ಕಾಡು ಕುರುಬ ನಂತರ ಕಾನ್‌ ದೀವರ ಎಸ್.ಟಿ. ಬೇಡಿಕೆಗೆ ಹೆಚ್ಚಿದ ಒತ್ತಡ

ಬಹಳ ವರ್ಷಗಳ ಬೇಡಿಕೆ ನಂತರ ಕಾಡು ಕುರುಬರಿಗೆ ಪರಿಶಿಷ್ಟ ಪಂಗಡದ ಸ್ಥಾನ ಮಾನ ನೀಡಿದ ನಂತರ ರಾಜ್ಯದ ಕಾನ್‌ ದೀವರಿಗೆ ಎಸ್‌.ಟಿ. ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಈಗ ಬಲಗೊಳ್ಳುತ್ತಿದೆ.

ಚಿಕ್ಕಮಂಗಳೂರು,ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿಶೇ ಶವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸಿಸುವ ದೀವರನ್ನು ಮೊದಲಿನಿಂದಲೂ ಕಾಡು ದೀವರು, ಕಾನು ದೀವರು, ಬಗನೆ ದೀವರು ಎಂದು ಕರೆಯುವುದು ರೂಢಿ. ಸುಮಾರು೨೦ಲಕ್ಷ ದಷ್ಟು ಜನಸಂಖ್ಯೆ ಹೊಂದಿರುವ ಈ ದೀವರ ಬಗ್ಗೆ ಸಮಾಜವಾದಿ ಮುಖಂಡ ಮಾಜಿ ಶಾಸಕ ದಿ. ಗೋಪಾಲಗೌಡರು ೭೦-೮೦ ರ ದಶಕದಲ್ಲೇ ಮಲೆನಾಡಿನ ಕಾನುದೀವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು.

ಇದೇ ಅವಧಿಯಲ್ಲಿ ಕಾಗೋಡು ಹೋರಾಟದ ರೂವಾರಿ ಎಚ್.‌ ಗಣಪತಿಯಪ್ಪ ಕೂಡಾ ಈಡಿಗರ ಉಪಪಂಗಡ ಎನ್ನುವ ಕಾನುದೀವರು ಅರಣ್ಯ ವಾಸಿಗಳು, ರೈತರು,ಬುಡಕಟ್ಟುಗಳಾಗಿರುವ ಕಾನ್‌ ದೀವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಪ್ರತಿಪಾದಿಸಿದ್ದರು.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಕಾಡುವಾಸಿಗಳಾಗಿ,೧೯೭೦ ರ ದಶಕದ ವರೆಗೂ ಗೇಣಿದಾರರೂ ಬಡವರಾಗಿದ್ದ ದೀವರಲ್ಲಿ ಸೊರಬಾದ ಬಂಗಾರಪ್ಪ ಮುಖ್ಯಮಂತ್ರಿಗಳಾಗಿರುವುದು ಕಾಗೋಡು ತಿಮ್ಮಪ್ಪ ಹಿರಿಯ ನಾಯಕ, ಮಾಜಿಸಚಿವರಾಗಿರುವುದು ಸೇರಿ ತಮ್ಮ ಜನಸಂಖ್ಯೆ ಇರುವ ಅನೇಕ ಕ್ಷೇತ್ರಗಳಲ್ಲಿ ಕನಿಷ್ಟ ಶಾಸಕರು, ಸಂಸದರೂ ಆಗಿರದ ಕಾನ್‌ ದೀವರ ಆಚರಣೆ, ರೂಢಿ ಸಂಪ್ರದಾಯಗಳು ನೈಜ ಬುಡಕಟ್ಟುಗಳಾದ ಹಾಲಕ್ಕಿ ಒಕ್ಕಲಿಗರು,ಕಾಡು ಕುರುಬರ ರೀತಿಯಲ್ಲಿವೆ.

ಜನಾಂಗೀಯ ಅಧ್ಯಯನಗಳು, ಸಾಹಿತ್ಯಕ ದಾಖಲೆಗಳು ಮತ್ತು ರಾಷ್ಟ್ರಕವಿ ಕುವೆಂಪು ಮತ್ತು ನಾ.ಡಿಸೋಜಾರ ಸಾಹಿತ್ಯಗಳಲ್ಲಿ ಕೂಡಾ ನೈಜ ಬುಡುಕಟ್ಟುಗಳಾಗಿ ಚಿತ್ರಿತವಾಗಿರುವ ಮಲೆನಾಡಿನ ದೀವರು ಕಾಡುವಾಸಿಗಳಾಗಿ ಕೆಲವು ಕಾಲಸೈನಿಕರಾಗಿ ಕೆಲಸಮಾಡಿದ್ದಾರೆ. ಇದೇ ಆಧಾರದಲ್ಲಿ ಕಾನ್‌ ದೀವರನ್ನು ಹಳೆಪೈಕರು ಎಂದು ಕೂಡಾ ಕರೆಯಲಾಗುತ್ತದೆ .https://m.youtube.com/watch?v=30oxVRVlhpk

ಅಚಲ ಸ್ವಾಭಿಮಾನಿಗಳೂ,ಧೈರ್ಯವಂತರೂ ಆದ ಕಾನ್‌ ದೀವರು ನಿಸ್ಸೀಮ ಬೇಟೆಗಾರರು ಬೇಟೆ ಮತ್ತು ಬಗನೆ ಕಳ್ಳು ಅಥವಾ ಕಾಡು ಸೇಂದಿ ಇಳಿಸುವ ಈ ಸಮದಾಯ ಪರಿಶಿಷ್ಟ ಪಂಗಡವರೆನ್ನುವುದಕ್ಕೆ ಬೇಡರಂತೆ ಅವರು ಆರಾಧಿಸುವ ಕುಮಾರ ರಾಮನ ಚರಿತ್ರೆ ಕೂಡಾ ಪೂರಕವಾಗಿದೆ. ರಾಜರ ಆಳ್ವಿಕೆಯಲ್ಲಿ ಸೈನಿಕರಾಗಿ ಬಿಡುವುನ ವೇಳೆಯಲ್ಲಿ ಕೃಷಿಕರಾಗಿ ಹವ್ಯಾಸಿ ಬೇಟೆ ಮತ್ತು ಕಾಡು ಉತ್ಫನ್ನ ಸಂಗ್ರಹಿಸುವ ಅಲೆಮಾರಿಗಳಾಗಿ ತಮ್ಮ ವಿಕಾಸದ ವೀಶಿಷ್ಟ್ಯಮಯ ಪಥದ ವೈಭವದ ಚರಿತ್ರೆಯ ತುಂಬಾ ಬುಡಕಟ್ಟು ಜಾನಪದವೇ ತುಂಬಿರುವ ಈ ಕಾನ್‌ ದೀವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಮೂಲಕ ಅವರಲ್ಲಿನ ಅತಿ ಬಡವರ ಅಭಿವೃದ್ಧಿಗೆ ನೆರವಾಗಬೇಕಾದ ಅನಿವಾರ್ಯತೆ ಬಗ್ಗೆ ಈಗ ಎಲ್ಲೆಡೆ ಚರ್ಚೆ ಪ್ರಾರಂಭವಾಗಿದೆ. https://m.youtube.com/watch?v=kGkjklqtYiE&t=3s

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *