್ಟಿ ಕ್ಲಿನಿಕ್ ಕ್ಲೋಸ್​​

ತೋಟಗಾರಿಕೆ ಬೆಳೆಗಳ ಸಂರಕ್ಷಣೆ, ಇಳುವರಿ ಹೆಚ್ಚಳ ಹಾಗು ತಾಂತ್ರಿಕ ಸುಧಾರಣೆ ಸೇರಿದಂತೆ ವಿವಿಧ ಮಾಹಿತಿ ಒದಗಿಸಲು ಆರಂಭಿಸಲಾಗಿದ್ದ ತೋಟಗಾರಿಕಾ ಇಲಾಖೆ ಮಾಹಿತಿ ಮತ್ತು ಸಲಹಾ ಕೇಂದ್ರ (ಹಾರ್ಟಿ ಕ್ಲಿನಿಕ್) ಅನುದಾನದ ಕೊರತೆಯಿಂದ ಸದ್ಯ ಬಾಗಿಲು ಹಾಕಿಕೊಂಡಿದೆ.

ಪ್ರತಿಜಿಲ್ಲೆಗೆ ಒಂದರಂತೆ ತೋಟಗಾರಿಕಾ ಕ್ಷೇತ್ರ ಹೆಚ್ಚಿರೋ 26 ಜಿಲ್ಲೆಗಳಲ್ಲಿ 2010-11ರಲ್ಲಿ ಹಾರ್ಟಿ ಕ್ಲಿನಿಕ್ ಆರಂಭಿಸಲಾಗಿತ್ತು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳು, ಹವಾಮಾನ ವೈಪರೀತ್ಯದ ಪರಿಣಾಮ, ಉತ್ಪನ್ನಗಳ ಇಳುವರಿ ಮೇಲೆ ಉಂಟಾಗಬಹುದಾದ ದುಷ್ಪರಿಣಾಮ ಮತ್ತು ಅದಕ್ಕೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮ ಸೇರಿದಂತೆ ಉಪಯುಕ್ತ ಮಾಹಿತಿ ಒದಗಿಸೋದು ಈ ಕೇಂದ್ರದ ಕೆಲಸವಾಗಿತ್ತು.

ಹಾರ್ಟಿ ಕ್ಲಿನಿಕ್ ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಶಿರಸಿಯ ತೋಟಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಇದೆ. ಹತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅನುದಾನ ಬಿಡುಗಡೆಯಾಗದ ಕಾರಣ ಅದು ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿದೆ.

ಜಿಲ್ಲೆಗೆ ಒಂದರಂತೆ ಸ್ಥಾಪಿಸಲಾದ ಹಾರ್ಟಿ ಕ್ಲಿನಿಕ್‍ಗೆ ವಾರ್ಷಿಕ ಕೇವಲ ₹2 ಲಕ್ಷ ಅನುದಾನ ಬಿಡುಗಡೆಗೊಳ್ಳುತ್ತಿತ್ತು. ಮಾಸಿಕ ₹20 ಸಾವಿರ ಗೌರವಧನ ಪಡೆಯುತ್ತಿದ್ದ, ಕೃಷಿ ವಿಷಯದಲ್ಲಿ ಪದವಿ ಪಡೆದ ವಿಷಯ ತಜ್ಞರೊಬ್ಬರನ್ನು ಹೊರತುಪಡಿಸಿ ಬೇರೆ ಸಿಬ್ಬಂದಿ ನೇಮಕಾತಿ ಇರಲ್ಲಿಲ್ಲ. ಕೃಷಿ ವಿಷಯದಲ್ಲಿ ಪದವಿ ಪಡೆದವರೊಬ್ಬರನ್ನು ವಿಷಯ ತಜ್ಞರೆಂದು ಈ ಕ್ಲಿನಿಕ್ ಗೆ ನೇಮಿಸಲಾಗಿತ್ತು.

ಜಿಲ್ಲೆಯಲ್ಲಿ ಪ್ರಮುಖವಾಗಿ ಅಡಿಕೆ, ಕಾಳುಮೆಣಸು, ಶುಂಠಿ, ಮಾವು, ಗೇರು, ಅನಾನಸ್, ತೆಂಗು ಸೇರಿದಂತೆ ಮುಖ್ಯ ಬೆಳೆಗಳ ಸಂರಕ್ಷಣೆ, ಪೋಷಣೆ ಕುರಿತು ಅವರು ರೈತರಿಗೆ ಸಕಾಲಕ್ಕೆ ಸಲಹೆ ನೀಡಲು ಅನುಕೂಲವಾಗಿತ್ತು.

ತೋಟಗಾರಿಕಾ ಬೆಳೆಗಳಿಗೆ ಕಾಡುವ ರೋಗ, ಇಳುವರಿ ಕುಂಠಿತ ಸಮಸ್ಯೆಗೆ ವಿಷಯ ತಜ್ಞರಿಂದ ಸಲಹೆ ಪಡೆದುಕೊಳ್ಳಲು ಹಾರ್ಟಿ ಕ್ಲಿನಿಕ್ ಅಗತ್ಯವಿತ್ತು. ಕೃಷಿಗೆ ಒತ್ತು ನೀಡುವುದಾಗಿ ಹೇಳುವ ಸರ್ಕಾರ ರೈತಪರ ಯೋಜನೆ ಸ್ಥಗಿತಗೊಳಿಸುವುದು ಸರಿಯಲ್ಲ. ಬೇರೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ ಹಾರ್ಟಿ ಕ್ಲಿನಿಕ್‌ನಂತಹ ರೈತಪರ ಸೌಲಭ್ಯ ಪುನರಾರಂಭಿಸಲಿ ಅನ್ನೋದು ರೈತರ ಒತ್ತಾಯ.

ಇಂತಹ ಹಾರ್ಟಿ ಕ್ಲಿನಿಕ್ ಉತ್ತರ ಕನ್ನಡ ಜಿಲ್ಲೆಗೆ ಅತಿ ಅಗತ್ಯವಿದೆ. ಕೋವಿಡ್ ಪರಿಸ್ಥಿತಿಯಲ್ಲೂ ಸರ್ಕಾರ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿಲ್ಲ. ಅಲ್ಪ ಅನುದಾನದಲ್ಲಿ ರೈತರಿಗೆ ಅನುಕೂಲವಾಗಿರೋ ಯೋಜನೆ ಒಂದನ್ನ ಸ್ಥಗಿತಗೊಳಿಸುತ್ತಿರುವುದು ದುರದೃಷ್ಟಕರ. ಪ್ರಾರಂಭ ಮಾಡಿದ ಒಳ್ಳೇ ಯೋಜನೆಯೊಂದನ್ನ ಏಕಾಏಕಿ ನಿಲ್ಲಿಸೋದು ಎಷ್ಟರಮಟ್ಟಿಗೆ ಸರಿ? ಅನ್ನೋದು ರೈತರ ಪ್ರಶ್ನೆ. (etbk)

ನೆಟ್​​​ವರ್ಕ್ ಇಲ್ಲದೆ ಆನ್​​ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ ಮಾಡುವುದು ಕಷ್ಟಕರವಾಗಿದೆ. ಅಲ್ಲದೆ ವೈದ್ಯಕೀಯ ಸೇವೆಗಾಗಿ 108ಕ್ಕೆ ಕರೆ ಮಾಡುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು..

ಶಿವಮೊಗ್ಗ : ನೋ ನೆಟ್​ವರ್ಕ್​​, ನೋ ವೋಟಿಂಗ್​​ ಎಂಬ ಅಭಿಯಾನದ ಭಾಗವಾಗಿ ಶರಾವತಿ ಮುಳುಗಡೆಯ ಸಂತ್ರಸ್ತರು ಕಟ್ಟಿನಕಾರು ಗ್ರಾಮದಿಂದ ಕೋಗಾರು ಗ್ರಾಮದವರೆಗೂ ಪಾದಯಾತ್ರೆ ನಡೆಸಿ ಮೊಬೈಲ್ ನೆಟ್​​ವರ್ಕ್​​ಗಾಗಿ ಆಗ್ರಹಿಸಿದರು.

ಕಟ್ಟಿನಕಾರು ಸೇರಿ ಸುತ್ತಮುತ್ತಲ ಗ್ರಾಮಗಳ ಸುಮಾರು‌ 15 ಕಿ.ಮೀ ದೂರದಲ್ಲಿ ಯಾವುದೇ ಮೊಬೈಲ್​ ಕಂಪನಿಯ ನೆಟ್​​​ವರ್ಕ್ ಲಭ್ಯವಾಗುವುದಿಲ್ಲ. ಇದರಿಂದ ಈ ಭಾಗದ ಜನರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕವೇ ಇಲ್ಲದಂತಾಗಿದೆ. ಇದರಿಂದ ತಮಗೆ ಮೊಬೈಲ್ ನೆಟ್​​​​ವರ್ಕ್ ಸೌಲಭ್ಯ ವದಗಿಸಬೇಕೆಂದು ಆಗ್ರಹಿಸಿದರು.

ನೋ‌ ನೆಟ್ ವರ್ಕ್, ನೋ ವೋಟಿಂಗ್ ಅಭಿಯಾನ : ಚನ್ನಗೊಂಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಟ್ಟಿನಕಾರು, ಕಾರಣಿ, ಹಾಳಸಸಿ ಭಾಗದ ಜನರು ಕಳೆದ ಆರು ತಿಂಗಳಿಂದ ಜನತೆ ಅಭಿಯಾನ ಆರಂಭಿಸಿದ್ದಾರೆ. ಗಾಂಧಿ ಜಯಂತಿ ಪ್ರಯುಕ್ತ ಪಾದಯಾತ್ರೆ, ರಸ್ತೆ ತಡೆ ನಡೆಸಿ ಕಟ್ಟಿನಕಾರು ಗ್ರಾಮದಿಂದ ಚನ್ನಗೊಂಡ ಗ್ರಾಮ ಪಂಚಾಯತ್‌ವರೆಗೆ ಪಾದಯಾತ್ರೆ ನಡೆಸಿದರು.

ಸಮಸ್ಯೆಯ ಸುಳಿಯಲ್ಲಿ ಜನತೆ : ನೆಟ್​​​ವರ್ಕ್ ಇಲ್ಲದೆ ಆನ್​​ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ ಮಾಡುವುದು ಕಷ್ಟಕರವಾಗಿದೆ. ಅಲ್ಲದೆ ವೈದ್ಯಕೀಯ ಸೇವೆಗಾಗಿ 108ಕ್ಕೆ ಕರೆ ಮಾಡುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಪಾದಯಾತ್ರೆಯಲ್ಲಿ 6 ವರ್ಷದ ಬಾಲಕನಿಂದ 70 ವರ್ಷದ ವಯೋವೃದ್ದರು ಸಹ ಭಾಗಿಯಾಗಿದ್ದರು. ಚನ್ನಗೊಂಡ ಗ್ರಾಮ ಪಂಚಾಯಿತಿ ಮುಂಭಾಗ ಭಟ್ಕಳ ರಸ್ತೆಯಲ್ಲಿ ಸಾಂಕೇತಿಕ‌ ಧರಣಿ ಮಾಡಿ ಪ್ರತಿಭಟನೆ ನಡೆಸಿದರು. (etbk)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *