ಕಾಡು ಕುರುಬ ನಂತರ ಕಾನ್‌ ದೀವರ ಎಸ್.ಟಿ. ಬೇಡಿಕೆಗೆ ಹೆಚ್ಚಿದ ಒತ್ತಡ

ಬಹಳ ವರ್ಷಗಳ ಬೇಡಿಕೆ ನಂತರ ಕಾಡು ಕುರುಬರಿಗೆ ಪರಿಶಿಷ್ಟ ಪಂಗಡದ ಸ್ಥಾನ ಮಾನ ನೀಡಿದ ನಂತರ ರಾಜ್ಯದ ಕಾನ್‌ ದೀವರಿಗೆ ಎಸ್‌.ಟಿ. ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಈಗ ಬಲಗೊಳ್ಳುತ್ತಿದೆ.

ಚಿಕ್ಕಮಂಗಳೂರು,ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿಶೇ ಶವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸಿಸುವ ದೀವರನ್ನು ಮೊದಲಿನಿಂದಲೂ ಕಾಡು ದೀವರು, ಕಾನು ದೀವರು, ಬಗನೆ ದೀವರು ಎಂದು ಕರೆಯುವುದು ರೂಢಿ. ಸುಮಾರು೨೦ಲಕ್ಷ ದಷ್ಟು ಜನಸಂಖ್ಯೆ ಹೊಂದಿರುವ ಈ ದೀವರ ಬಗ್ಗೆ ಸಮಾಜವಾದಿ ಮುಖಂಡ ಮಾಜಿ ಶಾಸಕ ದಿ. ಗೋಪಾಲಗೌಡರು ೭೦-೮೦ ರ ದಶಕದಲ್ಲೇ ಮಲೆನಾಡಿನ ಕಾನುದೀವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು.

ಇದೇ ಅವಧಿಯಲ್ಲಿ ಕಾಗೋಡು ಹೋರಾಟದ ರೂವಾರಿ ಎಚ್.‌ ಗಣಪತಿಯಪ್ಪ ಕೂಡಾ ಈಡಿಗರ ಉಪಪಂಗಡ ಎನ್ನುವ ಕಾನುದೀವರು ಅರಣ್ಯ ವಾಸಿಗಳು, ರೈತರು,ಬುಡಕಟ್ಟುಗಳಾಗಿರುವ ಕಾನ್‌ ದೀವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಪ್ರತಿಪಾದಿಸಿದ್ದರು.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಕಾಡುವಾಸಿಗಳಾಗಿ,೧೯೭೦ ರ ದಶಕದ ವರೆಗೂ ಗೇಣಿದಾರರೂ ಬಡವರಾಗಿದ್ದ ದೀವರಲ್ಲಿ ಸೊರಬಾದ ಬಂಗಾರಪ್ಪ ಮುಖ್ಯಮಂತ್ರಿಗಳಾಗಿರುವುದು ಕಾಗೋಡು ತಿಮ್ಮಪ್ಪ ಹಿರಿಯ ನಾಯಕ, ಮಾಜಿಸಚಿವರಾಗಿರುವುದು ಸೇರಿ ತಮ್ಮ ಜನಸಂಖ್ಯೆ ಇರುವ ಅನೇಕ ಕ್ಷೇತ್ರಗಳಲ್ಲಿ ಕನಿಷ್ಟ ಶಾಸಕರು, ಸಂಸದರೂ ಆಗಿರದ ಕಾನ್‌ ದೀವರ ಆಚರಣೆ, ರೂಢಿ ಸಂಪ್ರದಾಯಗಳು ನೈಜ ಬುಡಕಟ್ಟುಗಳಾದ ಹಾಲಕ್ಕಿ ಒಕ್ಕಲಿಗರು,ಕಾಡು ಕುರುಬರ ರೀತಿಯಲ್ಲಿವೆ.

ಜನಾಂಗೀಯ ಅಧ್ಯಯನಗಳು, ಸಾಹಿತ್ಯಕ ದಾಖಲೆಗಳು ಮತ್ತು ರಾಷ್ಟ್ರಕವಿ ಕುವೆಂಪು ಮತ್ತು ನಾ.ಡಿಸೋಜಾರ ಸಾಹಿತ್ಯಗಳಲ್ಲಿ ಕೂಡಾ ನೈಜ ಬುಡುಕಟ್ಟುಗಳಾಗಿ ಚಿತ್ರಿತವಾಗಿರುವ ಮಲೆನಾಡಿನ ದೀವರು ಕಾಡುವಾಸಿಗಳಾಗಿ ಕೆಲವು ಕಾಲಸೈನಿಕರಾಗಿ ಕೆಲಸಮಾಡಿದ್ದಾರೆ. ಇದೇ ಆಧಾರದಲ್ಲಿ ಕಾನ್‌ ದೀವರನ್ನು ಹಳೆಪೈಕರು ಎಂದು ಕೂಡಾ ಕರೆಯಲಾಗುತ್ತದೆ .https://m.youtube.com/watch?v=30oxVRVlhpk

ಅಚಲ ಸ್ವಾಭಿಮಾನಿಗಳೂ,ಧೈರ್ಯವಂತರೂ ಆದ ಕಾನ್‌ ದೀವರು ನಿಸ್ಸೀಮ ಬೇಟೆಗಾರರು ಬೇಟೆ ಮತ್ತು ಬಗನೆ ಕಳ್ಳು ಅಥವಾ ಕಾಡು ಸೇಂದಿ ಇಳಿಸುವ ಈ ಸಮದಾಯ ಪರಿಶಿಷ್ಟ ಪಂಗಡವರೆನ್ನುವುದಕ್ಕೆ ಬೇಡರಂತೆ ಅವರು ಆರಾಧಿಸುವ ಕುಮಾರ ರಾಮನ ಚರಿತ್ರೆ ಕೂಡಾ ಪೂರಕವಾಗಿದೆ. ರಾಜರ ಆಳ್ವಿಕೆಯಲ್ಲಿ ಸೈನಿಕರಾಗಿ ಬಿಡುವುನ ವೇಳೆಯಲ್ಲಿ ಕೃಷಿಕರಾಗಿ ಹವ್ಯಾಸಿ ಬೇಟೆ ಮತ್ತು ಕಾಡು ಉತ್ಫನ್ನ ಸಂಗ್ರಹಿಸುವ ಅಲೆಮಾರಿಗಳಾಗಿ ತಮ್ಮ ವಿಕಾಸದ ವೀಶಿಷ್ಟ್ಯಮಯ ಪಥದ ವೈಭವದ ಚರಿತ್ರೆಯ ತುಂಬಾ ಬುಡಕಟ್ಟು ಜಾನಪದವೇ ತುಂಬಿರುವ ಈ ಕಾನ್‌ ದೀವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಮೂಲಕ ಅವರಲ್ಲಿನ ಅತಿ ಬಡವರ ಅಭಿವೃದ್ಧಿಗೆ ನೆರವಾಗಬೇಕಾದ ಅನಿವಾರ್ಯತೆ ಬಗ್ಗೆ ಈಗ ಎಲ್ಲೆಡೆ ಚರ್ಚೆ ಪ್ರಾರಂಭವಾಗಿದೆ. https://m.youtube.com/watch?v=kGkjklqtYiE&t=3s

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *